TOP STORIES:

ಕೋಗಿಲೆ ಕಂಠದಿಂದ ಜನಮನ ಸೆಳೆದ ತುಳುನಾಡಿನ ಚಲನ ಚಿತ್ರ ಹಿನ್ನಲೆ ಗಾಯಕಿ ವಿದ್ಯಾ ಸುವರ್ಣ


ಸಂಗೀತವೆಂದರೆ ಈ ಲೋಕದಲ್ಲಿ ಯಾರಿಗೆ‌ ತಾನೆ ಇಷ್ಟ ಇಲ್ಲ? ಮಾನವನ ಅಂತರಾಳದ ತುಡಿತಕ್ಕೆ ಸಂಗೀತವು ಬಹಳ ಹತ್ತಿರ. ಎಂತಹದನ್ನೂ ಕರಗಿಸುವ ಶಕ್ತಿ ಸಂಗೀತಕ್ಕಿರುತ್ತದೆ.ಇನ್ನು ಸಂಗೀತ ಕ್ಷೇತ್ರದಲ್ಲಿ ಮುಖ್ಯ ಆಕರ್ಶಣೆಯೆ ಹಾಡುಗಾರ.ಹಾಡುಗಾರನ ಸ್ವರ,ಜ್ಞಾನ, ಆಲಾಪ,ಸಪ್ತಸದವರ ರಾಗಗಳ ಮೂಲಕ ಪ್ರೇಕ್ಷಕರ ಮುಂದೆ ಹೇಗೆ ಪ್ರಸ್ತುತ ಪಡಿಸುತ್ತಾರೋ ಅದರ ಮೇಲೆ ವೇದಿಕೆಯ ಇಡೀ ಪ್ರದರ್ಶನವು ಅವಲಂಬಿಸಿರುತ್ತದೆ. ಗಾಯಕನ ಈ ಅದ್ಭುತ ಕಲೆಯನ್ನು ಹೊಂದಿರುವ ಹೀಗೊಂದು ಪ್ರತಿಭೆ ತನ್ನ ಕೋಗಿಲೆ ಕಂಠದಿಂದ ಜನಮನ ಸೆಳೆದು ತುಳುನಾಡಿನ ಚಲನ ಚಿತ್ರ ಹಿನ್ನಲೆ ಗಾಯಕಿ ವಿದ್ಯಾ ಸುವರ್ಣ.

ವಿದ್ಯಾ ಸುವರ್ಣ ಇವರು ದಿ.ನೋಣಯ್ಯ ಪೂಜಾರಿ ಹಾಗೂ ಯಮುನಾ ಪೂಜಾರಿಯವರ ಪುತ್ರಿಯಾಗಿ 03-08-1993 ರಂದು ಮಂಗಳೂರಿನಲ್ಲಿ ಜನಿಸಿದರು.ಬಾಲ್ಯದಲ್ಲೇ ಸಂಗೀತದ ಮೇಲೆ ಇವರು ಅಪಾರ ಆಸಕ್ತಿ ಹೊಂದಿದ್ದರು.ಈ ಸಂಗೀತ ಆಸಕ್ತಿಯಿಂದ ಶಾಲೆಯಲ್ಲಿಯೂ ಹಲವಾರು ಸ್ಪರ್ಧೆಯಲ್ಲಿ ಭಾಗವಹಿಸಿ ಸಂಗೀತದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.ತನ್ನ ಈ ಪ್ರತಿಭೆಯಿಂದ ಸಣ್ಣ ವಯಸ್ಸಿನಲ್ಲೇ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದರು.

ಒಬ್ಬ ವ್ಯಕ್ತಿಯ ಕವಲೊಡೆಯುವ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕೈಗಳ ಅಗತ್ಯವು ಇದೆ.ವಿದ್ಯಾ ಸುವರ್ಣ ಇವರಿಗೆ ತನ್ನ ಮನೆಯವರಿಂದಲೆ ಮೊದಲ ಪ್ರೋತ್ಸಾಹ ದೊರಕಿದೆ.ಹಾಗೆಯೆ ವಿ.ಜೆ.ಹಿಸ್ರಾರ್ ತಲ್ಲಣಿ ಇವರ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹವು ಸಂಗೀತ ಕ್ಷೇತ್ರದಲ್ಲಿ ಮುಂದುವರೆಯಲು ಧೈರ್ಯ ತುಂಬಿದೆ.

ಮಲ್ಲೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಸಂತ‌ ಆಂಥೋನಿ ಫೆ ಇಲ್ಲಿ ತಮ್ಮ ಪ್ರೌಢ ಶಿಕ್ಷಣ ಮುಗಿಸಿದರು ಇವರಿಗೆ ಸಂಗೀತದಲ್ಲೇ ಹೆಚ್ಚು ಆಸಕ್ತಿ ಇದ್ದ ಕಾರಣ ಕಲಿಕೆಯನ್ನು ಮುಂದುವರಿಸದೆ ಕಲಾ ಕ್ಷೇತ್ರದಲ್ಲಿ ಮುಂದುವರೆದರು.

ಹೀಗೆ ಸಂಗೀತದ ಪಯಣದಲ್ಲಿ ಸಿಕ್ಕಿದ ವೇದಿಕೆಗಳನ್ನೆಲ್ಲ ತಮ್ಮದಾಗಿಸಿಕೊಂಡು ಇವರು ಅನೇಕ ಭಕ್ತಿಗೀತೆ,ನಾಟಕಗಳಲ್ಲಿ ಧ್ವನಿ ನೀಡಿರುವರು.ಒಮಾನ್ ತುಳುವೆರ್ ಅರ್ಪಿಸಿದ ಗಾನಲೀಲೋತ್ಸವ, ಗೆಜ್ಜೆಗಿರಿಯಲ್ಲಿ ನಡೆದ ಬ್ರಹ್ಮಕಲಶೋತ್ಸವ, ಭಂಡಾರಿ ಬಿಲ್ಡರ್ಸ್ ಇವರ ಸಾರಥ್ಯದಲ್ಲಿ ನಡೆದ ಸರ್ಗಮ್ ಸಂಗೀತೋತ್ಸವ,ಒಡಿಯೂರು ರಥೋತ್ಸವ,ಗಂಗೊಳ್ಳಿಯಲ್ಲಿ ನಡೆದ ಸಂಗೀತ ಗಾನ ಸಂಭ್ರಮ,ಕುಮಟಾ ನುಡಿ ಹಬ್ಬ,ಕೋಟ ಅಮೃತೋತ್ಸವ,ವಿಶ್ವ ತುಳು ಸಮ್ಮೇಳನ,ವಿಟ್ಲ ಸ್ಟಾರ್ ನೈಟ್,ಉಡುಪಿ ಪರ್ಯಾಯ,ನರೇಂದ್ರ ಮೋದಿಯವರ ಆಗಮನ ದಿನದಂದು ಉಡುಪಿ ಮತ್ತು ಮಂಗಳೂರಿನಲ್ಲಿ ನಡೆದ ಆರ್ಯಭಟ ಪುರಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಇವರ ತಂಡದೊಂದಿಗೆ,ಮಾತ್ರವಲ್ಲದೆ ೧,೫೦೦ ಕ್ಕೂ ಹೆಚ್ಚು ವೇದಿಕೆಯಲ್ಲಿ‌ ಹಾಡಿರುವ ಮಂಗಳೂರಿನ ಹೆಮ್ಮೆಯ ಅಪ್ರತಿಮ ಕಲಾವಿದೆ ಇವರು.

ಇವರ ಅದ್ಭುತ ಸಿರಿಕಂಠವನ್ನು ಗುರುತಿಸಿ ಚಲನಚಿತ್ರದಲ್ಲಿಯೂ ಹಾಡು ಹಾಡಲು ಗಣೇಶ್ ಎನ್ನುವವರು ಪ್ರೋತ್ಸಾಹಿಸಿ ಇಂದು ಇವರು ಕುದುಕನ ಮದಿಮೆ, ಕಂಬಳಬೆಟ್ಟು ಭಟ್ರೇನ ಮಗಳು, ದಾಗಲ್ಬಾಜಿಳು, ಜೀವನಯಜ್ಞ,
ಗಂಧದಕುಡಿ ಮುಂತಾದ ಚಿತ್ರಗಳಲ್ಲಿ ಹಾಡಿರುತ್ತಾರೆ. ಹಾಗೆ ಮುಂದೆ ಬರುವಂತಹ ಕನ್ನಡ ಚಿತ್ರ,ನಿಶಾಚರ ಮತ್ತು ಪಿಸುಮಾತು ಎನ್ನುವ ಎರಡು ಚಿತ್ರಕ್ಕೆ ಧ್ವನಿ ನೀಡಿರುತ್ತಾರೆ.

ಸಾಧನೆಯ ಗರಿ ಏರುತ್ತಲೆ ಜನರ ಅಭಿಮಾನಕ್ಕೆ ಪಾತ್ರರಾಗಿ ಇವರು ಉತ್ತರ ಕನ್ನಡ ಕ್ಷತ್ರಿಯ ಸಮಾಜ ಬೆಂಗಳೂರು ವತಿಯಿಂದ ಸನ್ಮಾನ,ಓಮಾನ್ ತುಳುವೆರ್ ವತಿಯಿಂದ ಸನ್ಮಾನ,ಜೆ.ಸಿ.ಐ ವತಿಯಿಂದ ಗೌರವ ಸ್ಮರಣಿಕೆ,ಶ್ರೀ ಲಕ್ಷ್ಮೀ ಹೋಮ್ಸ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಉಡುಪಿ ವತಿಯಿಂದ ಗೌರವ ಸ್ಮರಣಿಕೆ,ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಕೇರಳ ಗಡಿನಾಡ ಘಟಕ ವತಿಯಿಂದ ಗೌರವ ಸ್ಮರಣಿಕೆ,ಭಾವಲಿಪಿ ಪ್ರಕಾಶನ ಸಂಸ್ಥೆಯಿಂದ ಸ್ಮರಣಿಕೆ,ಶ್ರೀ ಕ್ಷೇತ್ರ ಮಹಾದೇವಿ ಮಂದಿರ ಮೂಡುಶೆಡ್ಡೆ ವತಿಯಿಂದ ಸನ್ಮಾನ ಸ್ಮರಣಿಕೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲ ಚೇತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ವಿಶ್ವ ವಿಕಲ ದಿನಾಚರಣೆಯ ಪ್ರಯುಕ್ತ ಗೌರವಾರ್ಥ ಸ್ಮರಣಿಕೆ,ಅಮ್ಮಾ ಗ್ರೂಪ್ ಕಮ್ಮಾಜೆ ಒಡಿಯೂರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಗಾನ-೨೦೨೦ ಸಂಗೀತ ರಸಸಂಜೆ ಪ್ರಯುಕ್ತ ಸ್ಮರಣಿಕೆ,ಶಿವಂ ಡಾನ್ಸ್ ಅಕಾಡೆಮಿ ವಿಟ್ಲ ಸಾಂಸ್ಕೃತಿಕ ವೈಭವ-೨೦೨೦ ಸಂಭ್ರಮದಿ ಗೌರವ ಸ್ಮರಣಿಕೆ ಹೀಗೆ ಹತ್ತು ಹಲವಾರು ಪ್ರಶಸ್ತಿ,ಪುರಸ್ಕಾರಗಳಿಗೆ ಭಾಜನರಾಗಿರುವ ತಮಗೆ ಮುಂದೆ ಹೆಚ್ಚಿನ ಬಹುಮಾನಗಳು ನಿಮ್ಮ ಪಾಲಿಗೆ ಯಶಸ್ವಿಯಾಗಿ ದೊರಕಲಿ.

ಬಾಲಿವುಡ್ ನ ಪ್ರಖ್ಯಾತ ಗಾಯಕಿಯಾದ ಶ್ರೇಯಾ ಘೋಷಾಲ್ ರವರ ಸ್ವರ ಶೈಲಿಗೆ ಹೊಂದುವ ಇವರ ಕಂಠಕ್ಕೆ ತುಳುನಾಡಿನ ಶ್ರೇಯಾ ಘೋಷಾಲ್ ಎಂದೇ ಪ್ರಖ್ಯಾತರಾಗಿರುವರು.

ಹೀಗೆ ಸಂಗೀತ ಕ್ಷೇತ್ರಕ್ಕೆ ತನ್ನ ಅಧ್ಬುತ ಸ್ವರ ಮಾಧುರ್ಯದಿಂದ ಸಾಧನೆಯ ಹಾದಿಯಲ್ಲಿ ಸಾಗುವ ಇವರು ಇನ್ನು ಹದಿ ಹರೆಯ.ನಿಮ್ಮ ಸಾಧನೆಯ ಹಾದಿಯಲ್ಲಿ ಇನ್ನೂ ಹೆಚ್ಚು ಜನ ಮನ ತಲುಪಿ ಮುಂದೊಂದು ದಿನ ರಾಷ್ಟ್ರೀಯ ಹಿನ್ನಲೆ ಗಾಯಕರ ಸಾಲಿನಲ್ಲಿ ನಿಮ್ಮ ಹೆಸರು ಮಿಂಚಲಿ.

ತೃಪ್ತಿ.ಜಿ.ಕುಂಪಲ.


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »