TOP STORIES:

FOLLOW US

ತುಳುನಾಡಿನ ಸ್ವರಧಾರೆ ‘ರೇಣುಕಾ ಕಣಿಯೂರು’ ಪರಿಚಯ


ಹೆಚ್ಚು ಪೆಟ್ಟು ತಿಂದ ಕಲ್ಲೇ ಶಿಲೆಯಾಗಿ ನಿಂತು ಅಭಿಷೇಕ ಪಡೆಯುವುದುಎಂಬ ಮಾತಿನಂತೆ ಕಷ್ಟ ಸುಖಗಳನ್ನು ಜೀವನದಲ್ಲಿಸಮಾನವಾಗಿ ಸ್ವೀಕರಿಸಿ , ಅವಮಾನ ಎಂಬ ಬೆಂಕಿಯಲ್ಲಿ ಬೆಂದು, ಅಮ್ಮ ಚಾಮುಂಡೇಶ್ವರಿ ನೆಲೆಯಾದ ಪುಣ್ಯ ಭೂಮಿಕಣಿಯೂರಿನಲ್ಲಿ ಜನಿಸಿ ಅದೆಷ್ಟೋ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ,ಪ್ರೇರಣೆಯ ಪದಗಳಿಗೆ ದನಿಯಾಗಿ, ಉದಯೋನ್ಮುಖ ಪ್ರತಿಭೆಗಳಿಗೆ ತನ್ನ ಬರವಣಿಗೆ ಮತ್ತು ಮಧುರವಾದ ಕಂಠದ ಮೂಲಕ ಅವರನ್ನು ಸಮಾಜಕ್ಕೆ ಪರಿಚಯಿಸಿಸ್ವರಮಾಯೆ ಎಂದೆನಿಸಿಕೊಂಡವರೇರೇಣುಕಾ ಕಣಿಯೂರು‘ .

(Copyrights owned by: billavaswarriors.com )

ಬಾಲ್ಯದಿಂದಲೇ ರಂಗಭೂಮಿಯ ಮೇಲಿನ ಒಲವು:

ಕಡುಬಡತನದಲ್ಲಿ ಅರಳಿದ ಪ್ರತಿಭೆ ಮೂಲತಃ ಬಂಟ್ವಾಳ ತಾಲೂಕಿನ ಕಣಿಯೂರಿನವರು. ಇಬ್ಬರು ಸಹೋದರಿಯರನ್ನುಹೊಂದಿರುವ ಇವರು ತನ್ನ ಕುಟುಂಬಕ್ಕೆ ತಾನೇ ಹಿರಿಮಗಳು. ಚಿಕ್ಕದಿನಿಂದಲೇ ನೃತ್ಯದಲ್ಲಿ ಆಸಕ್ತಿ ಹೊಂದಿದ ಇವರುಚಾಮುಂಡೇಶ್ವರಿಕಲಾ ತಂಡವನ್ನು ಕಟ್ಟಿ ಮಕ್ಕಳಿಗೆ ನೃತ್ಯ‌ ಕಲೆಯ ಕಲಿಸುತ್ತಿದ್ದರು. ಚಾಮುಂಡೇಶ್ವರಿ ಭಜನಾ ತಂಡದಲ್ಲೂ ಸದಸ್ಯೆಯಾದರು.ಇವರುಮೊದಲನೇ ಬಾರಿ ಬಣ್ಣ ಹೆಚ್ಚಿದ್ದು ತನ್ನ ನೇ ಕ್ಲಾಸಿನಲ್ಲಿ. ಹೀಗೆ ರಂಗಪ್ರವೇಶಿಸಿದವರು ರಂಗತೋರಣದೊಳಗೆ ಹೊಕ್ಕವರು ಮತ್ತೆಹಿಂದಿರುಗಲಿಲ್ಲ . ತಮ್ಮ ಊರಿನ ಸಭೆ ಸಮಾರಂಭಗಳಲ್ಲಿ ನಾಟಕ , ನೃತ್ಯ, ನಿರೂಪಣೆ ಹೀಗೆ ಒಂದಲ್ಲ‌ ಎರಡಲ್ಲ ಹಲವಾರುಚಟುವಟಿಕೆಗಳಲ್ಲಿ ತೊಡಗುತ್ತಾ ತನ್ನವರ ಸಹಕಾರವಿಲ್ಲದಿದ್ದರೂ ತಾನೇ ಮುಂದೆ ನಿಂತು ಊರಿನ ಹೆಣ್ಣುಮಕ್ಕಳಿಗೆ ಕಲಾ  ಪ್ರೇರಕಿಯಾಗಿ  ಮುನ್ನಡೆದರು. ಹೀಗೆ ಕೇವಲ ನೃತ್ಯ , ನಾಟಕ , ನಿರೂಪಣೆಗೆ ಸೀಮಿತವಾಗದೆ ಯಕ್ಷಗಾನ ತಾಳಮದ್ದಳೆಯಲ್ಲೂಇವರು ಸೈ ಎಂದೆನೆಸಿಕೊಂಡಿದ್ದಾರೆ. ಮುಂದೆ ಸಾಗುತ್ತಾ ಪದವಿಪೂರ್ವ ಶಿಕ್ಷಣ ಪಡೆದ ಮೇಲೆ‌ ಬಿ.ಎ‌ ಕರೆಸ್ಪಾಂಡೆನ್ಸ್ ಪದವಿಯನ್ನುಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೂರ್ಣಗೊಳಿಸಿ ಇವರು ಡಿ.ಎಡ್ ಶಿಕ್ಷಣವನ್ನು ಪಡೆದರು.

(Copyrights owned by: billavaswarriors.com )

ನಂತರ ೨೦೦೮ ರಲ್ಲಿ ಆಂಗ್ಲ ಭಾಷಾ ಶಿಕ್ಷಿಕಿಯಾಗಿ ಸೂರಜ್ ಇಂಟರ್ನಾಷನಲ್ ಸ್ಕೂಲ್ ಮುಡಿಪು ಇಲ್ಲಿ   ವೃತ್ತಿಜೀವನಕ್ಕೆ ಪಾದಾರ್ಪಿಸಿಅಲ್ಲಿಯೂ ವಿದ್ಯಾರ್ಥಿಗಳಿಂದ ಮೆಚ್ಚುಗೆಗೆ ಪಾತ್ರರಾದರು. ನಂತರ ಶ್ರೀ ಸರಸ್ವತಿ ವಿದ್ಯಾಲಯದಲ್ಲಿ ಸೇವೆ ಮುಂದುವರೆಸಿ ಅನೇಕಪಠ್ಯೇತರ ಚಟುವಟಿಕೆಗಳಿಗೆ  ವಿದ್ಯಾರ್ಥಿಗಳನ್ನು ಪ್ರೇರೇಪಿಸಿದವರು.

ಕಂಠದಾನಿಯಿಂದ ಪ್ರತಿಭೆಗಳ ಪರಿಚಯ:

ಮೊದಲಾಗಿಸೂಕ್ತವಾಹಿನಿಯ ಮೂಲಕ ಕಂಠದಾನವನ್ನು ಮಾಡಲು ಪ್ರಾರಂಭಿಸಿ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಲ್ಪಟ್ಟ  ಇವರು ಮುಂದಕ್ಕೆಬೆಳಕುತಂಡದಲ್ಲಿ  ತನ್ನ ಬರವಣಿಗೆಗೆ ಒಂದು ಹೊಸ ಜೀವವನ್ನು ತುಂಬಿ ಸ್ವತಃ ತಾನೇ ಬರೆದ ವ್ಯಕ್ತಿ ಪರಿಚಯಕ್ಕೆಕಂಠದಾನ ಮಾಡುತ್ತಿದ್ದರು. ಇದರ ಮೂಲಕ ಇವರ ಹಿನ್ನಲೆ ಧ್ವನಿಯ ನಾದ ಎಲ್ಲೆಡೆ ಪಸರಿತು. ಅದಲ್ಲದೇಬಿಲ್ಲವ ಸೇವಾಮಾಣಿಕ್ಯದಾತರ ಸಮಾಗಮ ಪ್ರೋತ್ಸಾಹದೊಂದಿಗೆ ಅಲ್ಲೂ  ಕಂಠದಾನ ಮಾಡಿದ ಮಹಾನ್ ದಾನಿ ಇವರು. ಯುವವಾಹಿನಿ ರಿ. ಮಾಣಿ ಘಟಕದ ಸಕ್ರೀಯ ಸದಸ್ಯೆಯಾಗಿದ್ದು ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ .ಇದರ ಜೊತೆಗೆ ಸಾಹಿತ್ಯಕ್ಷೇತ್ರದಲ್ಲಿನ ಇವರ ಸಾಧನೆ ಬೆಳಕಿಗೆ ಬಂದದ್ದು ಶಿವರಾತ್ರಿಯಂದು, ಶ್ರೀ ನಾರಾಯಣ ಗುರು ಮತ್ತು ಶ್ರೀ  ಗೋಕರ್ಣನಾಥನನ್ನುಆಧರಿಸಿ ಬರೆದ ಪದಗಳ‌ ಸಾಲುಗಳು ಕುದ್ರೋಳಿ ಗೋಕರ್ಣನಾಥೇಶ್ವರನ ಸನ್ನಿಧಾನದಲ್ಲಿ ಬಿಡುಗಡೆಯಾದ ಸಮಯದಲ್ಲಿ . ಇನ್ನೂಇವರು ಬರೆದ  ಹಲವಾರು ಸಾಹಿತ್ಯಗಳು ಬಿಡುಗಡೆಯಾಗುವ ಹಂತದಲ್ಲಿದೆ. ಇವರು  ಹಲವಾರು  ವೇದಿಕೆಗಳಲ್ಲಿ ಅತಿಥಿಸ್ಥಾನವನ್ನುಅಲಂಕರಿಸಿದ್ದಲ್ಲದೆ, ಅನೇಕ ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಇವರ ತುಳು ಭಾಷಾ ನಿರೂಪಣೆಯನ್ನು  ಜನ ಹೆಮ್ಮೆಯಿಂದಕೊಂಡಾಡಿದ್ದಾರೆ. ಹಾಗೆಯೇ ಶ್ರೀ ಕ್ಷೇತ್ರ ಪಾಂಡೇಶ್ವರದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಕೀರ್ತಿ ಇವರದ್ದು.

(Copyrights owned by: billavaswarriors.com )


ರೇಣುಕಾರ
ಮನದ ಮಾತು:

ತಾನು ಬೆಳೆಯುತ್ತಾ ಇತರರನ್ನೂ ಮೇಲೆತ್ತಬೇಕೆಂಬ ನಿಸ್ವಾರ್ಥ ಭಾವನೆಯನ್ನು ಹೊಂದಿರುವ ಇವರು, ಅಸಹಾಯಕತೆಯ ಬೇಸರತನಗೆ ಗೊತ್ತಿದ್ದು ಇನ್ನು ಮುಂಬರುವ ಪ್ರತಿಭೆಗಳಿಗೆ ಉತ್ತಮ ವೇದಿಕೆ ಸಿಗಬೇಕೆಂಬುದವುದೇ ಇವರ ಇಚ್ಛೆ.

ಅದೆಷ್ಟೋ ಬಾರಿ ತನ್ನವರಿಂದ ಸಹಕಾರ ಸಿಗದೆ , ಸಾಕಷ್ಟು ಬಾರಿ ಅವಮಾನಗಳ ಭಾರ ಹೊತ್ತ ಜೀವನ ಚಿಕ್ಕದಿನಿಂದಲೇ ಸಾಗಿತ್ತು. ಒಬ್ಬ ಹೆಣ್ಣು ಮಗಳು ಸಮಾಜವನ್ನು ಎದುರಿಸಬೇಕಾದರೆ ತನ್ನ ತಾಯಿಯ ಸಹಕಾರವಿಲ್ಲದೆ ಅದು ಅಸಾಧ್ಯ . ಹಾಗಾಗಿ ತನ್ನತಾಯಿಯೇ ತನಗೆ ಸ್ಪೂರ್ತಿ, ತನ್ನ ಅಜ್ಜಿಯೇ ತನಗೆ ಫೇಸ್ಬುಕ್ , ಇನ್ಸ್ಟಾಗ್ರಾಂ ಎಲ್ಲವೂ. ಸಮಾಜಕ್ಕೆ ರೇಣುಕಾ ಕಣಿಯೂರು ಎಂಬಹೆಸರು ಚಿರಪರಿಚಿತವಾಗಿದ್ದು ಚೇತನ್ ವರ್ಕಾಡಿಯವರು ತನ್ನ ಬಗ್ಗೆ ಬರೆದ ವ್ಯಕ್ತಿ ಪರಿಚಯದಿಂದ , ಸೂಕ್ತ , ಬೆಳಕು, ಬಿಲ್ಲವ ಸೇವಾಮಾಣಿಕ್ಯದಾತರ ಸಮಾಗಮ, ರಾಜ್ ಕ್ರಿಯೇಷನ್ಸ್, ಯುವವಾಹಿನಿ , ಸತ್ಯದ ತುಳುವೆರ್ ರಿ. ಉಡುಪಿ ಮಂಗಳೂರು  ನಂತಹ  ತಂಡಗಳಿಂದ ಮತ್ತು ತನ್ನ ಸ್ವರ ಬರಹ, ನಿರೂಪಣೆಗೆ ಪ್ರೋತ್ಸಾಹ ನೀಡಿ ಮೇಲೆತ್ತಿದ ಸರ್ವ ಹಿತೈಷಿಗಳಿಂದ ಮತ್ತು ಹಲವಾರುಬಳಗದಿಂದ  . ಹಾಗೇ ಸಮಾಜದಲ್ಲಿ ಒಂದು ಒಳ್ಳೆ ಸ್ಥಾನ ಸಿಗಲು ತನ್ನ ಗಂಡ ಲೋಕೇಶ್ ಪೂಜಾರಿ ಮತ್ತು ಮನೆಯವರ ಬೆಂಬಲವೇಕಾರಣಎನ್ನುತ್ತಾರೆ ರೇಣುಕಾ.

(Copyrights owned by: billavaswarriors.com )

ಸಂದ ಗೌರವಗಳು :

ರೇಣುಕಾ ರವರ ನಿಸ್ವಾರ್ಥ ಸೇವೆ ಹಾಗೂ ಸೇವೆಗಳನ್ನು ಗುರುತಿಸಿ  ಸತ್ಯದ ತುಳುವೆರ್ ತಂಡ, ಶ್ರೀ ಕ್ಷೇತ್ರ ಕುದ್ರೋಳಿ, ಸೂಕ್ತ ನ್ಯೂಸ್, ಹೀಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಗಳನ್ನು ಮಾಡಿವೆ. ಇದಲ್ಲದೇ ತುಳು ಭಾಷೆಯ ಮೇಲಿರುವ ಇವರ ಅಭಿಮಾನವನ್ನುಕಂಡು,  ಇವರನ್ನು ಬಿರುವೆರ್ ಕುಡ್ಲ ತಂಡವು ಯುವ ಪ್ರತಿಭೆ ದಿವ್ಯಶ್ರೀ ರವರನ್ನು ಸಂದರ್ಶನ ಮಾಡಲು ಆಹ್ವಾನಿಸಿದ್ದು, ಮುಕ್ತವಾಹಿನಿ ಉಡುಪಿಯ ಇದರಲ್ಲಿ ಭೂಮಿಕಾ ವಿಶೇಷ ಸಂಚಿಕೆಯಲ್ಲಿ  ನಡೆದ ಇವರ ಸಂದರ್ಶನ,  ಹೀಗೆ ಸಮಾಜದಲ್ಲಿ ಜನರು ತನ್ನನ್ನು  ಗುರುತಿಸುವುದೇ ಒಂದು ದೊಡ್ಡ ಸನ್ಮಾನ  ಎಂದೆನ್ನುತ್ತಾರೆ ರೇಣುಕಾ.

(Copyrights owned by: billavaswarriors.com )

ಸದಾ ಮುಗುಳ್ನಗೆಯ ಒಡತಿಯಾಗಿರುವ ನಿಮ್ಮ ಮಧುರವಾದ ಧ್ವನಿಯ ಇಂಪು ಹೀಗೇ ಎಲ್ಲರ ಕಿವಿಯಲ್ಲಿ ನಿತ್ಯ ಪ್ರತಿಧ್ವನಿಸುತ್ತಾ , ಪ್ರತಿ ಕಾರ್ಯದಲ್ಲೂ ಶ್ರೀ ನಾರಾಯಣ ಗುರುಗಳ ಆಶೀರ್ವಾದ ಕೋಟಿಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದುಬಿಲ್ಲವ ವಾರಿಯರ್ಸ್‌ ಸಂಸ್ಥೆಯ ವತಿಯಿಂದ ಹಾರೈಸುತ್ತೇನೆ.

www.billavaswarriors.com

✍️ಬರಹ : ಯಕ್ಷಿತಾ ಆರ್ ,ಮೂಡುಕೊಣಾಜೆ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »