TOP STORIES:

FOLLOW US

ಹೋಟೆಲಿನಲ್ಲಿ ಇಂಗ್ಲಿಷ್ ಮಾತನಾಡುವವರನ್ನು ಕಂಡು ಮೂಕನಂತೆ ನೋಡುತ್ತಿದ್ದ ಯುವಕ ಈಗ ಸಾವಿರಾರು ಬಡ ಮಕ್ಕಳಿಗೆ ಇಂಗ್ಲಿಷ್ ಕಲಿಸಿದ ಶಿಕ್ಷಣ ದಿಗ್ಗಜ ಪ್ರಕಾಶ್ ಅಂಚನ್


ಬಡತನದ ಬೇಗೆಯಿಂದ ಬಳಲುತ್ತಿದ್ದ ಕುಟುಂಬದಲ್ಲಿ ಜನಿಸಿದ ವ್ಯಕ್ತಿ. 7ನೇ ತರಗತಿಯಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿ ಉದ್ಯೋಗಕ್ಕಾಗಿ ಮುಂಬೈಗೆ ಹೊರಟು ಅಲ್ಲಿನ ಹೋಟೆಲುಗಳಲ್ಲಿ ಗ್ಲಾಸ್ ತೊಳೆದು ಸಂಪಾದನೆ ಮಾಡುತ್ತಿದ್ದ ಸಂದರ್ಭವದು. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ಜನರನ್ನು ಕಂಡು ಮೂಕ ವಿಸ್ಮಿತನಂತೆ ನೋಡಿ ನಾವಷ್ಟು ಕಲಿಯಲಿಲ್ಲವಲ್ಲಾ ಎಂದು ಚಿಂತಿಸಿ ಬಡವರಿಗೆ ಶಿಕ್ಷಣದ ಬಗ್ಗೆ ಅಂದೇ ಮಸ್ತಕದಲ್ಲಿ ಯೋಜನೆ ಹಾಕಿಕೊಂಡ ವ್ಯಕ್ತಿ ಅವರು.

ಅಂದು ಹಾಕಿದ ಯೋಜನೆಯ ಯೋಚನೆಯು ಇಂದು ಹೆಮ್ಮರವಾಗಿ ಬೆಳೆದು ಸಾವಿರಾರು ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾದ ಆ ವ್ಯಕ್ತಿ ಮತ್ಯಾರೂ ಅಲ್ಲ, ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು, “ಸರ್ಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿಯ ರಾಜ್ಯಾಧ್ಯಕ್ಷರು, ಸರ್ಕಾರಿ ಶಾಲೆ ಹೀಗೂ ಇರುತ್ತಾ ಎಂದು ಅಭಿವೃದ್ಧಿಯ ಶಕೆಯನ್ನು ಪಸರಿಸಿದ ಧೀಮಂತ ಅಕ್ಷರ ದಿಗ್ಗಜ ಪ್ರಕಾಶ್ ಅಂಚನ್

“ಹುಟ್ಟು ದರಿದ್ರ ಆದರೂ ಸಾವು ಚರಿತ್ರೆ ಆಗಬೇಕು” ಎಂಬ ಮಾತಿದೆ. ಅನೇಕ ಮಂದಿ ಬಡತನದಿಂದಲೇ ಹುಟ್ಟುತ್ತಾರೆ. ಬಡತನದ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾದ ಜನರು ಅದೆಷ್ಟೋ. ಇಂತಹಾ ಅನೇಕ ಮಂದಿಗೆ ಆದರ್ಶ ರೂಪವಾಗಿ ಕಂಗೊಳಿಸುವ ಶಿಕ್ಷಣ ಮೂರ್ತಿ ಪ್ರಕಾಶ್ ಅಂಚನ್.

ಹಿಂದೆಯೇ ಈ ಪುಣ್ಯಾತ್ಮರ ಬಗ್ಗೆ ಅಕ್ಷರ ಚೆಲ್ಲಬೇಕು ಎಂಬ ಕನಸಿತ್ತು. ಆದರೆ ಅದು ಇಂದು ನೆರವೇರಿದೆ ಹಾಗೂ ಅವರ ಬಗ್ಗೆ ಬರೆಯಲು ಬಹಳ ಸಂತೋಷ ಪಡುತ್ತೇನೆ.ಸರ್ಕಾರಿ ಶಾಲೆಗಳು ಉನ್ನತ ಮಟ್ಟಕ್ಕೇರಬೇಕು ಎಂಬ ನಾವು ಕಟ್ಟಿಕೊಳ್ಳುತ್ತಿದ್ದ ಕನಸಿಗೆ ಯಥಾವತ್ತಾಗಿ ಒಬ್ಬ ಅಸಮಾನ್ಯ ವ್ಯಕ್ತಿ ಸಾಧಿಸಿ ತೋರಿಸುತ್ತಿದ್ದಾರೆ ಎನ್ನುವಾಗ ಸಂತೋಷ ನೂರ್ಮಡಿಗೊಳ್ಳುತ್ತಿತ್ತು. ಅದರಲ್ಲೂ ನಮ್ಮ ತುಳುವ ಮಾಣಿಕ್ಯ ಹೆಮ್ಮೆ ಜಾಸ್ತೀನೇ.

ತನ್ನಂತೆ ಮುಂದಿನ ಪೀಳಿಗೆಯ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸಂಕಲ್ಪ ಇಟ್ಟುಕೊಂಡು ಮುಂಬೈನಿಂದ ಮತ್ತೆ ತನ್ನ ಸ್ವಂತ ಊರಿಗೆ ಮರಳಿದ ಪ್ರಕಾಶ್ ಅಂಚನ್ ಸೃಷ್ಟಿಸಿದ್ದು ಇತಿಹಾಸ. ಬಂಟ್ವಾಳದಲ್ಲಿ ಸಣ್ಣ ಗಾರ್ಮೆಂಟ್ಸ್ ಅಂಗಡಿ ತೆರೆದು, ಉದ್ಯಮ ಆರಂಭಿಸಿ ಆರಂಭದಲ್ಲಿ ನಾಲ್ಕು ಮಕ್ಕಳನ್ನು ದತ್ತು ಪಡೆದು ಶಿಕ್ಷಣ ನೀಡಿದ್ದ ಪ್ರಕಾಶ್ ಅಂಚನ್ ನಂತರ, 9ದೇವಸ್ಥಾನ ಅಭಿವೃದ್ಧಿ ಪಡಿಸಿ ಬ್ರಹ್ಮ ಕಲಸ ದಲ್ಲಿ ತೊಡಗಿ, ಎಂಟು ಶಾಲೆಗಳಿಗೆ ಉಚಿತ ಪುಸ್ತಕಗಳನ್ನು ನೀಡಿ, ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಅವರ ಯೋಚನೆಗಳು ಒಂದೇ ಸಮನೆ ಓಡಾಡುತ್ತಿದ್ದುದು ಶಿಕ್ಷಣದೆಡೆಗೆ. ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು ಎಂದು ಚಿಂತಿಸುತ್ತಿದ್ದ ಪ್ರಕಾಶ್ ಅಂಚನ್‍ರಿಗೆ ಸಿಕ್ಕಿದ್ದು ಮೂವತ್ತು ಮಕ್ಕಳನ್ನು ಹೊಂದಿದ್ದ ಬಂಟ್ವಾಳ ತಾಲೂಕಿನ ದಡ್ಡಲಕಾಡು ಪ್ರಾಥಮಿಕ ಶಾಲೆ. ಕಾಕತಾಳಿಯವೆಂದರೆ ಅದು ತಾನೇ ಕಲಿತ ಶಾಲೆಯಾಗಿತ್ತು. ಸರ್ಕಾರಿ ಶಾಲೆ ಸುಧಾರಿಸಬೇಕು ಎಂದು ಕನಸು ಕಟ್ಟಿಕೊಂಡು ಹೋರಾಡಿದ್ದ ಪ್ರಕಾಶ್ ಅಂಚನ್ ರಿಗೆ ತಾನೇ ಕಲಿತ ಶಾಲೆಯನ್ನು ಕಂಡು ಕಣ್ಣಲ್ಲಿ ನೀರು ಬಂದಿತ್ತು. ಅರೆ ಘಳಿಗೆಯೂ ಯೋಚನೆ ಮಾಡದೆ ತನ್ನ ಮಕ್ಕಳನ್ನು ಅದೇ ಶಾಲೆಗೆ ಸೇರಿಸಲು ನಿರ್ಧರಿಸಿದ್ದಲ್ಲದೆ ತನ್ನ ಸಹೋದರರ ಮಕ್ಕಳನ್ನೂ ಅದೇ ಶಾಲೆಗೆ ಸೇರ್ಪಡೆ ಮಾಡುವ ಬಗ್ಗೆ ತೀರ್ಮಾನ ಕೈಗೊಂಡರು. ನಂತರ ನಡೆದಿದ್ದೇ ಇತಿಹಾಸ. ಕೇವಲ 24 ಗಂಟೆಗಳಲ್ಲಿ 26 ಮಕ್ಕಳನ್ನು ಅದೇ ಸರ್ಕಾರಿ ಶಾಲೆಗೆ ಸೇರಿಸುವ ಮಹಾ ಕಾರ್ಯವನ್ನು ಅಂದೇ ಪೂರೈಸಿಬಿಟ್ಟರು. ಅದೇ ಸಂದರ್ಭದಲ್ಲಿ ಅವರಿಗೆ ಜೊತೆಯಾದ ಅತಿದೊಡ್ಡ ಶಕ್ತಿ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ (ರಿ.). ಅವಿರತ ದುಡಿಯುತ್ತಿದ್ದ ಯುವಕರಿದ್ದ ಆ ಸಂಘಟನೆಯ ಅಧ್ಯಕ್ಷರಾದ ಪ್ರಕಾಶ್ ಅಂಚನ್ ನಂತರ ಅದರ ನೇತೃತ್ವದಲ್ಲೇ ದಡ್ಡಲಕಾಡು ಶಾಲೆಗೆ ಹೊಸ ಆಯಾಮ ನೀಡಿದ್ದರು. ದಿನ ಕಳೆದಂತೆ ದಡ್ಡಲಕಾಡು ಶಾಲೆಯಲ್ಲಿ ಮಕ್ಕಳು ತುಂಬಿ ತುಳುಕಾಡುತ್ತಿದ್ದರು. ಮೂವತ್ತು ಮಕ್ಕಳನ್ನು ಹೊಂದಿದ್ದ ಆ ಶಾಲೆ ಇಂದು ಆರು ನೂರಕ್ಕಿಂತಲೂ ಅಧಿಕ ಮಕ್ಕಳನ್ನು ಹೊಂದಿರುವ ಶಾಲೆಯಾಗಿ ರಾಜ್ಯದಲ್ಲೇ ಖ್ಯಾತಿ ಪಡೆದಿದೆ. ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮವನ್ನೂ ಕಲಿಸಬಹುದು ಎಂಬ ಹೊಸ ಆಯಾಮಕ್ಕೆ ನಾಂದಿ ಹಾಡಿದವರೇ ಪ್ರಕಾಶ್ ಅಂಚನ್. ಅವರ ಕಾರ್ಯ ಅಷ್ಟಕ್ಕೇ ಮುಗಿದಿರಲಿಲ್ಲ. ರಾಷ್ಟ್ರ ಸುತ್ತಿದ್ದರು. “ಒಂದು ರಾಷ್ಟ್ರ ಒಂದೇ ಶಿಕ್ಷಣ” ಎಂಬ ಘೋಷವಾಕ್ಯದೊಂದಿಗೆ ರಥಯಾತ್ರೆ ಕೈಗೊಂಡರು. ರಾಜ್ಯ ರಾಜ್ಯಗಳನ್ನು ಸುತ್ತಿದರು. ರಾಜ್ಯದ ಬಹುತೇಕ ಕಡೆಗಳಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾದರು. ಇಂದು ರಾಜ್ಯದ ಶಿಕ್ಷಣ ಸಚಿವರು ಸಹಿತವಾಗಿ ಅನೇಕ ಜನಪ್ರತಿನಿಧಿಗಳು ಶಿಕ್ಷಣದ ವಿಚಾರವಾಗಿ ಪ್ರಕಾಶ್ ಅಂಚನ್ ಅವರ ಬಳಿ ಸಲಹೆಗಳನ್ನು ಪಡೆಯುತ್ತಾರೆ.

ದಡ್ಡಲಕಾಡು ಶಾಲೆಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ರಾಜ್ಯದ ರಾಜ್ಯಪಾಲರು ಆಡಿದ ಮಾತು ನಿಜಕ್ಕೂ ಅದ್ಭುತ. “ನಿಮ್ಮ ಸಾಧನೆ ಅಮೋಘ. ನಿಮ್ಮ ಶಿಕ್ಷಣ ಕ್ರಾಂತಿಯನ್ನು ಮುಂದುವರೆಸಿ. ಮುಂದೊಂದು ದಿನ ಈ ಶಾಲೆ ವಿಶ್ವ ವಿದ್ಯಾನಿಲಯವೂ ಆಗಬಹುದು”… ಅಬ್ಭಾ ಎಂತಹಾ ಮಾತುಗಳು. ಬಡ ಕುಟುಂಬದಲ್ಲಿ ಜನಿಸಿ, ದೂರದ ಮಹಾರಾಷ್ಟ್ರದಲ್ಲಿ ಹೋಟೆಲಿನ ಟೇಬಲ್ ತೊಳೆಯುತ್ತಿದ್ದ ಯುವಕ ಇಂದು ಸಾವಿರಾರು ಬಡ ಮಕ್ಕಳ ಪಾಲಿನ ಆದರ್ಶ ಮೂರ್ತಿಯಾಗಿದ್ದಾರೆ. ಪಠ್ಯ ಶಿಕ್ಷಣದೊಂದಿಗೆ ಕರಾಟೆ, ಸಾಂಸ್ಕೃತಿಕ ಚಟುವಟಿಕೆ, ಯೋಗ ಹೀಗೆ ಅನೇಕ ಯೋಜನೆಗಳು ಇವರ ಶಾಲೆಯಲ್ಲಿದೆ. ದಡ್ಡಲಕಾಡು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪತದಲ್ಲಿ ಸಾಗುತ್ತಿದೆ. ಇದೀಗ ಬೆಳ್ತಂಗಡಿ ತಾಲೂಕಿನ ಮರೋಡಿಯ ಕೂಕ್ರಬೆಟ್ಟ ಸಹಿತ ಕೆಲ ಶಾಲೆಗಳನ್ನು ದತ್ತು ತೆಗೆದುಕೊಂಡು ತಮ್ಮ ಶಿಕ್ಷಣ ಕ್ರಾಂತಿಯನ್ನು ಮುಂದುವರೆಸಿದ್ದಾರೆ.

ಬಡ ಮಕ್ಕಳಿಗೂ ಆಂಗ್ಲ ಮಾಧ್ಯಮವನ್ನು ರುಚಿಸಿದ ಪ್ರಕಾಶ್ ಅಂಚನ್ ರಿಗೆ ಶತಕೋಟಿ ನಮನಗಳು.ನಿಮ್ಮ ಶಿಕ್ಷಣ ಕ್ರಾಂತಿ ಮುಂದುವರಿದು ಮಹಾ ಕ್ರಾಂತಿಯಾಗಲಿ.


Share:

More Posts

Category

Send Us A Message

Related Posts

ಶ್ರೀ ಸತೀಶ್ ಕುಮಾರ್ ಬಜಾಲ್ ರಿಗೆ “ ಬಿಲ್ಲವ ಸಂಜೀವಿನಿ “ ಬಿರುದು ಗೌರವ ಪ್ರಧಾನ – ಬಿಲ್ಲವ ಸಂಘ ಪುಣೆ


Share       ವರ್ಲ್ಡ್ ಬಿಲ್ಲವಾಸ್ ಪ್ರೀಮಿಯರ್ ಲೀಗ್ 2025 ನ ಅದ್ಭುತ ಕಾರ್ಯಕ್ರಮದಲ್ಲಿ ಸೌಧಿ ಬಿಲ್ಲವಾಸ್ ದಮ್ಮಾಮ್ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ರಿಗೆ ಬಿಲ್ಲವ ಸಂಘ ಪುಣೆ ಯು ಅತಿಥಿ


Read More »

ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ


Share       ಮಂಗಳೂರು: ಸಾಧಕರ ಜೊತೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೇಮಕದ ಬಗ್ಗೆ ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಯುಗಾದಿ ಮಹೋತ್ಸವ, ವಿಷು


Read More »

ಪೊಲೀಸ್ ಸಬ್ ಇನ್ಸಸ್ಪೆಕ್ಟರ್ ಪ್ರದೀಪ್ ಪೂಜಾರಿಯವರಿಗೆ ಮುಖ್ಯಮಂತ್ರಿ ಚಿನ್ನದ ಪದಕ


Share       ಕೆಯ್ಯೂರು: ಕೆಯ್ಯೂರು ಗ್ರಾಮದ ಪಿ.ಎಸ್.ಐ ಪ್ರದೀಪ್ ಪೂಜಾರಿ 2023ನೇ ವರ್ಷದ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಮೂರನೇ ಬೆಟಾಲಿಯನ್ ಫೆರೆಡ್ ಗ್ರೌಂಡ್ ಕೆಎಸ್ಆರ್ಪಿ  ಕೊರಮಂಗಲ ಬೆಂಗಳೂರಿನಲ್ಲಿ ಎ.2ರಂದು ಪ್ರಶಸ್ತಿ ಪ್ರಧಾನ ನಡೆಯಲಿದೆ ಪ್ರದೀಪ್ ಪೂಜಾರಿ


Read More »

ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ರಾಜೇಂದ್ರ ಚಿಲಿಂಬಿ ಆಯ್ಕೆ


Share       ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿರುವ  ಸೇವೆಯನ್ನು ಪರಿಗಣಿಸಿ ಈ ಆಯ್ಕೆ ನಡೆದಿರುತ್ತದೆ. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ  ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಧ್ಯಮ ವಕ್ತಾರ, ಮಂಗಳೂರು ಚಿಲಿಂಬಿ ಸ್ವಾಮಿ


Read More »

ಜವಾಹರ್ ಬಾಲ್ ಮಂಚ್ ಇದರ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಸಂಯೋಜಕರಾಗಿ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಆಯ್ಕೆ


Share       ಬಂಟ್ವಾಳ : ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಇದರ ಸಂಸ್ಥಾಪಕರು, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ,


Read More »

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »