TOP STORIES:

FOLLOW US

ಡಾ. ಯೋಗೀಶ್ ಕೈರೋಡಿ ಎಂಬ ವಿದ್ವತ್ ಪ್ರತಿಭೆ


ಹುಲ್ಲಿನಷ್ಟು ಸಾಧನೆ ಮಾಡಿ ಬೆಟ್ಟದಷ್ಟು ಪ್ರಚಾರ ಪಡೆಯುವ ಕಾಲವಿದು. ಕೊಡುಗೆಗಿಂತ ಪ್ರಚಾರವೇ ಅಧಿಕವಾದರೆ ಬಹಳ ಕಾಲ ಉಳಿಯದು. ಕೆಲವರದ್ದು ಹಾಗಲ್ಲ, ಅವರ ಕೆಲಸವೇ ಮಾತನಾಡುತ್ತದೆ. ಬಹುಕಾಲ ಉಳಿಯುತ್ತದೆ. ಅಂತಹ ಪ್ರತಿಭಾ ಸಂಪನ್ನ ಡಾ. ಯೋಗೀಶ್ ಕೈರೋಡಿರವರು . ನಾನು ಇವರ ಬಗ್ಗೆ ಬಹುಕಾಲದಿಂದ ಬಲ್ಲೆ. ನಿಮ್ಮ ಬಗ್ಗೆ ಬರೆಯುತ್ತೇನೆಂದಾಗ ಮುಗುಳ್ನಕ್ಕು ನಿರಾಕರಿಸುತ್ತಲೇ, ಬಂದರು. ಕೈರೋಡಿಯವರ ಬಗ್ಗೆ ಬರೆಯಲೇಬೇಕೆಂಬ ತುಡಿತದ ಫಲವೇ ಈ ಲೇಖನ.ಬಹುತೇಕ ಎಲ್ಲರಂತೆ ತುಳು ನಾಟಕ ಯಕ್ಷಗಾನ ನೋಡುತ್ತಲೇ, ವಿದ್ಯಾರ್ಥಿ ಜೀವನ ಸಮೃದ್ಧಗೊಳಿಸಿದವರು. ಸಾಂಪ್ರದಾಯಿಕ ಬೇಸಾಯದ ಗದ್ದೆಯ ಪರಿಮಳ ಅನುಭವಿಸುತ್ತಲೇ, ಬಾಲ್ಯದ ಸವಿ ಉಂಡವರು. ಊರ ಹೃದಯ ಭಾಗದಲ್ಲಿದ್ದ. ತನ್ನ ತಂದೆಯ ಹೊಟೇಲಿಗೆ ಬರುವ ವಿವಿಧ ಭಾವಭಂಗಿ, ಮಾತುಕತೆಗಳ ತಿರುಳು ಸ್ವಾರಸ್ಯದ ಜೀವನ ಶಿಕ್ಷಣದ ತಳಹದಿಯಲ್ಲಿ, ಬೆಳೆದ ಕೈರೋಡಿಯವರ ಪ್ರತಿಭೆಯ ವಿಕಾಸಕ್ಕೆ ವಿಸ್ತಾರ ಅವಕಾಶಗಳು ಒದಗಿಬಂತು.

ತುಳು ನಾಟಕಗಳಲ್ಲಿ ಹಾಸ್ಯ ಪಾತ್ರ ನಿರ್ವಹಿಸಿ ಪ್ರೇಕ್ಷಕ ಸಮೂಹವನ್ನು ನಗೆಗಡಲಲ್ಲಿ ತೇಲಿಸಿದರು. ಯಕ್ಷಗಾನದಲ್ಲಿ ಕಿರೀಟ ವೇಷಧಾರಿಯಾಗಿ, ರಾಜಗಾಂಭಿರ್ಯದ ಮಾತುಗಾರಿಕೆಯ ಮೂಲಕ ಕಣ್ಮನ ಸೆಳೆದರು.

ರಂಗಸ್ಥಳದ ನಡೆನುಡಿಯ ಸೊಬಗನ್ನು ಕಂಡವರೆಲ್ಲಾ ಕೈರೋಡಿಯವರು ಮುಂದೊಂದು ದಿನ ನಾಟಕ, ಯಕ್ಷಗಾನದ ಮೇರು ಕಲಾವಿದರಾಗುತ್ತಾರನೆಂದೇ ಭಾವಿಸಿದ್ದರು. ಪದವಿ ವಿದ್ಯಾರ್ಥಿ ಯಾಗಿದ್ದಾಗಲೇ, ಅವರು ಬರೆದ ಬಂಗಾರ್ದ ಬಲೆ ತುಳು ನಾಟಕದ ಸನ್ನಿವೇಶಗಳು ಹಿಂದಿಗೂ ಜನಮನದಲ್ಲಿ ಹಸಿರಾಗಿ ಉಳಿದಿದೆ.ಸಹಕಾರಿ ಮಹಾಮಂಡಳ ಬೆಂಗಳೂರಿನಲ್ಲಿ, ಆಯೋಜಿಸಿದ್ದ ರಾಜ್ಯಮಟ್ಟದ ಚರ್ಚಾಸ್ಪರ್ಧೆಯಲ್ಲಿ ಪುರಸ್ಕಾರ ಪಡೆದವರು.

ಸ್ನಾತಕೋತ್ತರ ಪದವಿ ಪಡೆದ ಯೋಗೀಶ್ ಕೈರೋಡಿಯವರು ಕಾಲೇಜು ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು.ತನ್ನ ಕಾರ್ಯ ಕ್ಷೇತ್ರವನ್ನು ತರಗತಿಯ ಕೊಠಡಿಗೆ ಸೀಮಿತಗೊಳಿಸದೆ ಸಾರ್ವಜನಿಕ ಸಭೆ ಸಮಾರಂಭಗಳ ನಿರೂಪಕರಾಗಿ, ಮುಖ್ಯ ಭಾಷಣಕಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ದಶಕಗಳಕಾಲ ಜಿಲ್ಲೆಯಾದ್ಯಂತ ತೊಡಗಿಸಿಕೊಂಡು ಚಿರಪರಿಚಿತರಾದರು. ಪ್ರಚಲಿತ ವಿಷಯ ಆಧರಿಸಿ ಬರೆದ ಲೇಖನಗಳು ಉದಯವಾಣಿ, ಪ್ರಜಾವಾಣಿಯಲ್ಲಿ, ಪ್ರಕಟವಾಗಿದೆ. ಮಾತು ಮತ್ತು ಬರಹವನ್ನು ತನ್ನ ಅಭಿವ್ಯಕ್ತಿಯ ಪ್ರಧಾನ ಮಾಧ್ಯಮವನ್ನಾಗಿಸಿ
ಬೆಳೆದರು.

ವಿವಿಧ ವಿಷಯ ಮತ್ತು ಪ್ರಕಾರಗಳಿಗೆ ಸಂಬಂಧಿಸಿದ ಆರು ಕೃತಿಗಳು ಪ್ರಕಟಗೊಂಡಿದೆ. ಇವರ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯು (2011)ರಲ್ಲಿ ದೊರೆತಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕಿರು ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಪದವಿ ಕನ್ನಡ ಹಾಗೂ ತುಳು ಭಾಷಾ ಪಠ್ಯಪುಸ್ತಕಗಳ ಸಂಪಾದಕರಾಗಿಯೂ, ಕಾರ್ಯನಿರ್ವಹಿಸಿದ್ದಾರೆ.ಕೆಲ ಕಾಲ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, ಸಂಶೋಧನಾ ಸಹಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಶಿಕ್ಷಣ ಪಡೆದ ಯುವಕರಿಗೆ ಬೇಸಾಯವೆಂದರೆ ಅಲರ್ಜಿ. ಆದರೆ ಕೈರೋಡಿ ಹಾಗಲ್ಲ, ತನ್ನ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿಭೂಮಿಯಲ್ಲಿ ಭತ್ತದ ಬೇಸಾಯ ಮಾಡುತ್ತಾರೆ.ಅಡಿಕೆಯೊಂದಿಗೆ ಮಿಶ್ರ ಬೆಳೆಯ ಕಡೆಗೂ ಆಸಕ್ತಿ ತೋರಿಸಿದ್ದಾರೆ. ಸಾಧ್ಯವಾದಷ್ಟು ಆಹಾರ ಸ್ವಾಲಂಬನೆ ಆಗಬೇಕೆಂಬುದು ಅವರ ಸಂಕಲ್ಪ.

ಕೆಲವು ವರ್ಷಗಳ ಹಿಂದೆ ಸಮಾಜಸೇವಾ ಸಂಘ-ಸಂಸ್ಥೆಗಳ ಚಟುವಟಿಕೆಯಲ್ಲಿ ಕೈರೋಡಿ ಮುಂಚೂಣಿಯಲ್ಲಿ ಕಂಡುಬರುತ್ತಿದ್ದರು.ನೇರ – ನಿರರ್ಗಳ ಸ್ವಾರಸ್ಯಕರ ಮಾತಿನ ಮೋಡಿಯಲ್ಲಿ ಸಭಿಕರನ್ನು ಮಂತ್ರಮುಗ್ಧಗೊಳಿಸುತ್ತಿದರು.

ಸಮಾಜದ ಉನ್ನತಿಗೆ ರಚನಾತ್ಮಕ ಕಾರ್ಯಗಳಾಗಬೇಕು ಚಿಂತನ- ಮಂಥನಗಳಾಗಬೇಕೆಂದು ನಿರ್ಧಾರಕ್ಕೆ ಬಂದ ಕೈರೋಡಿಯವರು ಸಾರ್ವಜನಿಕ ವೈಭವ ಹಾಗೂ ಭಾಷಣದ ಮೇಲಿನ ನಂಬಿಕೆ ಕಳೆದುಕೊಂಡರು. ಆದರೆ ಇವರು ಕೈಕಟ್ಟಿ ಕುಳಿತುಕೊಂಡಿಲ್ಲ. ಸಮಾಜದ ಒಳಿತಿಗೆ ತನ್ನ ಪಾಲಿನ ಕೊಡುಗೆ ನೀಡುತ್ತಲೆ ಇದ್ದಾರೆ. ಯುವಕರು ದಾರಿ ತಪ್ಪಿದ್ದಾರೆ ಎಂದು ಸಾರ್ವಜನಿಕ ವೇದಿಕೆಯಲ್ಲಿ, ಕೂಗಾಡುವುದು ನಿರರ್ಥಕ. ಯುವಕರ ಮನಸ್ಸನ್ನು ಸಕರಾತ್ಮಕವಾಗಿ ರೂಪಿಸುವ ರಚನಾತ್ಮಕ ಕಾರ್ಯಗಳಾಗಬೇಕೆಂದು ಇವರ ನಂಬಿಕೆ. ಆರೋಗ್ಯಪೂರ್ಣ ಮನಸ್ಸು ರೂಪಿಸಿದರೆ ಉಳಿದೆಲ್ಲವೂ ಸಾಧಿತವಾಗುತ್ತದೆ. ಎಂಬುದು ಇವರ ಚಿಂತನೆ. ಇವರು ಮೌನವಾಗಿ ರೂಪಿಸಿದ್ದ ಮದ್ಯಮುಕ್ತ ಮದರಂಗಿ ಜಿಲ್ಲೆಯಲ್ಲಿ ಉಂಟುಮಾಡಿದ ಕ್ರಾಂತಿಕಾರಿ ಬದಲಾವಣೆ ಸದ್ದುಗದ್ದಲವಿಲ್ಲದ ಸಮಾಜಪರ ಕಾಳಜಿಗೆ ಸಾಕ್ಷಿ.

ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ಉಪನ್ಯಾಸಕ, ಕಲಾವಿದ, ಸಾಹಿತಿ, ಸಂಶೋಧಕ, ಸಮಾಜಪರ ಚಿಂತಕ ಡಾ.ಯೋಗೀಶ್ ಕೈರೋಡಿಯವರ ಸಾಧನೆಯ ಹಾದಿಗೆ ಇವಿಷ್ಟು ಅಕ್ಷರದ ಮಾಲಾರ್ಪಣೆ.

Credits: ಪಟ್ಲ ಯತೀನ್ ಪೂಜಾರಿ ಕಡೇಶಿವಾಲಯ

Email us: billavaswarriors@gmail.com

www.billavaswarriors.com


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »