TOP STORIES:

ನಾನು ನನ್ನದೆನ್ನುವ ಸ್ವಾರ್ಥ ಸಮಾಜದಲ್ಲಿ, ಇತರ ಪ್ರತಿಭೆಗೆ ಪ್ರೋತ್ಸಹ ಕೊಡುವ ಪ್ರದೀಪ್ ಪೂಜಾರಿ ಕುಕ್ಕಿಪಾಡಿ


ತುಳುನಾಡಿನ ಹೆಮ್ಮೆಯ ಹಾಗೂ ಬಿಲ್ಲವ ಸಮಾಜದ ಯುವ ಪ್ರತಿಭೆ ಕುಕ್ಕಿಪಾಡಿಯ ಕೊರಗಪ್ಪ ಪೂಜಾರಿ ಮತ್ತು ಯಮುನಾ ದಂಪತಿಗಳ ಮಗ ಪ್ರದೀಪ್ ಪೂಜಾರಿ ಕುಕ್ಕಿಪಾಡಿ.ಇವರು ಪ್ರಾಥಮಿಕ ಶಿಕ್ಷಣ-ಕುಕ್ಕಿಪಾಡಿ ಸಂತ ಬಾರ್ತಲೋಮಿಯರ ಸ್ಕೂಲ್, ಪ್ರೌಢ -ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವು , ಕಾಲೇಜ್ -ಹೋಲಿ ರೋಸರಿ ಕಾಲೇಜು ಮೂಡಬಿದ್ರಿ ಯಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿದರು.

ನಾನು ನನ್ನದೆನ್ನುವ ಸ್ವಾರ್ಥ ಸಮಾಜದಲ್ಲಿ ತನ್ನ ಪ್ರತಿಭೆಯ ಜೊತೆಗೆ ಇತರ ಪ್ರತಿಭೆಗೆ ಪ್ರೋತ್ಸಹ ಕೊಟ್ಟು ಅವರಿಗೂ ವೇದಿಕೆ ಕಲ್ಪಿಸಿಕೊಟ್ಟ ಸಾಧನೆಯ ಹಾದಿಯಲ್ಲಿ ನಡೆಯುವಂತೆ ಮಾಡಿದ ಮಹಾನ್ ಸಾಧಕ. ತಾನು ಪಟ್ಟ ಕಷ್ಟ ಇನ್ನೊಬ್ಬರು ಅನುಭವಿಸಬಾರದು ಎಂದು ಅವರ ಜೀವನದಲ್ಲಿ ಬೆಳಕಾದವರು.

ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿ ಇರುವ ಇವರಿಗೆ ನಾಯಕ ನಟನಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಕಲಾ ಕ್ಷೇತ್ರದ ಗುರುಗಳಾದ ಅಶೋಕ್ ಹಲಾಯಿ ಇವರ ನಿರ್ದೇಶನದ ಪೂರಾ ಪೊಕ್ಕಡೆ ಚಿತ್ರದಲ್ಲಿ ನಟಿಸಿ ಸೈ ಎಣಿಸಿಕೊಂಡರು.

ಹೀಗೆ ಅನೇಕ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ತಾನು ಬಣ್ಣ ಅಚ್ಚುವ ಬದಲು ಇತರ ಪ್ರತಿಭೆಗೆ ಅವಕಾಶ ಕೊಡಲು ಅಪ್ಪು ಎನ್ನುವ ನೃತ್ಯ ತಂಡ ರಚಿಸಿ ಉಚಿತ ನೃತ್ಯ ತರಬೇತಿ ನೀಡುತ್ತಿದ್ದರು.ಇವರು ಅನೇಕ ಕಿರು ಚಿತ್ರ ನಿರ್ದೇಶನ ಮಾಡಿ ಯಶಸ್ವೀ ನಿರ್ದೇಶಕರು ಎನಿಸಿಕೊಂಡಿದ್ದಾರೆ. ಮನಸ್ದ ಪೊರ್ಲು, ಸಸ್ಪೆನ್ಸ್ ಮೂವಿ, ನಂಬುಗೆ, ಅಂಗಲಪು, ಆಪರೇಷನ್ ತುಳುನಾಡ ಹೀಗೆ ಅನೇಕ ಕಿರುಚಿತ್ರ ಮಾಡಿದ್ದಾರೆ. ನಿರ್ದೇಶಕ ಮಾತ್ರ ಅಲ್ಲ ಗ್ಲಾಮರ್ ಡಿಸೈನ್ ಆಗಿಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಗ್ಲಾಮರ್ ಶಾಟ್ಸ್ ನಲ್ಲಿ ಹಲವಾರು ಕಿರುಚಿತ್ರ ನಿರ್ಮಾಣ ಮಾಡಿ ಹೊಸ ಪ್ರತಿಭೆ ಅವಕಾಶ ಮಾಡಿಕೊಟ್ಟ ಕಲಾ ಪೋಷಕರು ಹೌದು, ಇವರ ಈ ಸಾಧನೆಗೆ ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ತ್ರಿಶಾಲ್ ಶೆಟ್ಟಿ, ಶಶಿಂದ್ರ ಜಂಕಳ, ನಾವೆಲ್, ತಿಲಕ್, ವಿದ್ಯಾ ಹೀಗೆ ಅನೇಕರ ಸಂಪೂರ್ಣ ಸಹಕಾರ ಸಿಕ್ಕಿತ್ತು.

ಬಂಟ್ವಾಳ ತಾಲ್ಲೂಕಿನ ಜನರಿಗೆ ಮಾಹಿತಿ ನೀಡಲು ಸೂಕ್ತ ನ್ಯೂಸ್ ಚಾನಲ್ ಅನ್ನು ಯು ಟ್ಯೂಬ್ ನಲ್ಲಿ ಆರಂಭಿಸಿ ಜನರಿಗೆ ಸೂಕ್ತ ಮಾಹಿತಿ ತಲುಪುವಂತೆ ಮಾಡಿದರು ಮತ್ತು ನೊಂದ ಬಡ ಜನರ ನೋವಿನ ವರದಿಯನ್ನು ಈ ಚಾನಲ್ ಮೂಲಕ ಸಂಘ ಸಂಸ್ಥೆಗಳಿಗೆ ತಲುಪುವಂತೆ ಮಾಡಿ ಬಡವರ ಪಾಲಿಗೆ ಆಶಾ ಕಿರಣವಾದರು.

ತಮ್ಮ ನಿಸ್ವಾರ್ಥ ಸೇವೆಯಿಂದ ಸೇವೆ ಮಾಡುವ ಇವರ ಬಾಳು ಬೆಳಕಾಗಲಿ ಮತ್ತು ಕಲಾ ಮಾತೆಯ ಅನುಗ್ರಹದಿಂದ ಇನ್ನಷ್ಟು ಒಳ್ಳೆಯ ಕಿರು ಚಿತ್ರ , ಸಿನಿಮಾ ಮಾಡಿ ಪ್ರಶಸ್ತಿ ಪುರಸ್ಕಾರ ಇವರ ಮುಡಿಗೇರುವಂತೆ ಮಾಡಲಿ.

ಬರಹ: ಪ್ರಶಾಂತ್ ಅಂಚನ್ – ಮಸ್ಕತ್ತ್


Related Posts

ರಾಜ್ಯದಲ್ಲಿ ರಚನೆಯಾಗಲಿರುವ ನೂತನ ಸಚಿವ ಸಂಪುಟ ಸಚಿವ ಸಂಪುಟದಲ್ಲಿ ಬಿಲ್ಲವ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು


Share         ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು ಬಿಲ್ಲವ ಸಮಾಜಕ್ಕೆ ನ್ಯಾಯಯುತ ಪ್ರಾತಿನಿಧ್ಯ ಒದಗಿಸಬೇಕು ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಗ್ರಹ ರಾಜ್ಯದಲ್ಲಿ ರಚನೆಯಾಗಲಿರುವ


Read More »

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »