TOP STORIES:

FOLLOW US

ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವತಿಯಿಂದ ರಿಯಾದ್ ನಲ್ಲಿ ಬಹ್ಮಶೀ ನಾರಾಯಣ ಗುರುಗಳ 167ನೇ ಗುರು ಜಯಂತಿ ಆಚರಣೆ


ಬಿಲ್ಲವ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವತಿಯಿಂದ ರಿಯಾದ್ ನಲ್ಲಿ ಬಹ್ಮಶೀ ನಾರಾಯಣ ಗುರುಗಳ 167 ನೇ ಗುರುಜಯಂತಿಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು. ಇದರ ಅಂಗವಾಗಿ ಸಭಾ ಹಾಗೂ ಸಾಂಸೃತಿಕ ಕಾರ್ಯಕ್ರಮಗಳನ್ನುಆಯೋಜಿಸಲಾಗಿತ್ತು.


ಕಾರ್ಯಕ್ರಮದ ಪ್ರಾರಂಭದಲ್ಲಿಕುಶಾಲ್ ಕರ್ಕೇರ ಅವರು ಪ್ರಾಸ್ತಾವಿಕ ಭಾಷಣಗೈದರು. ಶ್ರೀಮತಿ ಶೀಬಾ ಸುಧೀರ್ ಉಳ್ಳಾಲ್, ಕೋರ್ ಸಮಿತಿ ಸದಸ್ಯರಾದಭಾಸ್ಕರ್ ಕೊಟ್ಯಾನ್, ಲೀಲಾದರ್ ಗುಜರನ್, ಸತೀಶ್ ಕುಮಾರ್ ಬಜಾಲ್, ಭಾಸ್ಕರ್ ಪೂಜಾರಿ, ಪ್ರಕಾಶ್ ಅಮೀನ್, ಸುಂದರ್ದಾಸ್ ಪೂಜಾರಿ, ಸತೀಶ್ ಅಮೀನ್ ,ಚಂದ್ರಶೇಕರ್ ಪೂಜಾರಿ , ಚೇತನ ಸದಾಶಿವ ಪೂಜಾರಿ,ರಕ್ಷಿತಾ ಜಗದೀಶ್, ಸುಮಿತ್ರಾ ಭಾಸ್ಕರ್ಇವರನ್ನು ಹಾಗೂ ಮುಖ್ಯ ಅತಿಥಿಗಳಾದ ಶ್ರೀಯುತ ಸದಾಶಿವ ಪೂಜಾರಿ, ಶೇಖರ್ ಕೋಟ್ಯಾನ್, ಉದಯ ಸನಿಲ್, ಚಂದ್ರಕಾಂತ್ಅಮೀನ್, ವಿಶ್ವನಾಥ್ ಸುವರ್ಣ , ಇವರುಗಳನ್ನು ವೇದಿಕೆಗೆ ಆಹ್ವಾನಿಸಿದರು.

ಅತಿಥಿಗಳು ದೀಪ ಬೆಳಗಿಸುವ ಮೂಲಕ ಹಾಗೂ ರಂಜಿತ್ ಕಕ್ಕಿಂಜಿ (ರಂಜು ತುಳು ರಂಗ ಪ್ರೇಮಿ) ವಿಘ್ನವಿನಾಶಕ ಶ್ಲೋಕದೂಂದಿಗೆಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದಾನಂತರ ದಮ್ಮಾಮ್ಅಲ್ಖೋಬರ್ , ಜುಬೈಲ್ , ರಿಯಾದ್, ಅಭಾ. ಕಲಾವಿದರಿಂದ ನೃತ್ಯ, ಹಾಡುಗಳಲ್ಲದೆ. ವಿಭಿನ್ನ ರೀತಿಯ ಮನೋರಂಜನಾ 

ಕಾರ್ಯಕ್ರಮಗಳು ಪ್ರೇಕ್ಷಕರಮನಸೂರೆಗೊಂಡವು. ಹಾಗೂ

2021-2022 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ, ದಮ್ಮಾಮ್(MASA) ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಅವರು ಪ್ರಕಟಿಸಿದರು.ಅಧ್ಯಕ್ಷರು ಶ್ರೀಯುತಲೀಲಾದರ್ ಗುಜರನ್ , ಹಾಗೂ ಗೌರವ ಅಧ್ಯಕ್ಷರು , ಕೆ.ಸಿ.ಭಾಸ್ಕರ್ , ಉಪಾಧ್ಯಕ್ಷರುಗಳುಚೇತನಾ ಸದಾಶಿವ ಪೂಜಾರಿ, ರಕ್ಷಿತಾಜಗದೀಶ್, ಪ್ರಧಾನ ಕಾರ್ಯದರ್ಶೀ ಪ್ರಕಾಶ್ ಅಮೀನ್ , ಜೊತೆ ಸಹಕಾರ್ಯ ದರ್ಶಿ ಸುಂದರ್ ದಾಸ್  ಪೂಜಾರಿ, ಖಜಾಂಚಿ  : ಚಂದ್ರಶೇಖರ್ ಹಾಗೂ ಉಪ ಖಜಾಂಚಿ ಸುಮಿತ್ರ ಭಾಸ್ಕರ್ ಇವರೆಲ್ಲರು ಅವಿರೋಧವಾಗಿ ಆಯ್ಕೆಯಾದರು.

ಕೊರೋನದ ಕಷ್ಟ ಸಮಯದಲ್ಲಿ ರೋಗಿಗಳಿಗೆ ಹಾಗೂ ಆರ್ಥಿಕವಾಗಿ ಸಮಸ್ಯೆ ಇದ್ದವರಿಗೆ ರಾತ್ತಿ ಹಗಲು ಎನ್ನದೆ, ಅಶಕ್ತರಿಗೆ ಸಹಾಯಮಾಡಿದ ಹಾಗೂ ಸೌದಿಯಲ್ಲಿ ಕೊರೋನ ಸಮಯದಲ್ಲಿ ಮತ್ತು ಇನ್ನಿತರ ಸಮಯದಲ್ಲಿ ಮೃತ ಪಟ್ಟವರ ಮೃತ ದೇಹವನ್ನು ಎಲ್ಲಾಸರಿಯಾದ ದಾಖಲೆ ಪತ್ರ ಗಳೊಂದಿಗೆ ಅವರ ಕುಟುಂಬಕ್ಕೆ ತಲುಪಿಸುವ ಮೂಲಕ ಮಾನವೀಯತೆ ಮೆರೆದ ನಾಲ್ವರುಮಹಾನೀಯರಾದ ಶ್ರೀ ಸತೀಶ್ ಕುಮಾರ್ ಬಜಾಲ್ , ಸತೀಶ್ ಅಮೀನ್ , ಸುಂದರ್ ದಾಸ್ ಪೂಜಾರಿ, ಸುದೀರ್ ಕೊಟ್ಯಾನ್ , ಇವರೆಲ್ಲರಿಗೆಆಪತ್ಭಾಂದವರುಎಂಬ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಕಾಶ್ ಅಮೀನ್ , ಅವರನ್ನುರೀಯಾದ್ ಬಿಲ್ಲವಾಸ್ ನಲ್ಲಿ ಹಲವು ವರ್ಷಗಳಿಂದ ಸಕ್ರೀಯವಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರಿಗೆ ಶಾಲು ಹೊದಿಸಿಸನ್ಮಾನಿಸಲಾಯಿತು ಮತ್ತು 60 ವರ್ಷ ಸಂಪೂರ್ಣ ಗೊಂಡ ಸಂಘದ ಕ್ರೀಯಾಶೀಲಾ ಹಿರಿಯರಾದ ಶ್ರೀಕಾಂತ್ ಅಮೀನ್, ಹೆಜಮಾಡಿರರಿಗೆ

ಇವರಿಗೂ. ಸಂಘದ ವತಿಯಿದ ಸನ್ಮಾನಿಸಿ ಗೌರವಿಸಲಾಯಿತು.ಸಂಪೂರ್ಣ  ಕಾರ್ಯಕ್ರಮವನ್ನು ಪ್ರವೀಣ್ ಪೂಜಾರಿ, ಕುಂಜತಬೈಲ್ಅವರು ನಿರ್ವಹಿಸಿದರು.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »