TOP STORIES:

ಅರ್ಹ ಮಗುವಿಗೆ ಗುರುಬೆಳದಿಂಗಳು(ರಿ) ಕುದ್ರೋಳಿ ಮೂಲಕ ಶ್ರವಣ ಯಂತ್ರ ಕೊಡುಗೆ


ಸತೀಶ್ ಪೂಜಾರಿ ಬೆಳಪು, ದುಬೈ ಪಿತೃಶ್ರೀ ದಿ|ಸೂರು ಪೂಜಾರಿ ಪುಣ್ಯತಿಥಿ ಸ್ಮರಣಾರ್ಥ ಸಮಾಜಮುಖಿ ಕೊಡುಗೆ

ಸುಂದರ ಜೀವನ, ಜೀವನಕ್ಕಾಗಿ ದಾರಿ, ದಾರಿಗಾಗಿ ಕನಸು, ಕನಸಿಗಾಗಿ ಬದುಕು. ಎಲ್ಲವನ್ನು ರೂಪಿಸುವುದು ನಮ್ಮ ದೇಹ, ದೇಹದ ಪ್ರತಿಯೊಂದು ಅಂಗಗಳು , ಜ್ಞಾನೇಂದ್ರಿಯಗಳು ನಮ್ಮ ಜೀವನವನ್ನು ರೂಪಿಸುವ ಅಂಶವಾಗಿದೆ. ನೋವು, ಕಷ್ಟಗಳು ನಮ್ಮ ಜೀವಕ್ಕೆ ಮತ್ತು ಜೀವನಕ್ಕೆ ಯಾವ ಸಂದರ್ಭದಲ್ಲಿಯೂ, ಯಾವ ರೂಪದಲ್ಲಿಯೂ ಬರಬಹುದು. ಅದನ್ನು ನಿರ್ಣಯಿಸುವುದು ಸಮಯ. ಅದಕ್ಕೆ ವಯಸ್ಸಿನ ಅಂತರವಿಲ್ಲ ಜಾತಿಯ ಬೇಧವಿಲ್ಲ.

ಅಂಗಗಳ ನ್ಯೂನ್ಯತೆ ಬಂದಾಗ ಹತ್ತಿರದವರು ದೂರವಾಗುವುದು ಸಹಜ ಮತ್ತು ಅದನ್ನು ಸರಿಪಡಿಸುವುದು ಕಠಿಣ. ಈ ರೀತಿ ಸಮಸ್ಯೆಯೊಂದಿಗೆ ಮೂಲ್ಕಿಯ ಒಂದು ಪುಟ್ಟ ದ್ವೀಪದಲ್ಲಿ ಹುಟ್ಟಿದ ಮಗು ಶೌರ್ಯ. ಸುಂದರ ಮುಖ, ಮುಖದಲ್ಲಿ ನಿಷ್ಕಲ್ಮಶ ನಗು ಮತ್ತು ಶ್ರವಣ ಸಮಸ್ಯೆ. ಹುಟ್ಟಿದ ಮಗುವಿಗೆ ತನ್ನ ಒಂದು ವರ್ಷದ ಜೀವನದಲ್ಲಿ ಸಿಕ್ಕಿದ್ದು ಬಡತನ, ಕಂಡಿದ್ದು ತಂದೆಯ ಮರಣ, ತಾಯಿಯ ದುಃಖ ಕೇಳಿದ್ದು ಶೂನ್ಯ. ತಾಯಿ ಆಸ್ಪತ್ರೆಗೆ ಹೋದಾಗ ವೈದ್ಯರು ನೀಡಿದ್ದು 54000 ರೂ. ವೆಚ್ಚದ ಕಿವಿಯ ಯಂತ್ರ, ಮಾತಿನ ತರಬೇತಿಯ ಸಲಹೆ. ಅದು ಸಾಧ್ಯವಿಲ್ಲದ್ದಾಗ ಆ ತಾಯಿಯ ದಿಕ್ಕೇ ತೋಚದ ಭಾವ.

ಜೀವನವಿಡೀ ನೋವಿನ ಚೀಲವಾಗಿರುವಾಗ ನಂಬಿಕೆ ಮಾತ್ರ ಬದುಕಲು ದಾರಿ ತೋರುತ್ತದೆ. ಆದರೆ ಆ ನಂಬಿಕೆಯ ಹಸ್ತ ಮಾತ್ರ ವಿರಳವಾಗಿರುತ್ತದೆ. ಆ ನೊಂದ ತಾಯಿ ಮತ್ತು ಶೌರ್ಯನಿಗೆ ನಂಬಿಕೆಯ ಹಸ್ತವಾಗಿದ್ದು, ನಾರಾಯಣ ಗುರುಗಳ ಧ್ಯೇಯ ಹಾಗೂ ವಿಚಾರದಂತೆ ಕಾರ್ಯ ನಿರ್ವಹಿಸುತ್ತಿರುವ ಗುರುಬೆಳದಿಂಗಳು (ರಿ.) ಕುದ್ರೋಳಿ ಸಂಸ್ಥೆಯ ಪ್ರಮುಖ ದಾನಿಗಳಲ್ಲೋರ್ವರಾದ ಸದಾಕಾಲ ನೊಂದವರ ಮನಕ್ಕೆ ಸಾಂತ್ವನ ನೀಡುವ ಹಂಬಲವುಳ್ಳ, ಸಹೃದಯಿ ಸಮಾಜ ಸೇವಕ, ಕೊಡುಗೈ ದಾನಿ ಸತೀಶ್ ಪೂಜಾರಿ ಬೆಳಪು, ದುಬೈ ಇವರ ಪೂಜ್ಯ ತಂದೆಯವರಾದ ದಿ| ಸೂರು ಪೂಜಾರಿ ಇವರ ಪುಣ್ಯತಿಥಿಯ ಸ್ಮರಣಾರ್ಥ ಪುಟ್ಟ ಮಗು ಶೌರ್ಯನಿಗೆ ಶ್ರವಣ ಯಂತ್ರ ನೀಡುವ ಸಾರ್ಥಕ ಸೇವಾಕಾರ್ಯದ ಮೂಲಕ ತಮ್ಮ ಪಿತೃಶ್ರೀಯವರ ಹೆಸರು ಚಿರಕಾಲ ನೆನೆಯುವಂತೆ ಪುಣ್ಯತಿಥಿ ಆಚರಿಸಿದರು.

ಎರಡು ಜೀವನಕ್ಕೆ, ಎರಡು ಕನಸುಗಳಿಗೆ ಕಿವಿಕೊಟ್ಟು ಶೌರ್ಯನಿಗೆ ಆಧುನಿಕ ಯಂತ್ರ ನೀಡಿದ ದಾನಿಗಳಿಗೆ ನಾವು ಅಭಾರಿಯಾಗಿರುತ್ತೇವೆ.
ಮಗುವಿಗೆ ಇನ್ನೂ ಜೀವವಿದೆ, ಎಲ್ಲರಂತೆ ಓದುವ, ಬರೆಯುವ, ಕಲಿಯುವ ಅವಕಾಶವಿದೆ ಎಂದು ತೋರಿಸಿಕೊಟ್ಟ ದಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು. ನೀಡಿದ ನೆರವು ಮುಂದೊಂದು ದಿನ ಮರವಾಗಿ ಸಿಹಿಯಾದ ಫಲ ನಿಮ್ಮ ಮುಂದಿರುತ್ತದೆ ಎಂಬುದು ನಮ್ಮ ನಂಬಿಕೆ ಮತ್ತು ಆಶಯ.


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »