TOP STORIES:

FOLLOW US

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸದ್ದಿಲ್ಲದೆ ಮಿಂಚುತ್ತಿರುವ ಕರಾವಳಿಯ ಬಾಲನಟ V.J ಅಮನ್ ಎಸ್ ಕರ್ಕೆರ


ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸದ್ದಿಲ್ಲದೆ ಮಿಂಚುತ್ತಿರುವ ಕರಾವಳಿಯ ಬಾಲನಟ V.J ಅಮನ್ ಎಸ್ ಕರ್ಕೆರ

ದಿ ನ್ಯೂಯಾರ್ಕ್ ನಲ್ಲಿ ನಡೆಯುವ ಫಿಲಂ ಫೆಸ್ಟಿವಲ್ ಗೆ ಇಂಡಿಯನ್ ವತಿಯಿಂದ ಆಯ್ಕೆಯಾದ ಎಲ್ಲಾ ಭಾಷೆಗಳ ಚಲನಚಿತ್ರಗಳನಡುವೆ ನೀಲಿಹಕ್ಕಿ ಶಿರಸಿ ಭಾಷೆ ಚಿತ್ರ ಕೂಡ ಆಯ್ಕೆಯಾಗಿರುತ್ತದೆ.ನೀಲಿಹಕ್ಕಿಚಿತ್ರದಲ್ಲಿ ಸಿದ್ದಾರ್ಥ ಎಂಬ ಹೆಸರಿನ ಪಾತ್ರದಾರಿಯಾಗಿ  ಮಂಗಳೂರಿನ ಅಮನ್. ಎಸ್. ಕರ್ಕೇರಾ ಅವರು ಬಾಲನಟನಾಗಿ ಬಣ್ಣಹಚ್ಚಿ  ಅದರಲ್ಲೂ ಬೆಸ್ಟ್  ಚೈಲ್ಡ್ ಆರ್ಟಿಸ್ಟ್ ಗೆ ನೊಮಿನೇಟ್ಆಗಿರುವುದು ಭಾರತ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸದ್ದಿಲ್ಲದೆ ಮಿಂಚುತ್ತಿದ್ದರೂ ಇನ್ನೂತೆರಮರೆಯಲ್ಲಿರುವ ಕರಾವಳಿಯ ನವಿರಾದ ಕೇಶ ರಾಶಿಯ ಹಾಲುಗೆನ್ನೆ ಸವಿ ಅಕ್ಕರೆಯ ಮುದ್ದುಮುಖದಸೌಂದರ್ಯಗಣಿ,ತುಳುನಾಡಿನ ಬಹುಮುಖ ಬಾಲಪ್ರತಿಭೆ,ಬಾಲನಟ, V.J ಅಮನ್.ಎಸ್.ಕರ್ಕೇರ ಅವರ ಸಾಧನೆಯಯಶೋಗಾಥೆ

ನೀರಿಗಿಂತ ತಿಳಿಯಾದದ್ದುಜ್ಞಾನ ಪ್ರತಿಭೆ ಎನ್ನುವುದು ದೇವರು ಕೊಟ್ಟ ವರ,ದೇವರ ಅಪ್ಪಣೆ ವಿನಹಃ ಹುಲ್ಲು ಕಡ್ಡಿಯೂಅಲುಗಾಡದು. ಸಾಧನೆ ಎಂಬುವುದು ಸಾಗರವಿದ್ದಂತೆ,ಬಗೆದಷ್ಟು ಮುಗಿಯದು.ಮನಸ್ಸಿದ್ದರೆ ಮಾರ್ಗವೆಂಬಂತೆ ಸಾಧನೆಫಲಪ್ರದವಾಗಲು ಗುರು, ನಿರ್ದಿಷ್ಟ ಗುರಿ,ಕಠಿಣ ಪರಿಶ್ರಮ,ಧ್ಯೇಯ,ಮಾರ್ಗದರ್ಶನ ಅತ್ಯಗತ್ಯ.

ಬೆಳೆಯುವ ಸಿರಿಮೊಳಕೆಯಲ್ಲಿ ಎಂಬಂತೆ ಎಳೆ ವಯಸ್ಸಿನಲ್ಲೇ ಜನಮಾನಸದ ಹೃದಯದೀ ಮನಸೂರೆಗೊಂಡ ಪ್ರತಿಭೆಗೆಸರಿಸಾಟಿಯೇ ಇಲ್ಲವೆಂಬಂತೆ ವಿಭಿನ್ನ ಶೈಲಿಯಲ್ಲಿ ಛಾಪು ಮೂಡಿಸಿಹ ಕಿನ್ನರಲೋಕದ ಕಿನ್ನರಿ,ಚೈತನ್ಯದ ಚಿಲುಮೆ, ಯಶಸ್ವಿನಿರೂಪಕ,ತ್ರಿಭಾಷಾ ಬಾಲನಟ, ನೃತ್ಯಗಾರ, ಸಂಗೀತಗಾರ, ಚಿತ್ರಕಲೆಗಾರ,

ರೂಪದರ್ಶಿ, ಈಜುಪಟು, ಭಾಷಣಗಾರ, ಸ್ವರ ಹಿನ್ನಲೆಗಾರ, ಕ್ರೀಡಾಪಟು, ಸಂಗೀತವಾದಕ, ಅಂತರ್ರಾಷ್ಟ್ರೀಯ ಮಕ್ಕಳ ಚಲನಚಿತ್ರದಬಾಲನಟನೆ ಪ್ರಶಸ್ತಿಗೆ ಭಾಜನರಾದ ಸ್ಪರ್ಧಾಳು,ತುಳುನಾಡ ಹೆಮ್ಮೆಯ ಸಾಧಕ, ಬಹುಮುಖ ಅರಳು ಪ್ರತಿಭೆ ವಿ ಜೆ ಅಮನ್ಎಸ್_ಕರ್ಕೇರ.

ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಮೂಡುಶೆಡ್ಡೆ ನಿವಾಸಿಗಳಾದ ಶ್ರೀ ಶ್ರೀನಿವಾಸ ಅಮೀನ್ ಮತ್ತು ಶ್ರೀಮತಿಬಬಿತಾ.ಎಸ್.ಕರ್ಕೇರ ದಂಪತಿಗಳ ಜೇಷ್ಠ ಸುಪುತ್ರರಾದ ಮಾಸ್ಟರ್ ಅಮನ್.ಎಸ್.ಕರ್ಕೇರರು 2008 ಮೇ 24ರಂದುಜನಿಸಿದ್ದು,ಇದೀಗ ಹದಿಮೂರರ ಹರೆಯ.ಇವರು ಪ್ರಸ್ತುತ ಪ್ರಿಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ ಜಪ್ಪಿನಮೊಗರಿನಲ್ಲಿ ಏಳನೇತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು,ಅಮನ್ ಕಲಿಕೆ,ಆಟ,ಪಾಠದಲ್ಲೂ ಸದಾ ಮುಂದಿದ್ದು ಎರಡನೇ ಕ್ಲಾಸ್ ನಿಂದ ಹಿಡಿದುಸತತವಾಗಿ ಪ್ರತಿ ಆರು ವರ್ಷಗಳಿಂದ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿಯ ಜೊತೆಗೆ ನಗದನ್ನು ತನ್ನ ಮುಡಿಗೇರಿಸಿಕೊಳ್ಳುವುದರಜೊತೆಗೆ ಜನರಲ್ ಪ್ರೋಪೆಕೆಸ್ಸಿ ಅಂದರೆ ನಾಲ್ಕು ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದರೆ ಮಾತ್ರ ಸ್ಥಾನಕ್ಕೆ ಅರ್ಹರಾಗುತ್ತಾರೆ. ಇವರಇಂತಹ ಅಪೂರ್ವ ಸಾಧನೆಯನ್ನು ಗಮನಿಸಿ ಸನ್ಮಾರ್ಗ ಟಿವಿ ಚಾನೆಲ್ ನವರು ಪ್ರಿಸ್ಟೀಜ್ ಶಾಲೆಗೆ ಬಂದು ಇವರನ್ನುಸಂದರ್ಶಿಸಿರುವುದು ಶ್ಲಾಘನೀಯ.

ವಿ. ಜೆ. ಅಮನ್. ಎಸ್. ಕರ್ಕೇರ ನಿರೂಪಣೆಯಲ್ಲಿ ಖ್ಯಾತ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷರು  ಸನ್ಮಾನ ಶ್ರೀದಯಾನಂದ್ ಕತ್ತಲ್ ಸಾರ್# ಅವರ ಮುದ್ದಿನ ಶಿಷ್ಯನಾಗಿದ್ದು,ಇವರ ಪ್ರಜ್ವಲ ಭವಿಷ್ಯಕ್ಕೆ ಬೆನ್ನಲುಬಾಗಿ ದಾರಿದೀಪವಾಗಿರುತ್ತಾರೆ. ಅಮನ್ ನಿರೂಪಣೆ ಮಾಡುತ್ತಿದ್ದರೆ ಹರಳು ಹುರಿದಂತೆ ನೆರೆದ ಜನಸ್ತೋಮವನ್ನು ಕ್ಷಣಾರ್ಧದಲ್ಲಿ ತನ್ನೆಡೆಗೆ ಸೆಳೆದುಕೊಂಡುಮೂಕವಿಸ್ಮಿತರನ್ನಾಗಿಸುವ ಉದಯ್ಯೋನ್ಮುಖ ಅನನ್ಯ ಪ್ರತಿಭೆ.ಇವರು ಮೊಂಟೆಸ್ಸೆರಿ ತರಗತಿಯಿಂದಲೇ ಸರಾಗವಾಗಿ ನಿರೂಪಣೆಗೈದಅಧ್ಭುತ ಕಲೆಗಾರ.ನಮ್ಮ ಟಿವಿ ಸ್ಥಳೀಯ ವಾಹಿನಿಯಲ್ಲಿ ನಮ್ಮಶುಭಾಶಯ ನೇರಪ್ರಸಾರ ಕಾರ್ಯಕ್ರಮ ಬೆಳಿಗ್ಗೆ 9 ರಿಂದ 10 ಘಂಟೆವರೆಗೆ ನಡೆಸಿಕೊಡುವ ಪೋರ.ಮಾತಿನ ಮೋಡಿಯಲ್ಲಿ ಮಂತ್ರ ಮುಗ್ದರನ್ನಾಗಿಸಿ ತನ್ನೆಡೆಗೆ ಅವೆಷ್ಟೋ ಅಭಿಮಾನಿಗಳನ್ನುಸೆಳೆದುಕೊಂಡ ಪ್ರತಿಭಾನ್ವಿತ.ಇವರು ಗುರುಹಿರಿಯರಿಗೆ ಗೌರವ ಕೊಟ್ಟು ಮಾತನಾಡಿಸುವುದರ ಜೊತೆಗೆ ಉತ್ತಮ ಸಂಸ್ಕಾರ,ಸದ್ಗುಣ, ಸದಾಚಾರ ಪಾಲಿಸುವ ಬಾಲಕ. ಬೆಂಗಳೂರಿನ ಅರಳು ಟಿವಿ ವಾಹಿನಿಯಲ್ಲಿ ಮುಖ್ಯ ನಿರೂಪಣೆಗೆ ಆಯ್ಕೆ ಆದ ಚಿತ್ತಚೋರ. ದಯಾನಂದ್ ಕತ್ತಲ್ ಸಾರ್ ಅವರು ಗುರುವಾಗಿ ಸದಾ ಶಿಷ್ಯನ ಏಳಿಗೆಗೆ ಪೂರಕವಾಗಿ,ನಿತ್ಯವೂ ಸುಜ್ಞಾನದ ಹಾದಿಗೆಆಧಾರಸ್ತಂಭವೆಂಬಂತೆ,ಶಿಷ್ಯನ ಅದೆಷ್ಟೋ ನಿರೂಪಣೆಗೆ, ಭಾಷಣಕ್ಕೆ ವಿಷಯವನ್ನು ಬರೆದುಕೊಟ್ಟು ಬಹುಮಾನ ಪಡೆಯುವಲ್ಲಿಶ್ರಮವಹಿಸಿದವರು. ಅದರಲ್ಲೂ ಇವರು ಭಾರತದ ಪ್ರಧಾನಿ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿ ಹಾಗೇ ತುಳುನಾಡು ವಿಷಯದಕುರಿತು ಮಾಡಿದ ಸಂಭಾಷಣೆ ವಿಡಿಯೋ ಬಲು ದೊಡ್ಡ ಮಟ್ಟಕ್ಕೆ ವೈರಲ್ ಮತ್ತು ಶೇರ್ ಆಗಿರುವ ಸಾರ್ಥಕತೆ ಇವರದು. ಮುಗ್ದಮನಸ್ಸುಗಳ ಮಾತು ಹೀಗೆ ನೂರಕ್ಕಿಂತಲೂ ಹೆಚ್ಚು ವಿಭಿನ್ನ ಪರಿಕಲ್ಪನೆಗಳ ವಿಡಿಯೋವನ್ನು ಮಾಡಿರುತ್ತಾರೆ,ಅದಲ್ಲದೆ ಇವರದೇಹೆಸರಿನ ಯೂಟ್ಯೂಬ್ ಚಾನೆಲ್ ಮುಖಾಂತರವೂ ತನ್ನ ವಾಕ್ ಚಾತುರ್ಯತೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿ ಮೆಚ್ಚುಗೆಗಳಿಸಿರುತ್ತಾರೆ. ಇಂಡಿಯಾ ಗಾಟ್  ಟ್ಯಾಲೆಂಟ್ ಎಂಬ ಮುಂಬೈನ ಕಲರ್ಸ್ ಟಿವಿ ಚಾನೆಲ್ ನವರು ಆಯೋಜಿಸಿರುವಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ಅಮೋಘ ನೃತ್ಯಗಾರ, ಡಾನ್ಸ್ ಕರ್ನಾಟಕ ಡಾನ್ಸ್ ಕನ್ನಡ ಚಾನೆಲ್ ಆಯ್ಕೆ ಸುತ್ತಿನಲ್ಲಿಭಾಗವಹಿಸಿರುವರು.ಹಾಗೇಭರತನಾಟ್ಯ ನೃತ್ಯವನ್ನು ಕರಗತ ಗೊಳಿಸಿಹರು.

ರಾಜ್ಯ ಮತ್ತು ರಾಷ್ಟ್ರಮಟ್ಟದ ಕರಾಟೆ ಟೂರ್ನ್ ಮೆಂಟ್ ನಲ್ಲಿ ಭಾಗವಹಿಸಿ ಕಂಚು ಗೆದ್ದಿರುವ ಹೆಮ್ಮೆಯಕರಾಟೆಪಟು.ಇವರುಚಿತ್ರಕಲೆಗಾರನಾಗಿದ್ದು, ಚಿತ್ರ ಪರೀಕ್ಷೆಯಲ್ಲೂ ಬಹುಮಾನ ಗಳಿಸಿದ ಹೆಗ್ಗಳಿಕೆ ಇವರದು. ಸಂಗೀತದ ಸುಸ್ವರಪ್ರತಿಭೆಯಾಗಿದ್ದು,ತರಬೇತಿಯಿಲ್ಲದೇ ಸಂಗೀತ ಸಾಧನವಾದ ಕೀಬೋರ್ಡ್ ಹಾಗೇ ಡ್ರಮ್ಸ್ ನುಡಿಸುವುದರಲ್ಲೂ ಚತುರರು.

ನಂತೂರಿನ ಸಂದೇಶ ರೇಡಿಯೋವೊಂದರಲ್ಲಿ  ಅಮ್ಮನಕಥೆ ಮತ್ತು ಶಿಕ್ಷಣ ಎಂಬ ಕಾರ್ಯಕ್ರಮಕ್ಕೆ ಸ್ವರ ಸಂಯೋಜಕರಾಗಿದ್ದು ಹೀಗೆಪರಿಚಿತರಾಗಿ ಮಗನ ಕ್ರಿಯಾಶೀಲ ಚಟುವಟಿಕೆ ಮುಖಾಂತರ ಅಮ್ಮನಿಗೆ ಸ್ಥಳೀಯ ಟಿವಿ ವಾಹಿನಿಯೊಂದರಲ್ಲಿ ನ್ಯೂಸ್ರಿಪೋರ್ಟರ್ ಆಗಿ ಅವಕಾಶ ದೊರಕಿಸಿಕೊಟ್ಟ ಪುಣ್ಯವಂತ ಮಗ. ಇಂತಹ ಪುತ್ರನನ್ನು ಪಡೆಯಲು ನಾವು ಪುಣ್ಯ ಮಾಡಿದ್ದೇವೆಎಂಬುವುದು ಇವರ ಅಮ್ಮನ ಮನದ ಮಾತಾಗಿದೆ. ಹೆತ್ತವರು  ಮಗನ ಸಾಧನೆಗೆ ಸದಾ ಶ್ರಮಿಸುತ್ತಿದ್ದು,ಇವರ ಏಳಿಗೆಗೆವರದಹಸ್ತರಾಗಿರುತ್ತಾರೆ. ಹಾಗೇ ಅಮನ್ ಸಾಧನೆಯ ಬೆನ್ನ ಹಿಂದೆ ಅನೇಕ ಕಾಣದ ಕೈಗಳ ಪರಿಶ್ರಮ ಮತ್ತು ಸಹಕಾರದಿಂದಇಂದಿನ ಯಶಸ್ವಿಗೆ ಕಾರಣಿಕರ್ತವಾಗಿರುತ್ತದೆ ಎಂದು ಹೆತ್ತವರು ಬಾವುಕರಾಗಿ ಸ್ಮರಣೆ ಮಾಡುತ್ತಿರುತ್ತಾರೆ.

V-4 ಚಾನೆಲ್ ನಲ್ಲಿ ಕಾಮಿಡಿ  ಪ್ರೀಮಿಯರ್ ಲೀಗ್ 3ನೇ ಸಂಚಿಕೆವರೆಗೆ ಪಾತ್ರವಹಿಸಿರುವರು ಹಾಗೇನಮ್ಮಟಿವಿ ಚಾನೆಲ್ ಕುಸಲ್ದ್ಒಸರ್ಸ್ಟಾಂಡ್ ಆಫ್ ಕಾಮಿಡಿ ದೊಡ್ಡ ಕಲಾವಿದರ ಜೊತೆ ಪೈನಲ್ ಗೂ ಆಯ್ಕೆಯಾಗಿರುತ್ತಾರೆ. ಸಾಮಾಜಿಕ ಜಾಲತಾಣದ ಟಿಕ್ಟಾಕ್ ನಲ್ಲೂ ಬಲು ಜೋರಾಗಿ ಸದ್ದು ಮಾಡಿರುವ ಇವರು ಪ್ರಸ್ತುತ  ಕೋಡಿಂಗ್ ಕೋರ್ಸ್ ನ್ನು ಆನ್‌ಲೈನ್ ಕ್ಲಾಸ್ ನಲ್ಲಿ ತರಬೇತಿಪಡೆಯುತ್ತಿದ್ದಾರೆ.ಇವರು ರೂಪದರ್ಶಿಯಾಗಿರುವ ನಂದಿನಿ ಕಷಾಯ,ಮಹೇಂದ್ರ ಕಾರ್ ಬೋಲೆರೋ ಹಾಗೇ ಇಮುನೋಆಯುರ್ವೇದಿಕ್ ಜಾಹೀರಾತು ಇಮ್ಯುನಿಟಿ ಪವರ್ ಜಾಸ್ತಿ ಮಾಡುವ ಮದ್ದಿನ ಜಾಹೀರಾತಿನಲ್ಲೂ ಪ್ರಮುಖ ಪಾತ್ರನಿರ್ವಹಿಸಿರುತ್ತಾರೆ.

ಅಮನ್ ತ್ರಿಭಾಷಾ ಬಾಲನಟನಾಗಿದ್ದು,ಪ್ರಥಮವಾಗಿ ಪಾದಾರ್ಪಣೆ ಮಾಡಿದ ತುಳುಚಿತ್ರರಂಗದ  ಪೆಪ್ಪೆರೆರೆ ಪೆರೆರೆರೆ ಎಂಬ ಚಿತ್ರದಮುಖಾಂತರ ಚಿಕ್ಕ ಪಾತ್ರದಲ್ಲಿ ಬಣ್ಣ ಹಚ್ಚಿ,ಮುಂದೆರೂಪಾಂತರ ಶೀರ್ಷಿಕೆಯ ಕನ್ನಡ ಚಲನಚಿತ್ರದಲ್ಲಿ ಪ್ರಮುಖ ಬಾಲನಟನಾಗಿಅಭಿನಯಿಸಿರುವರು.

ಅನಂತರದ ನೀಲಿಹಕ್ಕಿ ಎಂಬ ಶಿರಸಿ ಭಾಷೆಯ ಚಲನಚಿತ್ರದಲ್ಲಿ ಸಿದ್ಧಾರ್ಥ ಎಂಬ ಪಾತ್ರದಾರಿಯಾಗಿ ಮುಖ್ಯ ಭೂಮಿಕೆಯಲ್ಲಿಬಣ್ಣಹಚ್ಚಿರುವರು. ನೀಲಿಹಕ್ಕಿ ಎಂಬ ಶಿರಸಿ ಭಾಷಾ ಚಲನಚಿತ್ರ ದಿ ನ್ಯೂಯಾರ್ಕ್ ನಲ್ಲಿ ನಡೆಯುವಫಿಲಂ ಫೆಸ್ಟಿವಲ್ಗೆ ಇಂಡಿಯನ್ಫಿಲಂವತಿಯಿಂದ ಆಯ್ಕೆಯಾದ ಎಲ್ಲಾ ಭಾಷೆಗಳ ಚಲನಚಿತ್ರಗಳ ನಡುವೆ ನೀಲಿಹಕ್ಕಿ ಶಿರಸಿ ಭಾಷೆಯ  ಚಲನಚಿತ್ರ ಕೂಡ ಆಯ್ಕೆಕಂಡಿತ್ತು.ಇದರಲ್ಲಿ ಅಮನ್.ಎಸ್.ಕರ್ಕೇರಾ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಗೆ ನೊಮಿನೇಟ್ ಆಗಿರುವುದೇ ತುಳುನಾಡಿಗೆ ಹೆಮ್ಮೆಯವಿಷಯ.ಹಾಗೇ ಪ್ರಶಸ್ತಿ ಅವರ ತೆಕ್ಕೆಗೆ ಸೇರಲಿ ಎಂದೂ ನಾವೆಲ್ಲರೂ ಆಶೀರ್ವದಿಸಿ ಪ್ರಾರ್ಥಿಸೋಣ.

ಜಿಷ್ಣು ಎಂಬ ಕನ್ನಡ ಚಲನಚಿತ್ರದಲ್ಲಿ ಬಿಕ್ಷುಕನ ಪಾತ್ರ ಸಪ್ತಸಾಗರದಾಚೆ ಎಲ್ಲೊ ಕನ್ನಡ ಚಲನಚಿತ್ರದಲ್ಲಿ ನಾಯಕನಟ ರಕ್ಷಿತ್ ಶೆಟ್ಟಿಬ್ಯಾನರ್ ಚಿತ್ರದ ನಾಯಕಿ ನಟಿಯ ತಮ್ಮನಾಗಿ ವಿನೋದ್ ಪಾತ್ರ ನಿರ್ವಹಿಸಿರುತ್ತಾರೆ.

ಇವರಿಗೆ ಖ್ಯಾತ ಕನ್ನಡ ಚಲನಚಿತ್ರ ನಟರಾದ ರಕ್ಷಿತ್ ಶೆಟ್ಟಿಯವರ ಸಂಪೂರ್ಣ ಸಹಕಾರದ ಬೆಂಬಲ ಜೊತೆಗೆ ಸಾಮಾಜಿಕಜಾಲತಾಣದಲ್ಲಿ ಪ್ರಚಾರವನ್ನು ನೀಡಿರುತ್ತಾರೆ.ಅಂದರೆ ಅಮನ್ ನಲ್ಲಿ ಇಷ್ಟು ಪ್ರತಿಭೆ,ಕಲಾಚಾತುರ್ಯತೆ ಇದ್ದರೂ ಇನ್ನೂತೆರೆಮರೆಯಲ್ಲಿರುವ ನವಕಲಾವಿದನ ಪರಿಚಯ ಜಗದಲಿ ಅನಾವರಣ ಗೊಳ್ಳಬೇಕೆಂಬುವುದೇ ಇವರ ಆಶಯ.

ಈಗಾಗಲೇ ಸದ್ದಿಲ್ಲದೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಬಾಲತಾರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಆಸಕ್ತಿ ಇದ್ದು ,ರಾಜ್ಯಮಟ್ಟಅಷ್ಟೇ ಅಲ್ಲದೆ ರಾಷ್ಟ್ರಮಟ್ಟದ ಪ್ರಶಸ್ತಿಗೂ ಭಾಜನರಾಗಿರುತ್ತಾರೆ.ಬಳ್ಳಾರಿಯಲ್ಲಿಪ್ರತಿಭಾ ರತ್ನ ಪ್ರಶಸ್ತಿ ಧಾರವಾಡದಲ್ಲಿಕರುನಾಡರಾಜ್ಯೋತ್ಸವ ಪ್ರಶಸ್ತಿ ಮೈಸೂರಿನಲ್ಲಿವಿಶ್ವಮಾನ್ಯ ಕನ್ನಡಿಗರ ಪ್ರಶಸ್ತಿ ಹಾಗೇ ಬೆಂಗಳೂರಿನಲ್ಲಿರಾಷ್ಟ್ರ ಮಟ್ಟದ ಪ್ರಶಸ್ತಿ ಗಳನ್ನುಎಳೆಯ ಹರೆಯದಲ್ಲೇ ಮುಡಿಗೇರಿಸಿಗೊಂಡ ಬಹು ಪ್ರತಿಭಾನ್ವಿತ.ಅಬ್ಬಾಬ್ಬಾ ಪುಟ್ಟ ಪೋರನ ಇಷ್ಟೊಂದು ಪ್ರತಿಭೆ,ಅಧ್ಭುತಸಾಧನೆಗಳನ್ನು ನೋಡುವಾಗಆಡು ಮುಟ್ಟದ ಸೊಪ್ಪಿಲ್ಲ, ಬಾಲಕ ಏರದ ಸಭಾವೇದಿಕೆಗಳಿಲ್ಲ ಎಂದೆನಿಸುತ್ತದೆ.

ಕರಾವಳಿಯ ಅಪರೂಪದ ಮಾಣಿಕ್ಯ,ರಾಷ್ಟೀಯ ದ್ಯೋತಕ,  ಅಸಾಧಾರಣ ಬಾಲಚತುರ, ಹೆಮ್ಮೆಯ ಬಹುಮುಖ ಸಾಧಕ, ತುಳುನಾಡ ಹೊನ್ನ ಶಿಖರ, ಸಾಧನೆಗರಿಯ ಕೀರ್ತಿ ಪತಾಕೆ ದೇಶವಿದೇಶದಲ್ಲೂ ಪಸರಿಸಲಿ,ಎಲೆಮರೆ ಕಾಯಿಯಂತಿರುವ ಅಪ್ಪಟರತ್ನದ ಕಂಪು ಅನಾವರಣವಾಗಲಿ,ಅಮನ್  ನಾಮಧೇಯ ಬಾನಂಗಳದ ಅಷ್ಟದಿಕ್ಕಿನಲ್ಲೂ ರಾರಾಜಿಸಲಿ ಹಾಗೇ ಗುರುಹಿರಿಯರ, ದೈವದೇವರ ಆಶೀರ್ವಾದವಿರಲಿ ವಿ.ಜೆ.  ಅಮನ್ ಎಸ್.ಕರ್ಕೇರನಂತಹ ಅಧ್ಭುತ ಸಾಧಕನಿಗೆ ಬರೆದ ನನ್ನೀ ಕೈ,ಲೇಖನಿಗೂ  ಅಭಿಮಾನ,ಗೌರವದ ಧನ್ಯತಾಭಾವ ಮೂಡಿದ್ದು,  ಬರಹರೂಪದ ಒಲವಿನ ಸವಿಜೇನ ರಸಧಾರೆಯ ಪದಗಳ ಚಿತ್ತಾರಮಾಲೆಅರ್ಪಣೆಯಾಗಲಿ

ಶುಭಾಂಶನಗಳೊಂದಿಗೆ

ಅರ್ಚನಾ ಎಂ ಬಂಗೇರ ಕುಂಪಲ

www.billavaswarriors.com


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »