TOP STORIES:

ಪಟ್ಟಕ್ಕೆ ಪಟ್ಟದ ಹೆಸರೇ ಹೇಗೆ ಆಗಬೇಕೋ ಹಾಗೆಯೇ ಸಾಧನೆಗೆ ಸಾಧಕದ ಹೆಸರೇ ಆಗಬೇಕು ಇದೇ ಧಾರ್ಮಿಕ ನಡೆ…..


ಮಾತೆತ್ತಿದರೆ ಜೈ ಕೋಟಿ ಚೆನ್ನಯ ಅನ್ನುವ, ಕಂಡ ಕಂಡ ಬಸ್‌ಸ್ಟ್ಯಾಂಡ್- ಏರ್‌ಪೋರ್ಟ್ -ವೃತ್ತಗಳಿಗೆಲ್ಲ ಕೋಟಿಚೆನ್ನಯರ ಹೆಸರಿಡಬೇಕೆಂದು ಒತ್ತಾಯಿಸುವ ಕೋಟಿ ಚೆನ್ನಯರ ಅಭಿಮಾನಿಗಳಿಗೆ (ಭಕ್ತರಿಗಲ್ಲ), ಅವರ ಆದರ್ಶಪುರುಷರೇ ಸರಿಯಾದ ಉತ್ತರ ನೀಡಿದ್ದಾರೆ. ನಾವು ಹಲವು ವರ್ಷಗಳಿಂದ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಈಗ ಸ್ವತಃ ಬ್ರಹ್ಮಬೈದರ್ಕಳೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬಹುಶಃ ಕೆಲವರಿಗೆ ಇನ್ನೂ ವಿಷಯವೇನೆಂದು ಹೊಳೆದಿರಲಿಕ್ಕಿಲ್ಲ. ತಮಗೆಲ್ಲಾ ತಿಳಿದಿರುವಂತೆ ಎಣ್ಮೂರ ಬೈದೆರುಗಳು ಅಥವಾ ಬ್ರಹ್ಮಬೈದರ್ಕಳು  ಬ್ರಹ್ಮರ ಅಥವಾ ಬೆಮ್ಮೆರ್‌ರ ಜೊತೆಗೆ ಅವರಿಗೆ ಸಮಾನವಾದ ಸ್ಥಾನ ಪಡೆದ ಈ ಮಣ್ಣಿನ ಅತ್ಯುನ್ನತ ಶಕ್ತಿಗಳು‌. ಅವರ ಆರಾಧನೆ ಬೈದೆರ್ಲು/ ಬೈದರ್ಕಳು ಎಂಬ ಹೆಸರಿಂದ ನಡೆಯುವುದೇ ಹೊರತು ಕೋಟಿ ಚೆನ್ನಯ ಎಂಬ ಅವರ ಲೌಕಿಕ ಹೆಸರಿನಿಂದಲ್ಲ. ಮೂಲ ಆರಾಧ್ಯ ಶಕ್ತಿಗಳನ್ನು ಬಿಡಿ, ಅವರ ದರ್ಶನ ಪಾತ್ರಿಗಳು/ ನೇಮ ಕಟ್ಟುವವರನ್ನೂ ಜನ ಹೆಸರಿಂದ ಕರೆಯದೆ ಎಡ-ಬಲ/ ದತ್ತ್- ಬಲತ್‌ಗ್ ಉಂತುನಾರ್/ ಕಟ್ಟುನಾರ್ ಎಂದೇ ಗುರುತಿಸುವುದು ವಾಡಿಕೆ‌. ಭಕ್ತರು ಯಾವತ್ತೂ ಅವರನ್ನು ಕೋಟಿ ಚೆನ್ನಯ ಎಂದು ಕರೆಯುವ ವಾಡಿಕೆ ಹಿಂದಿನಿಂದಲೂ ಇಲ್ಲ‌. ಆದರೆ ಈವಾಗ ಸ್ವಲ್ಪ ಸಮಯದಿಂದ, ಅದೂ ಮುಖ್ಯವಾಗಿ ಎಲ್ಲದರಲ್ಲೂ  ವರ್ಗ ಸಂಘರ್ಷವನ್ನು ಕಾಣಲು ಕಾತರಿಸುವ ತಥಾಕಥಿತ ಬುದ್ದಿಜೀವಿಗಳು, ಲೇಖಕರು ಮತ್ತು ಸಂಶೋಧಕರುಗಳ ಕೃಪೆಯಿಂದಾಗಿ, ಜನ ಹೋದಲ್ಲಿ ಬಂದಲ್ಲಿ ಕೋಟಿ ಚೆನ್ನಯ ಎಂದು ಕರೆಯುವುದು ಆರಂಭವಾಯಿತು. ಸಿಕ್ಕಸಿಕ್ಕ ಸಾರ್ವಜನಿಕ ಸ್ಥಳಗಳಿಗೆ ನಮ್ಮ ಆರಾಧ್ಯಶಕ್ತಿಗಳ, ಅದರಲ್ಲೂ ಅವರ ಲೌಕಿಕ ಹೆಸರನ್ನು ಇಡಬೇಕೆಂದು ಒತ್ತಾಯಿಸುವುದು, ವಾಟ್ಸಾಪ್/ ಫ಼ೇಸ್‌ಬುಕ್ ಕೂಟಗಳಲ್ಲಿ ಜೈ ಕೋಟಿ-ಚೆನ್ನಯ ಎಂದು ಕಮೆಂಟ್ ಮಾಡುವುದು ಇವೆಲ್ಲಾ ಆರಂಭವಾಯಿತು. ನಮಗಂತೂ ಇಂತಹವರಿಗೆ ತಿಳಿಹೇಳಿ ಸಾಕಾಗಿಹೋಗಿತ್ತು. ಅಷ್ಟರಲ್ಲಿ ಇಂತವರಿಗೆ ಸಾಕ್ಷಾತ್ ಬ್ರಹ್ಮ ಬೈದರ್ಕಳೇ ಈ ಬಗ್ಗೆ ಬುದ್ದಿ ಹೇಳಿದ ಘಟನೆ ಇತ್ತೀಚೆಗೆ ಗರೊಡಿಯೊಂದರಲ್ಲಿ ನಡೆಯಿತು.

ಇತ್ತೀಚೆಗೆ ಗರೊಡಿಯೊಂದರಲ್ಲಿ ಬೈದರ್ಕಳು ಮತ್ತು ಕೊಡಮಂದಾಯ ದೈವದ ದರ್ಶನ ಸೇವೆ ನಡೆಯುತ್ತಿತ್ತು. ಬೈದರ್ಕಳ ನುಡಿ ಆಗುತ್ತಿರುವ ಹೊತ್ತಿಗೆ ಗರೊಡಿಯ ಅಸ್ರಣ್ಣ/ ತಂತ್ರಿಯೂ ಆಗಿರುವ ಗ್ರಾಮದೇವರ ಅರ್ಚಕರು ಮಾತಿನ ನಡುವೆ ಬೈದರುಗಳನ್ನು ಕೋಟಿಬೈದ್ಯ ಚೆನ್ನಯ ಬೈದ್ಯ ಎಂದು ಸಂಬೋಧಿಸಿದರು. ಆಗ ಬೈದೆರುಗಳು ಸಮಾಧಾನ ಚಿತ್ತದಿಂದಲೇ ಅಸ್ರಣ್ಣರ ಮಾತಲ್ಲಿ ಆಗುತ್ತಿರುವ ತಪ್ಪನ್ನು ಎತ್ತಿ ತೋರಿಸಿದರು. ಕೊಡಮಂದಾಯ ದೈವದ ಜೊತೆಗೆ ದರ್ಶನದಲ್ಲಿದ್ದ ಬೈದರುಗಳು, “ಅಸ್ರಣ್ಣರೇ, ನಿಮ್ಮ ಮಾತಲ್ಲೊಂದು ಲೋಪವಿದೆ. ಇದನ್ನು ಇನ್ನು ಮುಂದಕ್ಕೆ ಸರಿಪಡಿಸಿಕೊಳ್ಳಿ. ನಾವು ಜನ್ಮಕ್ಕೆ ಬಂದಾಗ ನಮಗೆ ನಮ್ಮ ಬಲ್ಲಾಳರು ಇಟ್ಟ ಹೆಸರು ಕೋಟಿ -ಚೆನ್ನಯ ಎನ್ನುವುದರಲ್ಲಿ ಸಂದೇಹವಿಲ್ಲ‌. ಆದರೆ ಒಮ್ಮೆ ನಾವು ಕಾಯವನ್ನು ತ್ಯಜಿಸಿ ಬೆಮ್ಮೆರ್‌ರನ್ನು ಸೇರಿದ  ಬಳಿಕ ನಮ್ಮನ್ನು ಕೋಟಿ ಚೆನ್ನಯ ಎಂದು ಕರೆಯುವ ರೂಢಿ ಇಲ್ಲ. ಕಾಯದಲ್ಲಿ ಕೋಟಿ ಚೆನ್ನಯರಾಗಿದ್ದ ನಾವು ಮಾಯದಲ್ಲಿ ಬೆಮ್ಮೆರ್ ಬೈದೆರುಗಳಾಗಿ ನಂಬಿದವರನ್ನು ಕಾಯುತ್ತಾ ಬಂದಿದ್ದೇವೆ. ಅಲ್ಲದೆ ನಮ್ಮನ್ನು ಬೆಮ್ಮೆರ್ ಬೈದೆರುಗಳೆಂದು ಆರಾಧಿಸುವುದೇ ಹೊರತು ಕೋಟಿ-ಚೆನ್ನಯರೆಂದಲ್ಲ. ಹಾಗಾಗಿ ನೀವು ನಮ್ಮನ್ನು ಕೋಟಿ- ಚೆನ್ನಯ ಎಂದಾಗಲೀ ಕೋಟಿಬೈದ್ಯ- ಚೆನ್ನಯಬೈದ್ಯ ಎಂದಾಗಲೀ ಕರೆಯುವುದು ಸೂಕ್ತವಲ್ಲ. ಮುಂದಕ್ಕೆ ಈ ರೀತಿಯ ಮಾತು‌ ನಿಮ್ಮಿಂದ ಬಾರದಂತೆ ನೋಡಿಕೊಳ್ಳಿ” ಎಂದು ತಾಕೀತು ಮಾಡಿದರು.  ಅಸ್ರಣ್ಣರು ಮರುಮಾತಾಡದೆ ಬೈದರ್ಕಳ ನುಡಿಗೆ ತಲೆಬಾಗಿ ಅಂದಿನಿಂದ ಅವರನ್ನು ಬೆಮ್ಮೆರ್ ಬೈದೆರುಗಳೆಂದೇ ಕರೆಯತೊಡಗಿದ್ದಾರೆ. ಅಸ್ರಣ್ಣರೇ ಬೈದರ್ಕಳ ಮಾತಿಗೆ ತಲೆಬಾಗಿ ತಮ್ಮ ಹಿರಿತನವನ್ನು ಮೆರೆಯುತ್ತಿರುವಾಗ ನಮ್ಮನಿಮ್ಮಂತಹ ಸಾಮಾನ್ಯರಿಗೆ ಬೈದರ್ಕಳ ನುಡಿಯನ್ನು ಪಾಲಿಸುವುದು ಕಷ್ಟವಾದೀತೇ? ಬೈದರ್ಕಳ ನುಡಿಯನ್ನು ನಿಮಗೆ ತಲುಪಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಇನ್ನು ಮುಂದಕ್ಕಾದರೂ ಹೇಗೆ ನಡೆದುಕೊಳ್ಳುವಿರೋ ನಿಮಗೆ ಬಿಟ್ಟಿದ್ದು.


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »