TOP STORIES:

FOLLOW US

”ಸಜ್ಜಿಗೆ ಬಣಲೆಡ್ ಉಂಡು ವೈರಲ್ ಆದ ಸಂದೇಶ”, ಮಮತೆಯ ಮಾತೃ ಹೃದಯ…ಇಲ್ಲಿದೆ ಸ್ವಲ್ಪ ವಿವರಣೆ


ವಾಟ್ಸ್ ಪ್ ಕೃಪೆ

ಮೊಬೈಲ್ ನಲ್ಲಿ ಬಂದದ್ದನ್ನೆಲ್ಲಾ ಇನ್ನೊಬ್ಬರಿಗೆ ಹಂಚುವ ಮೊದಲು ನೂರು ಸಲ ಆಲೋಚಿಸ ಬೇಕಾದೀತೇ?
ಸಜ್ಜಿಗೆ ಬಣಲೆಡ್ ಉಂಡು ವೈರಲ್ ಆದ ಶಬ್ದ ಸಂದೇಶದ ಒಂದು ವಿಮರ್ಶೆ ಹೀಗಿದೆ.

ನಿಮ್ಮ ಕಣ್ಣಿನ ನೇರಕ್ಕೆ ಕಂಡದನ್ನು ಮಾತ್ರ ಸಮರ್ಥನೆ ಮಾಡುವುದು ಒಳಿತಲ್ಲ ಎಂಬುವುದು ನನ್ನ ಅಭಿಪ್ರಾಯ.
ಹೀಗಿದೆ ಆ ಬರಹ

ವೈರಲ್ ಆದ ಆಡಿಯೋದಲ್ಲಿ… ಮಗ ಕರೆ ಮಾಡಿ ಏನು ಹೇಳುತ್ತಿದ್ದಾನೆ ಎಂದು ಸರಿಯಾಗಿ ಕೇಳದಿದ್ದರು ಇನ್ನೊಂದು ಕಡೆಯಿಂದ ಮಮತೆಯ ಮಾತೃ ಹೃದಯ ತನ್ನ ಮಗು ಹಸಿವಿಗಾಗಿಯೇ ಕರೆ ಮಾಡಿರಬಹುದೇನೋ ಎಂದು ಊಹಿಸಿ ಬಾಣಲೆಯಲ್ಲಿ ಸಜ್ಜಿಗೆ ಇದೆ ತಿನ್ನು ಮಗನೇ ಎನ್ನುವ ಆಡಿಯೋ ಟ್ರೋಲ್ ಆಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಸ್ವಲ್ಪ ವಿವರಣೆ .

ಆ ಘಟನೆಯ ತಾಯಿಯನ್ನು ಹತ್ತಿರದಿಂದ ನೋಡಿದವನು ನಾನು…. ತನ್ನ ಗಂಡ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಸ್ವ-ಸಹಾಯ ಸಂಘದಿಂದ, ಪರಿಚಯಸ್ತರಿಂದ ಸಾಲ ಮಾಡಿ ಬದುಕಿಸಲು ಕೈ ಮೀರಿ ಪ್ರಯತ್ನ ಮಾಡಿದರೂ ಉಳಿಸಲು ಅಸಾಧ್ಯವಾಗಿ, ಮನೆಯ ಆಧಾರ ಸ್ತಂಭ ಕುಸಿದಾಗ ನನ್ನ ಮಕ್ಕಳ ಬೇಕು ಬೇಡಗಳನ್ನು ಪೂರೈಸಿ, ಎಲ್ಲರಂತೆ ತನ್ನ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸುವ ಕನಸು ಕಾಣುವ ತಾಯಿ ಆಕೆ.

ಪತಿಯ ಅನಾರೋಗ್ಯದ ಸಂದರ್ಭದಲ್ಲಿ ಮಾಡಿದ ಸಾಲವನ್ನು ತೀರಿಸಲು ರಾತ್ರಿ ಹಗಲು ಬೀಡಿ ಕಟ್ಟಿ ತನ್ನ ಇಬ್ಬರು ಸಣ್ಣ ಮಕ್ಕಳನ್ನು ಸಾಕುವ ಕಷ್ಟದ ಜೀವನ ನಡೆಸುತ್ತಿದ್ದಾರೆ.

ಇನ್ನೊಂದು ಕಡೆ ಕೋರೊನ, ಈ ಕೋರೊನದಿಂದಾಗಿ ಸ್ವಲ್ಪ ದಿನ ಬೀಡಿ ಉದ್ಯಮವು ನಿಂತಿತು., ಬೀಡಿಯ ಆದಾಯವು ನಿಂತಿತು.

ಮಕ್ಕಳಿಗೆ ಮೊಬೈಲ್ ನೀಡಬಾರದು ನಿಜ ಅದು ತಿಳಿದೂ ಆಕೆ ತನ್ನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗ ಬಾರದೆಂದು, ಮೊಬೈಲ್ ಬಳಕೆಯ ಮಾಹಿತಿ ಗೊತ್ತಿಲ್ಲದ ಆಕೆ ಮಗನಿಗೆ online class ಗಾಗಿ ಸಣ್ಣ Touch ಮೊಬೈಲ್ ನೀಡಿದಳು… ಆತ ಮೊಬೈಲ್ ಸಿಕ್ಕ ಖುಷಿಯಲ್ಲಿ online class ಹಾಗೂ ಗೇಮ್ ಆಡುತ್ತಿದ್ದ.. ಮತ್ತೊಂದು ವಿಷಯ ಏನೆಂದರೆ ಆ ಮೊಬೈಲ್ ನಲ್ಲಿ ಎಲ್ಲ ಕರೆಗಳು Record ಆಗುತಿತ್ತು ಅದು ಕೂಡ ಈ ಘಟನೆಯ ನಂತರವೇ ತಿಳಿದದ್ದು.

ಆ ತಾಯಿಯ ಮಗನೂ ಸಹ ಮೊಬೈಲ್ ಬಳಕೆಯ ಪೂರ್ಣ ಪ್ರಮಾಣದ ಮಾಹಿತಿ ಇಲ್ಲದವ.. ಜೋಕುಲಾಟಿಕೆ ಎಂಬಂತೆ ಮೊಬೈಲ್ ನಲ್ಲಿದ್ದ ಪದ್ಯ ಹಾಗೂ call record ನ್ನೂ ಸಹ ತನ್ನ whatsappನಲ್ಲಿ ಗೆಳೆಯರಿಗೆ ಕಳುಹಿಸಿದ್ದಾನೆ.. ಆದು ಒಬ್ಬರಿಂದ ಒಬ್ಬರಿಗೆ forward ಆಗುತ್ತಲೇ ಹೋಯಿತು.

ಆ ತಾಯಿಯ ಸ್ವರ ಬಲ್ಲವರು ಆಕೆಯನ್ನು ಕರೆ ಮಾಡಿ ವಿಚಾರಿಸುತ್ತಿರುವಾಗ ಆಕೆ “ಕೊರೊನಾ ಸುರುವಾದ್ ಮಗಕ್ ಸಾಲೆ ಸುರುವಾವಂದೆ, ಮೊಬೈಲ್ ಡ್ ಪಾಠ ಮಲ್ಪುವೆರ್ ಗೆ, ಮೊಬೈಲ್ ಕೊರ್ದು ಈತ್ ಮಾತ ಮಲ್ತ್ ಪಾಡಿಯೆ.. ನನ ಪೋನು ಮುಟ್ಪರೆ ಬುಡ್ಪುಜಿ…” ಎಂದು ತುಂಬಾ ನೊಂದುಕೊಳ್ಳುತ್ತಿದ್ದಾಳೆ.

ಇಲ್ಲಿ ತಪ್ಪು ಯಾರದು..?ಕೊರೊನದ್ದಾ? ಮಕ್ಕಳಿಗೆ online class ಪ್ರಾರಂಭ ಮಾಡಿದ ಸರಕ್ಕಾರದ್ದೋ? ಮಗನಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗ ಬಾರದೆಂದು ಮೊಬೈಲ್ ಕೊಟ್ಟ ತಾಯಿಯದ್ದೋ? auto call record ಆಗುತ್ತಿದ್ದ ಮೊಬೈಲಿದ್ದೋ? ಮೊಬೈಲ್ ಬಳಕೆ ಸರಿಯಾಗಿ ಗೊತ್ತಿಲ್ಲದೆ ಎಲ್ಲವನ್ನೂ ಕಳುಹಿಸಿದ ಮಗನದ್ದೊ? ಸ್ವೀಕರಿಸಿದವರು ಕೇಳಿ ಆನಂದಿಸಿ ಎಲ್ಲರೂ ಖುಷಿ ಪಡೆಯಲಿ ಎಂದು ಒಬ್ಬರಿಂದ ಒಬ್ಬರಿಗೆ forward ಈಗಲೂ ಮಾಡುತ್ತಿರುವವರದ್ದೊ? ಎಂಬುವುದನ್ನು ನೀವು ನಿರ್ಧರಿಸಿ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »