TOP STORIES:

FOLLOW US

ವಿವಾಹ ಆರತಕ್ಷತೆಯ ವೇದಿಕೆಯಲ್ಲಿ ಮಾನವೀಯ ಮೌಲ್ಯ ಮೆರೆದ ಅರುಣ್ ಉಳ್ಳಾಲ್


ಅರುಣ್ ಉಳ್ಳಾಲ್ ಫೇಸ್ ಬುಕ್ ವಾಲ್ನ್ ನಲ್ಲಿ

ಬೆಂಜನಪದವಿನ ಯಮುನಕ್ಕನಿಗೆ ವಿವಾಹ ಕಾಣಿಕೆ

ನಮ್ಮ ಗೃಹಪ್ರವೇಶ ಡಿಜೆಮುಕ್ತವಾಗಿ ನಡೆದಾಗ ಅದನ್ನು ಮೆಚ್ಚಿಕೊಂಡರ ಮಧ್ಯೆ ಕೆಲವು ಅಮಲುಪ್ರಿಯರಲ್ಲಿ ‘ಆಹಾ ಒಳ್ಳೆಯ ತಂತ್ರ..ಸಂಸ್ಕೃತಿ ಕುಟುಂಬ ಈ ಮೂಲಕ ಸಾಕಷ್ಟು ಹಣ ಉಳಿಸಿತು’ ಎಂಬ ಅಗ್ಗದ ಮಾತುಗಳು ಕೇಳಿಬಂದಿತ್ತಂತೆ.‌ ಹೌದು, ಹಣ ಉಳಿಸಿದ್ದು ಸತ್ಯ. ಯಾರ್ಯಾಯ ಮನೆಮಕ್ಕಳಿಗೆ ಕುಡಿಸಿ ನಮ್ಮ ಹಣ ಸಾರ್ಥಕತೆ ಪಡೆಯಬೇಕೆ?

ದುಂದುವೆಚ್ಚ ಅಂದು ಮಾತ್ರವಲ್ಲ ಇಂದೂ ಇಲ್ಲವೇ ಇಲ್ಲ. ಆದರೆ ಇದು ಹಣ ಉಳಿಸುವ ಉದ್ದೇಶವಲ್ಲ.‌ ಡಿಜೆ ಅಮಲಿನ ದುಷ್ಪರಿಣಾಮ ತಪ್ಪಿಸುವ ಆರೋಗ್ಯಕರ ಆಲೋಚನೆ. ನಮ್ಮ ಮದುವೆಯಲ್ಲೂ ಮದ್ಯವೂ ಇಲ್ಲ, ಸಿಗರೇಟಿನ ಹೊಗೆಯಿಲ್ಲ, ಡಿಜೆಯ ಅಬ್ಬರವಿಲ್ಲ. ಹೋ ಈ ಬಾರಿಯೂ ಸಾಕಷ್ಟು ಹಣ ಉಳಿಸಿದ ಜಿಪುಣರು ಎನ್ನುವವರಿಗೆ ಒಂದು ಉತ್ತರ.‌ ಅಲ್ಲದೆ ನಮ್ಮ ಕುಟುಂಬದ ಬಹುದಿನಗಳ ಆಕಾಂಕ್ಷೆ.

ವಿವಾಹ ಆರತಕ್ಷತೆಯ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಂಜನಪದವಿನಲ್ಲಿ ಗಂಡನನ್ನು ಕಳೆದುಕೊಂಡು ಮಕ್ಕಳ ಭಾಗ್ಯವಿಲ್ಲದೆ, ಕುಟುಂಬದ ಯಾವೊಂದು ಸಹಕಾರವಿಲ್ಲದೆ ಮೇಲಾಗಿ ಕಾಯಿಲೆಯ ನೋವಿನಲ್ಲಿ ಆರ್ಥಿಕ ಸಂಕಷ್ಟದಲ್ಲಿ ದಿನೇ ದಿನೇ ಬಳಲುತ್ತಿರುವ ಯಮುನಕ್ಕನಿಗೆ ಡಿಜೆವಿರೋಧದ ‘ಜಿಪುಣತನ’ದಲ್ಲಿ ಉಳಿಸಿಕೊಂಡ ಮೊತ್ತವನ್ನು ನೀಡಿ ಆಶೀರ್ವಾದ ಪಡೆದುಕೊಂಡೆವು. ಮನೆಯಿಲ್ಲದೆ ಬೀದಿಪಾಲಾಗಿದ್ದ ಯಮುನಕ್ಕನಿಗೆ ಅಂದದ ಮನೆ ಕಟ್ಟಿಸಿಕೊಟ್ಟ ಪುಣ್ಯಾತ್ಮ Padmaraj Ramaiah  ಅಣ್ಣ ಮತ್ತು ಅವರ ಗುರುಬೆಳದಿಂಗಳು ಟ್ರಸ್ಟ್‌ನ ಔದಾರ್ಯವನ್ನು ಕೊಂಡಾಡಿ ದಣಿಯದು. ಈ ಪ್ರಯತ್ನಕ್ಕೆ ಕೈಜೋಡಿಸಿದ ಪಡೀಲಿನ ಮಡಿಲು ಸೇವಾ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಪ್ರೀತಿಯ ಅಣ್ಣ ಶ್ರೀ ಗಜೇಂದ್ರ ಪೂಜಾರಿ ಮತ್ತು ಸರ್ವಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು.

ಈ ಸಂದರ್ಭದಲ್ಲಿ ಯಮುನಕ್ಕನ ಮುಖದಲ್ಲಿ ಕಂಡ ನಗು, ತುಂಬಿ ಬಂದ ಕಣ್ಣುಗಳು ನಮ್ಮ ದಾಂಪತ್ಯದ ಬಹುದೊಡ್ಡ ಸೌಭಾಗ್ಯ.‌ ಅದು ಅಕ್ಷಯ ಭಗವದನುಗ್ರಹ.


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »