TOP STORIES:

ಹಲವು ಆರೋಗ್ಯ ಸಮಸ್ಯೆಗಳಿಗೆ ನಾಟಿ ಔಷಧದ ಮೂಲಕ ಪರಿಹಾರ ನೀಡುವ ಉಗ್ಗಪ್ಪ ಪೂಜಾರಿ..!


ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ  ಕೊಣಾಜೆ ಯುನಿವರ್ಸಿಟಿಯ ಬಳಿ ಪಾವೂರು ಗ್ರಾಮದಲ್ಲಿ ಭಂಡಾರ ಮನೆಯ ಬಿ.ಉಗ್ಗಪ್ಪ ಪೂಜಾರಿ‌ ಎಂದರೆ ಹೆಸರುವಾಸಿ.ಕಾರಣ ಅವರು ನಾಟಿ ವೈದ್ಯ.

ಉಗ್ಗಪ್ಪ ಪೂಜಾರಿಯವರು ಎಲ್ಲರಿಗೂ ಚಿರಪರಿಚಿತ.ಸುಮಾರು 48 ವರ್ಷಗಳಿಂದ ನಾಟಿ ಔಷಧಿಯ ಮೂಲಕ  ಹಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ.

ಉಗ್ಗಪ್ಪ ಪೂಜಾರಿಯವರು ಎಲ್ಲರಿಗೂ ಚಿರಪರಿಚಿತ.ಸುಮಾರು 48 ವರ್ಷಗಳಿಂದ ನಾಟಿ ಔಷಧಿಯ ಮೂಲಕ  ಹಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ.

ಇವರು ಮಹಿಳೆಯರ ಹಲವಾರು ಮಾಸಿಕ ಸಮಸ್ಯೆಗಳಿಗೆ, ಮೂಲವ್ಯಾಧಿ, ಸರ್ಪಸುತ್ತು, ಕಲ್ಲುಕೆಂಪು, ಕೆಂದಾಳೆಕೆಂಪು, ಪೊಯ್ಲ್, ಪೊಯ್ಯೆ, ಮೂತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಇತರ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ನಾಟಿ ವೈದ್ಯರಾಗಿ ಔಷಧಿ ಕೊಡುತ್ತಾರೆ.ಇನ್ನೂ ಹಲವಾರು ಸಮಸ್ಯೆಗಳಿಗೆ ಔಷಧ ಕೊಡುತ್ತಾರೆ.

ಇವರ ಬಳಿ ಜನರು ಎಲ್ಲೂ ಬಗೆ ಹರಿಯದ ಆರೋಗ್ಯ  ಸಮಸ್ಯೆಯನ್ನು ಹಿಡಿದುಕೊಂಡು ಬರುತ್ತಾರೆ.ಆಗ ಉಗ್ಗಪ್ಪ ಪೂಜಾರಿ ಮನೆಯ ಬಳಿ ಇದ್ದ ದೇವರಿಗೆ ಕೈ ಮುಗಿದು ನಾಟಿ ಮದ್ದು ಕೊಡುತ್ತಾರೆ.ಇವರಿಂದ

ಮದ್ದು ಪಡೆದ ಹೆಚ್ಚಿನ  ಜನರು ಗುಣಮುಖವಾಗಿದ್ದಾರೆ.

ಆದ್ದರಿಂದ ಅವರು ಮತ್ತು ಅವರ ನಾಟಿ ಔಷಧಿ ಹೆಸರುವಾಸಿಯಾಗಿದೆ.


ರಾಜ್ಯದ ಬೇರೆ ಬೇರೆ ಊರುಗಳಿಂದ ಜನರು ಉಗ್ಗಪ್ಪ ಪೂಜಾರಿ ಅವರನ್ನು ಅವರ ಔಷಧಿಗಾಗಿ ಹುಡುಕಿಕೊಂಡು ಮನೆಗೆ ಬರುತ್ತಾರೆ.ಹಾಗೂ ವಿದೇಶದಲ್ಲಿ ಇದ್ದವರು ಕೂಡ ಊರಿಗೆ ಬಂದಾಗ ಇವರ ಬಳಿ ಬಂದು ಮದ್ದು ತೆಗೆದುಕೊಂಡು ಹೋಗುತ್ತಾರೆ.

ಮನೆಯ ಬಳಿ ಒಂದು ಶ್ರೀ ರಾಧಾಕೃಷ್ಣ ಧನ್ವಂತರಿ ದೇವಸ್ಥಾನವನ್ನು ನಿರ್ಮಿಸಿ ಅದಕ್ಕೆ ದಿನಾಲೂ ಪೂಜೆ ಮಾಡುತ್ತಾರೆ.ಮದ್ದಿಗೆ ಬಂದವರಿಗೆ ಅಲ್ಲಿಯ ದೇವರಿ ಪ್ರಾರ್ಥಿಸಿ ಔಷಧ ಕೊಡುತ್ತಾರೆ. ಜಾತಿ ಭೇದವಿಲ್ಲದೆ ಎಲ್ಲರಿಗೂ ಔಷಧಿ ನೀಡಿ ಅವರ ಸಮಸ್ಯೆಯನ್ನು ಪರಿಹಾರ ಮಾಡಿದ್ದಾರೆ.

ಕೆಲವೊಂದು ವ್ಯಕ್ತಿಗಳ ಕಾಯಿಲೆಗೆ ವೈದ್ಯರ ಬಳಿ ಕೊಡ ಗುಣಮುಖವಾಗದದ್ದನ್ನು ಇವರು ಚಾಲೆಂಜ್ ತೆಗೆದುಕೊಂಡು ಅವರ ಕಾಯಿಲೆಗಳನ್ನು ಮನೆ ಮದ್ದು ಕೊಟ್ಟು ಗುಣಮುಖ ಮಾಡಿಕೊಟ್ಟದ್ದಾರೆ.

ಬಿ. ಉಗ್ಗಪ್ಪ ಪೂಜಾರಿ, ಪಾವೂರು ಭಂಡಾರಮನೆ ಇವರನ್ನು ಸಂಪರ್ಕಿಸಲು ph 9632569115 ಗೆ ಬೆಳಿಗ್ಗೆ 9 ರಿಂದ ರಾತ್ರಿ 8 ರೊಳಗೆ ಕರೆ ಮಾಡಬಹುದು.

 


Related Posts

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »

ಉಡುಪಿ ಸಿಟಿ ಬಸ್‌ ಚಾಲಕನ ಮಗಳು ಶಾಲೆಗೆ ಪ್ರಥಮ ರಾಂಕ್ – ದ್ರುತಿ ಪೂಜಾರಿ ಸಾಧನೆ…


Share         ಉಡುಪಿ: ಶ್ರಮ, ಸಂಕಲ್ಪ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ ಎಂಬುದಕ್ಕೆ ನಗರದ ಸಿಟಿ ಬಸ್ ಚಾಲಕರ ಮಗಳು ದ್ರುತಿ ಪೂಜಾರಿ ಉತ್ತಮ ಉದಾಹರಣೆ ಆಗಿದ್ದಾಳೆ. 23/04/2026 ರಂದು ಪ್ರಕಟವಾದ


Read More »

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »