TOP STORIES:

FOLLOW US

ತುಳುನಾಡಿನ ಸೇವಾ ಮಾಣಿಕ್ಯ ಸತೀಶ್ ಉಳ್ಳಾಲ್ ದುಬೈ


 

ನಮ್ಮ ತುಳುನಾಡಿನಲ್ಲಿ ಅದೆಷ್ಟೋ ಸೇವಾ ಸಾಧಕರಿದ್ದಾರೆ. ಇವತ್ತು ನಾವು ಪರಿಚಯ ಮಾಡುವ ಸೇವಾ ಮಾಣಿಕ್ಯ ಸತೀಶ್ ಉಳ್ಳಾಲ್ ದುಬೈ.

ಶ್ರೀ ಬಂಟಪ್ಪ ಪೂಜಾರಿ ಮತ್ತು ಶ್ರೀಮತಿ ಮುತ್ತು ಪೂಜಾರಿ ದಂಪತಿಗಳ ಮುದ್ದಿನ ಮೂರನೇ ಮಗ ಸತೀಶ್ ಉಳ್ಳಾಲ್, ಇವರು ಪ್ರಾಥಮಿಕ ಶಿಕ್ಷಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳ್ಳಾಲ ಮತ್ತು ಪ್ರೌಢ ಶಿಕ್ಷಣವನ್ನು ಭಾರತ್ ಪ್ರೌಢ ಶಾಲೆಯಲ್ಲಿ ಉನ್ನತ ಶ್ರೇಣಿಯಲ್ಲಿ ಮುಗಿಸಿರುವರು,ವೃತ್ತಿ ಶಿಕ್ಷಣವನ್ನು (ಡ್ರಾಫ್ಟ್ ಮೆಕ್ಯಾನಿಕ್ )ಕೈಗಾರಿಕ ತರಬೇತಿ ಕೇಂದ್ರ ಕದ್ರಿಯಲ್ಲಿ ಮಾಡಿದರು, 1988ರಲ್ಲಿ ಆಂಗ್ಲ ಭಾಷೆ ಬೆರಳಚ್ಚು ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡರು, ಅದಲ್ಲದೆ ಭಾರತನಾಟ್ಯ ಕಲಾವಿದರು ಆಗಿರುವರು. 1994 ರಲ್ಲಿ ಜ್ಯೋತಿ ಕಾಲೇಜ್ ನಲ್ಲಿ ನಡೆದ ಜೂನಿಯರ್ ವಿಭಾಗದ ಪರೀಕ್ಷೆಯನ್ನು ಬರೆದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಮಂಗಳೂರಿನ ಪುರಭವನ, ಹಾಗೂ ಉಡುಪಿಯ ಹಲವಾರು ಕಡೆ ಪ್ರದರ್ಶನ ನೀಡಿ ಜನ ಮೆಚ್ಚುಗೆ ಗಳಿಸಿದ್ದಾರೆ.

ಇವರು ತನ್ನ ವಿದ್ಯಾಭ್ಯಾಸ ಮುಗಿಸಿದ ನಂತರ ಜೀವನಕ್ಕಾಗಿ ಪ್ರೈವೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು, ನಂತರ “ಮಝಗಾಂ ಡಾಕ ” 11ವರ್ಷ ಸೇವೆಯನ್ನು ಸಲ್ಲಿಸಿದ ಇವರು 1995ರಲ್ಲಿ ಅಮೇರಿಕಾ ಮೂಲದ “ಮೆಕ್ಡರ್ ಮೋಟ್ ” ಎಂಬ ಸಂಸ್ಥೆಯಲ್ಲಿ ಸೀನಿಯರ್ ಪ್ರಿನ್ಸಿಪಾಲ್ ಡಿಸೈನರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರು ಕೇವಲ ತನ್ನ ಏಳಿಗೆಗಾಗಿ ಮಾತ್ರವಲ್ಲದೆ ಸಮಾಜದ ಏಳಿಗೆಯನ್ನು ಬಯಸಿ ಸಮಾಜ ಸೇವೆಯ ಮಾಡುತ್ತ ಒಬ್ಬ ಸಮಾಜದಲ್ಲಿ ಓರ್ವ ಉತ್ತಮ ವ್ಯಕ್ತಿ ಎಂದೆನಿಸಿಕೊಂಡಿರುವರು

ಉಳ್ಳಾಲದ ಗೋಕರ್ಣನಾಥ ಸಂಘದಲ್ಲಿ 10 ವರ್ಷ ಸೇವೆ, ಬಿಲ್ಲವಾಸ್ ದುಬೈ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರಾಗಿ 16 ವರ್ಷ ಸೇವೆ, ಪ್ರಸ್ತುತ ಅಭಿರುದ್ದಿ ಅಧಿಕಾರಿಯಾಗಿ ಸಂಘದ ಮುಖಾಂತರ ಅನೇಕ ಬಡ ವಿದ್ಯಾರ್ಥಿಗಳಿಗೆ ಹಣದ ಸಹಾಯ ಮಾಡುವುದರಲ್ಲಿ ಮೊದಲಿಗರು ಆಗಿರುತ್ತಾರೆ. ಬಿರ್ವೆರ್ ಕುಡ್ಲ ದುಬೈ ವಿಂಗ್ ಎಸ್ಕ್ಯೂಟ್ ಆಗಿ, ಮಂಗಳೂರು ಫ್ರೆಂಡ್ಸ್ ದುಬೈ ದೋಸ್ತಿ ಸಂಘದಲ್ಲಿ ಅಧ್ಯಕ್ಷರು ಆಗಿ, ದುಬೈ ವರಮಹಾಲಕ್ಷ್ಮಿ ಪೂಜೆಯ ಸಮಿತಿ ಸ್ಥಾಪಕರಾಗಿ, ಯಕ್ಷಗಾನ ಕೂಟ, ನಾಟಕ ರಂಗ ಧ್ವನಿ ಪ್ರತಿಷ್ಠಾನ, ಯಕ್ಷ ಮಿತ್ರರು, ಗಮ್ಮತ್ ಕಲಾವಿದರು, ತುಳು ಪಾತೆರ್ಗ ತುಳು ಒರಿಪಾಗ ಪ್ರಸ್ತುತ ಬಿಲ್ಲವಾಸ್ ದುಬೈ ಇದರ ವಾಯ್ಸ್ ಪ್ರೆಸಿಡೆಂಟ್ ಆಗಿ ಹೀಗೆಯೇ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ

ಇವರು ಮಾಡಿರುವ ಸೇವೆಗೆ ಅನೇಕ ಗೌರವ ಸನ್ಮಾನವನ್ನು ಪಡೆದಿರುತ್ತಾರೆ. ಉಲ್ಲಾಳೆರೆನ ಶ್ರೀ ನಾರಾಯಣ ಗುರು ಸಂಘ ಕಾಟಿಪಳ್ಳ, ವೀರನಾರಾಯಣ ಗೇಮ್ಸ್ ಟೀಮ್ ಕುಲಶೇಖರ, ಬಿಲ್ಲವಾಸ್ ಸಂಘ ದುಬೈ, ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಇಂತಹ ಹಲವಾರು ಸಂಸ್ಥೆಗಳಿಂದ ಸನ್ಮಾನಕ್ಕೆ ಭಾಜನರಾಗಿರುತ್ತಾರೆ.
ನಟನೆಯಲ್ಲಿ ಆಸಕ್ತಿ ಹೊಂದಿರ ಇವರು ಕಲಾ ಪೋಷಕರು ಆಗಿ ಪ್ರತಿಭೆಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹ ಕೊಟ್ಟು ಸರಸ್ವತಿಯ ಸೇವೆಯನ್ನು ಮಾಡುತ್ತಾ ಇರುವರು
ಬಿಲ್ಲವ ಸಮಾಜ ಏಳಿಗೆ ಮಾತ್ರ ಅಲ್ಲದೆ ಎಲ್ಲಾ ಸಮಾಜದಲ್ಲಿಯೂ ತನ್ನ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ
ಇಷ್ಟು ಮಾತ್ರ ಅಲ್ಲದೆ ಗೆಳೆಯರ ಜೊತೆ ಸೇರಿ 6ಹೆಣ್ಣು ಮಕ್ಕಳಿಗೆ ಮದುವೆಗೆ ಮಾಂಗಲ್ಯ ಸರ ಮತ್ತು ಹಣದ ಸಹಾಯ ಮಾಡಿರುವರು, ಅದೆಷ್ಟೋ ಕೂಲಿ ಕಾರ್ಮಿಕರಿಗೆ ಸರಿಯಾದ ಕೆಲಸ ಸಿಗುವ ವರೆಗೆ ಸಂಪೂರ್ಣ ಖರ್ಚು ಶ್ರೀಯುತರು ನೋಡಿಕೊಂಡಿರುತ್ತಾರೆ.
ಹೊರದೇಶದಲ್ಲಿ ತುಳುನಾಡಿನ ಆಚಾರ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಜನ ಮನ ಗೆದ್ದಿದ್ದ ಇವರು 2012ರಲ್ಲಿ “ಅಪ್ಪೆ ಭಾಷೆ” ಪುಸ್ತಕ 6 ಜನ ಫ್ರೆಂಡ್ಸ್ ಸೇರಿ 2000 ಪುಸ್ತಕ ಬಿಡುಗಡೆ ಮಾಡಿ ಜನರಿಂದ “ತುಳುವ ಮಾಣಿಕ್ಯ” ಎಂಬ ಬಿರುದು ಪಡೆದರು.ದುಬೈನಲ್ಲಿ ನಡೆದ ತುಳು ಪರ್ಬ ಎಂಬ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸ್ಪರ್ಧೆ ಇವರ ಟೀಮ್ ಬಿಲ್ಲವಾಸ್ ದುಬೈ ಪ್ರಥಮ ಸ್ಥಾನ ಪಡೆದಿರುತ್ತದೆ.

ಕೋರೋಣದಿಂದ ಇಡಿ ಜಗತ್ತೇ ತತ್ತರಿಸಿ ಹೋದ ಸಮಯದಲ್ಲಿ ದುಬೈನಲ್ಲಿ ಬ್ಲಡ್ ಸೆಂಟರ್ ರಕ್ತದ ಅವಶ್ಯಕತೆ ಇರುವಾಗ 60ಜನರ ಕರೆದುಕೊಂಡು ಹೋಗಿ ರಕ್ತದಾನ ಮಾಡಿಸುವಲ್ಲಿ ಯಶಸ್ವೀಯಾಗಿರುವರು
ಮುಗ್ದ ಮನಸ್ಸಿನ ಇವರು ಮಾಡೋ ಸೇವೆಗೆ ತುಳುನಾಡು, ತುಳುಭಾಷೆ ಮೇಲಿರುವ ಅಭಿಮಾನಕ್ಕೆ ದೇವರ ಅನುಗ್ರಹ ಸದಾ ಇರಲಿ ಕಟೀಲು ದುರ್ಗಾ ಪರಮೇಶ್ವರಿ ಅಮ್ಮ ಇವರಿಗೆ ಆರೋಗ್ಯ ಆಯುಷ್ಯ, ಸಂಪತ್ತು, ಎಲ್ಲಾ ಕೊಟ್ಟು ಕಾಪಾಡಲಿ ಇವರ ಸೇವೆ ಹೀಗೆಯೇ ಮುಂದುವರಿಯಲಿ ಎಂದು ಹಾರೈಸುವ

 

ಬರಹ:✍️ ಪ್ರಶಾಂತ್ ಅಂಚನ್ ಮಸ್ಕತ್ತ್


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »