TOP STORIES:

FOLLOW US

ಮದುವೆಯಿಂದ ಮಲಿನಗೊಳ್ಳುತ್ತಿರುವ ಸಮಾಜ


ಲಾಕ್‌ಡೌನ್ ಕಾರಣಕ್ಕೆ ಈಗಾಗಲೇ ನಮ್ಮೆಲ್ಲರ  ಹೊಂದಾಣಿಕೆಗೊಳಗಾದ ಕೆಲವು ನಿರ್ಬಂಧಗಳು ಮುಂದಕ್ಕೂ ಹಾಗೆಯೇಇರಬೇಕೆಂದು ಕೆಲವು ಬಾರಿ ಅನ್ನಿಸುವುದಿದೆ. ನಿಯಮಿತವೆಂದೆನಿಸಿ  ನಿರಾಡಂಬರಗೊಂಡಿರುವ ನಮ್ಮಲ್ಲಿನ ಮದುವೆಸಮಾರಂಭಗಳನ್ನು ಕಂಡಾಗಲಂತೂ ಇದನ್ನು ಒಪ್ಪಲೇಬೇಕು.

  ಹೌದು ವರ್ತಮಾನವನ್ನು ಅನುಲಕ್ಷಿಸಿದರೆ ಇದು ವ್ಯಾಪಕವಾಗಿ ಪ್ರಸಾರಗೊಳ್ಳಲೇಬೇಕಾದ ಸಂದೇಶ. ಅತಿರೇಕದ ವಿವಾಹ, ಮದರಂಗಿ, ಹಲ್ದಿ ಮೊದಲಾದ ಸಮಾರಂಭಗಳು ಸದ್ಯಕ್ಕೆ ನಮ್ಮ ಹಿಂದೂ ಸಮಾಜಕ್ಕಿರುವ ಅತಿ ದೊಡ್ಡ ಪಿಡುಗು. ನಮ್ಮ  ಬದುಕುಹೊಸಸ್ಫೂರ್ತಿ ಪಡೆಯುವ ವಿವಾಹ, ಗೃಹಪ್ರವೇಶ, ಸೀಮಂತ ಮುಂತಾದ ಶುಭಾವಸರದಲ್ಲಿ ಇನ್ನೊಬ್ಬರ ಜೀವನವನ್ನುವ್ಯಸನಕ್ಕೀಡುಮಾಡಿಸಿ ದಾರಿತಪ್ಪಿಸುವುದು ಪರಮಪಾಪವಲ್ಲದೆ ಇನ್ನೇನು ?

ಮಗನೊಬ್ಬ ನಮ್ಮ ಸಮಾರಂಭವೊಂದರಿಂದ ಮೊದಲಾಗಿ ಕುಡಿತಕ್ಕೆ ಬಿದ್ದನೆಂದು ತಿಳಿದರೆ ಕೊನೆಗೊಮ್ಮೆ ಆತನ ಅಧೋಗತಿಯನ್ನುಕಂಡು‌ ಮಮ್ಮಲ ಮರುಗುವ  ಹೆತ್ತಕರುಳಿನ ಹಿಡಿಶಾಪ ನಮ್ಮನ್ನು ತಾಕದಿದ್ದೀತೇ ?

ಇವೆಷ್ಟೇ ಅಲ್ಲ.

ಇನ್ನೂ ಇದೆ, ಓದಿ.

        ನೀವು ಗಮನಿಸಿರಬಹುದು.

ಈಗಿನ ನಮ್ಮ ಸುಶಿಕ್ಷಿತ ವಧುವರರಿಗೆ ಸನಾತನ ಮದುವೆಯ ಶಾಸ್ತ್ರವಿಧಿಗಳಲ್ಲಿ ಸಾರ್ವಜನಿಕವಾಗಿ ಪಾಲ್ಗೊಳ್ಳಲು ನಾಚಿಕೆ. ಅದಕ್ಕಾಗಿತೀರಾ ಆಪ್ತರನ್ನು ಮಾತ್ರ ಆಹ್ವಾನಿಸಿ, ಮನೆಯಿಂದ ಸಾಕಷ್ಟು ದೂರವೇ ಇರುವ ದೇಗುಲದಲ್ಲಿ ಯಾರಿಗೂ ಕಾಣದಂತೆ, ಬರಿಯಸಾಕ್ಷಿಗಾಗಿ ಮಾತ್ರ ಒಂದೆರಡೇ ಫೋಟೋ ಕ್ಲಿಕ್ಕಿಸಿ (ಅದಕ್ಕೂ ದೇಗುಲದೊಳಗಡೆ ಅನುಮತಿ ಇಲ್ಲದಿದ್ದರೆ ಖುಷಿಪಟ್ಟು),  ಇನ್ನೂರುಜೋಡಿಗಳಲ್ಲಿ ತಾವೂ ಒಂದೆನಿಸಿ ಮುಹೂರ್ತ ತಪ್ಪಿ ಮದುವೆಯಾಗುತ್ತಾರೆ.

                  ನಂತರ ಅಂದೋ ಅಥವಾ ಶುಭಾಶುಭ ದಿನದ ಹಂಗಿಲ್ಲದೆ ಯಾವಗಲಾದರೊಂದು ದಿನ ತಮ್ಮವರೆಲ್ಲರನ್ನೂ ಆಹ್ವಾನಿಸಿ, ಎಲ್ಲರಿಗೂ ಕಾಣುವಂತೆ ನಗರದ ಮಧ್ಯೆಯೇ ಇರುವ ಬೃಹತ್ ಸಭಾಂಗಣದಲ್ಲಿ ಪ್ರತಿಷ್ಠೆಯ ರಿಸೆಪ್ಷನ್. ಯಥಾವತ್ ಹಿಂದಿಸೀರಿಯಲನ್ನೇ ಹೋಲುವ ವಸ್ತ್ರಸಂಹಿತೆ, ಅಲಂಕಾರ, ನೃತ್ಯವಿನೋದಾವಳಿ ಸಹಿತ ಸ್ವಾಗತ, ಕೇಕ್‌ಗೆ ಚೂರಿ ತಿವಿತ, ಪಾಶ್ಚಾತ್ಯವೃಂದನೃತ್ಯ, ಕೊನೆಯಲ್ಲಿ ತಿನ್ನುವುದಕ್ಕಿಂತ ಹೆಚ್ಚು ಪೋಲಾಗಿಸುವ 20‌ ರಿಂದ 40 ರಷ್ಟು ಅಪರಿಚಿತ ಖಾದ್ಯಯುಕ್ತ ಪುಷ್ಕಲ ಭೋಜನ. ಅವುಗಳಲ್ಲಿ ಮತ್ತೆ  5 ಭೋಜನಾಪೂರ್ವ ಖಾದ್ಯಗಳು. 5 ಭೋಜನೋತ್ತರ ಖಾದ್ಯಗಳು.

          ವಿವಾಹದ ಖರ್ಚಿಗಿಂತಲೂ ಮುಪ್ಪಟ್ಟು ಹೆಚ್ಚಾಗುವಷ್ಟು ವೆಚ್ಚದಲ್ಲಿ ಏರ್ಪಡಿಸುವ ರಾತ್ರಿಯ ಡಿಜೆ ಪಾರ್ಟಿ. 6 ಅಂತಸ್ತಿನಲ್ಲಿಸೌಂಡ್ ಬಾಕ್ಸ್‌ಗಳು, ಮದುವೆ ಮನೆಯವರಿಗೆ ಪರಿಚಿತರಾಗಿರಬೇಕು ಎಂಬ ಕನಿಷ್ಟ ನಿರ್ಬಂಧವೂ ಇಲ್ಲದಂತೆ ಸರ್ವರಿಗೂಮುಕ್ತವಾಗಿರುವ ಮನೆಮುಂದಿನ (ಕೆಲವೆಡೆ ಹಿಂದಿನ) ಓಪನ್ ಬಾರ್. ಬಂದವರನೇಕರಿಗೆ ಅಂದಿನ ಮದುಮಕ್ಕಳ್ಯಾರು, ಮನೆಯಾರದ್ದೆಂಬುದೇ ಗೊತ್ತಿರುವುದಿಲ್ಲ. ಪ್ರೌಢಶಾಲಾ ವಿದ್ಯಾರ್ಥಿಗಳಿಂದ ತೊಡಗಿ ಹಣ್ಣಣ್ಣಾದ ವೃದ್ಧರೆಲ್ಲರೂ ಕಲೆತು ನಮ್ಮಅಪರೂಪದಒಗ್ಗಟ್ಟು ಸಾರುವ ಸಾಮೂಹಿಕ ಪಾನಸಮಾವೇಶ. ಕಾವ್ಯಗಳಲ್ಲಿ ವರ್ಣಿತವಾಗಿರುವ ನೃತ್ಯಪಾನಗೊಷ್ಠಿಯ (ಈಗಿನ ಲೈವ್‌ಬ್ಯಾಂಡ್‌ನ) ಫೀಲ್.ಆಗುವಂತೆ ಕೆಲವೆಡೆ ಟೇಬಲ್‌ಗೆ ಬಾಟಲಿ ಸಪ್ಲೈಸರ್ವ್ ಮಾಡಲೆಂದೇ ಅಂದಚೆಂದದ ಹುಡುಗಿಯರಂತೆ.ಎಲ್ಲರಲ್ಲೂ ಹೊಸಹೊಸ ಇತಿಹಾಸ ನಿರ್ಮಾಣ ಮಾಡುವ ಆತುರ. ಹೀಗೆ ವೇಳೆಏರುತ್ತಿದ್ದಂತೆಯೇ  ತಂತಾನೇ ಒಳಮೂಡಿಬರುವ ನೃತ್ಯಾವೇಶ. ಆರ್ಭಟ, ಕೊನೆಕೊನೆಗೆ ದೈವಾರಾಧನೆ, ಯಕ್ಷಗಾನ ಮೊದಲಾದ ಪವಿತ್ರ ಆರಾಧನಾ ಕಲೆಗಳ ಅಣಕು ಪ್ರದರ್ಶನ, ಬಗೆಗಿನವ್ಯಂಗ್ಯಾಭಿವ್ಯಕ್ತಿಗೆ ಬಾರೀ ಬೇಡಿಕೆಮೆಚ್ಚುಗೆ. ಇಷ್ಟಕ್ಕೆ ಮುಗಿಯಲಿಲ್ಲ. ನಾಟ್ಯದ ನವರಂಗ ಮಂಟಪದಲ್ಲಿ ಸ್ತ್ರೀಯರಿಗೂ ಇದೆಮೀಸಲಾತಿ.  ಯಾರ್ಯಾರೋ ಅಪಾಪೋಲಿ ಯುವಕರೊಂದಿಗೆ  ಮದುಮಗಳ ಸಹಿತ ಮನೆಯ ಮಹಿಳೆಯರೆಲ್ಲರ ಕುಡಿತ -‌ಕುಣಿತ. ಇದೂ ಒಂದು‌ ವಿಧದ ಎಂತಹ ಸ್ತ್ರೀಪುರುಷ ಸಮಾನತೆ.

ಆಹಾ, ಎಲ್ಲಾ ಕಾರಣಗಳಿಂದ ಮನೆಯವರಿಗೆ‌ ಮಾತ್ರವಲ್ಲ, ನೆರೆಕರೆಯವರಿಗೂ ಗಳಿಗೆ ಜೀವನಪರ್ಯಂತ ಅವಿಸ್ಮರಣೀಯ!!!

 ಇಷ್ಟೆಲ್ಲಾ ಮುಗಿದು ಮರುದಿನ ಮದುವೆ ಮನೆಯನ್ನೊಮ್ಮೆ ನೋಡಿದರೆ ಕುರ್ಚಿ, ಆಹಾರ, ಅಲಂಕಾರ, ಚಪ್ಪಲಿ, ಬಾಟಲಿಎಲ್ಲವೂ ಚೆಲ್ಲಾಪಿಲ್ಲಿಯಾಗಿ ಹರಡಿಬಿದ್ದು, ಆಗಷ್ಟೇ ಸಮರ ಸಮಾಪನಗೊಂಡ ರಣರಂಗದಂತಿರುತ್ತದೆ.

ನನಗಿರುವುದು ಒಂದೇ ಪ್ರಶ್ನೆ. ಧರ್ಮಸಂರಕ್ಷಣಾ ಕಾರ್ಯಗಳೆಲ್ಲದಕ್ಕೂ ಸನ್ನದ್ಧರೆನ್ನುವ ನಮ್ಮ ಏರುತ್ಸಾಹದ ಯುವಕರು ಧರ್ಮಘಾತಕತನದ ಬಗ್ಗೆ ಏಕೆ ಕಿಂಚಿತ್ತೂ ಲಕ್ಷ್ಯ ಹರಿಸುವುದಿಲ್ಲ ? ಹೇಳಿಕೆ ಮಾತ್ರಕ್ಕೆ ನಾವೆಂದಿಗೂ ಧರ್ಮಪರರೆನಿಸಿಕೊಳ್ಳುವವರು ವಿಚಾರದಲ್ಲಿ  ಎಡವುತ್ತಿರುವುದು ಏಕೆ? ಮೂರ್ಕಾಸಿನ ಲಾಭವಿಲ್ಲದ ರಾಜಕೀಯ ಅಸಮಾಧಾನಕ್ಕೆ ತಕ್ಷಣ ಉರಿದು ಬೀಳುವರಿಗೆ   ಇದು ನಮ್ಮತನದ ಸ್ವಾಭಿಮಾನಕ್ಕೆ ಬೀಳುವ ಪೆಟ್ಟಾಗಿ ಏಕೆ ಕಾಣುವುದಿಲ್ಲ. ಸಮಾರಂಭವನ್ನು ಅಪವಿತ್ರಗೊಳಿಸುವುದು ಶಾಸ್ತ್ರವಿರೋಧವಲ್ಲವೇ ? ಅಕ್ಷಮ್ಯ ಧರ್ಮದ್ರೋಹವಲ್ಲವೇ ? ಇದರ ವಿರುದ್ಧ ಸಾರ್ವತ್ರಿಕ ಹೋರಾಟ ಅವಶ್ಯವಲ್ಲವೇ ?

ಸೂಕ್ಷ್ಮವಾಗಿ ಗಮನಿಸಿದರೆ ತಿಳಿದೀತು : ಬಲಿಯಾಗುತ್ತಿರುವವರು ಅಂತಸ್ತಿಲ್ಲಿ ಉನ್ನತರಲ್ಲ. ಎಲ್ಲರೂ ಮಧ್ಯಮವರ್ಗದ ಯುವಕಯುವತಿ, ವಿದ್ಯಾರ್ಥಿಗಳು ಮಾತ್ರ.

 ಇನ್ನು ಕೆಲವರು ಕೇಳಬಹುದು.. “ಅವರ ಹಣ, ಅವರ ಖರ್ಚು ನಿಮಗೇನು ನಷ್ಟ ? ನೀವು ಕುಡಿಯದಿದ್ದರೆ ಬೇಡ ಬಿಡಿ. ಅದು ಅವರವರ ಸ್ವಾತಂತ್ರ್ಯ, ಅವರವರ ಇಚ್ಛೆ

          

  ಹಾಗೆ ನೋಡಿದರೆ ಯಾವುದೂ ತಪ್ಪಲ್ಲ. ಯಾರೋ ಕೊಲೆಯೊಂದನ್ನು ಮಾಡಿದಾಕ್ಷಣಕೊಂದವನು ಅವನುಸತ್ತವನುಇವನು. ನಮಗೇನು ನಷ್ಟ ? ಅದು ಅವನವನ ಇಚ್ಛೆಎಂದು ನಿರ್ಲಕ್ಷ್ಯ ಧೋರಣೆಯಿಂದ ಸಮಾಜ ಕ್ಷಮಿಸುವುದಾದರೆ ಇದೂತಪ್ಪಲ್ಲ.  ಅಮಲುಮುಕ್ತ ಸುಸಭ್ಯ ಸಮಾಜ ನಿರ್ಮಾಣವಾಗದಿದ್ದರೆ ಮುಂದೊಂದು ದಿನ ಘೋರ ಪಶ್ಚಾತಾಪ ಪಡಬೇಕಾದೀತು. ಏಕೆಂದರೆ ಇದು ಕೂಡಾ ಸಮೂಹದ ಭಾವನಾತ್ಮಕ ಕೊಲೆ. ದಿವ್ಯಾದರ್ಶಗಳ ಮುಖೇನ ಸಮಾಜ ಬೆಳಗಬೇಕಾದ ಭವಿಷ್ಯದಪೀಳಿಗೆಯ ಕಗ್ಗೊಲೆ.

    

            ಡಾ॥.ಅರುಣ್ ಉಳ್ಳಾಲ್


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »