TOP STORIES:

FOLLOW US

ನಮ್ಮ ಸಂಘಟನೆಗಳಲ್ಲಿ ನಮ್ಮವರಿಗಾಗಿ ದುಡಿಯುವ ಮನಸ್ಥಿತಿಯೊಂದಿಗೆ ನಮ್ಮಲ್ಲಿ ಪಕ್ಷಕ್ಕಿಂತ ಸಂಘ-ಸಂಸ್ಥೆಗಳ ಮೇಲೂ ಕಾಳಜಿಯಿರಲಿ…


ಬಿಲ್ಲವ ಸಮಾಜದಲ್ಲಿ ಯಾವುದೇ ವಿಷಯ ಪ್ರಸ್ತಾಪವಾದಾಗ ಪಕ್ಷ ಕೇಂದ್ರಿತವಾಗಿ ನೋಡುವ ಜಾಯಮಾನವಿದೆ. ಜಾತಿ ಆಧಾರಿತ ಬಿಲ್ಲವ ಸಂಘಗಳು ಇದಕ್ಕೆ ಹೊರತಾಗಿಲ್ಲ. ಇದು ನಮ್ಮ ದುರಂತ. ಬಹುಷ: ಬಿಲ್ಲವರಲ್ಲಿ ಇಂದು ಸಂಖ್ಯಾ ಬಲವಿದೆ ಎಂದು ಡಂಗುರ ಸಾರಿದರೂ ಬುದ್ಧಿ ಬಲ ಅರ್ಥಾತ್ ಯೋಚನೆ, ಯೋಜನೆಯಲ್ಲಿ ವಿಫಲರಾಗುತ್ತಿದ್ದಾರೆ.

ನಾರಾಯಣ ಗುರುಗಳ ಸಂದೇಶವಿದೆ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ ಬಲಯುತರಾಗಿ ಎಂದು. ಹೌದು, ವಿದ್ಯೆಯಿಂದ ನಾವು ಸ್ವತಂತ್ರರಾಗುವ ಬದಲು ನಮ್ಮ ಸ್ವಾತಂತ್ರ್ಯವನ್ನು ಪರರಿಗೆ ಧಾರೆ ಎರೆದು ಪರರ ತಂತ್ರಕ್ಕೆ ಬಲಿಯಾಗುತ್ತಿದ್ದೇವೆ. ಸಂಘಟನೆಗಳು ಬಲವ ತುಂಬುವ ಬದಲು ಹಲವು ಆಗುತ್ತಿದೆ. ಕೆಲವರ ಪ್ರಕಾರ ಸಂಘಟನೆಗಳು ಹೆಚ್ಚಾಗಬೇಕು ಅದರಿಂದ ಸಮಾಜಕ್ಕೆ ಪ್ರಯೋಜನವಿದೆ. ಹೆಚ್ಚಾಗಲಿ ಒಳ್ಳೆಯದು ಆದರೆ ನಮ್ಮ ಸಂಘಟನೆಗಳು ನಮ್ಮ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಔದ್ಯೋಗಿಕವಾಗಿ ಸಧೃಡವಾಗಿಸಲು ಸಹಕಾರಿಯಾಗಿರಬೇಕು. ಆ ಮೂಲಕ ಸಮಾಜದ ಹಿತಚಿಂತನೆಯ ಗುರಿ ಇರಬೇಕು.

ಜಾತಿಗಳು ಧರ್ಮದೊಳಗಿನ ಬಳ್ಳಿಗಳು. ಧರ್ಮ ನಮ್ಮೆಲ್ಲರಿಗೂ ಬೇಕು. ಆದರೆ ಅದು ಕೇವಲ ಬಿಲ್ಲವರಿಗಾಗಿ ಮಾತ್ರವೇ ಎಂಬ ಪ್ರಶ್ನೆಯನ್ನು ನಾವು ಮಾಡಬೇಕಾಗಿದೆ. ನಮ್ಮಲ್ಲಿ ಧರ್ಮಾಧಾರಿತ ಸಂಘಟನೆಯಲ್ಲಿ ಪ್ರಾಣತೆತ್ತವರಿದ್ದಾರೆ. ಅವರು ಯಾಕೆ ಹೋಗಬೇಕಿತ್ತು ಬೇರೆಯವರು ಇರಲಿಲ್ಲವೇ? ಇತ್ಯಾದಿ ಪ್ರಶ್ನೆಗಳು ಎಲ್ಲರೂ ಕೇಳುತ್ತೇವೆ. ಅದು ಸಾಮಾನ್ಯ. ಆದರೆ ಇದರ ಬಗ್ಗೆ ತಿಳುವಳಿಕೆ ಮೂಡಿಸುವುದು ಅನಿವಾರ್ಯ. ಆದರೆ ನಮ್ಮವ ಎಂಬ ಪ್ರಜ್ಞೆ ನಮ್ಮಲ್ಲಿರಲಿ. ಆ ಮೂಲಕ ಅಲ್ಲಿ ಪಕ್ಷ ನೋಡದೆ ಸಾಂತ್ವನ ಇಲ್ಲವೇ ಅದರ ವಿರುದ್ಧ ಬೇಕಾದ ಕ್ರಮದ ಬಗ್ಗೆ ನಮ್ಮ ಸಂಘಟನೆಗಳು ಮಾಡುತ್ತಿಲ್ಲ. ಎಲ್ಲೋ ಕೆಲವು ಬೆರಳೆಣಿಕೆಯ ಸಂಘಟನೆಗಳು ಅಥವಾ ಸ್ಥಳೀಯ ಬಿಲ್ಲವ ಸಂಘ ಧ್ವನಿ ಎತ್ತುತ್ತವೆ ನಂತರ ಅದಕ್ಕೆ ಸ್ಪಂದನೆಯೂ ಇಲ್ಲ. ಇದಕ್ಕೆ ಮೂಲ ಕಾರಣ ಸಂಘಟನೆಯ ಪ್ರಮುಖರು ಪಕ್ಷದಲ್ಲಿದ್ದಾಗ ಘಟನೆಯು ಕೆಲವೊಮ್ಮೆ ಜಾತಿಗಿಂತ ಪಕ್ಷದ ಮೇಲೆ ನಿಲ್ಲುತ್ತದೆ. ಜಾತಿಗಿಂತ ಪಕ್ಷದ ಚಿಂತನೆಯಿರುವ ವ್ಯಕ್ತಿಯು ಸಂಘಟನೆಯ ಚುಕ್ಕಾಣಿ ಹಿಡಿಯಲು ಅಸಮರ್ಥ ಅಥವಾ ಪಕ್ಷಾತೀತ ವ್ಯಕ್ತಿಗೆ ನಮ್ಮ ಸಂಘಟನೆಯ ಜವಾಬ್ದಾರಿ ವಹಿಸಬೇಕಾಗಿದೆ.

ಇತ್ತೀಚಿನ ಒಂದು ಘಟನೆಯನ್ನು ನೋಡುವುದಾದರೆ ಕಲಾವಿದ ಅರವಿಂದ್ ಬೋಳಾರ್ ಖಾಸಗಿ ವಾಹಿನಿಯಲ್ಲಿ ಜ್ಯೋತಿಷ್ಯ ಪಾತ್ರ ಮಾಡಿದಾಗ ಉಂಟಾದ ಸಮಸ್ಯೆಯ ಸಂದರ್ಭ ಖಾಸಗಿ ವಾಹಿನಿಯ ಬಗ್ಗೆ ಚಕಾರವೆತ್ತದೆ ಓರ್ವ ಕಲಾವಿದನಿಗಾದ ಅವಮಾನ ನಮಗೆ ಗೊತ್ತು. ಈ ಸಮಯದಲ್ಲಿ ನಮ್ಮವರಲ್ಲಿಯೇ ಧರ್ಮ, ಜಾತಿಯ ನಡುವಿನ ವಾದವಿವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿತ್ತು. ಆದರೆ ನಮ್ಮ ಜಾತಿಯ ಪ್ರಮುಖ ಸಂಘಟನೆಗಳೆನಿಸಿಕೊಂಡವರು ಮೌನವಾಗಿದ್ದರು. ಕಲಾವಿದನಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಲಿಲ್ಲ. ಕೆಲವರು ಮಾಡಿರಬಹುದು. ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದಕ್ಕೆ ಕಾರಣವೇ? ಅಥವಾ ಯಾರು ಮುಂದೆ ಹೋಗುತ್ತಾರೆ ನಂತರ ನಾವು ಹೋಗುವ ಎಂಬ ಸೋಗಲಾಡಿತನವೇ ಎಂಬಂತಾಗಿದೆ.
ಇತರ ಜಾತಿಗಳನ್ನು ಕೊಂಡಾಡುವ ನಾವು ಅವರಿಂದ ಸಾಕಷ್ಟು ಕಲಿಯಬೇಕಾಗಿದೆ. ಚುನಾವಣಾ ಸಂದರ್ಭ ಜಾತಿಯ ಪ್ರಮುಖರನ್ನು ಒಗ್ಗೂಡಿಸಿಕೊಂಡು ನಮ್ಮ ಜಾತಿಗೆ ಪ್ರಾತಿನಿಧ್ಯ ಕೊಡಬೇಕು ಎಂಬ ಬೇಡಿಕೆ, ಜಾತಿಗೆ ಬೇಕಾದ ಸವಲತ್ತು ಪಡೆಯಲು ರಾಜ್ಯದ ಮುಖ್ಯಮಂತ್ರಿಯೇನು, ಪ್ರಧಾನಮಂತ್ರಿಯನ್ನೂ ಭೇಟಿಯಾಗಲು ತಾಕತ್ತು ಅವರಲ್ಲಿ ಇರಬೇಕಾದರೆ, ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಾಬಲ್ಯವಿದ್ದು, ನಮ್ಮ ಜಾತಿಯ ಮತಗಳೇ ನಿರ್ಣಾಯಕವಾಗಿರುವಾಗ ನಮ್ಮಲ್ಲಿ ತಾಕತ್ತಿಲ್ಲವೇ? ನಮಗೆ ರಾಜಕೀಯ ನಾಯಕರು ಇದ್ದರು ಚುನಾವಣಾ ಸಂದರ್ಭ ನಾರಾಯಣಗುರು ಮಂದಿರದ ಭೇಟಿಯೇನು, ಜಾತಿಯ ಪ್ರಮುಖರ ಭೇಟಿ ಮಾಡುವುದೇನು? ಗೆದ್ದ ನಂತರ ಸರ್ವರೂ ಸಮಾನರು ಎಂಬ ಧೋರಣೆ ಅವರದ್ದು. ಇದು ನಮ್ಮವರಿಗೆ ರಾಜಕೀಯ ನಾಯಕರ ಬಗೆಗಿನ ತಾತ್ಸಾರಕ್ಕೂ ಕಾರಣವಾಗಿದೆ. ನಮ್ಮಲ್ಲಿ ಜಗಜ್ಜಾಹಿರಾಗುವಂತೆ ಜನ ಸೇರಿಸಿ ಅದು ಆಗ ಬೇಕು ಇದಾಗಬೇಕೆನ್ನುತ್ತೇವೆ. ಹೇಳುವುದು ಮಾತ್ರ ಅದರ ಹಿಂದೆ ಹೋಗಿ ಒತ್ತಡ ಹಾಕಲಾರೆವು. ಅದೇ ಇತರ ಜಾತಿಯವರು ಗುಪ್ತವಾಗಿ ಅವರ ನಾಯಕರು ಮಾತ್ರ ಮುಂದೆ ಹೋಗಿ ಸಮಾಜಕ್ಕಾಗಿ ಸರಕಾರಕ್ಕೆ ಒತ್ತಡ ಹಾಕಿ ಬೇಕಾದನ್ನು ಪಡೆಯುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ಕಾರ್ಖಾನೆ, ಕಂಪನಿ, ಬ್ಯಾಂಕ್ ಇತ್ಯಾದಿಗಳಿದ್ದರೂ ಅಲ್ಲಿ ಸಿರಿವಂತರಿಗೆ ಮಣೆ. ಕೆಲವು ಜಾತಿ ಪ್ರಮುಖರು ಭಾಷಣಕ್ಕೆ ಜಾತಿ ಜಾತಿ ಎಂದು ಬೊಬ್ಬಿರಿದರು ಉದ್ಯೋಗಕ್ಕಾಗಿ ಹೋದಾಗ ಜಾತಿ ಕಾಣದು.

ಪಕ್ಷ, ಧರ್ಮಗಳಿಗೆ ಜೋತು ಬೀಳುವ ನಾವು ಜಾತಿಗಾಗಿರುವ ಸಂಘಟನೆಯನ್ನು ಸಮರ್ಥವಾಗಿ ಬಳಸುವ. ಇತರೆ ಜಾತಿಗಳು ಜಾತಿ ಮೊದಲು ಧರ್ಮ ನಂತರವೆಂದರೆ ನಾವುಗಳು ಧರ್ಮ ಮೊದಲು ಜಾತಿ ನಂತರ ಎನ್ನುತ್ತೇವೆ. ಇದಕ್ಕೆ ಕಾರಣ ಹುಡುಕಿದಾಗ ಜಾತಿ ಸಂಘಟನೆಗಳಿಂದಾದ ಪ್ರಮಾದ. ಯಾವಾಗ ಜಾತಿ ಸಂಘಟನೆಗಳು ಜಾತಿಗಾಗಿ ದುಡಿಯುವುದಿಲ್ಲವೋ ಆಗ ಯುವ ಮನಸ್ಸುಗಳು ತಮ್ಮನ್ನು ಸೆಳೆಯುವ ಧರ್ಮಾಧಾರಿತ ಸಂಘಟನೆಗಳ ಕಡೆಗೆ ಒಲವು ಹರಿಸುತ್ತಾರೆ. ಒಂದಷ್ಟು ಕಾರ್ಯಕ್ರಮಗಳನ್ನು ಮಾಡಿ, ಪ್ರಚಾರ ಬಯಸುವ ಬದಲು ಪ್ರೌಢ, ಕಾಲೇಜು ಹಂತದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶಿಕ್ಷಣ, ಉದ್ಯೋಗದ ಬಗ್ಗೆ ಸೂಕ್ತ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮಾಡಿದಾಗ ನಮ್ಮಲ್ಲಿಯೂ ಬದಲಾವಣೆಯ ಪರ್ವ ಕಾಣಬಹುದು.
ಜಾತಿ ಸಂಘಟನೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡು ಇತರ ಜಾತಿಯನ್ನು ಅಥವಾ ಪಕ್ಷವನ್ನು ಉದ್ಧರಿಸುವ ಬದಲು ನಮ್ಮವರನ್ನೇ ಉದ್ಧಾರ ಮಾಡುವ. ನಮಗಾಗಿ ದುಡಿಯುವ ಎಂಬ ಧ್ಯೇಯ ನಮ್ಮ ಸ್ಥಳೀಯ ಬಿಲ್ಲವ ಸಂಘಗಳಿಂದ ಹಿಡಿದು ಕೇಂದ್ರ, ರಾಷ್ಟ್ರೀಯ, ಅಖಿಲ ಭಾರತ, ಜಿಲ್ಲೆ, ರಾಜ್ಯ ಇತ್ಯಾದಿ ಹಣೆಪಟ್ಟಿ ಕಟ್ಟಿಕೊಂಡ ನಮ್ಮ ಸಂಘಟನೆಗಳಲ್ಲಿ ಇರಲಿ ಎಂಬುದು ನಮ್ಮೆಲ್ಲರ ಆಶಯ.

 

ಬರಹ: ದೀಪಕ್ ಕೆ ಬೀರ


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »