ಬಿಲ್ಲವ ಫ್ಯಾಮಿಲಿ ದುಬೈ ಕೂಟದ ಅಧ್ಯಕ್ಷರು, ಶ್ರೀ ಗೆಜ್ಜೆಗಿರಿ ಮೇಳದ ಪೋಷಕರು, ಸಮಾಜ ಸೇವಕರು ಕೊಡುಗೈ ದಾನಿಗಳು ಆಗಿರುವ ಶ್ರೀಯುತ ದೀಪಕ್ ಎಸ್.ಪಿ , ದುಬೈ ಅವರಿಗೆ ದಿನಾಂಕ 25-1-2025 ರಂದು ಇಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ) ಸಸಿಹಿತ್ಲು ಇದರ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಕಡಲತಡಿಯ ಗ್ರಾಮದಲ್ಲಿ ಬಿಲ್ಲವ, ತೀಯಾ, ಆರ್ಯಈಡಿಗ, ದೀವರು, ನಾಮಧಾರಿಗಳ ವಿಶ್ವ ಸಮ್ಮೇಳನದ ಸುಸಂದರ್ಭದಲ್ಲಿ ಶ್ರೀಯುತರ ಸಾಧನೆಯನ್ನು ಗುರುತಿಸಿ ಅಭೂತಪೂರ್ವ ವೇದಿಕೆಯ ಗಣ್ಯಾತಿಗಣ್ಯರ ಸಮ್ಮುಖದಲ್ಲಿ “ಬಿಲ್ಲವ ಸೇವಾ ರತ್ನ ಪ್ರಶಸ್ತಿ” ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರಾದ ಶ್ರೀಯುತರಿಗೆ ಅಭಿನಂದನೆಗಳು