TOP STORIES:

FOLLOW US

ಪಟ್ಟಕ್ಕೆ ಪಟ್ಟದ ಹೆಸರೇ ಹೇಗೆ ಆಗಬೇಕೋ ಹಾಗೆಯೇ ಸಾಧನೆಗೆ ಸಾಧಕದ ಹೆಸರೇ ಆಗಬೇಕು ಇದೇ ಧಾರ್ಮಿಕ ನಡೆ…..


ಮಾತೆತ್ತಿದರೆ ಜೈ ಕೋಟಿ ಚೆನ್ನಯ ಅನ್ನುವ, ಕಂಡ ಕಂಡ ಬಸ್‌ಸ್ಟ್ಯಾಂಡ್- ಏರ್‌ಪೋರ್ಟ್ -ವೃತ್ತಗಳಿಗೆಲ್ಲ ಕೋಟಿಚೆನ್ನಯರ ಹೆಸರಿಡಬೇಕೆಂದು ಒತ್ತಾಯಿಸುವ ಕೋಟಿ ಚೆನ್ನಯರ ಅಭಿಮಾನಿಗಳಿಗೆ (ಭಕ್ತರಿಗಲ್ಲ), ಅವರ ಆದರ್ಶಪುರುಷರೇ ಸರಿಯಾದ ಉತ್ತರ ನೀಡಿದ್ದಾರೆ. ನಾವು ಹಲವು ವರ್ಷಗಳಿಂದ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಈಗ ಸ್ವತಃ ಬ್ರಹ್ಮಬೈದರ್ಕಳೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬಹುಶಃ ಕೆಲವರಿಗೆ ಇನ್ನೂ ವಿಷಯವೇನೆಂದು ಹೊಳೆದಿರಲಿಕ್ಕಿಲ್ಲ. ತಮಗೆಲ್ಲಾ ತಿಳಿದಿರುವಂತೆ ಎಣ್ಮೂರ ಬೈದೆರುಗಳು ಅಥವಾ ಬ್ರಹ್ಮಬೈದರ್ಕಳು  ಬ್ರಹ್ಮರ ಅಥವಾ ಬೆಮ್ಮೆರ್‌ರ ಜೊತೆಗೆ ಅವರಿಗೆ ಸಮಾನವಾದ ಸ್ಥಾನ ಪಡೆದ ಈ ಮಣ್ಣಿನ ಅತ್ಯುನ್ನತ ಶಕ್ತಿಗಳು‌. ಅವರ ಆರಾಧನೆ ಬೈದೆರ್ಲು/ ಬೈದರ್ಕಳು ಎಂಬ ಹೆಸರಿಂದ ನಡೆಯುವುದೇ ಹೊರತು ಕೋಟಿ ಚೆನ್ನಯ ಎಂಬ ಅವರ ಲೌಕಿಕ ಹೆಸರಿನಿಂದಲ್ಲ. ಮೂಲ ಆರಾಧ್ಯ ಶಕ್ತಿಗಳನ್ನು ಬಿಡಿ, ಅವರ ದರ್ಶನ ಪಾತ್ರಿಗಳು/ ನೇಮ ಕಟ್ಟುವವರನ್ನೂ ಜನ ಹೆಸರಿಂದ ಕರೆಯದೆ ಎಡ-ಬಲ/ ದತ್ತ್- ಬಲತ್‌ಗ್ ಉಂತುನಾರ್/ ಕಟ್ಟುನಾರ್ ಎಂದೇ ಗುರುತಿಸುವುದು ವಾಡಿಕೆ‌. ಭಕ್ತರು ಯಾವತ್ತೂ ಅವರನ್ನು ಕೋಟಿ ಚೆನ್ನಯ ಎಂದು ಕರೆಯುವ ವಾಡಿಕೆ ಹಿಂದಿನಿಂದಲೂ ಇಲ್ಲ‌. ಆದರೆ ಈವಾಗ ಸ್ವಲ್ಪ ಸಮಯದಿಂದ, ಅದೂ ಮುಖ್ಯವಾಗಿ ಎಲ್ಲದರಲ್ಲೂ  ವರ್ಗ ಸಂಘರ್ಷವನ್ನು ಕಾಣಲು ಕಾತರಿಸುವ ತಥಾಕಥಿತ ಬುದ್ದಿಜೀವಿಗಳು, ಲೇಖಕರು ಮತ್ತು ಸಂಶೋಧಕರುಗಳ ಕೃಪೆಯಿಂದಾಗಿ, ಜನ ಹೋದಲ್ಲಿ ಬಂದಲ್ಲಿ ಕೋಟಿ ಚೆನ್ನಯ ಎಂದು ಕರೆಯುವುದು ಆರಂಭವಾಯಿತು. ಸಿಕ್ಕಸಿಕ್ಕ ಸಾರ್ವಜನಿಕ ಸ್ಥಳಗಳಿಗೆ ನಮ್ಮ ಆರಾಧ್ಯಶಕ್ತಿಗಳ, ಅದರಲ್ಲೂ ಅವರ ಲೌಕಿಕ ಹೆಸರನ್ನು ಇಡಬೇಕೆಂದು ಒತ್ತಾಯಿಸುವುದು, ವಾಟ್ಸಾಪ್/ ಫ಼ೇಸ್‌ಬುಕ್ ಕೂಟಗಳಲ್ಲಿ ಜೈ ಕೋಟಿ-ಚೆನ್ನಯ ಎಂದು ಕಮೆಂಟ್ ಮಾಡುವುದು ಇವೆಲ್ಲಾ ಆರಂಭವಾಯಿತು. ನಮಗಂತೂ ಇಂತಹವರಿಗೆ ತಿಳಿಹೇಳಿ ಸಾಕಾಗಿಹೋಗಿತ್ತು. ಅಷ್ಟರಲ್ಲಿ ಇಂತವರಿಗೆ ಸಾಕ್ಷಾತ್ ಬ್ರಹ್ಮ ಬೈದರ್ಕಳೇ ಈ ಬಗ್ಗೆ ಬುದ್ದಿ ಹೇಳಿದ ಘಟನೆ ಇತ್ತೀಚೆಗೆ ಗರೊಡಿಯೊಂದರಲ್ಲಿ ನಡೆಯಿತು.

ಇತ್ತೀಚೆಗೆ ಗರೊಡಿಯೊಂದರಲ್ಲಿ ಬೈದರ್ಕಳು ಮತ್ತು ಕೊಡಮಂದಾಯ ದೈವದ ದರ್ಶನ ಸೇವೆ ನಡೆಯುತ್ತಿತ್ತು. ಬೈದರ್ಕಳ ನುಡಿ ಆಗುತ್ತಿರುವ ಹೊತ್ತಿಗೆ ಗರೊಡಿಯ ಅಸ್ರಣ್ಣ/ ತಂತ್ರಿಯೂ ಆಗಿರುವ ಗ್ರಾಮದೇವರ ಅರ್ಚಕರು ಮಾತಿನ ನಡುವೆ ಬೈದರುಗಳನ್ನು ಕೋಟಿಬೈದ್ಯ ಚೆನ್ನಯ ಬೈದ್ಯ ಎಂದು ಸಂಬೋಧಿಸಿದರು. ಆಗ ಬೈದೆರುಗಳು ಸಮಾಧಾನ ಚಿತ್ತದಿಂದಲೇ ಅಸ್ರಣ್ಣರ ಮಾತಲ್ಲಿ ಆಗುತ್ತಿರುವ ತಪ್ಪನ್ನು ಎತ್ತಿ ತೋರಿಸಿದರು. ಕೊಡಮಂದಾಯ ದೈವದ ಜೊತೆಗೆ ದರ್ಶನದಲ್ಲಿದ್ದ ಬೈದರುಗಳು, “ಅಸ್ರಣ್ಣರೇ, ನಿಮ್ಮ ಮಾತಲ್ಲೊಂದು ಲೋಪವಿದೆ. ಇದನ್ನು ಇನ್ನು ಮುಂದಕ್ಕೆ ಸರಿಪಡಿಸಿಕೊಳ್ಳಿ. ನಾವು ಜನ್ಮಕ್ಕೆ ಬಂದಾಗ ನಮಗೆ ನಮ್ಮ ಬಲ್ಲಾಳರು ಇಟ್ಟ ಹೆಸರು ಕೋಟಿ -ಚೆನ್ನಯ ಎನ್ನುವುದರಲ್ಲಿ ಸಂದೇಹವಿಲ್ಲ‌. ಆದರೆ ಒಮ್ಮೆ ನಾವು ಕಾಯವನ್ನು ತ್ಯಜಿಸಿ ಬೆಮ್ಮೆರ್‌ರನ್ನು ಸೇರಿದ  ಬಳಿಕ ನಮ್ಮನ್ನು ಕೋಟಿ ಚೆನ್ನಯ ಎಂದು ಕರೆಯುವ ರೂಢಿ ಇಲ್ಲ. ಕಾಯದಲ್ಲಿ ಕೋಟಿ ಚೆನ್ನಯರಾಗಿದ್ದ ನಾವು ಮಾಯದಲ್ಲಿ ಬೆಮ್ಮೆರ್ ಬೈದೆರುಗಳಾಗಿ ನಂಬಿದವರನ್ನು ಕಾಯುತ್ತಾ ಬಂದಿದ್ದೇವೆ. ಅಲ್ಲದೆ ನಮ್ಮನ್ನು ಬೆಮ್ಮೆರ್ ಬೈದೆರುಗಳೆಂದು ಆರಾಧಿಸುವುದೇ ಹೊರತು ಕೋಟಿ-ಚೆನ್ನಯರೆಂದಲ್ಲ. ಹಾಗಾಗಿ ನೀವು ನಮ್ಮನ್ನು ಕೋಟಿ- ಚೆನ್ನಯ ಎಂದಾಗಲೀ ಕೋಟಿಬೈದ್ಯ- ಚೆನ್ನಯಬೈದ್ಯ ಎಂದಾಗಲೀ ಕರೆಯುವುದು ಸೂಕ್ತವಲ್ಲ. ಮುಂದಕ್ಕೆ ಈ ರೀತಿಯ ಮಾತು‌ ನಿಮ್ಮಿಂದ ಬಾರದಂತೆ ನೋಡಿಕೊಳ್ಳಿ” ಎಂದು ತಾಕೀತು ಮಾಡಿದರು.  ಅಸ್ರಣ್ಣರು ಮರುಮಾತಾಡದೆ ಬೈದರ್ಕಳ ನುಡಿಗೆ ತಲೆಬಾಗಿ ಅಂದಿನಿಂದ ಅವರನ್ನು ಬೆಮ್ಮೆರ್ ಬೈದೆರುಗಳೆಂದೇ ಕರೆಯತೊಡಗಿದ್ದಾರೆ. ಅಸ್ರಣ್ಣರೇ ಬೈದರ್ಕಳ ಮಾತಿಗೆ ತಲೆಬಾಗಿ ತಮ್ಮ ಹಿರಿತನವನ್ನು ಮೆರೆಯುತ್ತಿರುವಾಗ ನಮ್ಮನಿಮ್ಮಂತಹ ಸಾಮಾನ್ಯರಿಗೆ ಬೈದರ್ಕಳ ನುಡಿಯನ್ನು ಪಾಲಿಸುವುದು ಕಷ್ಟವಾದೀತೇ? ಬೈದರ್ಕಳ ನುಡಿಯನ್ನು ನಿಮಗೆ ತಲುಪಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಇನ್ನು ಮುಂದಕ್ಕಾದರೂ ಹೇಗೆ ನಡೆದುಕೊಳ್ಳುವಿರೋ ನಿಮಗೆ ಬಿಟ್ಟಿದ್ದು.


Share:

More Posts

Category

Send Us A Message

Related Posts

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »

ಮಹಾ ಕುಂಭಮೇಳ: ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಕರ್ನಾಟಕಕ್ಕೆ ಸಂದ ಮೊದಲ ಗೌರವ


Share       ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಬಮೇಳದಲ್ಲಿ ಉತ್ತರ


Read More »

ರಾಷ್ಟ್ರಮಟ್ಟದ ನ್ಯಾಷನಲ್ ಗೇಮ್ಸ್ -2025 ಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ


Share       ಪುತ್ತೂರು: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು


Read More »