TOP STORIES:

ಕೋರೋನ ಸಂದರ್ಭದಲ್ಲಿ ಬಡವರ ಪಾಲಿನ ಅಮೃತ ಸಂಜೀವಿನಿ ಉದಯ್ ಬಂಗೇರ ನಾವೂರು


 

ಕೋವಿಡ್-19 ಸೋಂಕು ನಮ್ಮಲ್ಲಿರುವ ಮಾನವೀಯ ಮುಖಗಳ ಪರಿಚಯವನ್ನು ಪ್ರಪಂಚಕ್ಕೆ ಮಾಡುತ್ತಿದೆ. ಇಂತವರಲ್ಲಿ ಒಬ್ಬರು ಬೆಳ್ತಂಗಡಿ ತಾಲೂಕಿನ ಯುವಕ, ಉದಯ್ ಬಂಗೇರ ನಾವೂರು.

ವರ್ಷದ ಹಿಂದೆ ತನ್ನ ಸ್ವಂತ ಉದ್ಯಮವನ್ನು ಸ್ಥಾಪಿಸಿದ ಇವರು ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಅನ್ನುವ ರೀತಿಯಲ್ಲಿ ಸೇವೆ ಮಾಡುತ್ತಿದ್ದಾರೆ.

ಒಬ್ಬ ವ್ಯಕ್ತಿಗೆ ಬೇರೆ ಜನರ ಕಷ್ಟ ತಿಳಿಯುವುದು ತಾನು ಜೀವನದಲ್ಲಿ ನಡೆದು ಬಂದ ದಾರಿಯಿಂದ ತಿಳಿಯುತ್ತದೆ. ಬಡ ಕುಟುಂಬದಲ್ಲಿ ಜನಿಸಿದ ಇವರಿಗೆ ತುಂಬ ತಿಳಿದಿದೆ.

ಇವರು ಚಿಕ್ಕ ವಯಸ್ಸಿನಲ್ಲಿ ತನ್ನ ತಂದೆ ಮಾಡುತ್ತಿದ್ದ ಕೂಲಿ ಕೆಲಸದಿಂದ ಜೀವನ ಸಾಗಿಸುವ ರೀತಿ ಅರಿತ್ತಿದ್ದರು.

ಕೊರೊನಾ ಹಿನ್ನಲೆಯಲ್ಲಿ ದೇಶ ಲಾಕ್ ಡೌನ್ ನಲ್ಲಿ ಇರುವುದರಿಂದ ಸಮಸ್ಯೆಗೆ ಸಿಲುಕಿದ ನಾವೂರು ಗ್ರಾಮದ ಸುಮಾರು 50 ಕುಟುಂಬಗಳಿಗೆ ಆಹಾರ ಕಿಟ್ಟನ್ನು ತಮ್ಮ ದುಡಿಮೆಯ ಒಂದು ಪಾಲಿನಲ್ಲಿ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮೂಲತಃ ಬೆಳ್ತಂಗಡಿ ತಾಲೂಕಿನ ನಾವೂರು ದಲ್ಲಿ ಜನಿಸಿದ ಇವರು ಪ್ರಾಥಮಿಕ ಹಾಗೂ ಹೈ ಸ್ಕೂಲ್ ಸರ್ಕಾರಿ ಶಾಲೆ ನಾವೂರುದಲ್ಲಿ ಮುಗಿಸಿದ ಇವರು ಡಿಪ್ಲೋಮ ಕೋರ್ಸ್ ಮುಗಿಸಿ, ದುಬಾಯಿಯಲ್ಲಿ ೪ ವರ್ಷ ಕೆಲಸ ಮಾಡಿ. ಊರಿನಲ್ಲಿ ತನ್ನದೆ ಆದ ಸ್ವಂತ ವಿ5 ಟೆಕ್ನಾಲಜಿಸ್ ಸಂಸ್ಥೆ ಮಾಡಿಕೊಂಡರು.

ವಿ5 ಟೆಕ್ನಾಲಜಿಸ್ ಎರಡು ಶಾಖೆಗಳು ವಿವಿದ ರೀತಿಯಲ್ಲಿ ಜನರಿಗೆ ಸೇವೆಯನ್ನು ನೀಡುತ್ತಾ ಬರುತ್ತಿದ್ದು ಇದರಲ್ಲಿ ಸಿ.ಸಿ ಕ್ಯಾಮರ, ಕಂಪ್ಯೂಟರ್ ಸೇಲ್ಸ್ ಽ ಸರ್ವಿಸ್, ಇನ್ ವರ್ಟ್ ರ್ ಬ್ಯಾಟರಿ, ಸೋಲರ್, ಡೋರ್ ಲಾಕ್ ಸಿಸ್ಟಮ್, ಸಬ್ ಮರ್ಸಿಟಲ್ ಪಂಪ್ ಸೆಟ್, ಸೋಲರ್ ವಾಟರ್ ಹೀಟರ್, ವಿಸಿಟಿಂಗ್ ವೀಸಾ, ಪಾಸ್ ಪೊರ್ಟ್, ಪೊಲೀಸ್ ಕ್ಲಿಯರೆನ್ಸ್, ಇನ್ನು ಮುಂತಾದ ಸೇವೆಯನ್ನು ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ನೀಡುತ್ತಿದ್ದಾರೆ.

V5 technologies Sapthagiri Complex Guruvayanakere,

V5 technologies Sri Damodara complex Bear Hotel Ujala Belman

Info@v5 technologies.com

Website: www.v5 technologies.com

ಇವರ ಈ ಸಮಾಜ ಸೇವೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಉಪಯೋಗವಾಗಲಿ. ವಿ5 ಟೆಕ್ನಾಲಜಿಸ್ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲು ನಮ್ಮ ಎಲ್ಲರ ಬೆಂಬಲ ಇವರಿಗೆ ನೀಡಬೇಕು. ಪ್ರೀತಿಯ ಉದಯ್ ಬಂಗೇರ ಅವರಿಗೆ ಜನರ ಸೇವೆ ಮಾಡುವ ಇನ್ನಷ್ಟು ಶಕ್ತಿಯನ್ನು ಶ್ರೀ ದೇವರು ನೀಡಲಿ ಎಂಬ ಹಾರೈಕೆ ನಮ್ಮದು.

ಬರಹ: ಪುಷ್ಪರಾಜ್ ಪೂಜಾರಿ


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »