TOP STORIES:

ಸಮಾಜದ ಸಮಸ್ಯೆಗಳ ಧ್ವನಿಯಾಗುವ ಪೊಲೀಸ್ ಅಧಿಕಾರಿ ಶ್ರೀಮತಿ ರೀನಾ ಸುವರ್ಣ ACP


ನೊಂದವರ ಕಣ್ಣೀರು ಒರೆಸಿ, ಸ್ನೇಹಭಾವದ ಬೀಜವನ್ನು ಬಿತ್ತಿ, ಹಿಂಸಾಚಾರ ತಡೆಯುವಲ್ಲಿ ರಕ್ಷಾಕವಚವಾಗಿ, ನ್ಯಾಯ ನೀತಿ ಧರ್ಮವನ್ನು ಪೋಷಿಸಿ, ಅನ್ಯಾಯವನ್ನು ಮೆಟ್ಟಿ, ಸಮಸ್ಯೆಗಳನ್ನು ಸಹನೆ ತಾಳ್ಮೆಯಿಂದ ಸ್ವೀಕರಿಸಿ ಜನರ ಸೇವೆಗೈವ ನಿಷ್ಠಾವಂತ ಪೊಲೀಸ್ ಅಧಿಕಾರಿಣಿ ಯೇ ನಮ್ಮ “ಶ್ರೀಮತಿ ರೀನಾ ಸುವರ್ಣ. ಎನ್. ”

ವಿಶ್ವ ಕಂಡ ಮಹಾನ್ ಸಾಹಿತಿ ಲಿಯೋ ಟಾಲಸ್ಟಾಯ್ ಹೇಳುತ್ತಾರೆ. “ಜೀವನದಲ್ಲಿ ಅತ್ಯಂತ ಶ್ರೇಯಸ್ಕರವಾದುದು ಎಂದರೆ ಮನುಕುಲದ ಒಳಿತಿಗಾಗಿ ಶ್ರಮಿಸುವುದು. “ಎಂದು. ಜನರ ಸೇವೆಯ ಜೊತೆಗೆ ಸಮಾಜದ ಕೆಲವು ಸಮಸ್ಯೆಗಳಿಗೆ ಧ್ವನಿಯಾಗಿ ಪರಿಹರಿಸಲು “ಅಧಿಕಾರ ” ಮತ್ತು “ಜವಾಬ್ದಾರಿ ” ಇರಲೇಬೇಕು. ಎಂಬ ನಿಲುವಲ್ಲಿ ಇವರು ಪೊಲೀಸ್ ಅಧಿಕಾರಿಯಾಗಿದ್ದು ಹೆಮ್ಮೆಯ ವಿಚಾರ.

ಶ್ರೀಮತಿ. ರೀನಾ ಸುವರ್ಣ.ಎನ್. ಡಿವೈ ಎಸ್ ಪಿ, ಸಿಐಡಿ ಬೆಂಗಳೂರು, ಕರ್ನಾಟಕ ರಾಜ್ಯ ಪೊಲೀಸ್ ಸೇವೆ. ಇವರು ವಿದ್ಯಾರ್ಥಿ ಜೀವನದಲ್ಲಿಯೇ ಪ್ರತಿಭಾನ್ವಿತೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಮ್. ಎ. ಪದವಿಯಲ್ಲಿ, “ಚಿನ್ನದ ಪದಕ” ಗಳಿಸಿದ ಇವರು, ಮೌಂಟ್ ಕಾರ್ಮೆಟ್ ಕಾಲೇಜಿನಲ್ಲಿ ಬಿ.ಎ ಯಲ್ಲಿ “ಕಾಲೇಜಿನ ಅತ್ಯುತ್ತಮ ಹೊರಹೋಗುವ ವಿದ್ಯಾರ್ಥಿನಿ “ಎಂಬ ಪ್ರಶಸ್ತಿಗೆ ಭಾಜನರು.

ಬಾಲ್ಯದಿಂದಲೂ ಪುಸ್ತಕಗಳಲ್ಲಿದ್ದ ಅಪಾರ ಪ್ರೇಮ, ಓದುವ ಛಲವೇ ಇವರನ್ನು ಇಂದು ಅತ್ಯಂತ ಶ್ರೇಷ್ಠ ಸಾಧಕರ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ಎಂದರೆ ತಪ್ಪಲ್ಲ..

“ಹಗಲೆನ್ನದೆ ಇರುಳೆನ್ನದೆ, ಉಪಚಾರಗಳ ಹಂಗಿಲ್ಲದೆ ಜನರಿಗಾಗಿ ದುಡಿವ ಮಹಿಳಾ ಪೊಲೀಸ್ ಅಧಿಕಾರಿ ಎಲ್ಲರಿಗೂ ಸ್ಪೂರ್ತಿಯ ಸೆಲೆ. “ಇವರ ಕಾರ್ಯವೈಖರಿ ಅದ್ಭುತವೇ ಸರಿ.

2014 ರಲ್ಲಿ ಡಿವೈಎಸ್ಸ್ಪಿ ಯಾಗಿ ಕರ್ತವ್ಯಕ್ಕೆ ಸೇರಿದ ಇವರು ” ಬೆಂಗಳೂರು ಗ್ರಾಮೀಣ ಪ್ರೊಬೆಷನರಿ ಐಜಿ ದಕ್ಷಿಣ ಶ್ರೇಣಿ “ಯಿಂದ ಮೂರು ಮೆಚ್ಚುಗೆ ಪತ್ರಗಳನ್ನು ಗಳಿಸಿರುತ್ತಾರೆ.

ಹೊಸಕೋಟೆ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿಕೊಂಡ ಸಮಯದಲ್ಲಿ ಕೇವಲ ಎರಡೇ ತಿಂಗಳಲ್ಲಿ 11 ಕಾಣೆಯಾದ ಪ್ರಕರಣಗಳನ್ನು ಪತ್ತೆ ಮಾಡಿರುತ್ತಾರೆ. ಅನೇಕಲ್ ಅಟ್ಟಿಬೆಲೆಯಲ್ಲಿ 280 ಕಿ.ಗ್ರಾ ಗಾಂಜಾವನ್ನು ವಶಪಡಿಸಿಕೊಂಡಿದ್ದೂ ನಮ್ಮ ಮಹಿಳಾ ಸಾಧಕಿ “ಶ್ರೀಮತಿ.ರೀನಾ ಸುವರ್ಣ” ರವರೆ. ತಾನು ಉರಿದು ಸೇವೆಯೇ ಸರ್ವಸ್ವವೆಂದು ಕರ್ತವ್ಯ ನಿರ್ವಹಿಸುವ ಇವರು ಸಮಾಜಘಾತುಕ ಶಕ್ತಿಗಳನ್ನು ಹಿಮ್ಮೆಟ್ಟಿಸುವಲ್ಲಿ ಬಹಳ ಶ್ರಮ ಪಟ್ಟಿರುತ್ತಾರೆ..

ಜಿಗಾನಿಯಲ್ಲಿ ಅರ್ಧ ದಿನದಲ್ಲಿ ಗುರುತಿಸಲೂ ಆಗದ ಮೃತದೇಹವನ್ನು ಯಶಸ್ವಿಯಾಗಿ ಪತ್ತೆಹಚ್ಚಿ ಅಂದಿನ ಉಡುಪಿ ಎಸ್.ಪಿ ಲಕ್ಷ್ಮಣ ನಿಂಬರ್ಗಿ ಯವರಿಂದ ಮೆಚ್ಚುಗೆ ಪಡೆದವರು ನಮ್ಮ ಶ್ರೀಮತಿ. ರೀನಾ ಸುವರ್ಣ ರವರು.

ಇದಲ್ಲದೆ ಹೊಸ್ಕೊಟ್ ನಲ್ಲಿ 6 ಗಂಟೆಯ ಒಳಗೆ “ಪೊಕ್ಸೋ ” ಪ್ರಕರಣವನ್ನು ಪತ್ತೆಹಚ್ಚಿದ ಅದ್ಭುತ ಪತ್ತೇದಾರಿ ಪೊಲೀಸ್ ಇವರು.
“ಆರಕ್ಷಕರಿಲ್ಲದ ಸಮಾಜವನ್ನು ಊಹಿಸಲು ಸಾಧ್ಯವೇ ಹೇಳಿ???. ಸೇವೆಯುದ್ದಕ್ಕೂ ಸವಾಲುಗಳೇ, ಸಾವಿನಂಚಿಗೂ ತಲುಪುವ ಕ್ಲಿಷ್ಟ ಕಠಿಣ ಪ್ರಕರಣಗಳೇ, ದುರ್ವಿಧಿಯ ಸನ್ನಿವೇಶಗಳೇ.. ”

ಹೆಣ್ಣು ಬಲಹೀನ, ದುರ್ಬಲಳು, ಅವಲಂಬಕಿ ಎನ್ನುವ ಈ ಸಮಾಜಕ್ಕೆ ತಕ್ಕ ಪ್ರತಿ ಉತ್ತರವೇ ಡಿವೈ ಎಸ್ ಪಿ,ಶ್ರೀಮತಿ ರೀನಾ ಸುವರ್ಣ, ಎನ್.

ನಗರಸಭೆಯ ಬೆಂಬಲದೊಂದಿಗೆ ಹೊಸ್ಕೊಟ್ ನ ಪ್ರಮುಖ ಜಂಕ್ಷನ್ ಗಳಲ್ಲಿ ಸಿ.ಸಿ. ಟಿ. ವಿ. ಯನ್ನು ಅಳವಡಿಸಿ ಅನ್ಯಾಯಕ್ಕೆ ಪ್ರತಿಧ್ವನಿಯಾದವರು ಇವರು. ಅದಷ್ಟೇ ಅಲ್ಲದೇ, ಡ್ರಗ್ಸ್ ಮಾಫಿಯಾ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮತ್ತು ಮಾನವ ಕಳ್ಳ ಸಾಗಣೆ ವಿರುದ್ಧ ಛಲಬಿಡದೆ ಹೋರಾಡುವ ಧೀಮಂತ ಪೊಲೀಸ್ ನಮ್ಮ ರೀನಾ ಸುವರ್ಣ.

ಒತ್ತಡಗಳನ್ನು, ಸವಾಲುಗಳನ್ನು ತನಗಿರುವ ಅವಕಾಶಗಳೆಂದು ಸ್ವೀಕರಿಸಿ ದುಡಿಯುವ ಇವರು ಪ್ರಸ್ತುತ ಎಸಿಪಿ ಯಾಗಿ ಜೆಸಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

“ಆಡಿಕೊಳ್ಳುವವರ ಮುಂದೆ ಜಾರಿ ಬೀಳದೆ ತಲೆಯೆತ್ತಿ ನಡೆದು ಕೆಚ್ಚೆದೆಯಿಂದ ನಡೆಯುತ, ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಿ ಬದುಕಿಗೊಂದು ಸಾರ್ಥಕತೆ ಒದಗಿಸಿಕೊಡಬೇಕು. ಆಗಲೇ ಬದುಕಿಗೊಂದು ಬೆಲೆಯೂ, ನೆಲೆಯೂ… ”

“ಪೊಲೀಸ್ ಸ್ವಸ್ಥ ಸಮಾಜದ ಭದ್ರತೆ ವಹಿಸಿ ಹಗಲಲ್ಲಿ ಸೂರ್ಯನಂತೆ, ರಾತ್ರಿ ಚಂದ್ರನಂತೆ ಸಮಾಜಕ್ಕಾಗಿ ದುಡಿಯುವ ಏಕೈಕ ಸರ್ಕಾರಿ ನೌಕರ.. ”
.
ಎಲ್ಲಾ ನಿಷ್ಠಾವಂತ ಪೊಲೀಸ್ ರಿಗೆ, ಮುಂದೆ “ಪೊಲೀಸ್ ಅಧಿಕಾರಿಣಿ ” ಯಾಗುವ ಛಲತೊಟ್ಟ ಹುಡುಗಿಯಿಂದ ಈ ಬರಹ ಅರ್ಪಣೆ..

Credits: ಚೈತ್ರ ಕಬ್ಬಿನಾಲೆ

Email us: billavaswarriors@gmail.com

www.billavaswarriors.com


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »