TOP STORIES:

FOLLOW US

ಸಹಸ್ರಾರು ಮಂದಿಯ ಹೃದಯ ದೇವತೆ ಲೀಲಾವತಿ ಜಯ ಸುವರ್ಣ


ಸ್ವಂತ ಮಕ್ಕಳನ್ನು ಹೆತ್ತು ತಾಯಿಯಾಗುವುದಕ್ಕಿಂತ, ಸಾಮಾಜಿಕವಾಗಿ ತಾಯಿಯಾದವರು ಎಲ್ಲ ತಾಯಿಯಂದಿರಿಗಿಂತ ಉನ್ನತ ಸ್ಥಾನದಲ್ಲಿ ನಿಲ್ಲುತ್ತಾರೆ. ಅಂಥ ವಿಶಾಲ ಹೃದಯಿ ಲೀಲಾವತಿ ಜಯ ಸುವರ್ಣರು. ಜಗತ್ತಿನ ಬಹುತೇಕ ಸಾಧಕರ ಸಾಧನೆಯಲ್ಲಿ ಅದೆಷ್ಟೋ ಮಹಿಳೆಯರ ತ್ಯಾಗವಿದೆ, ಸಹನೆಯಿದೆ, ಸಮರ್ಪಣೆಯಿದೆ, ಪ್ರೀತಿ ಪ್ರೋತ್ಸಾಹಗಳಿವೆ. ಬಿಲ್ಲವ ಸಮಾಜದ ಅಭಿವೃದ್ಧಿಯ ರೂವಾರಿ ಸನ್ಮಾನ್ಯ ಜಯ ಸಿ. ಸುವರ್ಣರ ಸಮಾಜಪರ ಕೆಲಸ ಕಾರ್ಯಗಳಿಗೆ ಶಕ್ತಿಯಾಗಿ ನಿಂತವರು ಲೀಲಾವತಿಯವರು. ಈ ದಂಪತಿ ಸಮಾಜ ಸೇವೆಯನ್ನು ದೇವರ ಸೇವೆಯೆಂದು ಭಾವಿಸಿ ಅನುಸರಿಸಿದವರು. ಪರರ ಒಳಿತಿನಲ್ಲಿಯೇ ಖುಷಿಯನ್ನು ಕಂಡವರು. ಭಾರತೀಯ ಪರಂಪರೆಯ “ಅತಿಥಿ ದೇವೋ ಭವ” ಎಂಬ ಘೋಷ ವಾಕ್ಯಕ್ಕೆ ತಕ್ಕಂತೆ ಅರ್ಥಪೂರ್ಣವಾಗಿ ಬಾಳಿದವರು. ಸಾಮಾಜಿಕ ಜವಾಬ್ದಾರಿಯನ್ನು ಜೀವನದುದ್ದಕ್ಕೂ ಸಮರ್ಥವಾಗಿ ನಿರ್ವಹಿಸಿದವರು. ಜಯ ಸುವರ್ಣರ ಜೀವನದಲ್ಲಿ ಲೀಲಾವತಿಯವರು ವರವಾಗಿಯೇ ಬಂದಿದ್ದಾರೆ ಎಂದರೆ ತಪ್ಪಾಗಲಾರದು.

ಲೀಲಾವತಿ ಜಯ ಸುವರ್ಣರು 1948ರಲ್ಲಿ ಜನಿಸಿದರು. ಪಡುಬಿದ್ರಿ ಪಡುಹಿತ್ಲು ದಿ.ಜಲಜ ಮತ್ತು ಗೋಪಾಲ ಸುವರ್ಣರ ಏಳು ಮಂದಿ ಮಕ್ಕಳಲ್ಲಿ ಇವರು ಮೂರನೆಯವರು. ಇವರು ಜಯ ಸುವರ್ಣರಿಗೆ ಅನುರೂಪದ ಬಾಳಸಂಗಾತಿ. ಪತಿಯನ್ನೇ ದೇವರು ಎಂದುಕೊಂಡು, ಅವರಿಗಿಂತ ಮಿಗಿಲಾದುದು ತನಗೇನು ಇಲ್ಲ! ಎಂಬಷ್ಟು ತಮ್ಮನ್ನು ಅರ್ಪಿಸಿಕೊಂಡಿದ್ದರು. ಸುವರ್ಣರ ಬಾಳಿನಲ್ಲಿ ಹೊಸದೊಂದು ಬದಲಾವಣೆಯನ್ನೂ ತಂದವರು. ತಮ್ಮ ಮನೆಗೆ ಬಂದು ಹೋಗುತ್ತಿದ್ದವರನ್ನೆಲ್ಲ ನಗುಮುಖದಿಂದ  ಸ್ವಾಗತಿಸುತ್ತಿದ್ದ ಇವರು ಸಹಸ್ರಾರು ಮಂದಿಗೆ ತಾಯಿಯಾದವರು. ಜಯ ಸುವರ್ಣರ ಕುಟುಂಬಕ್ಕೆ ಆಪ್ತರಾಗಿದ್ದವರು, ‘ಜಯ ಸುವರ್ಣರು ಹೇಗಿದ್ದರೋ ಅವರ ಪತ್ನಿ ಲೀಲಕ್ಕ ಕೂಡಾ ಹಾಗೆಯೇ. ನಮ್ಮನ್ನು ನಗುನಗುತ್ತ ಮಾತಾಡಿಸಿ ಪ್ರೀತಿಯಿಂದ ಉಪಚರಿಸುತ್ತಿದ್ದರು. ಮನೆಯಲ್ಲಿ ರೊಟ್ಟಿ, ಕಡುಬು, ಇಡ್ಲಿ ಅಥವಾ ಬೇರೇನೇ ತಿಂಡಿತಿನಿಸುಗಳಿರಲಿ, ಮನೆಗೆ ಬಂದವರಿಗೆಲ್ಲ ಪ್ರೀತಿಯಿಂದ ನೀಡುತ್ತಿದ್ದರು. ಹಾಗಾಗಿ ಆ ಮನೆಯು ನಮ್ಮದೇ ಮನೆ ಎಂಬಷ್ಟು ಆಪ್ತವಾಗುತ್ತಿತ್ತು. ಪರಕೀಯ ಭಾವವೆಂದೂ ಮೂಡಿದ್ದಿಲ್ಲ. ಅವರಲ್ಲೂ ಹಾಗೆಯೇ, ಯಾರೋ ಹೊರಗಿನವರು ಬಂದಿದ್ದಾರೆ ಅನ್ನುವ ಭಾವವೇ ಇರುತ್ತಿರಲಿಲ್ಲ’ ಎನ್ನುತ್ತಾರೆ. ಹೀಗೆ ಅದೆಷ್ಟೋ ವರ್ಷಗಳಿಂದ ಅನೇಕರ ಹೊಟ್ಟೆಯ ಹಸಿವನ್ನು ನೀಗಿಸುತ್ತಿದ್ದ ಮಹಾತಾಯಿ ಅವರಾಗಿದ್ದರು.

ಶ್ರೀಮಂತಿಕೆ ಇದ್ದರೂ ಮನೆಯಲ್ಲಿ ಯಾವಾಗಲೂ ಲೀಲಾವತಿಯವರದ್ದೇ ಕೈಯಡುಗೆ ಇರುತ್ತಿತ್ತು. ಕುಟುಂಬದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತ ಪತಿಯ ಕಾರ್ಯಗಳಿಗೆ ನೈತಿಕ ಪ್ರೋತ್ಸಾಹವನ್ನು ನೀಡಿದವರು. ತಮ್ಮ ಸುಖಮಯವಾದ ಜೀವನವು ಆ ದೇವರದೇ ಕೃಪೆ ಎನ್ನುತ್ತಿದ್ದರು. ಕೂಡು ಕುಟುಂಬದಲ್ಲಿ ಹುಟ್ಟಿ ಬೆಳೆದ ಮಹಿಳೆಯೊಬ್ಬಳು ಮುಂಬ¬ಯಂಥ ಆಧುನಿಕ ನಗರದಲ್ಲೂ ಅದಕ್ಕಿಂತ ಹೆಚ್ಚಿನ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿಭಾಯಿಸಿದ್ದನ್ನು ಗಮನಿಸುವಾಗ ಆ ಮಾತೆಯ ಬಗೆಗೆ ಗೌರವಾಭಿಮಾನಗಳು ಮೂಡುತ್ತವೆ.

ಜಯ ಸುವರ್ಣರು ‘ಬಿಲ್ಲವರ ಎಸೋಸಿಯೇಶನ್ ಮುಂಬಯಿ ’ ಇದರಲ್ಲಿ ಸಕ್ರಿಯರಾದ ಬಳಿಕ ತಮ್ಮ ಸಂಪೂರ್ಣ ಸಮಯವನ್ನು ಸಮಾಜಕ್ಕಾಗಿಯೇ ವಿನಿಯೋಗಿಸುತ್ತಿದ್ದರು. ಅವರು ಪ್ರತಿನಿತ್ಯ ಒಪ್ಪಿಕೊಂಡ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಎಷ್ಟು ತಡವಾಗಿ ಮನೆಗೆ ಬಂದರೂ ಲೀಲಾವತಿಯವರು ಮುನಿಸಿಕೊಂಡವರಲ್ಲ. ಬಿಲ್ಲವ ಸಮಾಜದ ಏಳಿಗೆಯ ಜೊತೆಗೆ ಜಾತಿ ಮತ ಭೇದವಿಲ್ಲದೆ ಅಶಕ್ತರನ್ನು ಪೋಷಿಸುವ ಸುವರ್ಣರ ನಿಲುವನ್ನು ತಾವೂ ಮೆಚ್ಚಿಕೊಂಡು ಜೊತೆಯಾದವರು. ಪತಿಯನ್ನೇ ಸರ್ವಸ್ವವೆಂದುಕೊಂಡು, ‘ಅವರಿಗಿಂತ ಮಿಗಿಲಾದುದು ತನಗೇನು ಇಲ್ಲ’ ಎಂಬಷ್ಟು ತಮ್ಮನ್ನು ಅರ್ಪಿಸಿಕೊಂಡಿದ್ದರು.  ಅವರಲ್ಲಿರುವ ಮುಗ್ಧತೆ, ಪ್ರಾಮಾಣಿಕತೆ ಹಾಗೂ ಅತಿಥಿಗಳನ್ನು ಸತ್ಕರಿಸುವ ಸದ್ಗುಣವನ್ನು ತಮ್ಮ ಜೀವಿತಾವಧಿಯವರೆಗೂ ಉಳಿಸಿಕೊಂಡಿದ್ದರು. ಮದುವೆಯಾದ ಮೇಲೆ ಒಂದು ದಿನವೂ ಸುವರ್ಣರನ್ನು ಬಿಟ್ಟಿದ್ದು ಅಭ್ಯಾಸವಿರದ ಲೀಲಾವತಿಯವರಿಗೆ ಪತಿಯ ಅಗಲಿಕೆ ತೀರ ನೋವು ತಂದಿತ್ತು. ಇವರು 2023ರ ಜುಲೈ ಒಂದರಂದು ಅಲ್ಪಕಾಲದ ಅನಾರೋಗ್ಯದಿಂದ ತೀರಿಕೊಂಡರು. ‘ಅವರು ತಾಯಿ ಸಮಾನರು. ಅವರ ಕೈತುತ್ತು ತಿಂದವರು ನಾವು’ ಎಂದು ಲೀಲಾವತಿಯವರನ್ನು ಅದೆಷ್ಟೋ ಮಂದಿ ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.

ಲೀಲಕ್ಕ ಹಳ್ಳಿಯ ಸಂಪ್ರದಾಯಸ್ಥ ಕುಟುಂಬದಿಂದ ಬಂದವರಾದುದರಿಂದ ನಗರದಲ್ಲಿಯೂ ಅದೇ ಸಂಸ್ಕಾರಯುತ ಜೀವನವನ್ನೇ ಆದರಿಸಿದರು. ಕುಟುಂಬವೇ ತನ್ನ ಪ್ರಪಂಚವೆಂದು ಭಾವಿಸಿ, ಅದರ ಖುಷಿಯಲ್ಲಿಯೇ ತನ್ನ ಆನಂದವನ್ನು ಕಾಣುತ್ತ ಜೀವಿಸಿದರು. ಹೊಟೇಲು ಉದ್ಯಮದ ಕೆಲಸಗಾರರನ್ನೂ ತಮ್ಮ ಮನೆಮಂದಿಯಂತೆಯೇ ಉಪಚರಿಸುವ ಉದಾರ ಮನೋಭಾವ ಲೀಲಾವತಿವರದ್ದಾಗಿತ್ತು. ಓರ್ವ ಆದರ್ಶ ಗ್ರಹಿಣಿಯಾಗಿ, ಹಳ್ಳಿಯ ಸಂಸ್ಕಾರವನ್ನೇ ಅನುಸರಿಸಿಕೊಂಡು ಬದುಕಿದ್ದು ಅವರ ಹಿರಿತನ. ಹಿರಿಯರಿಂದ ನಮಗೆ ಬಂದಿರುವುದನ್ನು ನಮ್ಮ ಮುಂದಿನ ಪೀಳಿಗೆಗೆ ದಾಟಿಸಿದಲ್ಲಿ ಮಾತ್ರ ಅದೇ ಸಂಸ್ಕಾರ ಮುಂದುವರಿಯಲು ಸಾಧ್ಯವಾಗುತ್ತದೆ. ಮಕ್ಕಳಾದ ಸೂರ್ಯಕಾಂತ್, ಸುಭಾಶ್ ದಿನೇಶ್, ಯೋಗೇಶ್ ಹೀಗೆ ನಾಲ್ಕು ಮಂದಿ ಗಂಡು ಮಕ್ಕಳಿಗೂ ಒಳ್ಳೆಯ ಸಂಸ್ಕಾರವನ್ನು ನೀಡಿ ಬೆಳೆಸಿದ್ದಾರೆ. ಈ ಮೂಲಕ ಇಡೀ ಮಾತೃ ವರ್ಗಕ್ಕೆ ಲೀಲಾವತಿಯವರು ಆದರ್ಶ ಮಾತೆಯಾಗಿದ್ದಾರೆ. ಸಹಸ್ರಾರು ಮಂದಿಯ ಹೃದಯದೇವತೆಯಾಗಿದ್ದಾರೆ.

✍🏻 ಅನಿತಾ ಪಿ.ತಾಕೊಡೆ


Share:

More Posts

Category

Send Us A Message

Related Posts

ಶ್ರೀ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಕೂಟದ ವತಿಯಿಂದ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ಶ್ರೀ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಕೂಟದ ವತಿಯಿಂದ 14-02-2025 ರಂದು ಅಧ್ಯಕ್ಷರಾದ ಹರೀಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಹರೈನ್ ನಲ್ಲಿ ಬಿಡುಗಡೆ


Read More »

ಸರ್ಕಾರಿ ಆಸ್ಪತ್ರೆಗಳಲ್ಲಿದೆ ಗುಣಮಟ್ಟದ ಚಿಕಿತ್ಸೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಶ್ಲಾಘನೆ


Share       ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲೂ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವುದಕ್ಕೆ ವೆನ್ಲಾಕ್ ಆಸ್ಪತ್ರೆ ಉತ್ತಮ ನಿದರ್ಶನ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ತಾತ್ಸಾರ ಬೇಡ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.


Read More »

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »