TOP STORIES:

FOLLOW US

ಪ್ರತಿಭೆಗಳ ಆನಾವರಣದಲ್ಲಿ ಯುವ ಕಲಾ ಪ್ರತಿಭೆ ಸಂತೋಷ್ ಪೂಜಾರಿ


ಪ್ರತಿಭೆಗಳ ಆನಾವರಣದಲ್ಲಿ ಯುವ ಕಲಾ ಪ್ರತಿಭೆ ಸಂತೋಷ್ ಪೂಜಾರಿ

ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ನೋಡಬಹುದಂತೆ ಹಾಗೆಯೇ ಬದುಕ ಪಯಣದಲ್ಲಿ ಹಿಂತಿರುಗಿ ನೋಡಿದಾಗ ಸಾರ್ಥಕತೆಯ ನಿಟ್ಟುಸಿರು ಬರಬೇಕಂತೆ” ಇಂತಹ ಸಾರ್ಥಕತೆಯತ್ತ ಕಲಾ ಜೇವನದೊಂದಿಗೆ ಪಯಣಿಸುತ್ತಿರುವ ನಗುಮೊಗದ ಚೆಲುವ, ಶಾರದೆಯೇ ಮೈದೋರಿದಂತಿರುವ ಮಾತಿನ ಮಲ್ಲ, ಪಾದರಸವೇ ನಾಚುವಂತಹ ಚಾಕಚಕ್ಯತೆಯ ಕಲಾಪ್ರತಿಭೆ
ಸಾಮಾನ್ಯರಲ್ಲಿ ಸಾಮಾನ್ಯನಾಗಿ, ಅಸಮಾನ್ಯ ವ್ಯಕ್ತಿತ್ವವಿರುವ ಈತ ಹಲವಾರು ನಾಟಕ ತಂಡದೊಂದಿಗೆ ತನ್ನನ್ನು ತೊಡಗಿಸಿಕೊಂಡವನು.

*ರಮಾನಂದ ಪೂಜಾರಿ* ಮತ್ತು *ಪುಷ್ಪ* ದಂಪತಿಯ ಮಗನಾಗಿ ಜನಿಸಿದ ಸಂತೋಷ್ ಬಾಲ್ಯದಿಂದಲೇ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಪ್ರತಿಭಾನ್ವಿತ. ಹಾಗಂತ ಪಠ್ಯದ ವಿಚಾರಕ್ಕೆ ಎಂದೂ ಅದು ಅಡ್ಡಿಯಾಗಿರಲಿಲ್ಲ. ಅದಕ್ಕೆ ದ್ಯೋತಕ ಎಂಬಂತೆ ಪಿಯುಸಿ ದಿನಗಳಲ್ಲಿ ಉತ್ತಮ ಅಂಕ ಪಡೆದು ಹಿಂದುಳಿದ ವಿದ್ಯಾರ್ಥಿಗಳ ನಿಲಯದ ಪಟ್ಟಿಯಲ್ಲಿ ಜಿಲ್ಲೆಗೆ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ ಖ್ಯಾತಿ ಇವರದು. ಹಾಗೂ ಸ್ನಾತಕೋತ್ತರ ಪದವಿಯನ್ನು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪದವಿಪೂರ್ವ ಮತ್ತು ಪದವಿ ಹಂತದಲ್ಲಿ ಕಾಲೇಜಿನ ‘ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್’ ಅವಾರ್ಡ್ ಪಡೆದವರು.

ಕಲೆಯ ಮೇಲೆ ಹೆಚ್ಚಿನ ಒಲವು, ಪ್ರೀತಿ ತೋರಿದ ಇವರು ಜನಪದ ನೃತ್ಯ ಪಟುವಾಗಿ, ಜನಪದ ನೃತ್ಯ ತರಬೇತುದಾರನಾಗಿ ಹಾಗೂ ರಂಗಭೂಮಿ ಕಲಾವಿದನಾಗಿ ಹಲವರು ನಾಟಕಗಳಲ್ಲಿ ಅಭಿನಯಸಿ ಕೀರ್ತಿಗೆ ಪಾತ್ರರದರು. ಬಂಟ್ವಾಳದಲ್ಲಿ ನಡೆಯುವ ಕಲಾಸಿಂಚನದಲ್ಲಿ ಎರಡು ವರ್ಷ ಇವರ ಮುಂದಾಳತ್ವದ ತಂಡ ಜನಪದ ನೃತ್ಯವನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ರಾಷ್ಟ್ರೀಯ ಸೇವಾ ಯೋಜನೆಯ ರಾಷ್ಟ್ರ ಮಟ್ಟದ ಶಿಬಿರದಲ್ಲಿ ಭಾಗವಹಿಸಿ ಜನಪದ ನೃತ್ಯದ ಸಿಂಚನವನ್ನು ಹೊರರಾಜ್ಯಕ್ಕೂ ಪರಿಚಯಿಸಿದ ಕೀರ್ತಿ ಇವರದ್ದು. ‘ಕರ್ನಾಟಕ ವೈಭವ ‘ಎಂಬ ಹೆಸರಿನ ಮೂಲಕ ಕರ್ನಾಟಕದ ನೃತ್ಯ ಪ್ರಕಾರ, ಜನಪದ ಕಲೆ ಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ಒಂದು ತಂಡ ಕಟ್ಟಿ ತರಬೇತಿ ನೀಡಿ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.ಇವರು ರಚಿಸಿ ನಿರ್ದೇಶಿಸಿ ಅಭಿನಯಿಸಿದ ಪ್ರಹಸನ ಹಲವಾರು ಕಡೆ ಪ್ರಥಮ ಸ್ಥಾನ ಗಳಿಸಿರುತ್ತದೆ. ಹಲವು ಬೀದಿ ನಾಟಕಗಳ ಮೂಲಕವೂ ನಿರಂತರವಾಗಿ ಜನರ ಮನಸ್ಸಿನಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.

ರಾಜ್ಯ, ರಾಷ್ಟ್ರಮಟ್ಟದ ಜಾನಪದ, ಸಂಗೀತ ಹಾಗು ಕಲೆಯಲ್ಲಿ ಹಲವು ಪ್ರಶಸ್ತಿಗಳನ್ನು ಪಡೆಯುತ ಮುನ್ನೆಡೆಯುತಿರುವ, ಈ ಯುವ ಪ್ರತಿಭೆಯ ಸಾಧನೆಯನ್ನು ಗುರುತಿಸಿ. ರಾಷ್ಟ್ರ ಮಟ್ಟದ ಪ್ರತಿಭಾ ಪ್ರಶಸ್ತಿ ಪುರಸ್ಕಾರ “ಸಿರಿಗನ್ನಡ ರಾಷ್ಟ್ರೀಯ ಕಲಾ ರತ್ನ” ರಾಷ್ಟ್ರಮಟ್ಟದ ಶ್ರೇಷ್ಟ ಪ್ರಶಸ್ತಿ ನೀಡಿ ಗೌರವಿಸಿದೆ
ಕಲಾಕ್ಷೇತ್ರ ಇವರನ್ನು ಕನ್ನಡ ನಾಡು,ನುಡಿ,ಸೇವೆ,ಶಿಕ್ಷಣ/ಭರತನಾಟ್ಯ,ಸಾಹಿತ್ಯ,ಕಲಾವಿದರ ಮತ್ತು ಸಾಹಿತ್ಯ ಶಿಕ್ಷಣ ಸೇವಾ ಹಾಗೂ ಬಾಲ್ಯದ ಕಲಾ ಚಿಂತನೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿಕೊಂಡಿದ್ದಾರೆ
ಪ್ರಸ್ತುತ ಇವರು ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಾರ್ಯ ನಿರ್ವಶಿಸುತಿದ್ದಾರೆ,
ಅನೇಕ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಇವರು ಬೆಂಗಳೂರು ಯುವವಾಹಿನಿ ಕಲೆ ಮತ್ತು ಸಾಹಿತ್ಯ ನಿರ್ದೇಶಕರು ಎನ್ನುದಕ್ಕೆ ಹೆಮ್ಮೆಯಾಗುತಿದೆ.
ಈ ಅಪೂರ್ವ ಕಲಾವಿದನಿಗೆ ಸಹೃದಯಿ ಕಲಾಭಿಮಾನಿಗಳ ಆಶೀರ್ವಾದ ಪ್ರೀತಿ ಸದಾ ಇರಲಿ…ಕಲಾ ಮಾತೆ ಶಾರದೆ ಈತನ ಪ್ರತಿಭೆಯನ್ನು ದಿಗಂತಕ್ಕೇರಿಸಲಿ ಇವರು ಕಲಾ ಕ್ಷೇತ್ರದಲ್ಲಿ ಇನ್ನಷ್ಟ್ಟು ಸಾಧನೆಗಳನ್ನು ಮಾಡಲಿ ಎಂದು ಯುವವಾಹಿನಿ ಬೆಂಗಳೂರು ಘಟಕವು ಹಾರೈಸುತ್ತದೆ.

ಪ್ರಚಾರ ನಿರ್ದೇಶಕರು
ಯುವವಾಹಿನಿ (ರಿ) ಬೆಂಗಳೂರು


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »