TOP STORIES:

ಅಕ್ಕರೆಯ ಮಾತುಗಳು, ಸಕ್ಕರೆಯ ಮನಸುಳ್ಳ ಮಿಂಚುಳ್ಳಿ ನಟಿ ನವ್ಯಾ ಪೂಜಾರಿ


ಜೀವನವೆ ನಾಟಕ ರಂಗ. ನಾವೆಲ್ಲಾ ಸೃಷ್ಟಿಯ ಸೂತ್ರದ ಬೊಂಬೆಗಳು. ಸುಖ ದುಃಖಗಳ ಪರೀಕ್ಷೆಯ ನಡುವೆ ನಮ್ಮೆಲ್ಲರ ಮುಖದಲ್ಲಿ ಮಂದಹಾಸವ ಬರಿಸಲು ನಮ್ಮೆಲ್ಲರನ್ನು ಮನೊರಂಜಿಸಲು ತೆರೆಯ‌ ಮೇಲೆ ಬಣ್ಣ ಹಚ್ಚಿ ನಾಟಕ, ಸಿನಿಮಾ ರಂಗದಲ್ಲಿ ಜನರ ಮನಸೆಳೆವರು ರಂಗದ ಕಲಾವಿದರು. ಅಂತಹ ಸಿನಿಮಾ ರಂಗದಲ್ಲಿ ನಮ್ಮ ಬಿರುವ ಕುಲಕೆ ಹೆಮ್ಮೆಯ ಗುರುತಾಗಿ ಸದ್ದಿಲ್ಲದೆ ಮಿಂಚುತ್ತಿರುವ ನಗುಮುಖದ ಚೆಲುವೆ ನವ್ಯ ಪೂಜಾರಿ. ಮುಖದಲ್ಲಿ ಚೈತನ್ಯದ ಚಿಲುಮೆ, ಭೂಲೋಕದ ಅಪ್ಸರೆ, ನಕ್ಕರೆ ಮಲ್ಲಿಗೆ ಅರಳಿದಂತೆ, ಅಕ್ಕರೆಯ ಮಾತುಗಳು, ಸಕ್ಕರೆಯ ಮನಸುಳ್ಳ ಮಿಂಚುಳ್ಳಿ ನವ್ಯಾ ಪೂಜಾರಿ.

ಯಾದವ ಪೂಜಾರಿ ಹಾಗೂ ಸುಮಿತರವರ ಇಬ್ಬರು ಮಕ್ಕಳಲ್ಲಿ ಮೊದಲ ಮಗಳು ನವ್ಯಾ ಹಾಗೂ ಇವರ ತಂಗಿಯ ಹೆಸರು ಕಾವ್ಯಾ.ಈ ಸುಂದರ ಸಂಸಾರ ಪ್ರಸ್ತುತ ಸುರತ್ಕಲ್ ನಲ್ಲಿ ವಾಸವಾಗಿದ್ದಾರೆ. N.I.TK ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ವಿಧ್ಯಾಭ್ಯಾಸ ಹಾಗೂ ನಿಟ್ಟೆ ಕರ್ನಾಟಕ ಕಾಲೇಜ್ ನಲ್ಲಿ Computer Science ವಿಭಾಗದಲ್ಲಿ ಕಲಿತು ಮೊದಲಿಗೆ ಒಂದು ಕಚೇರಿಯಲ್ಲಿ ವೃತ್ತಯನ್ನು ಮಾಡುತ್ತಿದ್ದ ಅನುಭವ ಇವರದ್ದು. ತದನಂತರ ಉಮಿಲ್ ಚಲನಚಿತ್ರದ ಆಡಿಷನ್ ನಲ್ಲಿ ಆಯ್ಕೆಯಾಗಿ ಸಿನೆಮಾ ರಂಗಕ್ಕೆ ಕಾಲಿಟ್ಟರು.

ಸಿನಿಮಾ ಕ್ಷೆತ್ರವು ಇವರಿಗೆ ಬಯಸದೆ ಬಂದ ಭಾಗ್ಯವಾಯಿತು. ಆ ಕಲೆಯ ಕಳೆ ಇವರ ಮೊಗದಲ್ಲಿ ಹೊಳೆಯುತ್ತಿತ್ತು. ಅದೇ ಕಾರಣ ಇವರಿಗೆ ಮೊದಲು ತುಳು ಸಿನೆಮಾ ಉಮಿಲ್ ಚಿತ್ರದಲ್ಲಿ ನಟಿಸಲು ಅವಕಾಶ ದೊರಕಿತು. ಸಣ್ಣ ವಯಸ್ಸಿನಲ್ಲೇ ಸಿನೆಮಾ ರಂಗದ ಪುಟ್ಟ ಕನಸು ಬೆಳೆಸಿದ್ದರೂ ಕೂಡ ವಿದ್ಯಾಭ್ಯಾಸಕ್ಕೋಸ್ಕರ ಆ ಕನಸನ್ನೇ ಮರೆತ ಇವರು ಮುಂದೆ ಜೀವನದಲ್ಲಿ ತಾನೊಬ್ಬಳು ಸಿನಮಾ ನಟಿ ಆಗುವೆ ಅಂತಹ ಅವಕಾಶ ಸಿಗಬಹುದು ಎಂದು ಅಂದುಕೊಂಡಿರಲಿಲ್ಲ. ಕಾಲದ ಮಹಿಮೆ ಯಾರು ಅರಿಯರು ಸಾಮರ್ಥ್ಯವಿದ್ದರೆ ಯಾವುದೇ ಕ್ಷೇತ್ರದಲ್ಲಿ ಅನುಭವ ರಹಿತ ಮಿಂಚಬಹುದು. ಹಾಗೇ ಇವರ ಕಥೆ ತನಗೆ ಬಯಸದೆ ಬಂದ ಅವಕಾಶವಾದರೂ ಮೊದಲ ಸಿನೆಮಾದಲ್ಲೇ ಜನರ ಮನಮುಟ್ಟಿ ಒಬ್ಬ ಅದ್ಭುತ ಕಲಾವಿದೆಯಾಗಿ ಮುಂದೆ ಈ ಕ್ಷೇತ್ರದಲ್ಲಿ ನಿರ್ದಿಷ್ಟವಾದ ಗುರಿಯೊಂದನ್ನು ಇಟ್ಟುಕೊಂಡು ನವನವೀನತೆಯಿಂದ ಭವಿಷ್ಯದ ಬಾಗಿಲ ತರೆದರು‌. ಸಿನೆಮಾ ಕ್ಷೇತ್ರಕ್ಕೆ ಕಾಲಿಡುವ ಮೊದಲು ಕಲಿಕೆಯ ಸಂದರ್ಭದಲ್ಲಿ ಇವರು ನೃತ್ಯ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಅಪಾರ ಒಲವು ಹೊಂದಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿದ ಉತ್ಸಾಹಿ ವಿಧ್ಯಾರ್ಥಿಯಾಗಿದ್ದರು.

ಉಮಿಲ್ ಇವರ ಮೊದಲ ತುಳು ಚಲನಚಿತ್ರವಾಗಿದ್ದು.ರಂಜಿತ್ ಬಜ್ಪೆರವರ ನಿರ್ದೇಶನದಲ್ಲಿ ಡಿಸೆಂಬರ್ ೨೦೧೮ ರಂದು ಬಿಡುಗಡೆಯಾಗಿದ್ದು. ಹೊಸ ಪರಿಚಯದ ಹೆಜ್ಜೆಯ ಗುರುತು ಸದ್ದಿಲ್ಲದೆ ಸಿನೆಮಾ ರಂಗದಲ್ಲಿ ಸುದ್ಧಿ ಮಾಡ ತೊಡಗಿತು.

ತದನಂತರ ಇವರು ತ್ರಿಬಲ್ ತಲಾಕ್ ಎಂಬ ಆರ್ಟ್ ಮೂವಿಯಲ್ಲಿ ನಟಿಸಿದರು. ಇದು ಇವರ ಮೊದಲ ಆರ್ಟ್ ಮೂವಿಯಾಗಿದೆ. ಈ ಚಲನಚಿತ್ರವು ಹೊಸ ತಂಡದ ಹೊಸ ಪ್ರಯತ್ನದಲ್ಲಿ ಲಂಡನ್ ನಲ್ಲಿ ಬಿಡುಗಡೆಯಾಗಿದೆ. ಚಲನಚಿತ್ರವು ವಿಭಿನ್ನವಾಗಿದ್ದು ಬ್ಯಾರಿ ಸಂಸ್ಕೃತಿಯ ಕುರಿತಾಗಿತ್ತು. ಇದರಲ್ಲಿ ನವ್ಯಾರವರು ಒಬ್ಬ ಮುಸ್ಲಿಂ ಮಹಿಳೆಯಾಗಿ ಪಾತ್ರ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿರುವರು. ದ್ವಿರುಕ್ತಿ ಎಂಬ ಕನ್ನಡ ಚಲನಚಿತ್ರದಲ್ಲಿ ಪಾತ್ರವಹಿಸಿದ್ದು ಇದುವರೆಗಿನ ಇವರ ಮೊದಲ ಕನ್ನಡ ಚಲನಚಿತ್ರವಾಗಿದೆ.

ಸುಂದರ ಕನಸಿನೊಂದಿಗೆ ಇತ್ತೀಚಿಗೆ ತೆರೆಕಂಡ ವಿಶೇಷ ಚಲನಚಿತ್ರ ಕನಸು ಮಾರಾಟಕ್ಕಿದೆ ಎಂಬ ಸಿನೆಮಾದಲ್ಲಿಯೂ ಇವರು ಅಭಿನಯಿಸಿರು. ಚಿತ್ತದಲ್ಲಿರುವ ಉದಯೋನ್ಮುಖ ಕಲಾವಿದರ ನಡುವೆ ತಾನು ಒಬ್ಬ ಯುವ ನಟಿಯಾಗಿ ಪಾತ್ರವಹಿಸಿರುವರು.

ಸಿನೆಮಾ ರಂಗದಲ್ಲಿ ಮುಂದುವರಿಯಲು ಇವರಿಗೆ ಇವರ ಮನೆಯವರ ಅಪಾರ ಪ್ರೋತ್ಸಾಹವಿದ್ದು‌. ಇದೇ ಇವರಿಗೆ ಮುನ್ನಡೆಯಲು ದೀಕ್ಷೆ ಎನ್ನುತ್ತಾರೆ ನವ್ಯಾ ಪೂಜಾರಿಯವರು.

ಎರಡೆಕ್ರೆ, ಇಂಗ್ಲಿಷ್, ಬೋಜರಾಜ್ ಎಂ.ಬಿ.ಬಿ.ಎಸ್, ಗಬ್ಬರ್ ಸಿಂಗ್, ತುಳುನಾಡ ಮಡಿಲು, ಬಿಂದಾಸ್, ಗೂಗ್ಲಿ ಮೊದಲಾದ ಸಿನೆಮಾಗಳು ಬಿಡುಗಡೆಯಾಗಲಿದ್ದು ಈ ಉದಯೋನ್ಮುಖ ನಟಿಗೆ ಪ್ರೋತ್ಸಾಹದ ಜೊತೆಗೆ ಮತ್ತಷ್ಟು ಅವಕಾಶಗಳು ದೊರಕಲಿ. ಮುಖ್ಯವಾಗಿ ತುಳು ರಂಗದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಆದಷ್ಟು ತುಳು ಸಿನೆಮಾಗಳಲ್ಲಿ ನಟಿಸಲು ಬಯಸುತ್ತಾರೆ. ಹುಟ್ಟಿದ ಮಣ್ಣಿನ ಮೇಲಿನ ಅಭಿಮಾನವೇ ಇವರನ್ನು ಎತ್ತರಕ್ಕೆ ಬೆಳೆಸಲು ಕಾರಣವಾಗಬಹುದು. ಹಾಗೆಯೇ ತುಳು, ಕನ್ನಡ ಇತರ ಭಾಷಾ ರಂಗದಲ್ಲೂ ಅವಕಾಶಗಳು ನಿಮ್ಮ ಮುಡಿಗೇರಲಿ. ನಟನೆಯ ಹಾದಿಯಲ್ಲಿ ಯಶಸ್ವಿ ನಟಿಯಾಗಿ ಮಿಂಚುವ ತೌಳವ ಸಿರಿಗೆ ಸವಿನಯದ ಶುಭಾಶಯಗಳು.

✍️ ತೃಪ್ತಿ.ಜಿ.ಕುಂಪಲ


Related Posts

ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಪುನಾರಾಯ್ಕೆ


Share         ಕುಂದಾಪುರ, ಮೇ 24: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ರವಿವಾರ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಜರಗಿತು. ಕುಂದಾಪುರ ಬಿಲ್ಲವ ಸಮಾಜ ಸೇವಾ


Read More »

ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನಮ್ಮ ಸಮಾಜದ ಹೆಮ್ಮೆ ಎಸಿಪಿ ಶ್ರೀ ಎಸ್. ಮಹೇಶ್ ಕುಮಾರ್


Share         ಶ್ರೀ ಎಸ್. ಮಹೇಶ್ ಕುಮಾರ್ ಅವರು ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ “ಜನಸ್ನೇಹಿ ಪೊಲೀಸ್” ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಅವರ ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. 2012ರಲ್ಲಿ


Read More »

10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಲೀಡಿಂಗ್ ಬ್ಯಾಂಕ್ ಅವಾರ್ಡ್.


Share         ಪುಣೆಯ ಕೊರೆಗಾಂವ್ ಪಾರ್ಕ್‌ನ ಹೋಟೆಲ್ ವೆಸ್ಟಿನ್‌ನಲ್ಲಿ ನಡೆದ 10ನೇ ಅಖಿಲ ಭಾರತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಶೃಂಗಸಭೆಯಲ್ಲಿ ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ “ಲೀಡಿಂಗ್ ಬ್ಯಾಂಕ್ ಅವಾರ್ಡ್” (Leading Bank Award) ನೀಡಿ ಗೌರವಿಸಲಾಯಿತು.


Read More »

ಕುದ್ರೋಳಿ ಗೋಕರ್ಣ ಕ್ಷೇತ್ರ ಅಭಿವೃದ್ಧಿ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪದ್ಮರಾಜ್ ಆರ್. ಸ್ಪಷ್ಟನೆ


Share         ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ನಿರ್ವಹಣೆಗೆ ಪ್ರಸ್ತುತ ಇರುವ ಸಮಿತಿಯ ಹೊರತಾಗಿ ಯಾವುದೇ ಹೊಸ ಸಮಿತಿ ರಚನೆಯಾಗಿಲ್ಲ ಎಂದು ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಶನಿವಾರ ಇಲ್ಲಿ ತಿಳಿಸಿದರು. ಕ್ಷೇತ್ರದ ಅಭಿವೃದ್ಧಿ


Read More »

ಶೈಕ್ಷಣಿಕ ಸಾಧನೆಯಲ್ಲೂ ‘ಸೇಮ್ ಟು ಸೇಮ್’: ಕುಂದಾಪುರದ ಅವಳಿ ಸಹೋದರಿಯರ SSLC ಪವಾಡ!


Share         ​ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ


Read More »

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು – ₹67 ಕೋಟಿ ವೆಚ್ಚದ ಭೂಗತ ಕೇಬಲ್ ಯೋಜನೆಗೆ ಮಂಜೂರಾತಿ


Share         ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವದ ಮೆರವಣಿಗೆಗೆ ದಶಕಗಳಿಂದ ಎದುರಾಗಿದ್ದ ತಾಂತ್ರಿಕ ಸವಾಲಿಗೆ ಈಗ ಶಾಶ್ವತ ಪರಿಹಾರ ಸಿಕ್ಕಂತಾಗಿದೆ. ಕುದ್ರೋಳಿ ಶ್ರೀ ಗೋಕರ್ನಾಥ ಕ್ಷೇತ್ರದ ಆಡಳಿತ ಮಂಡಳಿಯ ಸುದೀರ್ಘ ಪ್ರಯತ್ನದ ಫಲವಾಗಿ, ಮೆರವಣಿಗೆ ಮಾರ್ಗದಲ್ಲಿ


Read More »