TOP STORIES:

ಮದುವೆಯಿಂದ ಮಲಿನಗೊಳ್ಳುತ್ತಿರುವ ಸಮಾಜ


ಲಾಕ್‌ಡೌನ್ ಕಾರಣಕ್ಕೆ ಈಗಾಗಲೇ ನಮ್ಮೆಲ್ಲರ  ಹೊಂದಾಣಿಕೆಗೊಳಗಾದ ಕೆಲವು ನಿರ್ಬಂಧಗಳು ಮುಂದಕ್ಕೂ ಹಾಗೆಯೇಇರಬೇಕೆಂದು ಕೆಲವು ಬಾರಿ ಅನ್ನಿಸುವುದಿದೆ. ನಿಯಮಿತವೆಂದೆನಿಸಿ  ನಿರಾಡಂಬರಗೊಂಡಿರುವ ನಮ್ಮಲ್ಲಿನ ಮದುವೆಸಮಾರಂಭಗಳನ್ನು ಕಂಡಾಗಲಂತೂ ಇದನ್ನು ಒಪ್ಪಲೇಬೇಕು.

  ಹೌದು ವರ್ತಮಾನವನ್ನು ಅನುಲಕ್ಷಿಸಿದರೆ ಇದು ವ್ಯಾಪಕವಾಗಿ ಪ್ರಸಾರಗೊಳ್ಳಲೇಬೇಕಾದ ಸಂದೇಶ. ಅತಿರೇಕದ ವಿವಾಹ, ಮದರಂಗಿ, ಹಲ್ದಿ ಮೊದಲಾದ ಸಮಾರಂಭಗಳು ಸದ್ಯಕ್ಕೆ ನಮ್ಮ ಹಿಂದೂ ಸಮಾಜಕ್ಕಿರುವ ಅತಿ ದೊಡ್ಡ ಪಿಡುಗು. ನಮ್ಮ  ಬದುಕುಹೊಸಸ್ಫೂರ್ತಿ ಪಡೆಯುವ ವಿವಾಹ, ಗೃಹಪ್ರವೇಶ, ಸೀಮಂತ ಮುಂತಾದ ಶುಭಾವಸರದಲ್ಲಿ ಇನ್ನೊಬ್ಬರ ಜೀವನವನ್ನುವ್ಯಸನಕ್ಕೀಡುಮಾಡಿಸಿ ದಾರಿತಪ್ಪಿಸುವುದು ಪರಮಪಾಪವಲ್ಲದೆ ಇನ್ನೇನು ?

ಮಗನೊಬ್ಬ ನಮ್ಮ ಸಮಾರಂಭವೊಂದರಿಂದ ಮೊದಲಾಗಿ ಕುಡಿತಕ್ಕೆ ಬಿದ್ದನೆಂದು ತಿಳಿದರೆ ಕೊನೆಗೊಮ್ಮೆ ಆತನ ಅಧೋಗತಿಯನ್ನುಕಂಡು‌ ಮಮ್ಮಲ ಮರುಗುವ  ಹೆತ್ತಕರುಳಿನ ಹಿಡಿಶಾಪ ನಮ್ಮನ್ನು ತಾಕದಿದ್ದೀತೇ ?

ಇವೆಷ್ಟೇ ಅಲ್ಲ.

ಇನ್ನೂ ಇದೆ, ಓದಿ.

        ನೀವು ಗಮನಿಸಿರಬಹುದು.

ಈಗಿನ ನಮ್ಮ ಸುಶಿಕ್ಷಿತ ವಧುವರರಿಗೆ ಸನಾತನ ಮದುವೆಯ ಶಾಸ್ತ್ರವಿಧಿಗಳಲ್ಲಿ ಸಾರ್ವಜನಿಕವಾಗಿ ಪಾಲ್ಗೊಳ್ಳಲು ನಾಚಿಕೆ. ಅದಕ್ಕಾಗಿತೀರಾ ಆಪ್ತರನ್ನು ಮಾತ್ರ ಆಹ್ವಾನಿಸಿ, ಮನೆಯಿಂದ ಸಾಕಷ್ಟು ದೂರವೇ ಇರುವ ದೇಗುಲದಲ್ಲಿ ಯಾರಿಗೂ ಕಾಣದಂತೆ, ಬರಿಯಸಾಕ್ಷಿಗಾಗಿ ಮಾತ್ರ ಒಂದೆರಡೇ ಫೋಟೋ ಕ್ಲಿಕ್ಕಿಸಿ (ಅದಕ್ಕೂ ದೇಗುಲದೊಳಗಡೆ ಅನುಮತಿ ಇಲ್ಲದಿದ್ದರೆ ಖುಷಿಪಟ್ಟು),  ಇನ್ನೂರುಜೋಡಿಗಳಲ್ಲಿ ತಾವೂ ಒಂದೆನಿಸಿ ಮುಹೂರ್ತ ತಪ್ಪಿ ಮದುವೆಯಾಗುತ್ತಾರೆ.

                  ನಂತರ ಅಂದೋ ಅಥವಾ ಶುಭಾಶುಭ ದಿನದ ಹಂಗಿಲ್ಲದೆ ಯಾವಗಲಾದರೊಂದು ದಿನ ತಮ್ಮವರೆಲ್ಲರನ್ನೂ ಆಹ್ವಾನಿಸಿ, ಎಲ್ಲರಿಗೂ ಕಾಣುವಂತೆ ನಗರದ ಮಧ್ಯೆಯೇ ಇರುವ ಬೃಹತ್ ಸಭಾಂಗಣದಲ್ಲಿ ಪ್ರತಿಷ್ಠೆಯ ರಿಸೆಪ್ಷನ್. ಯಥಾವತ್ ಹಿಂದಿಸೀರಿಯಲನ್ನೇ ಹೋಲುವ ವಸ್ತ್ರಸಂಹಿತೆ, ಅಲಂಕಾರ, ನೃತ್ಯವಿನೋದಾವಳಿ ಸಹಿತ ಸ್ವಾಗತ, ಕೇಕ್‌ಗೆ ಚೂರಿ ತಿವಿತ, ಪಾಶ್ಚಾತ್ಯವೃಂದನೃತ್ಯ, ಕೊನೆಯಲ್ಲಿ ತಿನ್ನುವುದಕ್ಕಿಂತ ಹೆಚ್ಚು ಪೋಲಾಗಿಸುವ 20‌ ರಿಂದ 40 ರಷ್ಟು ಅಪರಿಚಿತ ಖಾದ್ಯಯುಕ್ತ ಪುಷ್ಕಲ ಭೋಜನ. ಅವುಗಳಲ್ಲಿ ಮತ್ತೆ  5 ಭೋಜನಾಪೂರ್ವ ಖಾದ್ಯಗಳು. 5 ಭೋಜನೋತ್ತರ ಖಾದ್ಯಗಳು.

          ವಿವಾಹದ ಖರ್ಚಿಗಿಂತಲೂ ಮುಪ್ಪಟ್ಟು ಹೆಚ್ಚಾಗುವಷ್ಟು ವೆಚ್ಚದಲ್ಲಿ ಏರ್ಪಡಿಸುವ ರಾತ್ರಿಯ ಡಿಜೆ ಪಾರ್ಟಿ. 6 ಅಂತಸ್ತಿನಲ್ಲಿಸೌಂಡ್ ಬಾಕ್ಸ್‌ಗಳು, ಮದುವೆ ಮನೆಯವರಿಗೆ ಪರಿಚಿತರಾಗಿರಬೇಕು ಎಂಬ ಕನಿಷ್ಟ ನಿರ್ಬಂಧವೂ ಇಲ್ಲದಂತೆ ಸರ್ವರಿಗೂಮುಕ್ತವಾಗಿರುವ ಮನೆಮುಂದಿನ (ಕೆಲವೆಡೆ ಹಿಂದಿನ) ಓಪನ್ ಬಾರ್. ಬಂದವರನೇಕರಿಗೆ ಅಂದಿನ ಮದುಮಕ್ಕಳ್ಯಾರು, ಮನೆಯಾರದ್ದೆಂಬುದೇ ಗೊತ್ತಿರುವುದಿಲ್ಲ. ಪ್ರೌಢಶಾಲಾ ವಿದ್ಯಾರ್ಥಿಗಳಿಂದ ತೊಡಗಿ ಹಣ್ಣಣ್ಣಾದ ವೃದ್ಧರೆಲ್ಲರೂ ಕಲೆತು ನಮ್ಮಅಪರೂಪದಒಗ್ಗಟ್ಟು ಸಾರುವ ಸಾಮೂಹಿಕ ಪಾನಸಮಾವೇಶ. ಕಾವ್ಯಗಳಲ್ಲಿ ವರ್ಣಿತವಾಗಿರುವ ನೃತ್ಯಪಾನಗೊಷ್ಠಿಯ (ಈಗಿನ ಲೈವ್‌ಬ್ಯಾಂಡ್‌ನ) ಫೀಲ್.ಆಗುವಂತೆ ಕೆಲವೆಡೆ ಟೇಬಲ್‌ಗೆ ಬಾಟಲಿ ಸಪ್ಲೈಸರ್ವ್ ಮಾಡಲೆಂದೇ ಅಂದಚೆಂದದ ಹುಡುಗಿಯರಂತೆ.ಎಲ್ಲರಲ್ಲೂ ಹೊಸಹೊಸ ಇತಿಹಾಸ ನಿರ್ಮಾಣ ಮಾಡುವ ಆತುರ. ಹೀಗೆ ವೇಳೆಏರುತ್ತಿದ್ದಂತೆಯೇ  ತಂತಾನೇ ಒಳಮೂಡಿಬರುವ ನೃತ್ಯಾವೇಶ. ಆರ್ಭಟ, ಕೊನೆಕೊನೆಗೆ ದೈವಾರಾಧನೆ, ಯಕ್ಷಗಾನ ಮೊದಲಾದ ಪವಿತ್ರ ಆರಾಧನಾ ಕಲೆಗಳ ಅಣಕು ಪ್ರದರ್ಶನ, ಬಗೆಗಿನವ್ಯಂಗ್ಯಾಭಿವ್ಯಕ್ತಿಗೆ ಬಾರೀ ಬೇಡಿಕೆಮೆಚ್ಚುಗೆ. ಇಷ್ಟಕ್ಕೆ ಮುಗಿಯಲಿಲ್ಲ. ನಾಟ್ಯದ ನವರಂಗ ಮಂಟಪದಲ್ಲಿ ಸ್ತ್ರೀಯರಿಗೂ ಇದೆಮೀಸಲಾತಿ.  ಯಾರ್ಯಾರೋ ಅಪಾಪೋಲಿ ಯುವಕರೊಂದಿಗೆ  ಮದುಮಗಳ ಸಹಿತ ಮನೆಯ ಮಹಿಳೆಯರೆಲ್ಲರ ಕುಡಿತ -‌ಕುಣಿತ. ಇದೂ ಒಂದು‌ ವಿಧದ ಎಂತಹ ಸ್ತ್ರೀಪುರುಷ ಸಮಾನತೆ.

ಆಹಾ, ಎಲ್ಲಾ ಕಾರಣಗಳಿಂದ ಮನೆಯವರಿಗೆ‌ ಮಾತ್ರವಲ್ಲ, ನೆರೆಕರೆಯವರಿಗೂ ಗಳಿಗೆ ಜೀವನಪರ್ಯಂತ ಅವಿಸ್ಮರಣೀಯ!!!

 ಇಷ್ಟೆಲ್ಲಾ ಮುಗಿದು ಮರುದಿನ ಮದುವೆ ಮನೆಯನ್ನೊಮ್ಮೆ ನೋಡಿದರೆ ಕುರ್ಚಿ, ಆಹಾರ, ಅಲಂಕಾರ, ಚಪ್ಪಲಿ, ಬಾಟಲಿಎಲ್ಲವೂ ಚೆಲ್ಲಾಪಿಲ್ಲಿಯಾಗಿ ಹರಡಿಬಿದ್ದು, ಆಗಷ್ಟೇ ಸಮರ ಸಮಾಪನಗೊಂಡ ರಣರಂಗದಂತಿರುತ್ತದೆ.

ನನಗಿರುವುದು ಒಂದೇ ಪ್ರಶ್ನೆ. ಧರ್ಮಸಂರಕ್ಷಣಾ ಕಾರ್ಯಗಳೆಲ್ಲದಕ್ಕೂ ಸನ್ನದ್ಧರೆನ್ನುವ ನಮ್ಮ ಏರುತ್ಸಾಹದ ಯುವಕರು ಧರ್ಮಘಾತಕತನದ ಬಗ್ಗೆ ಏಕೆ ಕಿಂಚಿತ್ತೂ ಲಕ್ಷ್ಯ ಹರಿಸುವುದಿಲ್ಲ ? ಹೇಳಿಕೆ ಮಾತ್ರಕ್ಕೆ ನಾವೆಂದಿಗೂ ಧರ್ಮಪರರೆನಿಸಿಕೊಳ್ಳುವವರು ವಿಚಾರದಲ್ಲಿ  ಎಡವುತ್ತಿರುವುದು ಏಕೆ? ಮೂರ್ಕಾಸಿನ ಲಾಭವಿಲ್ಲದ ರಾಜಕೀಯ ಅಸಮಾಧಾನಕ್ಕೆ ತಕ್ಷಣ ಉರಿದು ಬೀಳುವರಿಗೆ   ಇದು ನಮ್ಮತನದ ಸ್ವಾಭಿಮಾನಕ್ಕೆ ಬೀಳುವ ಪೆಟ್ಟಾಗಿ ಏಕೆ ಕಾಣುವುದಿಲ್ಲ. ಸಮಾರಂಭವನ್ನು ಅಪವಿತ್ರಗೊಳಿಸುವುದು ಶಾಸ್ತ್ರವಿರೋಧವಲ್ಲವೇ ? ಅಕ್ಷಮ್ಯ ಧರ್ಮದ್ರೋಹವಲ್ಲವೇ ? ಇದರ ವಿರುದ್ಧ ಸಾರ್ವತ್ರಿಕ ಹೋರಾಟ ಅವಶ್ಯವಲ್ಲವೇ ?

ಸೂಕ್ಷ್ಮವಾಗಿ ಗಮನಿಸಿದರೆ ತಿಳಿದೀತು : ಬಲಿಯಾಗುತ್ತಿರುವವರು ಅಂತಸ್ತಿಲ್ಲಿ ಉನ್ನತರಲ್ಲ. ಎಲ್ಲರೂ ಮಧ್ಯಮವರ್ಗದ ಯುವಕಯುವತಿ, ವಿದ್ಯಾರ್ಥಿಗಳು ಮಾತ್ರ.

 ಇನ್ನು ಕೆಲವರು ಕೇಳಬಹುದು.. “ಅವರ ಹಣ, ಅವರ ಖರ್ಚು ನಿಮಗೇನು ನಷ್ಟ ? ನೀವು ಕುಡಿಯದಿದ್ದರೆ ಬೇಡ ಬಿಡಿ. ಅದು ಅವರವರ ಸ್ವಾತಂತ್ರ್ಯ, ಅವರವರ ಇಚ್ಛೆ

          

  ಹಾಗೆ ನೋಡಿದರೆ ಯಾವುದೂ ತಪ್ಪಲ್ಲ. ಯಾರೋ ಕೊಲೆಯೊಂದನ್ನು ಮಾಡಿದಾಕ್ಷಣಕೊಂದವನು ಅವನುಸತ್ತವನುಇವನು. ನಮಗೇನು ನಷ್ಟ ? ಅದು ಅವನವನ ಇಚ್ಛೆಎಂದು ನಿರ್ಲಕ್ಷ್ಯ ಧೋರಣೆಯಿಂದ ಸಮಾಜ ಕ್ಷಮಿಸುವುದಾದರೆ ಇದೂತಪ್ಪಲ್ಲ.  ಅಮಲುಮುಕ್ತ ಸುಸಭ್ಯ ಸಮಾಜ ನಿರ್ಮಾಣವಾಗದಿದ್ದರೆ ಮುಂದೊಂದು ದಿನ ಘೋರ ಪಶ್ಚಾತಾಪ ಪಡಬೇಕಾದೀತು. ಏಕೆಂದರೆ ಇದು ಕೂಡಾ ಸಮೂಹದ ಭಾವನಾತ್ಮಕ ಕೊಲೆ. ದಿವ್ಯಾದರ್ಶಗಳ ಮುಖೇನ ಸಮಾಜ ಬೆಳಗಬೇಕಾದ ಭವಿಷ್ಯದಪೀಳಿಗೆಯ ಕಗ್ಗೊಲೆ.

    

            ಡಾ॥.ಅರುಣ್ ಉಳ್ಳಾಲ್


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »