TOP STORIES:

FOLLOW US

ರಂಜು ತುಳುರಂಗ ಪ್ರೇಮಿ‌ ರಂಜಿತ್ ಕಕ್ಕಿಂಜೆ


ತುಳುನಾಡಿನ ಕಲಾವಿದರ ಧ್ವನಿಯಾಗಿ,ಪ್ರೋತ್ಸಾಹದ ಗರಿಯಾಗಿ,ಕಲಾ‌ ಪೋಷಕನಾಗಿ ಎಲ್ಲರ ಬಾಯಲ್ಲೂ ನಲಿದಾಡುತ್ತಿರುವ ಆ ಒಂದು ಹೆಸರು ರಂಜು. ಓರ್ವ ಕಲಾವಿದನಿಗೆ ತಾನು ಬೆಳೆಯುತ್ತಾ ಇತರರನ್ನು ಬೆಳೆಸುವ ಗುಣವಿರಬೇಕಂತೆ.ಇನ್ನೊಬ್ಬರ ಪ್ರತಿಭೆಯಲ್ಲಿ ಮನೋಲ್ಲಾಸವನ್ನು ಪಡೆಯಬೇಕಂತೆ.

ಇಂತಹ ನೈಜ ಪಾರದರ್ಶಕ ಗುಣವಿರುವಂತಹ ವ್ಯಕ್ತಿಯೇ ರಂಜಿತ್ ಕಕ್ಕಿಂಜೆ.ಅದರಲ್ಲಿಯೂ ತಾನು ನಿಂತ ನೆಲೆಯಾದ ತುಳುನಾಡಿನ ಪ್ರತಿಭೆಗಳು ಎತ್ತರೆತ್ತರ ಬೆಳೆಯಬೇಕು ದೇಶದೆಲ್ಲೆಡೆ ಪಸರಿಸಬೇಕೆಂಬುದೇ ಇವರ ಮುಖ್ಯ ಉದ್ದೇಶವಾಗಿದೆ.ಈ ಅಸಮಾನ್ಯ ವ್ಯಕ್ತಿಯ ಬಗ್ಗೆ ತಿಳಿಯೋಣ.

ಬರಹ-ತೃಪ್ತಿ.ಜಿ.ಕುಂಪಲ.

ರಂಜಿತ್ ಕಕ್ಕಿಂಜೆ ಇವರು ವಸಂತ್ ಪೂಜಾರಿ ಹಾಗೂ ಉಷಾ ದಂಪತಿಯವರ ಸುಪುತ್ರ.ಇವರು ಗುರುದೇವ ಪದವಿಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ ಎಸ್.ಡಿ.ಎಂ.ಐಟಿಸಿ ವೇಣೂರಿನಲ್ಲಿ‌ ಐಟಿಐ ಮುಗಿಸಿ,ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಪ್ರಸ್ತುತ ಸೌದಿ ಅರೇಬಿಯಾದ ಅಬ್ಹಾ ಏರ್ಪೋರ್ಟಿನಲ್ಲಿ ಗ್ರೌಂಡ್ ಸಪೋರ್ಟ್ ಸರ್ವಿಸಸ್ ಮೈಂಟೇನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಕಲಾಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಲಾವಿದನಾಗಿ,ಭಜಕನಾಗಿ,ನಾಯಕನಾಗಿ ಮುಂದುವರಿಯುತ್ತಿರುವ ಇವರು ಯುವ ಸಾಹಿತಿಯೂ ಹೌದು.ಒಬ್ಬ ಕಲಾವಿದನ ಸಾಧನೆಯನ್ನು ಎಳೆ ಎಳೆಯಾಗಿ ತನ್ನ ಬರವಣಿಗಯಲ್ಲಿ ಅಲಂಕರಿಸಿ ಸಾಧಕನ ಸಾಧನೆಗೆ ತನ್ನ ಲೇಖನಿಯ ಮುಖಾಂತರ ಜೀವ ತುಂಬುವ ಕಲಾ ಪೋಷಕರು ಇವರು.

ಭಜನೆಯೆಂದರೆ ಇವರಿಗೆ ಅಪಾರ ಪ್ರೀತಿ.ಬಾಲ್ಯದಲ್ಲೇ ಭಜನೆ ಮಾಡುತ್ತಾ ಬೆಳೆದವರು ಇವರು.ತನ್ನ ಊರಿನವರಾದ ಕಮಲಾಕ್ಷ ಪೂಜಾರಿಯವರ ಪ್ರೋತ್ಸಾಹದಿಂದ “ಶ್ರೀ ಶಬರಿ ಭಜನಾ ಮಂಡಳಿ” ಯನ್ನು ತೋಟತ್ತಾಡಿಯಲ್ಲಿ ಕಟ್ಟಿದರು.ನಂತರ ವೃತ್ತಿಯನ್ನು ಹರಸಿ ಬೆಂಗಳೂರಿಗೆ ನಡೆದವರು ತನ್ನ ಕಲೆಯಲ್ಲಿನ ಉತ್ಸಾಹವನ್ನು ಬಿಡದೆ ಬೆಂಗಳೂರಿನಲ್ಲಿಯೂ “ಮಕರ ಶ್ರೀ ಭಜನಾ ಮಂಡಳಿ” ಯನ್ನು ಹೊಸಳ್ಳಿಯ ಬಾಲಗಂಗಾಧೇಶ್ವರ ದೇವಸ್ಥಾನದಲ್ಲಿ ರಚಿಸಿದರು.ಹೀಗೇ ಕಲಾ ಆಸಕ್ತಿಯಿಂದ ಕಲಾಮಾತೆಯ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಧು ಬಂಗೇರ ಕಲ್ಲಡ್ಕ ಹಾಗೂ ಕಿಶನ್ ಪೂಜಾರಿ ಯವರೊಂದಿಗೆ ಕೂಡಿ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ(ರಿ) ಬೆಂಗಳೂರು ಘಟಕವನ್ನು ಸ್ಥಾಪಿಸಲು ಶ್ರಮಿಸಿದರು.ಈ ಸಂಸ್ಥೆಯ ಮೊದಲ ವರ್ಷಾವಧಿಯಲ್ಲಿ ಸಾಂಸ್ಕೃತಿಕ ನಿರ್ದೇಶಕರಾಗಿ ಕಲಾ ಸೇವೆಯನ್ನು ಸಲ್ಲಿಸಿದರು.

ರಂಗದಲ್ಲಿ ಸಾಹಿತಿಯಾಗಿ ಬರವಣಿಗೆಯ ಮಾಲಾರ್ಪಣೆಯನ್ನು ಗೈಯುತ್ತಾ ಇವರು ಶಬರಿ ಭಜನಾ ತಂಡದ ಯುವಕರಿಗೆ ಅಭಿನಯವನ್ನು ಕಲಿಸಿ ಕಿರಣ್ ಕಕ್ಕಿಂಜೆಯವರ ಸಹಕಾರದಿಂದ “ಬುದ್ಧಿ ಬನ್ನಗ” ಎಂಬ ತುಳು ನಾಟಕದ ಸಾಹಿತ್ಯವನ್ನು ಸ್ವತಃ ತಾನೇ ಬರೆದು ನಿರ್ದೇಶಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು.ತದನಂತರ “ಗೌಜಿ ಗಮ್ಮತ್ತ್”, ” ಎನ್ನ ತಂಗಡಿ”, “ಮಲ್ಲಸ್ತಿಕೆದ ಮರ್ಮಾಲ್”,” ಒಂಜೆಕ್ ಒಂಜರೆ ಮಲ್ಪೊರ್ಚಿ” ಮೊದಲಾದ ನಾಟಕಗಳಿಗೆ ಸಾಹಿತ್ಯ ಬರೆದು ನಿರ್ದೇಶಿಸಿ ನಟಿಸಿರುವ ಹೆಗ್ಗಳಿಕೆ ಇವರದ್ದು.ಇವರು “ಗೋಲ್ಮಾಲ್” ಎಂಬ ತುಳು ಚಲನಚಿತ್ರದಲ್ಲಿಯೂ ನಟಿಸಿರುವರು. ತನ್ನ ವೃತ್ತಿಜೀವನದಲ್ಲೂ ತುಳುನಾಡಿನ ಯುವ ಪ್ರತಿಭೆಗಳಿಗೆ ನಿರಂತರ ನಿಸ್ವಾರ್ಥ ಸೇವೆಯಲ್ಲಿ ಇವರು “ಕಲಾವಿದೆರೆ ಕಡಲ್” ಎಂಬ ವಾಟ್ಸ್ ಆ್ಯಪ್ ಗ್ರೂಪ್ ನಿರ್ಮಿಸಿ ತುಳುನಾಡ ಪ್ರತಿಭೆಗಳಿಗೆ ತನ್ನ ಬರವಣಿಗೆಯ ಮೂಲಕ ಪ್ರೋತ್ಸಾಹವನ್ನು ನೀಡುತ್ತಾ,ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರ ನಿಸ್ವಾರ್ಥ ಕಲಾ ಸೇವೆಗೊಂದು ಗುರುತು ಎಂಬಂತೆ ಪ್ರಶಸ್ತಿ,ಪುರಸ್ಕಾರಗಳು ಇವರಿಗೆ ದೊರಕದೆ ಉಳಿದಿಲ್ಲ.ಯುವವಾಹಿನಿ(ರಿ).ಬೆಂಗಳೂರು ಘಟಕದ ವತಿಯಿಂದ ಸನ್ಮಾನ,ಮಡಿಲು ಸಂಸ್ಥೆಯಿಂದ “ಮಡಿಲು” ಪುರಸ್ಕಾರ,”ತೆಲಿಕೆದ ತೆನಾಲಿ” ಕಾರ್ಲ ತಂಡದಿಂದ “ಕಲಾವಿದರ ಕಣ್ಮಣಿ” ಎಂಬ ಬಿರುದು ನೀಡಿ ಗೌರವಿಸಲಾಗಿದೆ.ನಿಜವಾಗಿಯೂ ಇವರು ಕಲಾವಿದರ ಕಣ್ಮಣಿಯೆ ಹೌದು.ತೆರೆಮರೆಯಲ್ಲಿ ಅಡಗಿರುವ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ರಂಜುರವರಂತಹ ಕಲಾ ಪೋಷಕ ಹುಟ್ಟಲೇಬೇಕು.ಕಲಾವಿದನು ಅರಳಲು ಪ್ರಶಂಸೆಗಿಂತ ಇತರರ ಪ್ರೋತ್ಸಾಹದಲ್ಲಿ ಖುಷಿಪಟ್ಟು ತ‌ನಗೆ ತಾನು ಪ್ರಶಂಸೆಯನ್ನು ಪಡೆವ ನಿಸ್ವಾರ್ಥ ಕಲಾಸೇವಕನ ಅಡಿಯಲ್ಲಿ ಮತ್ತಷ್ಟು ಪ್ರತಿಭೆಗಳು ಚಿಗುರಲಿ.ನಾಟಕ ಪ್ರೇಮಿಗಳ ಮನರಂಜಿಸಲು “ರಂಜು” ರವರಿಗೆ ಕಲಾಮಾತೆಯ ಆಶೀರ್ವಾದ ಸದಾ ಇರಲಿ. ದೇವರು ಒಳಿತನ್ನು ಕರುಣಿಸಲಿ.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »