TOP STORIES:

FOLLOW US

ಅಮ್ಮ ಹಚ್ಚಿದ ದೀಪಾವಳಿಯ ಹಣತೆ..!! ಬರಹ: ವಿಜೇತ್ ಪೂಜಾರಿ ಶಿಬಾಜೆ


ಬೆಳಗ್ಗೆ ಮಾಡಿದ್ದ ಒಣಗಿದ ರೊಟ್ಟಿಯ ತುಂಡನ್ನು ಸೂರ್ಯ ಇನ್ನೇನೋ ಮುಳುಗುವ ಹಂತಕ್ಕೆ ಬಂದಿದ್ದಾನೆ ಎನ್ನುವ ಅವಸರದಲ್ಲಿ ಕೈಯಲ್ಲಿ ಹಿಡಿದ ಮಗ,ಅದರ ಜೊತೆಗೆ ಬಿಟ್ಟು ಬಿಡದ ಹಾಳಾದ ತಲೆ ನೋವಿಗೆ ಇಳಿ ಸಂಜೆ ಮೂರರ ಹೊತ್ತಿಗೆ ಮಾಡಿದ ತಾಯಿಯ ಕರಿ “ಟೀ”ಯ ಉಳಿದ ಒಂದಿಷ್ಟನ್ನೂ ಕುಡಿಯುತ್ತಾ, ಸೊಟ್ಟಗಿನ ಪಾತ್ರೆಯ ತಳದಲ್ಲಿ ಇದ್ದ ಟೀ ಪುಡಿಯನ್ನು ಬಾಯಿಯಿಂದ ಉಫ್ ಉಫ್ ಎಂದು ಬದಿಗೆ ಸರಿಸಿ ತುಂಡು ರೊಟ್ಟಿಯ ಒಂದು ಭಾಗವನ್ನು ಇನ್ನೇನು ಅದರಲ್ಲಿ ಅದ್ದಿ ಬಾಯಿಗಿಡಬೇಕು ಎನ್ನುವಷ್ಟರಲ್ಲಿ ಅದೇ ಮರುಗಿದ ಧ್ವನಿಯ ಲಯದಲ್ಲಿ ಒಳಗಿಂದ ಕೇಳಿದ ಆ ಮಾತಿಗೆ ಇದ್ದ ರೊಟ್ಟಿಯನ್ನು ಮೂಲೆಯಲ್ಲಿ ಅರ್ಧ ಕಬ್ಬಿನ ಸರಪಳಿ ಮತ್ತು ಗೋಣಿ ಚೀಲದಲ್ಲಿ ಮಾಡಿದ ಹಗ್ಗದಲ್ಲಿ ಬಂಧಿಯಾದ ಟಾಮಿಗೆ ಕೂತಲ್ಲಿಂದ ಎಸೆದು ಬಿಟ್ಟ,ಆ ರೊಟ್ಟಿಯ ತುಂಡು ಪಕ್ಕದಲ್ಲಿ ಬೀಳದೆ ತನ್ನ ಕಾಲು ಮತ್ತು ಕೈಯಿಂದ ಹೇಗೋ ಮಾಡಿ ಮಣ್ಣಿನ ಮುದ್ದೆಯ ಜೊತೆಗೆ ಆ ರೊಟ್ಟಿಯ ತುಂಡನ್ನು ತಿಂದು ಬಿಟ್ಟ..!

ಮತ್ತೇ ಆ ಧ್ವನಿ ಬಿರುಸಾಗಿತ್ತು..

“ನಮ ನರಮನಿ ಲೆಕಾ ಏಪಾ ಆಪನ”(ನಾವು ಯಾವಾಗ ಮನುಷ್ಯರಂತೆ ಆಗುತ್ತಿವೋ).

ಇತ್ತ ಮಗ ಚಂದು ಅದೇನೋ ಟಾಮಿಯನ್ನು ನೋಡುತ್ತಿರುವಾಗ ಮುಂದಿನ ವಾರ ದೀಪಾವಳಿ ಅಲ್ಲವ ಎಂದು ಒಂದು ಸಲ ಆಲೋಚಿಸಿ,ಅಮ್ಮನಲ್ಲಿ “ಅಮ್ಮ ಬರ್ಪುನ ವಾರ ಪರ್ಬ ಅತ”(ಮುಂದಿನ ವಾರ ದೀಪಾವಳಿ ಅಲ್ಲವೇ) ಎಂದು ಬಳಲಿದ ಧ್ವನಿಯಲ್ಲಿ ಇತ್ತ ಹೇಳದಂತೆಯು ಇತ್ತ ಕಡೆ ಕೇಳದಂತೆಯು ಹೇಳಿ ಬಚ್ಚಲು ಮನೆಗೆ ಬಿಸಿ ನೀರು ಕಾಯಿಸಲು ನಿನ್ನೆ ಇಟ್ಟ ಚಿಮಿಣಿ ದೀಪದ ಕಡೆ ಕೈಯಾಡಿಸಿ ಮಸಿ ಬಳಿದ ಆ ದೀಪವನ್ನು ಎತ್ತಿಕೊಂಡು ಹೊರ ನಡೆದನು ಚಂದು..!

ಇತ್ತ ಕಡೆ ಚಂದುನ ಅಮ್ಮ ಒಲೆಯ ಮೇಲೆ ಮೂಲೆಯಲ್ಲಿ ಇದ್ದ ಮಣ್ಣಿನ ಪಾತ್ರೆ ಮಸಿಯಿಂದ ಕಪ್ಪಾಗಿದ್ದನ್ನು ತೊಳೆಯಲು ಎಟುಗದ ಕೈಯಿಂದ ಹೇಗೋ ಕೆಳಗೆ ಇಳಿಸಿ ಹೊರ ನಡೆದಳು.

ಬಚ್ಚಲು ಮನೆ ದಾಟಿ ಸಾಗುವಾಗ “ಒಂದು ಸಿಹಿ ಮಾಡಲು ಒಂದು ಬೆಲ್ಲ ಕೂಡ ಇಲ್ಲಿ ಇಲ್ಲ” ಎಂದು ಗೊಣಗುತ್ತಾ ಹಳೆಯ ಕಲ್ಲಿನ ಮೆಟ್ಟಿಲನ್ನು ದಾಟಿ ತೋಟದ ತೊರೆಯತ್ತ ಸಾಗಿದಳು.ಇತ್ತ ಕಡೆ ಚಂದು ಆ ಮಣ್ಣಿನ ಮಡಿಕೆಯನ್ನು ನೋಡುತ್ತಾ,ಕಳೆದ ಬಾರಿ ಅಕ್ಕ ಗಂಡನ ಮನೆಯಿಂದ ಬಂದಾಗ ರಫೀಕಜ್ಜನ ಅಂಗಡಿಯಿಂದ ತಂದ ಆ ಮಡಿಕೆಯ ಪಾತ್ರೆಗಳು,ಅದರ ಜೊತೆಗೆ ಒಂದಿಷ್ಟೂ ತಂದ ದಿನಸಿಯ ಹಣವನ್ನು ಮೊನ್ನೆ ಮೊನ್ನೆ ಇದ್ದ ಕರಿ ಮೆಣಸನ್ನು ಮಾರಿ ಕೊಟ್ಟು ಬಂದಾಗ,ಕೋಪದಿಂದ ಅಜ್ಜ ಬಾಯಿಗೆ ಬಂದ ಹಾಗೆ ಬೈದು ನೀನು ಇನ್ನು ಇಲ್ಲಿಗೆ ಬರಬೇಡ ಅಂದದ್ದು ಕೂಡ ನೆನಪಾಗಿ ಹೋಯಿತು..!

ಇಂತಹ ಕಷ್ಟದಿಂದ ಇನ್ಯಾವಾಗ ನಾವು ಬರುತ್ತೇವೆ ಎನ್ನುತ್ತಾ,ಈ ದೀಪಾವಳಿಗೂ ಅಕ್ಕಾ ಬರುವಳು ಎನ್ನುವ ಮಾಹಿತಿಯನ್ನೂ ಮೊನ್ನೆ ಮೊನ್ನೆ ಪಕ್ಕದ ಮನೆಯ ಗೌಡರು ಹೇಳಿದ್ದು ನೆನಪಾಯಿತು.!( ಅಲ್ಲಿ ಮಾತ್ರ ದೂರವಾಣಿಯ ಸಂಪರ್ಕ ಇತ್ತು.)

ಇತ್ತ ಕಡೆ ತಾಯಿ ಆ ಪಾತ್ರೆಯನ್ನು ಮೊದಲಿನಂತೆ ಸ್ವಚ್ಚ ಮಾಡಿ ಸುಸ್ತಾದ ದೇಹದಿಂದ ಮೆಟ್ಟಿಲು ಹತ್ತುತ್ತಾ ಮನೆಯ ಒಳಗಡೆ ನಡೆದಳು.

ಯಾವುದೋ ವಸ್ತುವನ್ನು ಹುಡುಕುತ್ತಾ ಸಾಗಿದ ಚಂದುನ ಅಮ್ಮನಿಗೆ ಎಂದೋ ಇಟ್ಟಿದ್ದ “ಹಣತೆ”ಯ ಕಟ್ಟು ಧೋಪ್ಪನೆ ಕೆಳಗೆ ಬಿದ್ದು ಬಿಡ್ತು..!
ಅದರಲ್ಲಿ ಒಡೆಯದೆ ಇದ್ದ ಎರಡೂ ಮೂರು ಹಣತೆಯನ್ನು ತೆಗೆದು ದೇವರ ಪಟದ ಹತ್ತಿರ ಇದ್ದ ನಿನ್ನೆ ಉಳಿದ ಬತ್ತಿಯ ತುಂಡನ್ನು ತೆಗೆದು ಎಣ್ಣೆ ಹಾಕಿ ಹಣತೆಯನ್ನು ಹಚ್ಚಿ ಬಿಟ್ಟಳು..!

ಇತ್ತ ಚಂದು ಆ ಹಣತೆಯ ಬೆಳಕನ್ನು ನೋಡಿ ಏನೋ ಖುಷಿಯಾಗಿ “ಅಮ್ಮ ಹಚ್ಚಿದ ದೀಪಾವಳಿಯ ಹಣತೆ “ಎಂದುಕೊಂಡು,ತೋಟದ ಬದಿಯಲ್ಲಿ ನೆಟ್ಟಿದ್ದ ಮರ ಗೆಣಸು ಎರಡು ಮೂರು ದಿನದಿಂದ ಹಂದಿ ಮತ್ತು ಹೆಗ್ಗಣದ ಬಾಯಿಗೆ ತುತ್ತಾಗಿದ್ದನು ಬೆಳಗ್ಗೆ ಕಂಡಿದ್ದನು.

ಸಿಕ್ಕಿದಷ್ಟು ಸಿಗಲಿ ಎಂಬ ಭಾವದಿಂದ ಹಳೆಯ ಹಾರೆಯನ್ನು ಕೊಟ್ಟಿಗೆಯ ಮೇಲಿಂದ ತೆಗೆದು ಹೆಗಲಿಗೆ ಇರಿಸಿ ಇನ್ನೇನೋ ಕತ್ತಲೆ ಆಗಬೇಕು ಎನ್ನುವ ಸಮಯದಲ್ಲೇ ಹೊರ ನಡೆದನು..

ಬರಹ: ವಿಜೇತ್ ಪೂಜಾರಿ ಶಿಬಾಜೆ


Share:

More Posts

Category

Send Us A Message

Related Posts

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share       ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share       ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »