TOP STORIES:

FOLLOW US

ಕುಂಚದಲ್ಲಿ ಚಿತ್ರದ ನಾವಿಕನಾಗಿ,ಅಭಿನಯದಲ್ಲಿ ವಿಭಿನ್ನನಾಗಿ ನಿಂತ ಬಂಟ್ವಾಳದ “ರವಿ ಸಾಲ್ಯಾನ್”


ಬದುಕು ಎಂದರೆ ಸಮುದ್ರದ ನಡುವೆ ದೋಣಿಯಲ್ಲಿ ಸಾಗಿದ ರೀತಿಯೇ,ಹಾಯಿಗೋಲು ನಮ್ಮ ಕೈಯಲ್ಲೇ ಇದ್ದರೂ,ಒಂದೊಂದು ಸಲ ಗಾಳಿ ಬಂದ ಕಡೆ ಸಾಗಲೇ ಬೇಕು.ಇಲ್ಲದಿದ್ದರೆ ಗಾಳಿಯೇ ತನ್ನತ್ತ ತಿರುಗಿಸಿ ನಮ್ಮ ಗುರಿಯನ್ನು ವಿಚಲಿತಗೊಳಿಸುತ್ತದೆ..!

ದಾರಿ ತಪ್ಪಿದರು ಗುರಿ ತಪ್ಪಲೇಬಾರದು ಅಲ್ಲವೇ..!!

ಕಲಾವಿದನೊಳಗೊಬ್ಬ ಕಲಾವಿದನನ್ನು ಮೇಳೈಸಿದ ಕಲಾವಿದ “ರವಿ ಸಾಲ್ಯಾನ್”.

ಆನಂದ ಪೂಜಾರಿ ಮತ್ತು ಕುಸುಮಾರವರ ಎರಡನೇಯ ಮಗನಾಗಿ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದಲ್ಲಿ ಜನಿಸಿದ ರವಿ,ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಪಾದೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಮಣಿನಾಲ್ಕೂರುವಿನಲ್ಲಿ ಪೂರ್ಣಗೊಳಿಸಿದರು.
ಎಲ್ಲರಿಗೂ ಶಾಪವಾಗಿ ಪರಿಣಮಿಸಿದ ಬಡತನ ಇವರನ್ನೂ ಕೂಡ ಬಿಡಲೇ ಇಲ್ಲ..! ಒಂದು ತುತ್ತು ಅನ್ನಕ್ಕಾಗಿ ಪರದಾಡಿದ ಉದಾಹರಣೆಯನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.

10ನೇಯ ತರಗತಿ ಮುಗಿದ ನಂತರ ಒಂದಿಷ್ಟೂ ಹಣಕ್ಕಾಗಿ ಬೆಂಗಳೂರಿಗೆ ಬಂದು ದುಡಿದ ದಿನ ಇವರ ಪಾಲಿನಲ್ಲಿ ಇತ್ತು..!!ತದನಂತರ ಊರಿಗೆ ಮರಳಿ ತಾಂತ್ರಿಕ ಶಿಕ್ಷಣವನ್ನು ಕೂಡ ಪಡೆದರು.

ಶಾಲಾ ದಿನಗಳಲ್ಲಿ ಇದ್ದ ಚಿತ್ರ ಕಲೆಯ ಬಗ್ಗೆ ವಿಶೇಷ ಆಸಕ್ತಿ,ಇಂದು ರವಿ ಸಾಲ್ಯಾನ್ ರವರನ್ನು ಹಲವಾರು ಪ್ರತಿಭೆಗಳ ಮಧ್ಯೆ ತನ್ನ ಇರುವಿಕೆಯನ್ನು ತೋರ್ಪಡಿಸುತ್ತಿದ್ದಾರೆ.

ತಾಂತ್ರಿಕ ಶಿಕ್ಷಣವನ್ನು ಪೂರೈಸಿದ ನಂತರ ಉದ್ಯೋಗಕ್ಕಾಗಿ ಮತ್ತೊಮ್ಮೆ ಬೆಂಗಳೂರಿನತ್ತ ಪಯಣಿಸಿ,ಪ್ರತಿಷ್ಠಿತ ಖಾಸಗಿ ಕಂಪನಿಯಾದ ಟೊಯೊಟಾದಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಏನಾದರೂ ಸಾಧನೆ ಮಾಡಲೇಬೇಕೆಂಬ ಅತೀವ ಬಯಕೆ,ಅದರ ಜೊತೆ ಸಾಗಿದ ಹಠ,ಅದನ್ನು ಪಡೆಯಲು ಹೊತ್ತು ತಂದ ಪರಿಶ್ರಮದ ಮೂಟೆ ಇಂದು ರವಿಯವರನ್ನು ಕಲಾವಿದನೊಳಗೊಬ್ಬ ಕಲಾವಿದನನ್ನು ಹುಟ್ಟು ಹಾಕಿದೆ ಎಂದರೆ ತಪ್ಪಾಗಲಾರದು..!

ಬೆಂಗಳೂರಿನಲ್ಲಿ ನಾಗರಾಜ್ ಕೋಟೆಯವರ ಮಾರ್ಗದರ್ಶನದಲ್ಲಿ “ಬಣ್ಣ” ಸಂಸ್ಥೆಯ ಜೊತೆಯಲ್ಲಿ ‘ಜೋಗಿಯ ರಾಣಿ’ ಎಂಬ ನಾಟಕದಲ್ಲಿ ಬಣ್ಣ ಹಚ್ಚಿ ತನ್ನ ಅಭಿನಯದ ಯಾತ್ರೆಗೆ ಪೂರ್ಣ ಕುಂಭ ಸ್ವಾಗತವನ್ನು ಕೋರಿದರು.

ಅಗ್ನಿ ಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ ನೇತೃತ್ವದಲ್ಲಿ “ಆಮಂತ್ರಣ”ವೆಂಬ ಕಿರು ಚಿತ್ರದಲ್ಲಿ ಮೊದಲನೆಯ ಬಾರಿಗೆ ಅಭಿನಯಿಸಿದರು.

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಗೀತಾಂಜಲಿ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಸಿಲ್ಲಿ ಲಲ್ಲಿ ಮತ್ತು ಶಾಂತಮ್ ಪಾಪಂ ಧಾರಾವಾಹಿಗಳಲ್ಲಿ ನಟಿಸಿದ ಹೆಗ್ಗಳಿಕೆ ರವಿ ಅವರದು.ಹಾಗೆಯೇ ಜೀ ಕನ್ನಡದಲ್ಲಿ ಪ್ರಸಾರವಾದ “ಬ್ರಹ್ಮ ಗಂಟು” ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ.
‘ಗರ್ನಲ್ ‘ ಎಂಬ ಕಿರು ಚಿತ್ರದಲ್ಲಿ ನಾಯಕನಾಗಿ ನಟಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದ ರವಿಯವರು,ಕಲರ್ಸ್ ಕನ್ನಡದಲ್ಲಿ “ಮಂಗಳ ಗೌರಿ ಮದುವೆ”ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದಲ್ಲಿ ಬಣ್ಣ ಹಚ್ಚಿದ ಹಿರಿಮೆ ಇವರದು.

ರಾಜು ಕನ್ನಡ ಮೀಡಿಯಂ ಚಲನಚಿತ್ರದಲ್ಲಿ ನಟನೆ ಹಾಗೂ ಬಿಡುಗಡೆಗೆ ಸಿದ್ಧವಾದ ಥಗ್ ಆಫ್ ರಾಮಗಢ ಎಂಬ ಚಿತ್ರದಲ್ಲೂ ಕೂಡ ಅಭಿನಯಿಸಿದ್ದಾರೆ.
“ತದನಂತರ” ಎಂಬ ರಾಜೇಶ್ ಧ್ರುವ ನಿರ್ದೇಶನದ ಚಿತ್ರದಲ್ಲಿ ಅಭಿನಯದ ಜೊತೆಗೆ ಹಾಗೆಯೇ ಮನುರವರ ನಿರ್ದೇಶನದ ಹೊಸ ಚಿತ್ರದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಸುಶಾಂತ್ ಶೆಟ್ಟಿ ನಿರ್ದೇಶನದ ಮಗದೊಂದು ಕಿರು ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

ಪ್ರವೃತ್ತಿಯಲ್ಲಿ ಚಿತ್ರ ಕಲಾವಿದ ಆಗಿರುವ ರವಿಯವರು ತನ್ನ ಕುಂಚದಲ್ಲಿ ಹಲವಾರು ಪೆನ್ಸಿಲ್ ಚಿತ್ರ ಮತ್ತು ವಾಟರ್ ಕಲರ್ ಪೈಂಟಿಂಗ್ ನ್ನು ಮಾಡಿ ಅನೇಕ ಗಣ್ಯರನ್ನು ಮೂಕ ವಿಸ್ಮಿತನನ್ನಾಗಿ ಮಾಡಿದ ಇವರು,ಕನ್ನಡ ಮೇರು ನಟರಾದ ಶಿವರಾಜ್ ಕುಮಾರ್,ಕೇಂದ್ರ ಸಚಿವ ಅನುರಾಗ್ ಠಾಕೂರ್,ಪುನೀತ್ ರಾಜ್ ಕುಮಾರ್,ವಿಜಯೇಂದ್ರ ಯಡಿಯೂರಪ್ಪ,ರಾಜೇಶ್ ನಾಯ್ಕ್,ಉಪೇಂದ್ರ ಮತ್ತು ಸಾಲು ಮರದ ತಿಮ್ಮಕ್ಕರವರ ಮರು ಚಿತ್ರವನ್ನು ಬಿಡಿಸಿ ಅವರಿಂದಲೂ ಸೈ ಎನಿಸಿಕೊಂಡಿದ್ದಾರೆ.ಈಗಾಗಲೇ ನೂರಕ್ಕಿಂತ ಹೆಚ್ಚಿನ ಚಿತ್ರವನ್ನು ಬಿಡಿಸಿ,ವಿಭಿನ್ನ ಕಲೆಯಿಂದ ಎಲ್ಲರಿಂದ ಪ್ರಶಂಸೆಗೆ ಒಳಗಾದ ರವಿಯವರು,ಬೆಂಗಳೂರಿನ ಕೆಂಗೇರಿಯಲ್ಲಿ “ಸಾಲ್ಯಾನ್ ಗ್ಯಾಲರಿ” ಎಂಬ ಟ್ಯಾಟೂ ಸಂಸ್ಥೆಯನ್ನು ಹೊಂದಿದ್ದಾರೆ.

ಬಣ್ಣದ ಜಗತ್ತಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ರವಿಯವರು,ತನ್ನ ಕುಂಚದಲ್ಲಿ ವಿಭಿನ್ನ ಶೈಲಿಯ ಮರು ಚಿತ್ರಗಳಿಗೆ ಜೀವ ತುಂಬಿ ಜೀವ ಇರುವಂತೆ ಬಿತ್ತಿಸಿದ ಕಲಾವಿದ ಇವರು.

ರವಿಯವರ ಅಣ್ಣ ಜಯಂತ್ ಸಾಲ್ಯಾನ್ ಕೂಡ ವಿಶಿಷ್ಠ ಶೈಲಿಯ ರಂಗೋಲಿ ಕಲಾವಿದರು ಹೌದು..!
ಸಾಧನೆಯ ಹಿಂದಿನ ಕಠಿಣ ದಾರಿಯೂ ಕೂಡ ಸಾಧೆನೆಯೇ ಅಲ್ಲವೇ..!?
ಇನ್ನಷ್ಟು ವೇದಿಕೆಗಳು ಮತ್ತು ಅವಕಾಶಗಳು ರವಿಯವರಿಗೆ ಸಾಗಿ ಬರಲಿ ಎಂಬುವುದೇ ನಮ್ಮ ಆಶಯ..

ಬರಹ : ವಿಜೇತ್ ಪೂಜಾರಿ ಶಿಬಾಜೆ.


Share:

More Posts

Category

Send Us A Message

Related Posts

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share       ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »