TOP STORIES:

ಡಾ. ಯೋಗೀಶ್ ಕೈರೋಡಿ ಎಂಬ ವಿದ್ವತ್ ಪ್ರತಿಭೆ


ಹುಲ್ಲಿನಷ್ಟು ಸಾಧನೆ ಮಾಡಿ ಬೆಟ್ಟದಷ್ಟು ಪ್ರಚಾರ ಪಡೆಯುವ ಕಾಲವಿದು. ಕೊಡುಗೆಗಿಂತ ಪ್ರಚಾರವೇ ಅಧಿಕವಾದರೆ ಬಹಳ ಕಾಲ ಉಳಿಯದು. ಕೆಲವರದ್ದು ಹಾಗಲ್ಲ, ಅವರ ಕೆಲಸವೇ ಮಾತನಾಡುತ್ತದೆ. ಬಹುಕಾಲ ಉಳಿಯುತ್ತದೆ. ಅಂತಹ ಪ್ರತಿಭಾ ಸಂಪನ್ನ ಡಾ. ಯೋಗೀಶ್ ಕೈರೋಡಿರವರು . ನಾನು ಇವರ ಬಗ್ಗೆ ಬಹುಕಾಲದಿಂದ ಬಲ್ಲೆ. ನಿಮ್ಮ ಬಗ್ಗೆ ಬರೆಯುತ್ತೇನೆಂದಾಗ ಮುಗುಳ್ನಕ್ಕು ನಿರಾಕರಿಸುತ್ತಲೇ, ಬಂದರು. ಕೈರೋಡಿಯವರ ಬಗ್ಗೆ ಬರೆಯಲೇಬೇಕೆಂಬ ತುಡಿತದ ಫಲವೇ ಈ ಲೇಖನ.ಬಹುತೇಕ ಎಲ್ಲರಂತೆ ತುಳು ನಾಟಕ ಯಕ್ಷಗಾನ ನೋಡುತ್ತಲೇ, ವಿದ್ಯಾರ್ಥಿ ಜೀವನ ಸಮೃದ್ಧಗೊಳಿಸಿದವರು. ಸಾಂಪ್ರದಾಯಿಕ ಬೇಸಾಯದ ಗದ್ದೆಯ ಪರಿಮಳ ಅನುಭವಿಸುತ್ತಲೇ, ಬಾಲ್ಯದ ಸವಿ ಉಂಡವರು. ಊರ ಹೃದಯ ಭಾಗದಲ್ಲಿದ್ದ. ತನ್ನ ತಂದೆಯ ಹೊಟೇಲಿಗೆ ಬರುವ ವಿವಿಧ ಭಾವಭಂಗಿ, ಮಾತುಕತೆಗಳ ತಿರುಳು ಸ್ವಾರಸ್ಯದ ಜೀವನ ಶಿಕ್ಷಣದ ತಳಹದಿಯಲ್ಲಿ, ಬೆಳೆದ ಕೈರೋಡಿಯವರ ಪ್ರತಿಭೆಯ ವಿಕಾಸಕ್ಕೆ ವಿಸ್ತಾರ ಅವಕಾಶಗಳು ಒದಗಿಬಂತು.

ತುಳು ನಾಟಕಗಳಲ್ಲಿ ಹಾಸ್ಯ ಪಾತ್ರ ನಿರ್ವಹಿಸಿ ಪ್ರೇಕ್ಷಕ ಸಮೂಹವನ್ನು ನಗೆಗಡಲಲ್ಲಿ ತೇಲಿಸಿದರು. ಯಕ್ಷಗಾನದಲ್ಲಿ ಕಿರೀಟ ವೇಷಧಾರಿಯಾಗಿ, ರಾಜಗಾಂಭಿರ್ಯದ ಮಾತುಗಾರಿಕೆಯ ಮೂಲಕ ಕಣ್ಮನ ಸೆಳೆದರು.

ರಂಗಸ್ಥಳದ ನಡೆನುಡಿಯ ಸೊಬಗನ್ನು ಕಂಡವರೆಲ್ಲಾ ಕೈರೋಡಿಯವರು ಮುಂದೊಂದು ದಿನ ನಾಟಕ, ಯಕ್ಷಗಾನದ ಮೇರು ಕಲಾವಿದರಾಗುತ್ತಾರನೆಂದೇ ಭಾವಿಸಿದ್ದರು. ಪದವಿ ವಿದ್ಯಾರ್ಥಿ ಯಾಗಿದ್ದಾಗಲೇ, ಅವರು ಬರೆದ ಬಂಗಾರ್ದ ಬಲೆ ತುಳು ನಾಟಕದ ಸನ್ನಿವೇಶಗಳು ಹಿಂದಿಗೂ ಜನಮನದಲ್ಲಿ ಹಸಿರಾಗಿ ಉಳಿದಿದೆ.ಸಹಕಾರಿ ಮಹಾಮಂಡಳ ಬೆಂಗಳೂರಿನಲ್ಲಿ, ಆಯೋಜಿಸಿದ್ದ ರಾಜ್ಯಮಟ್ಟದ ಚರ್ಚಾಸ್ಪರ್ಧೆಯಲ್ಲಿ ಪುರಸ್ಕಾರ ಪಡೆದವರು.

ಸ್ನಾತಕೋತ್ತರ ಪದವಿ ಪಡೆದ ಯೋಗೀಶ್ ಕೈರೋಡಿಯವರು ಕಾಲೇಜು ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು.ತನ್ನ ಕಾರ್ಯ ಕ್ಷೇತ್ರವನ್ನು ತರಗತಿಯ ಕೊಠಡಿಗೆ ಸೀಮಿತಗೊಳಿಸದೆ ಸಾರ್ವಜನಿಕ ಸಭೆ ಸಮಾರಂಭಗಳ ನಿರೂಪಕರಾಗಿ, ಮುಖ್ಯ ಭಾಷಣಕಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ದಶಕಗಳಕಾಲ ಜಿಲ್ಲೆಯಾದ್ಯಂತ ತೊಡಗಿಸಿಕೊಂಡು ಚಿರಪರಿಚಿತರಾದರು. ಪ್ರಚಲಿತ ವಿಷಯ ಆಧರಿಸಿ ಬರೆದ ಲೇಖನಗಳು ಉದಯವಾಣಿ, ಪ್ರಜಾವಾಣಿಯಲ್ಲಿ, ಪ್ರಕಟವಾಗಿದೆ. ಮಾತು ಮತ್ತು ಬರಹವನ್ನು ತನ್ನ ಅಭಿವ್ಯಕ್ತಿಯ ಪ್ರಧಾನ ಮಾಧ್ಯಮವನ್ನಾಗಿಸಿ
ಬೆಳೆದರು.

ವಿವಿಧ ವಿಷಯ ಮತ್ತು ಪ್ರಕಾರಗಳಿಗೆ ಸಂಬಂಧಿಸಿದ ಆರು ಕೃತಿಗಳು ಪ್ರಕಟಗೊಂಡಿದೆ. ಇವರ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯು (2011)ರಲ್ಲಿ ದೊರೆತಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕಿರು ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಪದವಿ ಕನ್ನಡ ಹಾಗೂ ತುಳು ಭಾಷಾ ಪಠ್ಯಪುಸ್ತಕಗಳ ಸಂಪಾದಕರಾಗಿಯೂ, ಕಾರ್ಯನಿರ್ವಹಿಸಿದ್ದಾರೆ.ಕೆಲ ಕಾಲ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, ಸಂಶೋಧನಾ ಸಹಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಶಿಕ್ಷಣ ಪಡೆದ ಯುವಕರಿಗೆ ಬೇಸಾಯವೆಂದರೆ ಅಲರ್ಜಿ. ಆದರೆ ಕೈರೋಡಿ ಹಾಗಲ್ಲ, ತನ್ನ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿಭೂಮಿಯಲ್ಲಿ ಭತ್ತದ ಬೇಸಾಯ ಮಾಡುತ್ತಾರೆ.ಅಡಿಕೆಯೊಂದಿಗೆ ಮಿಶ್ರ ಬೆಳೆಯ ಕಡೆಗೂ ಆಸಕ್ತಿ ತೋರಿಸಿದ್ದಾರೆ. ಸಾಧ್ಯವಾದಷ್ಟು ಆಹಾರ ಸ್ವಾಲಂಬನೆ ಆಗಬೇಕೆಂಬುದು ಅವರ ಸಂಕಲ್ಪ.

ಕೆಲವು ವರ್ಷಗಳ ಹಿಂದೆ ಸಮಾಜಸೇವಾ ಸಂಘ-ಸಂಸ್ಥೆಗಳ ಚಟುವಟಿಕೆಯಲ್ಲಿ ಕೈರೋಡಿ ಮುಂಚೂಣಿಯಲ್ಲಿ ಕಂಡುಬರುತ್ತಿದ್ದರು.ನೇರ – ನಿರರ್ಗಳ ಸ್ವಾರಸ್ಯಕರ ಮಾತಿನ ಮೋಡಿಯಲ್ಲಿ ಸಭಿಕರನ್ನು ಮಂತ್ರಮುಗ್ಧಗೊಳಿಸುತ್ತಿದರು.

ಸಮಾಜದ ಉನ್ನತಿಗೆ ರಚನಾತ್ಮಕ ಕಾರ್ಯಗಳಾಗಬೇಕು ಚಿಂತನ- ಮಂಥನಗಳಾಗಬೇಕೆಂದು ನಿರ್ಧಾರಕ್ಕೆ ಬಂದ ಕೈರೋಡಿಯವರು ಸಾರ್ವಜನಿಕ ವೈಭವ ಹಾಗೂ ಭಾಷಣದ ಮೇಲಿನ ನಂಬಿಕೆ ಕಳೆದುಕೊಂಡರು. ಆದರೆ ಇವರು ಕೈಕಟ್ಟಿ ಕುಳಿತುಕೊಂಡಿಲ್ಲ. ಸಮಾಜದ ಒಳಿತಿಗೆ ತನ್ನ ಪಾಲಿನ ಕೊಡುಗೆ ನೀಡುತ್ತಲೆ ಇದ್ದಾರೆ. ಯುವಕರು ದಾರಿ ತಪ್ಪಿದ್ದಾರೆ ಎಂದು ಸಾರ್ವಜನಿಕ ವೇದಿಕೆಯಲ್ಲಿ, ಕೂಗಾಡುವುದು ನಿರರ್ಥಕ. ಯುವಕರ ಮನಸ್ಸನ್ನು ಸಕರಾತ್ಮಕವಾಗಿ ರೂಪಿಸುವ ರಚನಾತ್ಮಕ ಕಾರ್ಯಗಳಾಗಬೇಕೆಂದು ಇವರ ನಂಬಿಕೆ. ಆರೋಗ್ಯಪೂರ್ಣ ಮನಸ್ಸು ರೂಪಿಸಿದರೆ ಉಳಿದೆಲ್ಲವೂ ಸಾಧಿತವಾಗುತ್ತದೆ. ಎಂಬುದು ಇವರ ಚಿಂತನೆ. ಇವರು ಮೌನವಾಗಿ ರೂಪಿಸಿದ್ದ ಮದ್ಯಮುಕ್ತ ಮದರಂಗಿ ಜಿಲ್ಲೆಯಲ್ಲಿ ಉಂಟುಮಾಡಿದ ಕ್ರಾಂತಿಕಾರಿ ಬದಲಾವಣೆ ಸದ್ದುಗದ್ದಲವಿಲ್ಲದ ಸಮಾಜಪರ ಕಾಳಜಿಗೆ ಸಾಕ್ಷಿ.

ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ಉಪನ್ಯಾಸಕ, ಕಲಾವಿದ, ಸಾಹಿತಿ, ಸಂಶೋಧಕ, ಸಮಾಜಪರ ಚಿಂತಕ ಡಾ.ಯೋಗೀಶ್ ಕೈರೋಡಿಯವರ ಸಾಧನೆಯ ಹಾದಿಗೆ ಇವಿಷ್ಟು ಅಕ್ಷರದ ಮಾಲಾರ್ಪಣೆ.

Credits: ಪಟ್ಲ ಯತೀನ್ ಪೂಜಾರಿ ಕಡೇಶಿವಾಲಯ

Email us: billavaswarriors@gmail.com

www.billavaswarriors.com


Related Posts

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »