TOP STORIES:

ಮುಂಬೈಗರ ಮನಗೆದ್ದ ಗೋವಿಂದ ಬಾಬು ಪೂಜಾರಿ


ಕರುನಾಡ ಕರುಣೆಯ ಕಾಮಧೇನು ಹಾಗೂ ನನ್ನ ಆತ್ಮೀಯರಾದ ಶ್ರೀ ಗೋವಿಂದ ಬಾಬು ಪೂಜಾರಿಯವರೇ,ನಿನ್ನೆ ಮುಂಬೈ ಬಿಲ್ಲವಭವನದಲ್ಲಿ ನಿಮಗೆ ಆಯೋಜಿಸಿದ ಗೌರವ ಪೂರ್ಣ ಸನ್ಮಾನಕ್ಕೆ ನಾವೆಲ್ಲ ಸಂಭ್ರಮ ಪಟ್ಟಿದ್ದೇವೆ.

ಹೌದು,

ನಿನ್ನೆ ನಾನಲ್ಲಿರಬೇಕಿತ್ತು

ಆದರೆ ಇರಲಾಗಲಿಲ್ಲ.

ನಿಮ್ಮ ಜೊತೆಗೆ ಮಾತಾಡುವ,ನಿಮ್ಮ ಮಾತಿಗೆ ಕಿವಿಯಾಗುವ ಅವಕಾಶಕ್ಕೆ ಅನಾನುಕೂಲ ಅಡ್ಡಿ ಆಯಿತು.ಮುಂಬೈಯಿಂದ ದೂರದಗುಜರಾತ್ ಅಹಮದ್ ನಗರಕ್ಕೆ ಬಂದಿದ್ದೆ.ಇಲ್ಲಿ ಕೊರೆಯುವ ಹಿಮದ ಚಳಿ.ಅದರ ತೀವ್ರತೆಗೆ ಜ್ವರ ಬಿಟ್ಟು ಹೋಗಲಾರೆ ಅನ್ನುತ್ತಿದೆ.

ನಿಮಗೆ ಸಿಗದೆ ಇದ್ದುದಕ್ಕೆ ಬೇಸರವಿದೆ.

ಇಂತಹ ಕಾರ್ಯಕ್ರಮಗಳಿಗೆ ಕಾರಣ ಹೇಳಿ ತಪ್ಪಿಸಿಕೊಳ್ಳಬಾರದು.

ಗೋವಿಂದ್ ಅಣ್ಣ ನಿನ್ನೆ ನಿಮ್ಮ ಸನ್ಮಾನ ವಾಚನದ ವೇಳೆ ಜನರ ಕಿವಿಗಡಚಿಕ್ಕುವ ಚಪ್ಪಾಳೆಗೆ ಇಡೀಯ ಸಭಾಂಗಣ ಸಾಕ್ಷಿಆಯಿತು.ನೀವು ಬದುಕಿನ ಹಾದಿಯಲ್ಲಿ ನಡೆದು ಬಂದ ಗಳಿಗೆಗಳ ಒಂದೊಂದು ಹೆಜ್ಜೆಗಳು ಅಲ್ಲಿ ಅನಾವರಣವಾಯಿತು.

ಹೊತ್ತಿನಲ್ಲಿಯೂ

ನಿಮ್ಮ ಮುಖದಲ್ಲಿ ಇದ್ದದ್ದು  ಮಂದಹಾಸ ಬಿಟ್ಟರೇ,ಅಹಂಕಾರದ ಲವಲೇಶವೂ ಇರಲಿಲ್ಲ.

ನನ್ನ ಅನೇಕ ಸ್ನೇಹಿತರು ಇವತ್ತು ಕಾಲ್ ಮಾಡಿ ನಿಮ್ಮ ಸರಳತೆಯ ಬಗ್ಗೆ ಸೌಜನ್ಯತೆಯ ಬಗ್ಗೆ ಮಾತನಾಡಿದರು.

ಬದುಕಿದರೆ ನಿಮ್ಮಂತೆ ಬದುಕಬೇಕು ಅಂದರು.ಅವರೆಲ್ಲರಿಗೂ ನೀವು ಸ್ಫೂರ್ತಿ ಆದಿರಿ.ಅನೇಕರನ್ನು ಕರೆದು ನಿಮ್ಮೊಂದಿಗೆ ನಾನಿದ್ದೇನೆಅನ್ನುವ ದೈರ್ಯದ ಮಾತುಗಳನ್ನು ಆಡಿದ್ದು ತಿಳಿಯಿತು.ಅಂತಹ ಸಾಂತ್ವನ ನಿಮ್ಮಂತವರು ಮಾತ್ರ ಕೊಡಲು ಸಾಧ್ಯ ಗೋವಿಂದ ಅಣ್ಣ.

ಹಣ ಗಳಿಸುವುದು,ಅಂತಸ್ತನ್ನು ಸಂಪಾದಿಸುವುದು ಬಂಗ್ಲೆ ಕಾರುಗಳನ್ನು ಖರೀದಿಸುವುದು ವಿಶೇಷವಲ್ಲ.ಆದರೆ ಜನರ ಪ್ರೀತಿಯನ್ನುಗಳಿಸುವುದು ಅದರಲ್ಲೂ ಅನ್ಯ ರಾಜ್ಯದಲ್ಲಿ ಇಲ್ಲಿನವರ ಅಭಿಮಾನಕ್ಕೆ ಪಾತ್ರರಾಗುವುದಿದೆಯಲ್ಲಾ ಅದು ಸರ್ವಶ್ರೇಷ್ಠ.ಮಾನವೀಯತೆಮತ್ತು ಪ್ರಾಮಾಣಿಕತೆ ನಿಮ್ಮ ಮೂಲ ಗುಣಗಳು.

ಅದನ್ನು ನಿನ್ನೆ ಮುಂಬೈಯ ಜನ ಗುರುತಿಸಿದ್ದಾರೆ.

ನಿಮ್ಮನ್ನು ಬೇಟಿಯಾಗದೆ ಇದ್ದುದಕ್ಕೆ ಕ್ಷಮೆ ಕೋರುತ್ತಾ,ನಾನಿದ್ದಲ್ಲಿಗೆ ಬಂದಾಗ ನಾನು ನಿಮಗೆ ಸಿಗಲಿಲ್ಲ.ಆದರೆ ಕೆಲವೇ ಕೆಲವುದಿನಗಳಲ್ಲಿ ನಾನು ನೀವು ಇದ್ದಲ್ಲಿಗೆ ಅಂದರೇ ಬೆಂಗಳೂರಿಗೆ ಬಂದು ನಿಮ್ಮ ಜೊತೆಗೊಂದಿಷ್ಟು ಹೊತ್ತು ಇದ್ದು ಬರಲುತೀರ್ಮಾನಿಸಿದ್ದೇನೆ….

ನಿಮ್ಮನ್ನು ಸನ್ಮಾನಿಸಿದ ಬಿಲ್ಲವರ ಅಸೋಸಿಯೇಷನ್ ನನ್ನೆಲ್ಲ ಆತ್ಮೀಯ ಬಳಗಕ್ಕೆ ವಂದಿಸುತ್ತಾ,ನಿಮ್ಮ ಪ್ರೀತಿಗೆ ತಲೆಬಾಗುತ್ತಾ,

ನಿಮ್ಮ ಸಲಹೆ ಸಹಕಾರ ಯಾವತ್ತೂ ಹೀಗೆಯೇ ಇರಲಿ ಎಂದು ಆಶಿಸುವ

ಇಂತೀ ನಿಮ್ಮವ,

✍️ಉದಯ್ ಕುಂದಾಪುರ

             (ಮುಂಬೈ)


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »