TOP STORIES:

FOLLOW US

ಪಟ್ಟಕ್ಕೆ ಪಟ್ಟದ ಹೆಸರೇ ಹೇಗೆ ಆಗಬೇಕೋ ಹಾಗೆಯೇ ಸಾಧನೆಗೆ ಸಾಧಕದ ಹೆಸರೇ ಆಗಬೇಕು ಇದೇ ಧಾರ್ಮಿಕ ನಡೆ…..


ಮಾತೆತ್ತಿದರೆ ಜೈ ಕೋಟಿ ಚೆನ್ನಯ ಅನ್ನುವ, ಕಂಡ ಕಂಡ ಬಸ್‌ಸ್ಟ್ಯಾಂಡ್- ಏರ್‌ಪೋರ್ಟ್ -ವೃತ್ತಗಳಿಗೆಲ್ಲ ಕೋಟಿಚೆನ್ನಯರ ಹೆಸರಿಡಬೇಕೆಂದು ಒತ್ತಾಯಿಸುವ ಕೋಟಿ ಚೆನ್ನಯರ ಅಭಿಮಾನಿಗಳಿಗೆ (ಭಕ್ತರಿಗಲ್ಲ), ಅವರ ಆದರ್ಶಪುರುಷರೇ ಸರಿಯಾದ ಉತ್ತರ ನೀಡಿದ್ದಾರೆ. ನಾವು ಹಲವು ವರ್ಷಗಳಿಂದ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಈಗ ಸ್ವತಃ ಬ್ರಹ್ಮಬೈದರ್ಕಳೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬಹುಶಃ ಕೆಲವರಿಗೆ ಇನ್ನೂ ವಿಷಯವೇನೆಂದು ಹೊಳೆದಿರಲಿಕ್ಕಿಲ್ಲ. ತಮಗೆಲ್ಲಾ ತಿಳಿದಿರುವಂತೆ ಎಣ್ಮೂರ ಬೈದೆರುಗಳು ಅಥವಾ ಬ್ರಹ್ಮಬೈದರ್ಕಳು  ಬ್ರಹ್ಮರ ಅಥವಾ ಬೆಮ್ಮೆರ್‌ರ ಜೊತೆಗೆ ಅವರಿಗೆ ಸಮಾನವಾದ ಸ್ಥಾನ ಪಡೆದ ಈ ಮಣ್ಣಿನ ಅತ್ಯುನ್ನತ ಶಕ್ತಿಗಳು‌. ಅವರ ಆರಾಧನೆ ಬೈದೆರ್ಲು/ ಬೈದರ್ಕಳು ಎಂಬ ಹೆಸರಿಂದ ನಡೆಯುವುದೇ ಹೊರತು ಕೋಟಿ ಚೆನ್ನಯ ಎಂಬ ಅವರ ಲೌಕಿಕ ಹೆಸರಿನಿಂದಲ್ಲ. ಮೂಲ ಆರಾಧ್ಯ ಶಕ್ತಿಗಳನ್ನು ಬಿಡಿ, ಅವರ ದರ್ಶನ ಪಾತ್ರಿಗಳು/ ನೇಮ ಕಟ್ಟುವವರನ್ನೂ ಜನ ಹೆಸರಿಂದ ಕರೆಯದೆ ಎಡ-ಬಲ/ ದತ್ತ್- ಬಲತ್‌ಗ್ ಉಂತುನಾರ್/ ಕಟ್ಟುನಾರ್ ಎಂದೇ ಗುರುತಿಸುವುದು ವಾಡಿಕೆ‌. ಭಕ್ತರು ಯಾವತ್ತೂ ಅವರನ್ನು ಕೋಟಿ ಚೆನ್ನಯ ಎಂದು ಕರೆಯುವ ವಾಡಿಕೆ ಹಿಂದಿನಿಂದಲೂ ಇಲ್ಲ‌. ಆದರೆ ಈವಾಗ ಸ್ವಲ್ಪ ಸಮಯದಿಂದ, ಅದೂ ಮುಖ್ಯವಾಗಿ ಎಲ್ಲದರಲ್ಲೂ  ವರ್ಗ ಸಂಘರ್ಷವನ್ನು ಕಾಣಲು ಕಾತರಿಸುವ ತಥಾಕಥಿತ ಬುದ್ದಿಜೀವಿಗಳು, ಲೇಖಕರು ಮತ್ತು ಸಂಶೋಧಕರುಗಳ ಕೃಪೆಯಿಂದಾಗಿ, ಜನ ಹೋದಲ್ಲಿ ಬಂದಲ್ಲಿ ಕೋಟಿ ಚೆನ್ನಯ ಎಂದು ಕರೆಯುವುದು ಆರಂಭವಾಯಿತು. ಸಿಕ್ಕಸಿಕ್ಕ ಸಾರ್ವಜನಿಕ ಸ್ಥಳಗಳಿಗೆ ನಮ್ಮ ಆರಾಧ್ಯಶಕ್ತಿಗಳ, ಅದರಲ್ಲೂ ಅವರ ಲೌಕಿಕ ಹೆಸರನ್ನು ಇಡಬೇಕೆಂದು ಒತ್ತಾಯಿಸುವುದು, ವಾಟ್ಸಾಪ್/ ಫ಼ೇಸ್‌ಬುಕ್ ಕೂಟಗಳಲ್ಲಿ ಜೈ ಕೋಟಿ-ಚೆನ್ನಯ ಎಂದು ಕಮೆಂಟ್ ಮಾಡುವುದು ಇವೆಲ್ಲಾ ಆರಂಭವಾಯಿತು. ನಮಗಂತೂ ಇಂತಹವರಿಗೆ ತಿಳಿಹೇಳಿ ಸಾಕಾಗಿಹೋಗಿತ್ತು. ಅಷ್ಟರಲ್ಲಿ ಇಂತವರಿಗೆ ಸಾಕ್ಷಾತ್ ಬ್ರಹ್ಮ ಬೈದರ್ಕಳೇ ಈ ಬಗ್ಗೆ ಬುದ್ದಿ ಹೇಳಿದ ಘಟನೆ ಇತ್ತೀಚೆಗೆ ಗರೊಡಿಯೊಂದರಲ್ಲಿ ನಡೆಯಿತು.

ಇತ್ತೀಚೆಗೆ ಗರೊಡಿಯೊಂದರಲ್ಲಿ ಬೈದರ್ಕಳು ಮತ್ತು ಕೊಡಮಂದಾಯ ದೈವದ ದರ್ಶನ ಸೇವೆ ನಡೆಯುತ್ತಿತ್ತು. ಬೈದರ್ಕಳ ನುಡಿ ಆಗುತ್ತಿರುವ ಹೊತ್ತಿಗೆ ಗರೊಡಿಯ ಅಸ್ರಣ್ಣ/ ತಂತ್ರಿಯೂ ಆಗಿರುವ ಗ್ರಾಮದೇವರ ಅರ್ಚಕರು ಮಾತಿನ ನಡುವೆ ಬೈದರುಗಳನ್ನು ಕೋಟಿಬೈದ್ಯ ಚೆನ್ನಯ ಬೈದ್ಯ ಎಂದು ಸಂಬೋಧಿಸಿದರು. ಆಗ ಬೈದೆರುಗಳು ಸಮಾಧಾನ ಚಿತ್ತದಿಂದಲೇ ಅಸ್ರಣ್ಣರ ಮಾತಲ್ಲಿ ಆಗುತ್ತಿರುವ ತಪ್ಪನ್ನು ಎತ್ತಿ ತೋರಿಸಿದರು. ಕೊಡಮಂದಾಯ ದೈವದ ಜೊತೆಗೆ ದರ್ಶನದಲ್ಲಿದ್ದ ಬೈದರುಗಳು, “ಅಸ್ರಣ್ಣರೇ, ನಿಮ್ಮ ಮಾತಲ್ಲೊಂದು ಲೋಪವಿದೆ. ಇದನ್ನು ಇನ್ನು ಮುಂದಕ್ಕೆ ಸರಿಪಡಿಸಿಕೊಳ್ಳಿ. ನಾವು ಜನ್ಮಕ್ಕೆ ಬಂದಾಗ ನಮಗೆ ನಮ್ಮ ಬಲ್ಲಾಳರು ಇಟ್ಟ ಹೆಸರು ಕೋಟಿ -ಚೆನ್ನಯ ಎನ್ನುವುದರಲ್ಲಿ ಸಂದೇಹವಿಲ್ಲ‌. ಆದರೆ ಒಮ್ಮೆ ನಾವು ಕಾಯವನ್ನು ತ್ಯಜಿಸಿ ಬೆಮ್ಮೆರ್‌ರನ್ನು ಸೇರಿದ  ಬಳಿಕ ನಮ್ಮನ್ನು ಕೋಟಿ ಚೆನ್ನಯ ಎಂದು ಕರೆಯುವ ರೂಢಿ ಇಲ್ಲ. ಕಾಯದಲ್ಲಿ ಕೋಟಿ ಚೆನ್ನಯರಾಗಿದ್ದ ನಾವು ಮಾಯದಲ್ಲಿ ಬೆಮ್ಮೆರ್ ಬೈದೆರುಗಳಾಗಿ ನಂಬಿದವರನ್ನು ಕಾಯುತ್ತಾ ಬಂದಿದ್ದೇವೆ. ಅಲ್ಲದೆ ನಮ್ಮನ್ನು ಬೆಮ್ಮೆರ್ ಬೈದೆರುಗಳೆಂದು ಆರಾಧಿಸುವುದೇ ಹೊರತು ಕೋಟಿ-ಚೆನ್ನಯರೆಂದಲ್ಲ. ಹಾಗಾಗಿ ನೀವು ನಮ್ಮನ್ನು ಕೋಟಿ- ಚೆನ್ನಯ ಎಂದಾಗಲೀ ಕೋಟಿಬೈದ್ಯ- ಚೆನ್ನಯಬೈದ್ಯ ಎಂದಾಗಲೀ ಕರೆಯುವುದು ಸೂಕ್ತವಲ್ಲ. ಮುಂದಕ್ಕೆ ಈ ರೀತಿಯ ಮಾತು‌ ನಿಮ್ಮಿಂದ ಬಾರದಂತೆ ನೋಡಿಕೊಳ್ಳಿ” ಎಂದು ತಾಕೀತು ಮಾಡಿದರು.  ಅಸ್ರಣ್ಣರು ಮರುಮಾತಾಡದೆ ಬೈದರ್ಕಳ ನುಡಿಗೆ ತಲೆಬಾಗಿ ಅಂದಿನಿಂದ ಅವರನ್ನು ಬೆಮ್ಮೆರ್ ಬೈದೆರುಗಳೆಂದೇ ಕರೆಯತೊಡಗಿದ್ದಾರೆ. ಅಸ್ರಣ್ಣರೇ ಬೈದರ್ಕಳ ಮಾತಿಗೆ ತಲೆಬಾಗಿ ತಮ್ಮ ಹಿರಿತನವನ್ನು ಮೆರೆಯುತ್ತಿರುವಾಗ ನಮ್ಮನಿಮ್ಮಂತಹ ಸಾಮಾನ್ಯರಿಗೆ ಬೈದರ್ಕಳ ನುಡಿಯನ್ನು ಪಾಲಿಸುವುದು ಕಷ್ಟವಾದೀತೇ? ಬೈದರ್ಕಳ ನುಡಿಯನ್ನು ನಿಮಗೆ ತಲುಪಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಇನ್ನು ಮುಂದಕ್ಕಾದರೂ ಹೇಗೆ ನಡೆದುಕೊಳ್ಳುವಿರೋ ನಿಮಗೆ ಬಿಟ್ಟಿದ್ದು.


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »