TOP STORIES:

ಡಾ. ಯೋಗೀಶ್ ಕೈರೋಡಿ ಎಂಬ ವಿದ್ವತ್ ಪ್ರತಿಭೆ


ಹುಲ್ಲಿನಷ್ಟು ಸಾಧನೆ ಮಾಡಿ ಬೆಟ್ಟದಷ್ಟು ಪ್ರಚಾರ ಪಡೆಯುವ ಕಾಲವಿದು. ಕೊಡುಗೆಗಿಂತ ಪ್ರಚಾರವೇ ಅಧಿಕವಾದರೆ ಬಹಳ ಕಾಲ ಉಳಿಯದು. ಕೆಲವರದ್ದು ಹಾಗಲ್ಲ, ಅವರ ಕೆಲಸವೇ ಮಾತನಾಡುತ್ತದೆ. ಬಹುಕಾಲ ಉಳಿಯುತ್ತದೆ. ಅಂತಹ ಪ್ರತಿಭಾ ಸಂಪನ್ನ ಡಾ. ಯೋಗೀಶ್ ಕೈರೋಡಿರವರು . ನಾನು ಇವರ ಬಗ್ಗೆ ಬಹುಕಾಲದಿಂದ ಬಲ್ಲೆ. ನಿಮ್ಮ ಬಗ್ಗೆ ಬರೆಯುತ್ತೇನೆಂದಾಗ ಮುಗುಳ್ನಕ್ಕು ನಿರಾಕರಿಸುತ್ತಲೇ, ಬಂದರು. ಕೈರೋಡಿಯವರ ಬಗ್ಗೆ ಬರೆಯಲೇಬೇಕೆಂಬ ತುಡಿತದ ಫಲವೇ ಈ ಲೇಖನ.ಬಹುತೇಕ ಎಲ್ಲರಂತೆ ತುಳು ನಾಟಕ ಯಕ್ಷಗಾನ ನೋಡುತ್ತಲೇ, ವಿದ್ಯಾರ್ಥಿ ಜೀವನ ಸಮೃದ್ಧಗೊಳಿಸಿದವರು. ಸಾಂಪ್ರದಾಯಿಕ ಬೇಸಾಯದ ಗದ್ದೆಯ ಪರಿಮಳ ಅನುಭವಿಸುತ್ತಲೇ, ಬಾಲ್ಯದ ಸವಿ ಉಂಡವರು. ಊರ ಹೃದಯ ಭಾಗದಲ್ಲಿದ್ದ. ತನ್ನ ತಂದೆಯ ಹೊಟೇಲಿಗೆ ಬರುವ ವಿವಿಧ ಭಾವಭಂಗಿ, ಮಾತುಕತೆಗಳ ತಿರುಳು ಸ್ವಾರಸ್ಯದ ಜೀವನ ಶಿಕ್ಷಣದ ತಳಹದಿಯಲ್ಲಿ, ಬೆಳೆದ ಕೈರೋಡಿಯವರ ಪ್ರತಿಭೆಯ ವಿಕಾಸಕ್ಕೆ ವಿಸ್ತಾರ ಅವಕಾಶಗಳು ಒದಗಿಬಂತು.

ತುಳು ನಾಟಕಗಳಲ್ಲಿ ಹಾಸ್ಯ ಪಾತ್ರ ನಿರ್ವಹಿಸಿ ಪ್ರೇಕ್ಷಕ ಸಮೂಹವನ್ನು ನಗೆಗಡಲಲ್ಲಿ ತೇಲಿಸಿದರು. ಯಕ್ಷಗಾನದಲ್ಲಿ ಕಿರೀಟ ವೇಷಧಾರಿಯಾಗಿ, ರಾಜಗಾಂಭಿರ್ಯದ ಮಾತುಗಾರಿಕೆಯ ಮೂಲಕ ಕಣ್ಮನ ಸೆಳೆದರು.

ರಂಗಸ್ಥಳದ ನಡೆನುಡಿಯ ಸೊಬಗನ್ನು ಕಂಡವರೆಲ್ಲಾ ಕೈರೋಡಿಯವರು ಮುಂದೊಂದು ದಿನ ನಾಟಕ, ಯಕ್ಷಗಾನದ ಮೇರು ಕಲಾವಿದರಾಗುತ್ತಾರನೆಂದೇ ಭಾವಿಸಿದ್ದರು. ಪದವಿ ವಿದ್ಯಾರ್ಥಿ ಯಾಗಿದ್ದಾಗಲೇ, ಅವರು ಬರೆದ ಬಂಗಾರ್ದ ಬಲೆ ತುಳು ನಾಟಕದ ಸನ್ನಿವೇಶಗಳು ಹಿಂದಿಗೂ ಜನಮನದಲ್ಲಿ ಹಸಿರಾಗಿ ಉಳಿದಿದೆ.ಸಹಕಾರಿ ಮಹಾಮಂಡಳ ಬೆಂಗಳೂರಿನಲ್ಲಿ, ಆಯೋಜಿಸಿದ್ದ ರಾಜ್ಯಮಟ್ಟದ ಚರ್ಚಾಸ್ಪರ್ಧೆಯಲ್ಲಿ ಪುರಸ್ಕಾರ ಪಡೆದವರು.

ಸ್ನಾತಕೋತ್ತರ ಪದವಿ ಪಡೆದ ಯೋಗೀಶ್ ಕೈರೋಡಿಯವರು ಕಾಲೇಜು ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು.ತನ್ನ ಕಾರ್ಯ ಕ್ಷೇತ್ರವನ್ನು ತರಗತಿಯ ಕೊಠಡಿಗೆ ಸೀಮಿತಗೊಳಿಸದೆ ಸಾರ್ವಜನಿಕ ಸಭೆ ಸಮಾರಂಭಗಳ ನಿರೂಪಕರಾಗಿ, ಮುಖ್ಯ ಭಾಷಣಕಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ದಶಕಗಳಕಾಲ ಜಿಲ್ಲೆಯಾದ್ಯಂತ ತೊಡಗಿಸಿಕೊಂಡು ಚಿರಪರಿಚಿತರಾದರು. ಪ್ರಚಲಿತ ವಿಷಯ ಆಧರಿಸಿ ಬರೆದ ಲೇಖನಗಳು ಉದಯವಾಣಿ, ಪ್ರಜಾವಾಣಿಯಲ್ಲಿ, ಪ್ರಕಟವಾಗಿದೆ. ಮಾತು ಮತ್ತು ಬರಹವನ್ನು ತನ್ನ ಅಭಿವ್ಯಕ್ತಿಯ ಪ್ರಧಾನ ಮಾಧ್ಯಮವನ್ನಾಗಿಸಿ
ಬೆಳೆದರು.

ವಿವಿಧ ವಿಷಯ ಮತ್ತು ಪ್ರಕಾರಗಳಿಗೆ ಸಂಬಂಧಿಸಿದ ಆರು ಕೃತಿಗಳು ಪ್ರಕಟಗೊಂಡಿದೆ. ಇವರ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯು (2011)ರಲ್ಲಿ ದೊರೆತಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕಿರು ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಪದವಿ ಕನ್ನಡ ಹಾಗೂ ತುಳು ಭಾಷಾ ಪಠ್ಯಪುಸ್ತಕಗಳ ಸಂಪಾದಕರಾಗಿಯೂ, ಕಾರ್ಯನಿರ್ವಹಿಸಿದ್ದಾರೆ.ಕೆಲ ಕಾಲ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, ಸಂಶೋಧನಾ ಸಹಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಶಿಕ್ಷಣ ಪಡೆದ ಯುವಕರಿಗೆ ಬೇಸಾಯವೆಂದರೆ ಅಲರ್ಜಿ. ಆದರೆ ಕೈರೋಡಿ ಹಾಗಲ್ಲ, ತನ್ನ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿಭೂಮಿಯಲ್ಲಿ ಭತ್ತದ ಬೇಸಾಯ ಮಾಡುತ್ತಾರೆ.ಅಡಿಕೆಯೊಂದಿಗೆ ಮಿಶ್ರ ಬೆಳೆಯ ಕಡೆಗೂ ಆಸಕ್ತಿ ತೋರಿಸಿದ್ದಾರೆ. ಸಾಧ್ಯವಾದಷ್ಟು ಆಹಾರ ಸ್ವಾಲಂಬನೆ ಆಗಬೇಕೆಂಬುದು ಅವರ ಸಂಕಲ್ಪ.

ಕೆಲವು ವರ್ಷಗಳ ಹಿಂದೆ ಸಮಾಜಸೇವಾ ಸಂಘ-ಸಂಸ್ಥೆಗಳ ಚಟುವಟಿಕೆಯಲ್ಲಿ ಕೈರೋಡಿ ಮುಂಚೂಣಿಯಲ್ಲಿ ಕಂಡುಬರುತ್ತಿದ್ದರು.ನೇರ – ನಿರರ್ಗಳ ಸ್ವಾರಸ್ಯಕರ ಮಾತಿನ ಮೋಡಿಯಲ್ಲಿ ಸಭಿಕರನ್ನು ಮಂತ್ರಮುಗ್ಧಗೊಳಿಸುತ್ತಿದರು.

ಸಮಾಜದ ಉನ್ನತಿಗೆ ರಚನಾತ್ಮಕ ಕಾರ್ಯಗಳಾಗಬೇಕು ಚಿಂತನ- ಮಂಥನಗಳಾಗಬೇಕೆಂದು ನಿರ್ಧಾರಕ್ಕೆ ಬಂದ ಕೈರೋಡಿಯವರು ಸಾರ್ವಜನಿಕ ವೈಭವ ಹಾಗೂ ಭಾಷಣದ ಮೇಲಿನ ನಂಬಿಕೆ ಕಳೆದುಕೊಂಡರು. ಆದರೆ ಇವರು ಕೈಕಟ್ಟಿ ಕುಳಿತುಕೊಂಡಿಲ್ಲ. ಸಮಾಜದ ಒಳಿತಿಗೆ ತನ್ನ ಪಾಲಿನ ಕೊಡುಗೆ ನೀಡುತ್ತಲೆ ಇದ್ದಾರೆ. ಯುವಕರು ದಾರಿ ತಪ್ಪಿದ್ದಾರೆ ಎಂದು ಸಾರ್ವಜನಿಕ ವೇದಿಕೆಯಲ್ಲಿ, ಕೂಗಾಡುವುದು ನಿರರ್ಥಕ. ಯುವಕರ ಮನಸ್ಸನ್ನು ಸಕರಾತ್ಮಕವಾಗಿ ರೂಪಿಸುವ ರಚನಾತ್ಮಕ ಕಾರ್ಯಗಳಾಗಬೇಕೆಂದು ಇವರ ನಂಬಿಕೆ. ಆರೋಗ್ಯಪೂರ್ಣ ಮನಸ್ಸು ರೂಪಿಸಿದರೆ ಉಳಿದೆಲ್ಲವೂ ಸಾಧಿತವಾಗುತ್ತದೆ. ಎಂಬುದು ಇವರ ಚಿಂತನೆ. ಇವರು ಮೌನವಾಗಿ ರೂಪಿಸಿದ್ದ ಮದ್ಯಮುಕ್ತ ಮದರಂಗಿ ಜಿಲ್ಲೆಯಲ್ಲಿ ಉಂಟುಮಾಡಿದ ಕ್ರಾಂತಿಕಾರಿ ಬದಲಾವಣೆ ಸದ್ದುಗದ್ದಲವಿಲ್ಲದ ಸಮಾಜಪರ ಕಾಳಜಿಗೆ ಸಾಕ್ಷಿ.

ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ಉಪನ್ಯಾಸಕ, ಕಲಾವಿದ, ಸಾಹಿತಿ, ಸಂಶೋಧಕ, ಸಮಾಜಪರ ಚಿಂತಕ ಡಾ.ಯೋಗೀಶ್ ಕೈರೋಡಿಯವರ ಸಾಧನೆಯ ಹಾದಿಗೆ ಇವಿಷ್ಟು ಅಕ್ಷರದ ಮಾಲಾರ್ಪಣೆ.

Credits: ಪಟ್ಲ ಯತೀನ್ ಪೂಜಾರಿ ಕಡೇಶಿವಾಲಯ

Email us: billavaswarriors@gmail.com

www.billavaswarriors.com


Related Posts

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »