TOP STORIES:

ರಂಗಭೂಮಿಯ ನಾಡಿಮಿಡಿತ, ಸಂಘಟಕ ‘ಮಧು ಬಂಗೇರ ಕಲ್ಲಡ್ಕ’


ಮಂಗಳೂರು ಎಂಬ ಕಡಲತಡಿಯ, ತೆಂಗು-ಕಂಗು, ಬಾಳೆಡೆಯ, ತುಳುವರ ನಾಡಿನ ಬೆಳವಣಿಗೆಯಲ್ಲೂ ಹಾಗೆಯೇ ಹತ್ತು-ಹಲವು ಮಹನೀಯರ ಮಹಾತ್ಯಾಗದ ಅಡಿಪಾಯವಿದೆ, ದಣಿವರಿಯದ ಪರಿಶ್ರಮದ ಹಿನ್ನಲೆಯಿದೆ. ಅದರಲ್ಲೂ ತುಳುವನಾಡು ಎಂದಾಗ ಥಟ್ಟನೆ ನೆನಪಾಗುವುದು ರಂಗಭೂಮಿ ಮತ್ತು ತಮ್ಮ ನೋವಿನ ಮೇಲೆ ಬಣ್ಣಗಳನ್ನು ಹಚ್ಚಿ ಮತ್ತೊಬ್ಬರ ಖುಷಿಗೆ ಸದಾ ತಮ್ಮನ್ನು ಮುಡಿಪಾಗಿಟ್ಟವರು. ಹೌದು. ಒಬ್ಬ ಕಲಾವಿದನಾಗಿ ಇನ್ನೊಬ್ಬ ಕಲಾವಿದನನ್ನು ಮೇಲೆತ್ತಿ ನಾಟಕರಂಗದಲ್ಲಿ ಉಜ್ವಲಿಸುವ ಪ್ರತಿಭೆಗಳಿಗೆ ಸದಾ ದಾರಿದೀಪವಾಗಿ, ಕಷ್ಟ ಎಂದು ಚಾಚಿದ ಕೈಗಳಿಗೆ ಸಹಾಯಮುನಿಯಾಗಿ, ಭೂಮಿತಾಯಿಯಷ್ಟೇ ತಾಳ್ಮೆಯನ್ನು ತನ್ನದಾಗಿಸಿಕೊಂಡವರಿವರು. ಮಾತಿನ ಸೊಗಸು, ಅಭಿನಯ ಚತುರತೆ , ವಿಭಿನ್ನ ರೀತಿಯಲ್ಲಿ ನಾಟಕ ರಚನೆಗಾರನಾಗಿ, ನಟನಾಸ್ತಕರನ್ನು ಪಳಗಿಸುವ ನಿರ್ದೇಶಕನಾಗಿ, ನಾಟಕಗಳಿಗೆ ಸಾಹಿತ್ಯದ ಸೊಬಗನ್ನು ತುಂಬುವ ಬರಹಗಾರನಾಗಿ ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿರುವವರು ‘ಮಧು ಬಂಗೇರ ಕಲ್ಲಡ್ಕ’.ಮಧು ಬಂಗೇರರು 1981 ರಲ್ಲಿ ಶೀನಪ್ಪ ಪೂಜಾರಿ ಮತ್ತು ವಿಶಾಲಾಕ್ಷಿ ದಂಪತಿಗಳಿಗೆ ಮೊದಲನೆಯ ಪುತ್ರನಾಗಿ ಚಂದಳಿಕೆಯ ನಿಡ್ಯ ಎಂಬ ಊರಿನಲ್ಲಿ ಜನಿಸಿದರು. ನಂತರ ಚಂದಳಿಕೆಯಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ ಪಡೆದು, ಸರಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ, ಪುತ್ತೂರಿನ ಕೊಂಬೆಟ್ಟು ಮಹಾಲಿಂಗೇಶ್ವರದಲ್ಲಿ ಐಟಿಐ ಪದವೀಧರನಾಗಿರುವ ಇವರು ಪ್ರಸ್ತುತ ಸುರತ್ಕಲ್ ನಲ್ಲಿ ‘ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್ ‘ ಎಂಬ ಸ್ವಂತ ಎಲೆಕ್ಟ್ರಾನಿಕ್ಸ್ ಸಂಸ್ಥೆ ನಡೆಸುತ್ತಿದ್ದಾರೆ.

ಗಂಡಾಗಿ ಹುಟ್ಟಿ ಹೆಣ್ಣಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ:

1994 ರಲ್ಲಿ ಚಂದಳಿಕೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿರುವಾಗ ಗುರುಗಳಾದ ಗಿರಿಯಪ್ಪ ಗೌಡ ಕಾಯರ್ ಮಾರ್ ಮತ್ತು ವಿಠಲ ನಾಯಕರ ಒತ್ತಾಯದ ಮೇರೆಗೆ ‘ಚೇರ್ ಮೇನ್ ಕಿಟ್ಟಣ್ಣೆ’ ಎಂಬ ನಾಟಕದಲ್ಲಿ ಕಿಟ್ಟಣ್ಣನ ಪತ್ನಿ ಸೀತಕ್ಕ ಎಂಬ ಸ್ತ್ರೀ ಪಾತ್ರದ ಮೂಲಕ ಇವರು ಮೊದಲನೇ ಬಾರಿಗೆ ಬಣ್ಣ ಹಚ್ಚಿದರು. ಹೀಗೆ ರಂಗಭೂಮಿಯತ್ತ ಆಸಕ್ತಿಯನ್ನು ಬೆಳೆಸಿಕೊಂಡ ಇವರು 2001 ರಲ್ಲಿ ಐಟಿಐ ಶಿಕ್ಷಣದ ಸಮಯದಲ್ಲಿ ಸ್ವತಃ ತಾನೇ ಕಥೆ, ನಿರ್ದೇಶನ ಮತ್ತು ನಟನೆ ಮಾಡಿದ ‘ಮನಸ್ಸ್ ಎಡ್ಡೆ ಇಪ್ಪಡ್’ ಎಂಬ ನಾಟಕದ ಮೂಲಕ ನಿರ್ದೇಶಕ ಮತ್ತು ನಾಟಕ ರಚನಗಾರನಾದೆ ಎಂದೆನ್ನುತ್ತಾರೆ ಮಧು ಬಂಗೇರ.

(Copyrights owned by: billavaswarriors.com )

ಹೀಗೆ ನಾಟಕ ಪ್ರೇಮಿಯಾದ ಇವರು ‘ಚೇರ್ ಮೇನ್ ಕಿಟ್ಟಣ್ಣೆ’,’ಅಪ್ಪೆನ ನಿರೆಲ್’,’ವೈಶಾಲಿ’,’ಪ್ರೀತಿಡೊಂಜಿ ತ್ಯಾಗ’, ‘ಮನಸ್ಸ್ ಎಡ್ಡೆ ಇಪ್ಪಡ್’, (ಶಾಂತರಾಂ ಕಲ್ಲಡ್ಕ ನಿರ್ದೇಶನದ)’ಎನ್ನಿನೊಂಜಿ ಆಯಿನೊಂಜಿ’, ‘ಆಯಿಲೆಕ್ಕಾಪುಂಡು’, ‘ಕೊಪ್ಪರಿಗೆ’ – ಇವರು ಅಭಿನಯಿಸಿದ ನಾಟಕಗಳಾದರೆ ,’ಪ್ರೀತಿಡೊಂಜಿ ತ್ಯಾಗ’, ‘ಮನಸ್ಸ್ ಎಡ್ಡೆ ಇಪ್ಪಡ್’,’ಇನಿ ಅತ್ತ್ಂಡ ಎಲ್ಲೆ’ ,’ಅಪ್ಪೆನ ನಿರೆಲ್’, ‘ಪರಕೆದ ಪೂಸೀರೆ’, ‘ನೆತ್ತೆರ್ ದ ಬಿಂದ್’ ‘ಏರಾ ಉಲ್ಲೆರ್ ಈ ಇಲ್ಲಡ್’, ‘ಕೊಪ್ಪರಿಗೆ’ – ಇವು ಮಧು ಬಂಗೇರರು ಬರೆದು ನಿರ್ದೇಶಿಸಿದ ನಾಟಕಗಳು.

ನಾಟಕಪ್ರೇಮಿಯ ಮನದ ಮಾತು:

“ಕಲಾವಿದನ ಬದುಕು ಕೇವಲ ಪ್ರದರ್ಶನಕ್ಕೆ ಸೀಮಿತವಾಗದೆ ಸಮಾಜಕ್ಕೆ ಮಾದರಿಯಾಗಿ , ಸಂಸಾರಕ್ಕೆ ಹೊರೆಯಾಗದೆ, ನೆಮ್ಮದಿಯ ಬದುಕನ್ನು ಬದುಕುವ ಕಲೆಯನ್ನು ರೂಢಿಸಿಕೊಂಡರೆ ಮಾತ್ರ ಕಲಾವಿದನೊಂದಿಗೆ ಕಲೆಯೂ ಬದುಕುಳಿಯಬಲ್ಲದು. ಶ್ರೀಯುತ ಗಿರಿಯಪ್ಪ ಗೌಡ ಮತ್ತು ವಿಠಲ ನಾಯ್ಕ ಇವರಿಬ್ಬರು ನನ್ನ ಮೊದಲನೆಯ ನಾಟಕದ ಗುರುಗಳು. ತದನಂತರ ನಾರಾಯಣ ಶೆಟ್ಟಿ ನಿಡ್ಯ ಇವರು ರಂಗಭೂಮಿಯಲ್ಲಿ ನೆಲೆನಿಲ್ಲಲು ಸಹಕಾರ ಕೊಟ್ಟರೆ , ವೃತ್ತಿಪರ ತಂಡ ಕಟ್ಟುವಾಗ ಸುಮಾರು ವಿಷಯಗಳನ್ನು ತನಗೆ ಕಲಿಸಿದ್ದು ತುಳು ರಂಗಭೂಮಿಯ ದಕ್ಷ ನಿರ್ದೇಶಕರಾದ ಜಗದೀಶ್ ಶೆಟ್ಟಿ ಕೆಂಚನಕೆರೆ ಸರ್. ಇವರೆಲ್ಲರೂ ನನ್ನ ಗುರುಗಳು. ಹಾಗೇ‌ ತನ್ನ ರಂಗಚಟುವಟಿಕೆಯಲ್ಲಿ ನಿರಂತರ ಪ್ರೋತ್ಸಾಹ ಕೊಟ್ಟು ನಮ್ಮ ತಂಡದ ಸಮಗ್ರ ನಿರ್ವಹಣೆ ಮಾಡುತ್ತಿರುವವರು ನನ್ನ ಧರ್ಮಪತ್ನಿ ಶ್ರೀಮತಿ ಬೇಬಿ.ಎಂ.ಕೆ. ಇದರ ಜೊತೆಗೆ ನನ್ನ ಮಗ ಹೃತಿಕ್ ರಂಗ ವಿನ್ಯಾಸದ ಜವಾಬ್ದಾರಿಯನ್ನು ಕೈಗೊಳ್ಳುವ ಮೂಲಕ ನನ್ನ ಇಡೀ ಕುಟುಂಬ ರಂಗ ಚಟುವಟಿಕೆಯಲ್ಲಿ ಸೇರಿಕೊಂಡಿದೆ ಎಂಬುದೇ ಒಂದು ಖುಷಿ” ಎಂದು ತನ್ನ ಹರುಷವನ್ನು ವ್ಯಕ್ತಪಡಿಸುತ್ತಾರೆ ಮಧು ಬಂಗೇರ ಕಲ್ಲಡ್ಕ.

ಹಲವಾರು ಸಂಘ ಸಂಸ್ಥೆಗಳಿಗೆ ಅಡಿಪಾಯವಿಟ್ಟ ಬಂಗೇರರು:
ತನ್ನ ಬಾಲ್ಯದಲ್ಲಿ ಮನೆಯ ಸಮೀಪದಲ್ಲೇ ನಡೆಯುಯುತ್ತಿದ್ದ ಜಿ.ಯನ್ ಬಂಗೇರರ ನಾಟಕಗಳೇ ತನಗೆ ಸ್ಫೂರ್ತಿ ಎಂದೆನ್ನುವ ಮಧು ಬಂಗೇರರು ‘ತುಳುವೆರೆ ತುಡರ್’ ಎಂಬ ಕಲಾತಂಡವನ್ನು ಕಟ್ಟಿ ಹತ್ತು ವರುಷಗಳು ಕಳೆಯಿತು. ಹಾಗೇ ‘ತುಡರ್ ಕ್ರಿಯೇಷನ್ಸ್’ ಎಂಬ ಯೂಟ್ಯೂಬ್ ಚಾನಲ್ ನಲ್ಲಿ ‘ರಂಗಪಯಣ’ದ ಮೂಲಕ ಹಲವಾರು ಸಾಧಕರ ಪರಿಚಯವನ್ನು ಸಮಾಜಕ್ಕೆ ಪರಿಚಯಿಸುವ ಒಂದು ನಿಸ್ವಾರ್ಥ ಸೇವೆಯನ್ನು ಕೂಡ ಬೆಳಕಿಗೆ ತಂದವರಿವರು. ಇದರ ಜೊತೆಗೆ ಬೆಂಗಳೂರಿನ ಯುವಜನರನ್ನು ಒಟ್ಟುಗೂಡಿಸಿ ಬೆಂಗಳೂರು ಯುವವಾಹಿನಿಗೆ ಅಡಪಾಯಿ ಕೊಟ್ಟಂತ ವ್ಯಕ್ತಿ ಇವರು. ಹಾಗೇ ತುಳು ನಾಟಕ ಕಲಾವಿದರ ಒಕ್ಕೂಟ(ರಿ.) ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿಯಾಗಿ , ಕೋಸ್ಟಲ್ ನಾಟಕ ಸಂಗೀತ ನಿರ್ದೇಶಕರ ಒಕ್ಕೂಟದ (ದ.ಕ. , ಉಡುಪಿ ಮತ್ತು ಕೊಡಗು) ಕಾರ್ಯದರ್ಶಿಯಾಗಿ , ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿಯಾಗಿ , ಮಹಾಲಿಂಗೇಶ್ವರ ತೆಲಿಕೆದ ಕಲಾವಿದೆರ್ ಬಾಜಾವು ಎಂಬ ಹೊಸ ತಂಡಕ್ಕೆ ನಿರ್ದೇಶಕನಾಗಿ ಹೀಗೆ ಹಲವಾರು ಸಂಘ ಸಂಸ್ಥೆಗಳಿಗೆ ಹೊಸ ರೂಪವೊಂದನ್ನು ಕೊಟ್ಟ ಇವರು ಬಲೆ ತೆಲಿಪಾಲೆ, ಕಾಮಿಡಿ ಪ್ರೀಮಿಯರ್ ಲೀಗ್ ಹಾಸ್ಯ ಕಾರ್ಯಕ್ರಮದಲ್ಲಿ ‘ತುಳುವೆರೆ ತುಡರ್’ ತಂಡಕ್ಕೆ ಹಿನ್ನಲೆ ಸಂಗೀತ ನಿರ್ದೇಶನ ಸಹ ನೀಡಿದ್ದಾರೆ.

(Copyrights owned by: billavaswarriors.com )

ಸಂದ ಸನ್ಮಾನ ಪುರಸ್ಕಾರಗಳು :
ತನ್ನ ಕಲಾಜೀವನದಲ್ಲಿ ಅಸಂಖ್ಯಾತ ಪ್ರತಿಭೆಗಳಿಗೆ ಅವಕಾಶವನ್ನೊದಗಿಸಿ ತನ್ನ ತಂಡವೇ ತನಗೊಂದು ಕುಟುಂಬವಿದ್ದಂತೆ ಎಂಬ ಅಭಿಪ್ರಾಯವನ್ನು ಹೊಂದಿದ ಇವರಿಗೆ ಹಲವಾರು ಸಂಘ ಸಂಸ್ಥೆಗಳು ಪುರಸ್ಕರಿಸಿವೆ. ಜೆ.ಸಿ.ಐ ಮಡಂತ್ಯಾರ್ ನ ಬಲೆ ತೆಲಿಪಾಲೆ ಹಾಸ್ಯ ಕಾರ್ಯಕ್ರಮದಲ್ಲಿ ಸ್ವತಃ ತಾವೇ ಸಂಗೀತ ಮತ್ತು ನಿರ್ದೇಶನ ಮಾಡಿದ ತಂಡಕ್ಕೆ ಎರಡನೇ ಸ್ಥಾನದ ಇನಾಮು, ಜಿಲ್ಲಾ ಮಟ್ಟದ ನಾಟಕ ಪಂಥದಲ್ಲಿ ಇವರು ಬರೆದು ನಿರ್ದೇಶಿಸಿದ ನಾಟಕಕ್ಕೆ ಮೂರನೇ ಸ್ಥಾನ, ‘ಕೊಪ್ಪರಿಗೆ’ ಎಂಬ ನಾಟಕ ರಚನೆಗಾಗಿ ಬೊಂಬಾಯಿಯ ರಂಗ ತುಡರ್ ಬಿವುಂಡಿ ತಂಡದಿಂದ ಗೌರವ ಸನ್ಮಾನ, ಕಲಾ ಸಾಧನೆಗಾಗಿ ಬೆಂಗಳೂರು ಯುವವಾಹಿನಿ ರಿ. ಬೆಂಗಳೂರು ಘಟಕ ಹಾಗೇ ಯುವವಾಹಿನಿ ರಿ. ಸಸಿಹಿತ್ಲು ಘಟಕ ಮತ್ತು ಹಳೆವಿದ್ಯಾರ್ಥಿ ಸಂಘ ಚಂದಳಿಕೆ ಶಾಲೆಯ ಆಶ್ರಯದಲ್ಲಿ ನಡೆದ ಸನ್ಮಾನಗಳು ಮರೆಯಲಾಗದ ನೆನಪು ಎಂದೆನ್ನುತ್ತಾರೆ ಮಧು ಬಂಗೇರ ಕಲ್ಲಡ್ಕ.

ಈಜಿದಷ್ಟು ಸಾಗರ ಸೇರದು ಎನ್ನುವಂತೆ ಇವರ ಸಾಧನೆಯ ಹಾದಿಯನ್ನು ಬರೆದಷ್ಟು ಮುಗಿಯದು. ಇಂತಹ ನಾಟಕಪ್ರೇಮಿಯನ್ನು ಪಡೆದ ನಮ್ಮೀ ಸಮಾಜ ಭಾಗ್ಯಶಾಲಿ ಎಂದು ಹೇಳಿದರೆ ತಪ್ಪಾಗಲಾರದು. ತನ್ನ ವಿಭಿನ್ನ ನಾಟಕ ಬರಹದೊಂದಿಗೆ 27 ವರುಷಗಳ ಅನುಭವವನ್ನು ಹೊಂದಿರುವ ಇವರು ತನ್ನದೇ ಕಥೆ, ಚಿತ್ರಕಥೆ, ನಿರ್ದೇಶನದ ‘ಕಾಯರ್ ಮಾರ್’ ಎಂಬ ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಕಿರುಚಿತ್ರ ಬೇಗನೆ ಬಿಡುಗಡೆಗೊಳ್ಳಲಿದೆ. ನಿಮ್ಮ ಈ ನಾಟಕಪ್ರೇಮ ಶಾಶ್ವತವಾಗಿದ್ದು ಇನ್ನಷ್ಟು ಪ್ರತಿಭೆಗಳು ನಿಮ್ಮ ಮೂಲಕ ಬೆಳಕಿಗೆ ಬರಲಿ ಎಂದು ಆಶಿಸುತ್ತಾ ಶ್ರೀ ನಾರಾಯಣ ಗುರುಗಳ ಆಶೀರ್ವಾದ ಕೋಟಿಚೆನ್ನಯರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಬಿಲ್ಲವ ವಾರಿಯರ್ಸ್ ಸಂಸ್ಥೆಯ ವತಿಯಿಂದ ಹಾರೈಸುತ್ತೇನೆ.

ಬರಹ: ಯಕ್ಷಿತಾ ಆರ್, ಮೂಡುಕೊಣಾಜೆ
(Copyrights owned by: billavaswarriors.com )


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »