TOP STORIES:

ತುಳುನಾಡ ತಲೈವ- ಅರವಿಂದ್ ಬೋಳಾರ್


 

ಇತ್ತೀಚಿಗಿನ ಕೆಲ ವರ್ಷಗಳಿಂದ ತುಳುನಾಡಿನ ಸಿನೆಮಾ, ಸೀರಿಯಲ್, ಟಿವಿ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಅರವಿಂದ್ ಬೋಳಾರ್ ಅವರದ್ದೇ ಹವಾ. ಸೌಮ್ಯ ವೆಕ್ತಿತ್ವ, ಅಜಾತ ಶತ್ರು, ಯಾವುದೇ ಪಾತ್ರಗಳನ್ನು ಲೀಲಾಜಾಲವಾಗಿ ನಿಭಾಯಿಸುವ ಸಾಮರ್ಥ್ಯ, ಅದಲ್ಲದೇ ಸಮಾಜದಲ್ಲಿನ ಕೆಡುಕುಗಳ ವಿರುದ್ಧ ಕಪಟತನವಿಲ್ಲದೆ ಮುಕ್ತವಾಗಿ ಮಾತಾನಾಡುವ ಧೈರ್ಯ ಹೊಂದಿರುವ ಬೋಳಾರರು ಇದೀಗ ತುಳುನಾಡ ತಲೈವ ಎಂದೇ ಪರಿಗಣಿಸಲ್ಪಟ್ಟಿದ್ದಾರೆ. ಬೋಳಾರ್ ಅವರ ಮುಗ್ದ ಹಾಸ್ಯಕ್ಕೆ ಮಾರು ಹೋಗದವರು ಕನ್ನಡ ಕರಾವಳಿಯಲ್ಲಿ ಯಾರೂ ಇರಲಾರರು.


ಕರಾವಳಿಯಲ್ಲಿ ಇದೀಗ ಸಿನೇಮಾ ನಿರ್ದೇಶಕನೊಬ್ಬ ಸಿನೆಮಾ ಮಾಡಲು ಹೊರಟಿದ್ದಾನೆಂದರೆ ಆತ ಮಾಡುವ ಮೊದಲ ಕೆಲಸ ಅರವಿಂದ್ ಬೋಳಾರ್ ಅವರ ಅಶೀರ್ವಾದ ಬೇಡಿ ಅವರೊಂದಿಗೆ ಚಿತ್ರದ ಬಗ್ಗೆ ಚರ್ಚಿಸುವುದು. ಇಲ್ಲಿ ಸಿನೆಮಾದಲ್ಲಿ ಬೋಳಾರರು ಅಭಿನಯ ಮಾಡ್ತಾರೋ, ಇಲ್ಲವೋ ಎಂಬ ಪ್ರಶ್ನೆಗೆ ಎಡೆಯಿಲ್ಲ. ಬದಲಾಗಿ ಅವರ ನಗುಮುಖದ ಆಶೀರ್ವಾದವಿದ್ದರೆ ಯಾವುದೇ ಸಿನೇಮಾ ಇರಲಿ ಅದು ಜನರಿಗೆ ಹಚ್ಚಿಕೊಂಡು ಬಿಡುತ್ತದೆ ಎಂದು ನಿರ್ದೇಶಕರ, ನಿರ್ಮಾಪಕರ ನಂಬಿಕೆ.


ಕೋಸ್ಟಲ್ ವುಡ್ಡಿನಲ್ಲಿ ಅರವಿಂದ್ ಬೋಳಾರ್ ಇಂದು ಒಂದು ವಿಶೇಷ ಶಕ್ತಿ. ಪೋಸ್ಟರಿನಲ್ಲಿ ಅಥಾವಾ ಪ್ರಚಾರದ ವೇಳೆ ಬೋಳಾರ್ ಅವರ ಚಿತ್ರ ಕಂಡರೆ ಕರಾವಳಿಗರು ತಕ್ಷಣ ಸಿನೆಮಾ ನೋಡಲೇ ಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಂದು ಅರವಿಂದ್ ಬೋಳಾರ್ ಕರಾವಳಿಯಲ್ಲಿ ಅತೀ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಕಲಾವಿದ.

ಅರಂವಿದ್ ಅವರ ಮುಖವನ್ನಿಟ್ಟುಕೊಂಡೇ ಪ್ರಚಾರ ಗಿಟ್ಟಿಸಿಕೊಳ್ಳುವ ಫೇಸ್ ಬುಕ್ಕ್ , ಟ್ರೋಲ್ ಪೇಜುಗಳು ಸಾಕಷ್ಟಿವೆ. ತುಳುನಾಡಿನಲ್ಲಿ ಇಂದು ಎಲ್ಲರನ್ನೂ ಆಕರ್ಷಿಸುವ, ನಗಿಸುವ ಮಾಂತ್ರಿಕ ಶಕ್ತಿ ಇದೆಯೆಂದರೆ ಅದು ಅರವಿಂದ್ ಬೋಳಾರ್ ಅವರಿಗೆ ಮಾತ್ರ. ಇತ್ತೀಚೆಗೆ ಬೋಳಾರ್ ಅವರು ನಡೆಸಿಕೊಟ್ಟ ಟಿವಿ ಕಾರ್ಯಕ್ರಮವೊಂದು ವಿವಾದಕ್ಕೊಳಗಾದಾಗ ಇಡೀ ತುಳು ನಾಡು ಅವರ ಬೆನ್ನ ಹಿಂದೆ ಅವರ ಬೆಂಬಲಕ್ಕೆ ನಿಂತಿತ್ತು. ಕುಹಕ ಮನಸ್ಸುಗಳು ಬೋಳಾರರಿಗೆ ದೊರಕಿದ ಈ ಬೆಂಬಲದಿಂದ ದಿಕ್ಕುತೋಚದಂತಾಗಿ ಚಡಪಡಿಸುವ ಸ್ಥಿತಿಯುಂಟಾಗಿತ್ತು. ಈ ಕಾರಣಕ್ಕಾಗಿಯೇ ಬೋಳಾರ್ ಅವರನ್ನು ತುಳುನಾಡ ಮಾಣಿಕ್ಯ ಅಥಾವ ತುಳುನಾಡ ತಲೈವ ಎಂಬ ಬಿರುದುಗಳನ್ನಿತ್ತು ಜನರು ಗೌರವಿಸುತ್ತಿರುವುದು.

ಬಡ ಬಿಲ್ಲವ ಕುಟುಂಬದಲ್ಲಿ ಜನಿಸಿ ಕೇವಲ ತನ್ನ ಪ್ರತಿಭೆಯಿಂದಲೇ ಹಂತ ಹಂತವಾಗಿ ಬೆಳೆದ ಅರವಿಂದ್ ಬೋಳಾರ್ ಇಂದು ಬಿಲ್ಲವ ಸಮಾಜದ ಹೆಮ್ಮೆಯ ಮುಕುಟ ಎಂದು ಕರೆಯಲ್ಪಡುತ್ತಾರೆ. ಶ್ರೀ ನಾರಯಣ ಗುರುಗಳ ತತ್ವಗಳನ್ನು ಚಾಚೂ ತಪ್ಪದೆ ಪಾಲಿಸುವ ಬೋಳಾರ್ ಬಿಲ್ಲವ ಕಾರಣಿಕ ಪುರುಷರಾದ ಕೋಟಿ-ಚೆನ್ನಯ್ಯರ ನೀತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು. ಕೇವಲ ಪ್ರಸಿದ್ಧಿ ಅಥಾವಾ ದುಡ್ಡಿಗಾಗಿ ತನ್ನ ಪ್ರತಿಭೆಯನ್ನು ಮಾರಟ ಮಾಡದೆ ಓರ್ವ ಜವಾಬ್ದಾರಿಯುತ ಕಲಾವಿದನಾಗಿ ಸಮಾಜದಲ್ಲಿನ ಕೆಡುಕುಗಳ ಬಗ್ಗೆ, ಕಪಟತನದ ಬಗ್ಗೆ ಧ್ವನಿ ಎತ್ತುವಲ್ಲಿ ಬೋಳಾರರು ಮೊದಲ ಸ್ಥಾನದಲ್ಲಿದ್ದಾರೆ. ನೇರ ನುಡಿಯ, ಸೌಮ್ಯ ಸ್ವಭಾವದ ಹಾಗೂ ಲಲಿತ ಜೀವನದ ರುವಾರಿಯಾದ ತಲೈವ ಅರವಿಂದ್ ಬೋಳಾರ್ ಅವರನ್ನು ಪಡೆದ ಈ ಕಾಲಘಟ್ಟದ ಜನತೆ ಧನ್ಯರು.

Special article by: billavaswarriors.com team.


Related Posts

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »