TOP STORIES:

ಎ ಜರ್ನಿ ಫ್ರಮ್ ‘ಪಾರ್ವತಿ’ ಟು ‘ಅನ್ವಿತಾ’


ನಿರೂಪಣೆ ಎಂಬ ಮೊದಲ ಘಟ್ಟ ಹತ್ತಿ, ತಂಪಿಂಪಿನ ಕಂಪು ಹರಡಿಸಿ, ಔಟ್ ಆಫ್ ಸಿಲೇಬಸ್ ಅನ್ನೋ ನಟನೆ ಎಂಬ ಪ್ರಶ್ನೆಗೆ ಉತ್ತರಿಸಿ ,’ದಂಡ್’ ನ ಎರಡನೇ ಲೀಡ್ ಆಗಿ, ‘ಗಟ್ಟಿಮೇಳ’ದ ಮೊದಲನೇ ಮದುಮಗಳಾಗಿ, ಪಾರ್ವತಿಯಿಂದ ಅನ್ವಿತಾ ಎಂದು ಪುನರ್ ನಾಮಕರಿಸಿ, ಅಗ್ರಜನ ಮುದ್ದಿನ ತಂಗಿಯಾಗಿ, ನಮ್ಮ ನಿಮ್ಮೆಲ್ಲರ ಮನದಲ್ಲಿ ‘ಆಧ್ಯಾ’ಳ ಛಾಪನ್ನು ಮೂಡಿಸಿ ಮನೆಮಾತಾಗಿರುವವರು ಸಾಗರದ ಬೆಡಗಿ ‘ಅನ್ವಿತಾ ಸಾಗರ್’.

   (Copyrights owned by: billavaswarriors.com )

ಬಣ್ಣದ ಜಗತ್ತಿಗೆ ಕಾಲಿಟ್ಟ ನಂತರ ಪಾರ್ವತಿಯಿಂದ ಅನ್ವಿತಾ ಸಾಗರ್ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡ ಇವರು ,ಉದ್ಯಮಿ ಹೇಮಚಂದ್ರ ಮತ್ತು ಭಾರತಿ ದಂಪತಿಯ ಸುಪುತ್ರಿ, ನಟ ಅನೂಪ್ ಸಾಗರ್ ರವರ ಮುದ್ದಿನ ತಂಗಿ.ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು,ಬಿ.ಬಿ.ಎ ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮಂಗಳೂರಿನ ಎಸ್.ಡಿ.ಎಂ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.ಬಿ.ಬಿ.ಎ ಪದವಿ ಪಡೆದ ಮೇಲೆ ಇವರು ನಮ್ಮ ಟವಿ ಚಾನಲ್ ನಲ್ಲಿ ನಾಲ್ಕು ವರುಷಗಳ ಕಾಲ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು.

ರಂಜಿತ್ ಬಜ್ಪೆ ನಿರ್ದೇಶನದ ‘ದಂಡ್’ ಎಂಬ ತುಳು ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಪಾದಾರ್ಪಿಸಿದ ಇವರು ನಟನೆ ಹೊರತು ನೃತ್ಯ-ಗಾನಕಲೆ, ಪಾಕಕ್ರಿಯೆ ಮತ್ತು ಮಹಾಕಾವ್ಯಗಳನ್ನು ಓದುವ ಹವ್ಯಾಸವನ್ನು ಹೊಂದಿದ್ದಾರೆ.

   (Copyrights owned by: billavaswarriors.com )

‘ವೇದ’ ‘ಪ್ರಿಯ’ಪಾತ್ರಗಳಲ್ಲಿ ಮಿಂಚಿದ ಅನ್ವಿತಾ:

ಬಣ್ಣದ ಜಗತ್ತಿಗೆ ದಂಡ್ ಸಿನಿಮಾದ ಮೂಲಕ ಕಾಲಿಟ್ಟ ಇವರು ಮೊದಲ ಟೇಕ್ ನಲ್ಲೇ ನಿರ್ದೇಶಕ ರಂಜಿತ್ ಬಜ್ಪೆಯವರಿಂದ ಸಯ್ ಎಂದೆನಿಸಿಕೊಂಡಿದ್ದರು. ನಂತರ ಒಮ್ಮೆ ಹಚ್ಚಿದ ಬಣ್ಣವನ್ನು ಗುಂದಲು ಬಿಡದೆ ನಟಿಸಲು ಮುನ್ನಡೆದ ಇವರು ‘ಬಲೆ ಪುದರ್ ದೀಕ ಈ ಪ್ರೀತಿಗ್'(ಶಾನ್ವಿ),’ಪೆಟ್ಕಮ್ಮಿ'(ಪ್ರಿಯ) ಎಂಬ ತುಳು ಸಿನಿಮಾಗಳಲ್ಲಿ ಹಾಗೇ ‘ಬಣ್ಣ ಬಣ್ಣದ ಬದುಕು'(ಶಾಯಿದಾ), ‘ಜೀವನ ಯಜ್ಞ’, ‘ಮಾಯಾ ಕನ್ನಡಿ'(ಮಧು) ಎಂಬ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದಲ್ಲದೇ ತುಳುನಾಡಿನ ಹಳ್ಳಿ ಹುಡ್ಗಿಯ ಪಾತ್ರದಲ್ಲಿ ‘ತಂಬಿಲ'(ವೇದ) – ತುಳು ಸಿನಿಮಾದಲ್ಲಿ , ‘ವಿರಾಟ ಪರ್ವ'(ಖುಷಿ) ಎಂಬ ಕನ್ನಡ ಸಿನಿಮಾದಲ್ಲಿ ಪಾತ್ರವಹಿಸಿದ್ದಾರೆ. ಇವು ಮುಂಬರುವ ಚಿತ್ರಗಳು.ಹಾಗೇ ಪ್ರಸ್ತುತವಾಗಿ ‘ಗಟ್ಟಿಮೇಳ’ ಎಂಬ ಧಾರವಾಹಿಯಲ್ಲಿ ಆಧ್ಯಾಳ ಪಾತ್ರ ವಹಿಸಿ ಎಲ್ಲರ ಜನಮನ ಗೆದ್ದಿದ್ದಾರೆ.

ಅನ್ವಿತಾರ ಮನದ ಮಾತು:

‘ಬಿ.ಬಿ.ಎ ಮಗ್ಸಿದ್ ಮೇಲೆ ಕೇವಲ ನಿರೂಪಕಿಯಾಗಿ ಕೆಲ್ಸ ಮಾಡುತ್ತಿದ್ದೆ.ನಟನೆ ತನಗೆ ಔಟ್ ಆಫ್ ಸಿಲೇಬಸ್ ಕ್ವೆಶನ್ ತರ ಬಂದಿದ್ದು,ಅದರ ಬಗ್ಗೆ ಗಂಧ ಗಾಳಿನೂ ಗೊತ್ತಿರದ ತನಗೆ ಮೊದಲನೇ ಬಾರಿಯ ಆಡಿಷನ್ ನಲ್ಲಿ, ಫಸ್ಟ್ ಟೇಕ್ ನಲ್ಲೇ ಸಯ್ ಅನ್ಸಿದ್ದು ತುಂಬಾನೇ ಖುಷಿ ಕೊಟ್ಟಿದೆ. ತನ್ನ ಪ್ರತಿ ಕಾರ್ಯದಲ್ಲಿ ತನ್ನ ಹೆತ್ತವರ ಅದರಲ್ಲೂ ಅಜ್ಜ ಮತ್ತು ಅಣ್ಣ ಸದಾ ಬೆನ್ನೆಲುಬಾಗಿದ್ದರಿಂದ ಈ ಎಲ್ಲಾ ಸಾಧನೆಗಳು ಬೆಳಕಿಗೆ ಬಂದಿವೆ’ ಎನ್ನುತ್ತಾರೆ ಅನ್ವಿತಾ.

ಗಟ್ಟಿಮೇಳದ ಮೊದಲನೇ ಮದುಮಗಳಾಗಿ ಕಿರುತೆರೆಗೆ ಪಾದಾರ್ಪಿಸಿದ ಪಾರ್ವತಿ:

ನಾಲ್ಕು ವರ್ಷಗಳ ಕಾಲ ತುಳುಚಿತ್ರರಂಗದಲ್ಲಿ ಮಿಂಚಿದ ಅನ್ವಿತಾರಿಗೆ ಗಟ್ಟಿಮೇಳ ಎಂಬ ಧಾರವಾಹಿಯಲ್ಲಿ ನಟಿಸಲು ಸಿಕ್ಕಿದ ಅವಕಾಶವು, ತನ್ನ ಜೀವನದ ಟರ್ನಿಂಗ್ ಸಿಚುವೇಷನ್ ಎಂದು ಅಭಿವ್ಯಕ್ತಪಡಿಸುತ್ತಾರೆ. ಇದೀಗ ಅಗ್ರಜನ ಮುದ್ದಿನ ತಂಗಿಯಾಗಿ ,ಗರ್ಭಿಣಿ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಲ್ಲಿ ಜನರಿಂದ ತುಂಬಾನೇ ಒಳ್ಳೆ ಪ್ರತಿಕ್ರಿಯೆ ಬಂದಿದೆ ಎಂಬುದು ಅನ್ವಿತಾರ ಅಭಿಪ್ರಾಯ.

   (Copyrights owned by: billavaswarriors.com )

ಸಂದ ಗೌರವಗಳು:

ಚಿತ್ರರಂಗದಲ್ಲಿನ ಇವರ ಅಪೂರ್ವ ಸಾಧನೆಯನ್ನು ಗಮನಿಸಿ ಇವರಿಗೆ ಬಿಲ್ಲವ ಹಾಗೂ ಹಲವಾರು ಸಂಘಗಳ ವತಿಯಿಂದ ಸನ್ಮಾನಿಸಲಾಗಿದೆ.ಹಾಗೇ‌ ದಂಡ್ ಸಿನಿಮಾದ‌ ನಂತರ ‘ತುಳುಚಿತ್ರರಂಗದ ಪಟಾಕಿ’ ಅನ್ನೋ ಬಿರುದನ್ನು ಇವರು ಹೊಂದಿದ್ದಾರೆ.

ಮೊಗದಲ್ಲಿ ಸದಾ ಮುಗುಳ್ನಗೆಯನ್ನು ಚೆಲ್ಲುತ್ತಾ ,ಕಿವಿಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸುವ ನಿಮ್ಮ ಮಾತುಗಳು ಹೀಗೆ ಶಾಶ್ವತವಾಗಿದ್ದು ಹಾಗೇ ನಿಮ್ಮ ಕಲಾ ಜೀವನವು ಇನ್ನಷ್ಟು ಬಣ್ಣಗಳಿಂದ ತುಂಬಿ ರಂಗೇರಲಿ ಎಂದು ಆಶಯಿಸುತ್ತಾ ನಾರಾಯಣ ಗುರುಗಳ ಆಶೀರ್ವಾದ ಕೋಟಿಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಬಿಲ್ಲವ ವಾರಿಯರ್ಸ್‌ ಸಂಸ್ಥೆಯ ವತಿಯಿಂದ ಹಾರೈಸುತ್ತೇನೆ.

ಬರಹ : ಯಕ್ಷಿತಾ ಆರ್ ,ಮೂಡುಕೊಣಾಜೆ

   (Copyrights owned by: billavaswarriors.com )


Related Posts

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »

ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ


Share         ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂ


Read More »