TOP STORIES:

FOLLOW US

ಬೆಮ್ಮೆರ್ – ಬ್ರಹ್ಮ


Author Venkatesh Karkera

Team Prajnaanambrahmah

ತುಳುನಾಡ ದೈವಗಳಲ್ಲಿ ಅತಿಪ್ರಮುಖ ಶಕ್ತಿ ಎಂದರೆ ಬೆಮ್ಮೆರ್ ಯಾ ಬೆರ್ಮೆರ್. ಆಲಡೆಗಳಲ್ಲಿ, ನಾಗಮೂಲಸ್ಥಾನಗಳಲ್ಲಿ, ಗರಡಿಗಳಲ್ಲಿ, ದೈವಸ್ಥಾನಗಳಲ್ಲಿ ಹೀಗೆ ಹೆಚ್ಚುಕಡಿಮೆ ತುಳುನಾಡ ಉದ್ದಗಲಕ್ಕೂ ಬೇರೆ ಬೇರೆ ಹೆಸರಿನಿಂದ ಆರಾಧಿಸಲ್ಪಡುತ್ತಿದೆ. ಕೆಲವೆಡೆ ಬೆಮ್ಮೆರ್ ಕೋಲನೇಮ ಪಡೆದುಕೊಂಡು ದೈವಗಳಂತೆ ಆರಾಧನೆ ಪಡೆದರೆ ಇತರೆಡೆ ದೇವರಂತೆ ಪೂಜಿಸಲ್ಪಡುತ್ತಾರೆ.
ಕೆಲ‌ ಸ್ಥಳಗಳಲ್ಲಿ ಬೆಮ್ಮೆರ್ ಪುನರ್ನಾಮಕಗೊಂಡು ಬ್ರಹ್ಮಲಿಂಗೇಶ್ವರ / ಮಹಾಲಿಂಗೇಶ್ವರ/ ಖಡ್ಗೇಶ್ವರಿ ಹೀಗೆಲ್ಲಾ ಹೊಸ ಹೆಸರಿನೊಂದಿಗೆ ಪೂಜಿಸಲ್ಪಡುತ್ತಿದ್ದಾರೆ. ಈ ರೀತಿಯ ಪುನರ್ನಾಮಕರಣ ಸರಿಯೋ ತಪ್ಪೋ‌ ಎಂಬುದು ಖಂಡಿತವಾಗಿಯೂ ವಿಚಾರಾರ್ಹ. ಆದರೆ ಈಗೀಗ ಈ ವಿಚಾರ ಜಾತಿಯ‌ ಬಣ್ಣ ಪಡೆದುಕೊಳ್ಳುತ್ತಿರುವುದು ವಿಷಾದನೀಯ. ಈ ರೀತಿಯ ನಾಮಾಂತರಕ್ಕೆಲ್ಲಾ ವೈದಿಕರೇ ಕಾರಣ, ನಮ್ಮ ದೈವಗಳ ವೈದಿಕೀಕರಣ ಎಂದೆಲ್ಲ ವೈದಿಕ ಸಮುದಾಯವನ್ನು ದೂರುವುದು ಅಲ್ಲಲ್ಲಿ ಕಂಡುಬರುತ್ತಿದೆ. © https://prajnaanambrahmah.wordpress.com

‘ಬೆಮ್ಮೆರ್’ ಎಂಬ ಶಬ್ದ ‘ಪೆರಿಯಮ್ಮೆರ್’ ಎಂಬ ಪದದಿಂದ ಹುಟ್ಟಿದೆಯೇ ಹೊರತು ‘ಬ್ರಹ್ಮ’ ಎಂಬ ಪದದಿಂದ ಅಲ್ಲ, ಈ ‘ಬೆಮ್ಮೆರ್’ ಎಂಬಾತ ತುಳುನಾಡಿನ ಮೂಲನಿವಾಸಿಗಳ ಹಿರಿಯನೋ ಅಥವಾ ರಾಜನೋ ಆಗಿರಬೇಕು ಎಂಬುದು ವೈದಿಕೀಕರಣ ವಿರೋಧಿಗಳ ಅಭಿಪ್ರಾಯ. ಅಂತೂ ಇಂತೂ ಬೆಮ್ಮೆರ್ ಬ್ರಹ್ಮನಲ್ಲ ಎಂಬುದು ಅವರ ವಾದ. ಬೆಮ್ಮೆರ್ ಬ್ರಹ್ಮನೋ ಅಲ್ಲವೋ ಹೇಳುವುದು ಕಷ್ಟಸಾಧ್ಯ. ಆದರೆ ‘ಬ್ರಹ್ಮ’ ಅಂದ ಕೂಡಲೆ ತಥಾಕಥಿತ ‘ವೈದಿಕರ ಚತುರ್ಮುಖ ಬ್ರಹ್ಮ’ ಎಂದು ಅರ್ಥೈಸಿಕೊಳ್ಳುವುದು ತಥಾಕಥಿತ ಬುದ್ದಿಜೀವಿಗಳ ಮೊದಲ ಲಕ್ಷಣ. ನಮಗೆ ಅದು ಏನು ಎಂಬುದನ್ನು ಸಾಧಿಸುವುದಕ್ಕಿಂತ ಅದು ಏನು ಅಲ್ಲ ಎಂಬುದನ್ನು ಸಾಧಿಸುವುದೇ ಮುಖ್ಯವಾದಾಗ ಆಗುವ ಗೊಂದಲವಿದು. ಕತ್ತಲೆ ಕೋಣೆಯಲ್ಲಿ ನಡೆಯುವಾಗ ಕಣ್ಣನ್ನು ಸಾಧ್ಯವಿದ್ದಷ್ಟು ತೆರೆದಿಟ್ಟುಕೊಳ್ಳುವುದು ಜಾಣತನ. ಅದರ ಬದಲಿಗೆ ಮೊದಲೇ ಒಂದು ಕಣ್ಣುಪಟ್ಟಿ ಕಟ್ಟಿಕೊಂಡು ನಡೆವವರನ್ನು ಹಿಡಿಯಲು ಪ್ರಯತ್ನಿಸುವುದು ವ್ಯರ್ಥ.
ವೈದಿಕ ಸಾಹಿತ್ಯದಲ್ಲಿ ಬ್ರಹ್ಮ ಅಂದರೆ ಚತುರ್ಮುಖ ಬ್ರಹ್ಮ ಒಬ್ಬನೇ ಅಲ್ಲ. ಚತುರ್ಮುಖ ಬ್ರಹ್ಮನ ಸ್ಥಾನದಲ್ಲಿ ಈಗಾಗಲೆ ಹಲವಾರು ಬ್ರಹ್ಮರು ಆಗಿಹೋಗಿದ್ದಾರೆ. ಮುಂದೆಯೂ ಹಲವಾರು ಬ್ರಹ್ಮರು ಬರಲಿದ್ದಾರೆ. ತ್ರಿಮೂರ್ತಿಗಳು ಮತ್ತು ಇತರೆಲ್ಲಾ ದೇವತೆಗಳಿಗೂ ಸೃಷ್ಟಿಕರ್ತನಾದ ವಿಶ್ವನಿಯಾಮಕ ಶಕ್ತಿಯನ್ನು ವೇದಾಂತದಲ್ಲಿ ‘ಬ್ರಹ್ಮನ್’, ‘ಪರಬ್ರಹ್ಮ’, ‘ಆತ್ಮ’, ‘ಪರಮಾತ್ಮ’ ಇತ್ಯಾದಿಯಾಗಿ ಕರೆಯಲಾಗುತ್ತದೆ. ವೈಷ್ಣವರು ಅದನ್ನೇ ‘ಮಹಾವಿಷ್ಣು’ ಎಂದು, ಶೈವರು ‘ಪರಶಿವ’ ಎಂದು, ಶಾಕ್ತೇಯರು ‘ಆದಿಶಕ್ತಿ/ ಪರಾಶಕ್ತಿ’ ಎಂದು, ಗಾಣಪತ್ಯರು ‘ಮಹಾಗಣಪತಿ’ ಎನ್ನುವುದು. ನಮ್ಮಲ್ಲಿ ಕಂಡುಬರುವ ಪ್ರಾಚೀನ ದೇವಾಲಯಗಳಲ್ಲೆಲ್ಲಾ ‘ಮಹಾಗಣಪತಿ/ ಮಹಾಲಿಂಗೇಶ್ವರ/ ಮಹತೋಬಾರ ಎಂದೆಲ್ಲಾ ಈ ಮಹತ್ ತತ್ವಕ್ಕೇ ಮಣೆ ಹಾಕಿದ್ದನ್ನು ಗಮನಿಸಿ. ಹಾಗಾಗಿ ಬೆಮ್ಮೆರ್ ಚತುರ್ಮುಖ ಬ್ರಹ್ಮನೇ ಆಗಬೇಕಿಲ್ಲ, ಪರಬ್ರಹ್ಮನೂ ಆಗಬಹುದು, ಯಾಕೆ ಆಗಿರಬಾರದು?
ಬ್ರಹ್ಮ ಎಂಬುದಕ್ಕೆ ಬೃಹತ್ ಮಾತ್ರವಲ್ಲದೆ ಹಿರಿಯ ಎಂಬ ಅರ್ಥವೂ ಸಂಸ್ಕೃತದಲ್ಲಿ ಇದೆ. ಈ ಹಿರಿಯ ಮತ್ತು ಪೆರಿಯಮ್ಮೆರ್ ಎಂಬ ತುಳು ಮೂಲಗಳನ್ನು ಹೋಲಿಸಿ‌‌ ನೋಡಿ. ಬೆಮ್ಮೆರ್ ಮತ್ತು‌ ಬ್ರಹ್ಮ ಶಬ್ದಗಳಲ್ಲಿ ಅರ್ಥವ್ಯತ್ಯಾಸ ಏನಾದರೂ ಇದೆಯೆ?
ಬೆಮ್ಮೆರ್ ಬಗ್ಗೆ ಹೇಳುವುದು ಮುಂದಕ್ಕೂ ಇದ್ದೇ ಇದೆ. ಅಲ್ಲಿಯವರೆಗೆ ನಿಮ್ಮ ಅಂತರಂಗದಲ್ಲಿ ಬೆಮ್ಮೆರ್‌ರ ಬಗ್ಗೆ ಚಿಂತನೆ ನಡೆಸಲು ಹೇಳುತ್ತಾ ಇಂದಿನ ಬರವಣಿಗೆಗೆ ವಿಶ್ರಾಂತಿ‌ ನೀಡುತ್ತೇನೆ.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »