TOP STORIES:

FOLLOW US

ಬೆಮ್ಮೆರ್ – ಬ್ರಹ್ಮ


Author Venkatesh Karkera

Team Prajnaanambrahmah

ತುಳುನಾಡ ದೈವಗಳಲ್ಲಿ ಅತಿಪ್ರಮುಖ ಶಕ್ತಿ ಎಂದರೆ ಬೆಮ್ಮೆರ್ ಯಾ ಬೆರ್ಮೆರ್. ಆಲಡೆಗಳಲ್ಲಿ, ನಾಗಮೂಲಸ್ಥಾನಗಳಲ್ಲಿ, ಗರಡಿಗಳಲ್ಲಿ, ದೈವಸ್ಥಾನಗಳಲ್ಲಿ ಹೀಗೆ ಹೆಚ್ಚುಕಡಿಮೆ ತುಳುನಾಡ ಉದ್ದಗಲಕ್ಕೂ ಬೇರೆ ಬೇರೆ ಹೆಸರಿನಿಂದ ಆರಾಧಿಸಲ್ಪಡುತ್ತಿದೆ. ಕೆಲವೆಡೆ ಬೆಮ್ಮೆರ್ ಕೋಲನೇಮ ಪಡೆದುಕೊಂಡು ದೈವಗಳಂತೆ ಆರಾಧನೆ ಪಡೆದರೆ ಇತರೆಡೆ ದೇವರಂತೆ ಪೂಜಿಸಲ್ಪಡುತ್ತಾರೆ.
ಕೆಲ‌ ಸ್ಥಳಗಳಲ್ಲಿ ಬೆಮ್ಮೆರ್ ಪುನರ್ನಾಮಕಗೊಂಡು ಬ್ರಹ್ಮಲಿಂಗೇಶ್ವರ / ಮಹಾಲಿಂಗೇಶ್ವರ/ ಖಡ್ಗೇಶ್ವರಿ ಹೀಗೆಲ್ಲಾ ಹೊಸ ಹೆಸರಿನೊಂದಿಗೆ ಪೂಜಿಸಲ್ಪಡುತ್ತಿದ್ದಾರೆ. ಈ ರೀತಿಯ ಪುನರ್ನಾಮಕರಣ ಸರಿಯೋ ತಪ್ಪೋ‌ ಎಂಬುದು ಖಂಡಿತವಾಗಿಯೂ ವಿಚಾರಾರ್ಹ. ಆದರೆ ಈಗೀಗ ಈ ವಿಚಾರ ಜಾತಿಯ‌ ಬಣ್ಣ ಪಡೆದುಕೊಳ್ಳುತ್ತಿರುವುದು ವಿಷಾದನೀಯ. ಈ ರೀತಿಯ ನಾಮಾಂತರಕ್ಕೆಲ್ಲಾ ವೈದಿಕರೇ ಕಾರಣ, ನಮ್ಮ ದೈವಗಳ ವೈದಿಕೀಕರಣ ಎಂದೆಲ್ಲ ವೈದಿಕ ಸಮುದಾಯವನ್ನು ದೂರುವುದು ಅಲ್ಲಲ್ಲಿ ಕಂಡುಬರುತ್ತಿದೆ. © https://prajnaanambrahmah.wordpress.com

‘ಬೆಮ್ಮೆರ್’ ಎಂಬ ಶಬ್ದ ‘ಪೆರಿಯಮ್ಮೆರ್’ ಎಂಬ ಪದದಿಂದ ಹುಟ್ಟಿದೆಯೇ ಹೊರತು ‘ಬ್ರಹ್ಮ’ ಎಂಬ ಪದದಿಂದ ಅಲ್ಲ, ಈ ‘ಬೆಮ್ಮೆರ್’ ಎಂಬಾತ ತುಳುನಾಡಿನ ಮೂಲನಿವಾಸಿಗಳ ಹಿರಿಯನೋ ಅಥವಾ ರಾಜನೋ ಆಗಿರಬೇಕು ಎಂಬುದು ವೈದಿಕೀಕರಣ ವಿರೋಧಿಗಳ ಅಭಿಪ್ರಾಯ. ಅಂತೂ ಇಂತೂ ಬೆಮ್ಮೆರ್ ಬ್ರಹ್ಮನಲ್ಲ ಎಂಬುದು ಅವರ ವಾದ. ಬೆಮ್ಮೆರ್ ಬ್ರಹ್ಮನೋ ಅಲ್ಲವೋ ಹೇಳುವುದು ಕಷ್ಟಸಾಧ್ಯ. ಆದರೆ ‘ಬ್ರಹ್ಮ’ ಅಂದ ಕೂಡಲೆ ತಥಾಕಥಿತ ‘ವೈದಿಕರ ಚತುರ್ಮುಖ ಬ್ರಹ್ಮ’ ಎಂದು ಅರ್ಥೈಸಿಕೊಳ್ಳುವುದು ತಥಾಕಥಿತ ಬುದ್ದಿಜೀವಿಗಳ ಮೊದಲ ಲಕ್ಷಣ. ನಮಗೆ ಅದು ಏನು ಎಂಬುದನ್ನು ಸಾಧಿಸುವುದಕ್ಕಿಂತ ಅದು ಏನು ಅಲ್ಲ ಎಂಬುದನ್ನು ಸಾಧಿಸುವುದೇ ಮುಖ್ಯವಾದಾಗ ಆಗುವ ಗೊಂದಲವಿದು. ಕತ್ತಲೆ ಕೋಣೆಯಲ್ಲಿ ನಡೆಯುವಾಗ ಕಣ್ಣನ್ನು ಸಾಧ್ಯವಿದ್ದಷ್ಟು ತೆರೆದಿಟ್ಟುಕೊಳ್ಳುವುದು ಜಾಣತನ. ಅದರ ಬದಲಿಗೆ ಮೊದಲೇ ಒಂದು ಕಣ್ಣುಪಟ್ಟಿ ಕಟ್ಟಿಕೊಂಡು ನಡೆವವರನ್ನು ಹಿಡಿಯಲು ಪ್ರಯತ್ನಿಸುವುದು ವ್ಯರ್ಥ.
ವೈದಿಕ ಸಾಹಿತ್ಯದಲ್ಲಿ ಬ್ರಹ್ಮ ಅಂದರೆ ಚತುರ್ಮುಖ ಬ್ರಹ್ಮ ಒಬ್ಬನೇ ಅಲ್ಲ. ಚತುರ್ಮುಖ ಬ್ರಹ್ಮನ ಸ್ಥಾನದಲ್ಲಿ ಈಗಾಗಲೆ ಹಲವಾರು ಬ್ರಹ್ಮರು ಆಗಿಹೋಗಿದ್ದಾರೆ. ಮುಂದೆಯೂ ಹಲವಾರು ಬ್ರಹ್ಮರು ಬರಲಿದ್ದಾರೆ. ತ್ರಿಮೂರ್ತಿಗಳು ಮತ್ತು ಇತರೆಲ್ಲಾ ದೇವತೆಗಳಿಗೂ ಸೃಷ್ಟಿಕರ್ತನಾದ ವಿಶ್ವನಿಯಾಮಕ ಶಕ್ತಿಯನ್ನು ವೇದಾಂತದಲ್ಲಿ ‘ಬ್ರಹ್ಮನ್’, ‘ಪರಬ್ರಹ್ಮ’, ‘ಆತ್ಮ’, ‘ಪರಮಾತ್ಮ’ ಇತ್ಯಾದಿಯಾಗಿ ಕರೆಯಲಾಗುತ್ತದೆ. ವೈಷ್ಣವರು ಅದನ್ನೇ ‘ಮಹಾವಿಷ್ಣು’ ಎಂದು, ಶೈವರು ‘ಪರಶಿವ’ ಎಂದು, ಶಾಕ್ತೇಯರು ‘ಆದಿಶಕ್ತಿ/ ಪರಾಶಕ್ತಿ’ ಎಂದು, ಗಾಣಪತ್ಯರು ‘ಮಹಾಗಣಪತಿ’ ಎನ್ನುವುದು. ನಮ್ಮಲ್ಲಿ ಕಂಡುಬರುವ ಪ್ರಾಚೀನ ದೇವಾಲಯಗಳಲ್ಲೆಲ್ಲಾ ‘ಮಹಾಗಣಪತಿ/ ಮಹಾಲಿಂಗೇಶ್ವರ/ ಮಹತೋಬಾರ ಎಂದೆಲ್ಲಾ ಈ ಮಹತ್ ತತ್ವಕ್ಕೇ ಮಣೆ ಹಾಕಿದ್ದನ್ನು ಗಮನಿಸಿ. ಹಾಗಾಗಿ ಬೆಮ್ಮೆರ್ ಚತುರ್ಮುಖ ಬ್ರಹ್ಮನೇ ಆಗಬೇಕಿಲ್ಲ, ಪರಬ್ರಹ್ಮನೂ ಆಗಬಹುದು, ಯಾಕೆ ಆಗಿರಬಾರದು?
ಬ್ರಹ್ಮ ಎಂಬುದಕ್ಕೆ ಬೃಹತ್ ಮಾತ್ರವಲ್ಲದೆ ಹಿರಿಯ ಎಂಬ ಅರ್ಥವೂ ಸಂಸ್ಕೃತದಲ್ಲಿ ಇದೆ. ಈ ಹಿರಿಯ ಮತ್ತು ಪೆರಿಯಮ್ಮೆರ್ ಎಂಬ ತುಳು ಮೂಲಗಳನ್ನು ಹೋಲಿಸಿ‌‌ ನೋಡಿ. ಬೆಮ್ಮೆರ್ ಮತ್ತು‌ ಬ್ರಹ್ಮ ಶಬ್ದಗಳಲ್ಲಿ ಅರ್ಥವ್ಯತ್ಯಾಸ ಏನಾದರೂ ಇದೆಯೆ?
ಬೆಮ್ಮೆರ್ ಬಗ್ಗೆ ಹೇಳುವುದು ಮುಂದಕ್ಕೂ ಇದ್ದೇ ಇದೆ. ಅಲ್ಲಿಯವರೆಗೆ ನಿಮ್ಮ ಅಂತರಂಗದಲ್ಲಿ ಬೆಮ್ಮೆರ್‌ರ ಬಗ್ಗೆ ಚಿಂತನೆ ನಡೆಸಲು ಹೇಳುತ್ತಾ ಇಂದಿನ ಬರವಣಿಗೆಗೆ ವಿಶ್ರಾಂತಿ‌ ನೀಡುತ್ತೇನೆ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »