TOP STORIES:

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ ಮತ್ತು ನೃತ್ಯಾವಳಿಗಳಿಂದ ಕೂಡಿದ್ದ ಈ ರಸ ಸಂಜೆ, ಶೋತೃ ಗಡಣವನ್ನು ಹುಚ್ಚೆದ್ದು ಕುಣಿಯುವಂತೆ  ಮಾಡಿ, ಎಲ್ಲರ ಮನ ಸೂರೆಗೊಂಡಿತು.

ವಿಶೇಷ ಆಕರ್ಷಣೆಯಾಗಿ ಕರ್ನಾಟಕದ  ಸುಪ್ರಸಿದ್ದ ಗಾಯಕರಾದ ದಿವ್ಯಾ ರಾಮಚಂದ್ರ,  ಅಂಕಿತ ಕುಂಡು, ಅನಿರುದ್ಧ ಶಾಸ್ತ್ರೀ ಮತ್ತು ಸುಪ್ರೀತ್ ಸಪಳಿಗ ತಮ್ಮ ಕಂಚಿನ ಕಂಠದಿಂದ ನೆರೆದ ಜನಸ್ತೋಮವನ್ನು ಮಂತ್ರಮುಗ್ದರನ್ನಾಗಿಸಿದರು.  ಅದ್ಭುತ ಪ್ರತಿಭೆ ಅಮೋಘವರ್ಷ ಮತ್ತು ತಂಡದವರಿಂದ ಸಂಗೀತ ವಾದ್ಯ ಪ್ರದರ್ಶನ  ನಡೆಯಿತು.  ಜನಪ್ರಿಯ ನಿರೂಪಕ ನಿರಂಜನ್ ದೇಶ್ ಪಾಂಡೆ ತಮ್ಮ ರಂಜನೆಯ ವಾಕ್ ಲಹರಿಯಿಂದ ಪ್ರೇಕ್ಷಕರನ್ನು ಸ್ಪಂದಿಸಿ ಎಲ್ಲರ ಜನಾನುರಾಗಿಗಳಾದರು.

ಬಿಲ್ಲವಾಸ್ ಕತಾರ್ ನ ಸಾಂಸ್ಕತಿಕ ಕಾರ್ಯದರ್ಶಿ ಶ್ರೀಮತಿ ಪೂಜಾ ಜಿತಿನ್  ಅವರು ಪ್ರಾಸಂಗಿಕ ಭಾಷಣದ ಮೂಲಕ ಸ್ವರ ಲಹರಿಗೆ ಶುಭಾರಂಭಗೈದರು. ನೆರೆದ ವಿಶೇಷ ಗಣ್ಯರು, ಸಲಹಾಸಮಿತಿ, ಪ್ರಾಯೋಜಕರು ,ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಉಪಸ್ಥಿತಿಯಲ್ಲಿ ವಿಧಿವತ್ತಾಗಿ ದೀಪ ಬೆಳಗಿಸಿ ಸ್ವರ ಲಹರಿಯ ಉದ್ಘಾಟನೆ ಮಾಡಲಾಯಿತು .   ಆಮಂತ್ರಿತ ಗಣ್ಯರಿಗೆಲ್ಲಾ ಪುಷ್ಪಗುಚ್ಛ ವನ್ನು ಕೊಟ್ಟು ಪ್ರೀತಿ ಪೂರ್ವಕವಾಗಿ ಸ್ವಾಗತಿಸಲಾಯಿತು.

ಬಿಲ್ಲವಾಸ್ ಕತಾರ್ ನ ಅಧ್ಯಕ್ಷೆ ಶ್ರೀಮತಿ ಅಪರ್ಣ ಶರತ್ ಅವರು ಬಿಲ್ಲವಾಸ್ ಕತಾರ್ ನ ಧ್ಯೇಯೋದ್ದೇಶಗಳ ಬಗ್ಗೆ ಬೆಳಕು ಚೆಲ್ಲುತ್ತಾ  ಎಲ್ಲರನ್ನೂ ಆತ್ಮೀಯವಾಗಿ  ಸ್ವಾಗತಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ  ಡಾ. ವೈಭವ್ . ಎ. ಟಿ.  ಕೌನ್ಸಿಲರ್ (ಚಾನ್ಸೆಲರಿ ಮತ್ತು ಕೌನ್ಸಿಲರ್ ಮುಖ್ಯಸ್ಥರು), ಭಾರತೀಯ ರಾಯಭಾರಿ ಕಚೇರಿ, ಅವರು ಬಿಲ್ಲವಾಸ್ ಕತಾರ್ ನ  ಸಾಧನೆಯನ್ನು ಕೊಂಡಾಡಿ, ಭವಿಷ್ಯದಲ್ಲಿ  ಇನ್ನಷ್ಟು ವಿಶೇಷ ಕಾರ್ಯಕ್ರಮಗಳನ್ನು ಕೊಡುವುದರ ಮೂಲಕ ವಿಜೃಂಭಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಗಣ್ಯರಾದ *ಶ್ರೀ ಮಣಿಕಂಠನ್ ಎ. ಪಿ. (ಅಧ್ಯಕ್ಷರು, ಐ.ಸಿ.ಸಿ, ಕತಾರ್ ),

ಶ್ರೀ ದಿವಾಕರ ಪೂಜಾರಿ ( ಸ್ಥಾಪಕಾಧ್ಯಕ್ಷರು, ಬಿಲ್ಲವಾಸ್ ಕತಾರ್ ) ಮತ್ತು ಶ್ರೀ ಚಿದಾನಂದ ನಾಯ್ಕ್  (ಪ್ರಧಾನ ವ್ಯವಸ್ಥಾಪಕ, ಎಂ. ಪಲ್ಲೋಂಜಿ ಡಬ್ಲ್ಯು.ಎಲ್‌.ಎಲ್. ಮತ್ತು ಪ್ರಮುಖ ಪ್ರಾಯೋಜಕರು )ಅವರುಗಳನ್ನು ಆದರದಿಂದ ಸಂಮಾನಿಸಿ ಸ್ಮರಣಿಕೆ ನೀಡಲಾಯಿತು .   ಎಲ್ಲಾ ಮಹನೀಯರು ಬಿಲ್ಲವಾಸ್ ಕತಾರ್ ನ ಪ್ರಶಂಸೆಗೈದರು.

ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು, ಶಿಖರ (ಎಪೆಕ್ಸ್ )ಸಂಸ್ಥೆಗಳ ಪ್ರತಿನಿಧಿಗಳು ಮತ್ತು  ಕರ್ನಾಟಕದ ವಿವಿಧ ಸಂಘಟನೆಗಳ ನಾಯಕರು ಮತ್ತು  ಪ್ರತಿನಿಧಿಗಳು, ಈ ಕಾರ್ಯಕ್ರಮದಲ್ಲಿ ಹಾಜರಿದ್ದು, ಸ್ವರ ಸಂಜೆಗೆ ವಿಶೇಷ ಕಳೆ ತಂದು ಕೊಟ್ಟರು. ಸಭಾ  ಕಾರ್ಯಕ್ರಮವನ್ನು ವಸುಧಾ ಕೋಟ್ಯಾನ್ ಅವರು ಅಚ್ಚು ಕಟ್ಟಾಗಿ ನೆರವೇರಿಸಿ ಕೊಟ್ಟರು.   

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೃಂಭಿಸಿದ  ನೃತ್ಯ ತಂಡಗಳಾದ  ವಿಷ್ ಡಾನ್ಸ್ ಸ್ಟುಡಿಯೋ, ಜೂನಿಯರ್ ರಾಕ್‌ಸ್ಟಾರ್ಸ್, ಶ್ಯಾಮಾ ಹಂಸ (ತಿಲ್ಲಾನಾ), ಮತ್ತು ದೇಶಿ ಸ್ವ್ಯಾಗ್,  ಸುವರ್ಣ (ಗೋಲ್ಡ್ ) ಪ್ರಾಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ಸುಬ್ರಮಣ್ಯ ಹೆಬ್ಬಾಗಿಲು , ಐ, ಎಸ್. ಸಿ, ಸಲಹಾ ಸದಸ್ಯರು ಅವರಿಗೆ ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು.   ಎಲ್ಲಾ ಕಲಾವಿದರನ್ನು ವಿಶೇಷವಾಗಿ ಸಂಮಾನಿಸಿ ಅವರ ಕಲಾ ಸೇವೆಗೆ ವಿನಯಪೂರ್ವಕ ಗೌರವ ಸಲ್ಲಿಸಲಾಯಿತು.

ಬಿಲ್ಲವಾಸ್ ಕತಾರ್ ನ ಮಾಜಿ ಅಧ್ಯಕ್ಷರು ಮತ್ತು ಸಲಹಾ ಮಂಡಳಿಯ ಮುಖ್ಯಸ್ಥರಾದ ರಘುನಾಥ್ ಅಂಚನ್ , ಸಲಹಾ ಸಮಿತಿಯ ಸರ್ವ ಸದಸ್ಯರು, ಕಾರ್ಯಕಾರಿ ಮಂಡಳಿ, ಸ್ವಯಂ ಸೇವಕರು ಮತ್ತು ಎಲ್ಲಾ ಸದಸ್ಯರು  ಅಹರ್ನಿಶಿ ದುಡಿದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಬಿಲ್ಲವಾಸ್ ಕತಾರ್ ನ  ಉಪಾಧ್ಯಕ್ಷರಾದ ಜಯರಾಮ ಸುವರ್ಣ ಅವರು ಎಲ್ಲರಿಗೂ ಧನ್ಯವಾದಗೈದರು.  ಎಲ್ಲರ ಮನ ಸೂರೆಗೈದ ಸ್ವರ ಲಹರಿ ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿ ಎಲ್ಲರ ಮನದಂತರಾಳದದಲ್ಲಿ ಹೊಸ ಛಾಪನ್ನು ಮೂಡಿಸಿತು.


Related Posts

ಬಿಲ್ಲವರ ಉನ್ನತಿಯಲ್ಲಿ ನಾರಾಯಣ ಗುರುಗಳ ಪಾತ್ರ ಗುರುತರವಾದುದು ಡಾ.ಮುಕೇಶ್ ಕುಮಾರ್


Share        ಮುಂಬಯಿ ಒಂದು ಕಾಲದಲ್ಲಿ ಮೇಲ್ವರ್ಗದವರಿಂದ ಅಸ್ಪ್ರಶ್ಯರೆನಿಸಿಕೊಂಡು ಸಮಾಜದಿಂದ ಬಹಿಷ್ಕೃತರಾದ ಬಿಲ್ಲವರು ಶ್ರೀಮಂತವಾದ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು. ದಾರ್ಶನಿಕ ನಾರಾಯಣ ಗುರುಗಳ ಮಾರ್ಗದರ್ಶನವನ್ನೇ ಸ್ಫೂರ್ತಿಯಾಗಿಸಿಕೊಂಡು ಹಲವಾರು ಸಂಘರ್ಷಗಳನ್ನು ಎದುರಿಸಿಯೂ ಬಿಲ್ಲರು ಉನ್ನತ ಸ್ಥಾನಮಾನವನ್ನು ಗಳಿಸಿಕೊಂಡರು.


Read More »

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »